logo
ಕನ್ನಡ ಸುದ್ದಿ  /  ಮನರಂಜನೆ  /  ನಾನು ಹೀರೋ ಆಗಿದ್ದೇ ರವಿಚಂದ್ರನ್‌ ಸರ್‌ ಅವರಿಂದ; ಛೂ ಮಂತರ್ ವೇದಿಕೆಯಲ್ಲಿ ಶರಣ್‌ ಮನದಾಳ

ನಾನು ಹೀರೋ ಆಗಿದ್ದೇ ರವಿಚಂದ್ರನ್‌ ಸರ್‌ ಅವರಿಂದ; ಛೂ ಮಂತರ್ ವೇದಿಕೆಯಲ್ಲಿ ಶರಣ್‌ ಮನದಾಳ

HT Kannada Desk HT Kannada

Sep 12, 2023 02:18 PM IST

'ಛೂ ಮಂತರ್' ಸಿನಿಮಾ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಿದ ರವಿಚಂದ್ರನ್‌

  • ನಾನು ನಾಯಕನಾಗಲು ರವಿಚಂದ್ರನ್ ಅವರೇ ಕಾರಣ. ನಾನು ಅವರೊಂದಿಗೆ 'ಹಠವಾದಿ' ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನೂ ಹೀರೋ ಆಗಿಲ್ವಾ ? ಎಂದು ಕೇಳಿದ್ದರು. ಹೀರೋ ಆಗಬೇಕು ಎಂದು ಎಂದಿಗೂ ಬಯಸದ ನಾನು ರವಿಚಂದ್ರನ್‌ ಆ ಪ್ರಶ್ನೆ ಕೇಳಿದ 2 ವರ್ಷಗಳಲ್ಲೇ ನಾಯಕನಾದೆ.

'ಛೂ ಮಂತರ್' ಸಿನಿಮಾ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಿದ ರವಿಚಂದ್ರನ್‌
'ಛೂ ಮಂತರ್' ಸಿನಿಮಾ ಟೈಟಲ್‌ ಟ್ರ್ಯಾಕ್‌ ಬಿಡುಗಡೆ ಮಾಡಿದ ರವಿಚಂದ್ರನ್‌

ಶರಣ್‌ ನಾಯಕನಾಗಿ ನಟಿಸಿರುವ 'ಛೂ ಮಂತರ್' ಸಿನಿಮಾ ಟೈಟಲ್‌ ಟ್ರ್ಯಾಕ್‌ ಇಂದು ಬಿಡುಗಡೆ ಆಗಿದೆ. ಕ್ರೇಜಿಸ್ಟಾರ್‌ ವಿ ರವಿಚಂದ್ರನ್‌, ಚಿತ್ರದ ಟೈಟಲ್‌ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ 'ಛೂ ಮಂತರ್' ಚಿತ್ರದ ಹಾಡನ್ನು ರಿಲೀಸ್‌ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್‌; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು

Seetha Rama Serial: ಸೀತೆಯನ್ನೇ ಅರಸಿ ಬಂತು ದೇಸಾಯಿ ವಂಶದ ಸ್ವತ್ತು; ಕೇಡು ಬಯಸೋ ಭಾರ್ಗವಿಗೆ ಕಾದಿದ್ಯಾ ಆಪತ್ತು?

Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

ದಕ್ಷಿಣ ಭಾರತದವ್ರು ಆಫ್ರಿಕನ್ನರಂತೆ ಕಾಣ್ತಾರೆ ಅನ್ನೋ ಸ್ಯಾಮ್‌ ಪಿತ್ರೋಡಾ ಹೇಳಿಕೆಗೆ ಗುನ್ನ ಕೊಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್‌

ಚಿತ್ರತಂಡಕ್ಕೆ ಶುಭ ಹಾರೈಸಿದ ರವಿಚಂದ್ರನ್‌

ಹಾಡು ರಿಲೀಸ್‌ ಮಾಡಿ ಮಾತನಾಡಿದ ರವಿಚಂದ್ರನ್‌, ''ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ಎಲ್ಲಾ ಲಕ್ಷಣಗಳು ಇದೆ. ಶರಣ್ ಒಬ್ಬ ಒಳ್ಳೆಯ ನಟ. ಆತನ ಪ್ರತಿ ಸಿನಿಮಾದಲ್ಲೂ ಚಿತ್ರದಲ್ಲಿ 2 ಹಾಡುಗಳಾದರೂ ಹಿಟ್ ಆಗೇ ಆಗುತ್ತದೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಟೈಟಲ್‌ ಟ್ರ್ಯಾಕ್‌ ಕೂಡಾ ಬಹಳ ಚೆನ್ನಾಗಿದೆ. ನಿರ್ಮಾಪಕ ತರುಣ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶರಣ್‌ ಮಾತನಾಡಿ, ''ನಾನು ನಾಯಕನಾಗಲು ರವಿಚಂದ್ರನ್ ಅವರೇ ಕಾರಣ. ನಾನು ಅವರೊಂದಿಗೆ 'ಹಠವಾದಿ' ಚಿತ್ರದಲ್ಲಿ ಅಭಿನಯಿಸಬೇಕಾದರೆ, ನೀನು ಇನ್ನೂ ಹೀರೋ ಆಗಿಲ್ವಾ ? ಎಂದು ಕೇಳಿದ್ದರು. ಹೀರೋ ಆಗಬೇಕು ಎಂದು ಎಂದಿಗೂ ಬಯಸದ ನಾನು ರವಿಚಂದ್ರನ್‌ ಆ ಪ್ರಶ್ನೆ ಕೇಳಿದ 2 ವರ್ಷಗಳಲ್ಲೇ ನಾಯಕನಾದೆ. ಅಷ್ಟು ಒಳ್ಳೆಯ ಮನಸ್ಸು ರವಿ ಸರ್ ಅವರದು. ಇಂದು ನಮ್ಮ ಚಿತ್ರದ ಹಾಡನ್ನು ಅವರು ಬಿಡುಗಡೆ ಮಾಡಿದ್ದು ಬಹಳ ಖುಷಿಯಾಗಿದೆ. ಚಂದನ್ ಶೆಟ್ಟಿ ಅಮೋಘವಾಗಿ ಸಂಗೀತ ನೀಡಿ ಹಾಡಿದ್ದಾರೆ‌. ವಿಜಯ್ ಈಶ್ವರ್ ಈ ಹಾಡನ್ನು ಬರೆದಿದ್ದು, ದರ್ಶಿನಿ ನೃತ್ಯ ಸಂಯೋಜನೆ ಮಾಡಿದ್ದಾರೆ. ನಾನು, ಚಿಕ್ಕಣ್ಣ ಹಾಗೂ ಅದಿತಿ ಪ್ರಭುದೇವ ಅಭಿನಯಿಸಿದ್ದೇವೆ''‌ ಎಂದು ಹಾಡಿನ ಬಗ್ಗೆ ಮಾಹಿತಿ ನೀಡಿದರು.‌

ಶೀಘ್ರದಲ್ಲೇ ಟ್ರೇಲರ್‌ ರಿಲೀಸ್

''ರವಿ ಸರ್ ಅವರಿಗೆ ಕೆಲವು ದಿನಗಳ ಹಿಂದೆ ಟೀಸರ್ ತೋರಿಸಿದ್ದೆ. ಟೈಟಲ್ ಹಾಡನ್ನು ನೀವೇ ಬಿಡುಗಡೆ ಮಾಡಬೇಕು ಎಂದು ಆಗಲೇ ಮನವಿ ಮಾಡಿದ್ದೆ. ನಮ್ಮ ಮನವಿಗೆ ಸ್ಪಂದಿಸಿ ಇಂದು ರವಿಚಂದ್ರನ್ ಸರ್ ಬಂದು ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರವಿ ಸರ್ ಅವರಿಗೆ, ಈ ಚಿತ್ರದ ಟೈಟಲ್ ನೀಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಹಾಗೂ ಕಥೆ ಮೆಚ್ಚಿ ಪ್ರೋತ್ಸಾಹ ನೀಡಿದ ತರುಣ್ ಸುಧೀರ್ ಅವರಿಗೆ ಈ ಸಂದರ್ಭದಲ್ಲಿ ನಾನು ಧನ್ಯವಾದ ತಿಳಿಸುತ್ತೇನೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ರಿಲೀಸ್‌ ಆಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ'' ಎಂದು ನಿರ್ಮಾಪಕ ತರುಣ್ ಶಿವಪ್ಪ ಸಂತೋಷ ವ್ಯಕ್ತಪಡಿಸಿದರು. ಸಿನಿಮಾ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ಹಾಗೂ ಆಗಮಿಸಿದ ಗಣ್ಯರಿಗೆ ನಿರ್ದೇಶಕ ನವನೀತ್ ಧನ್ಯವಾದ ತಿಳಿಸಿದರು‌.

ಸಂಗೀತ ನಿರ್ದೇಶಕ, ಗಾಯಕ ಚಂದನ್‌ ಶೆಟ್ಟಿ ಹಾಡಿ‌ನ ಬಗ್ಗೆ ಮಾತನಾಡಿದರು. ನಟಿಯರಾದ ‌ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ತಮ್ಮ ಪಾತ್ರದ ಬಗ್ಗೆ ತಿಳಿಸಿದರು. ಛಾಯಾಗ್ರಾಹಕ ಅನೂಪ್, ಹಾಡಿಗೆ ಸಾಹಿತ್ಯ ಬರೆದಿರುವ ವಿಜಯ್ ಈಶ್ವರ್, ನೃತ್ಯ ಸಂಯೋಜಕಿ ದರ್ಶಿನಿ ಮುಂತಾದವರು ಛೂ ಮಂತರ್ ಸಿನಿಮಾ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಸಾಹಸ ಸಂಯೋಜಕ ರವಿವರ್ಮ, ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಅನೇಕ ಗಣ್ಯರು ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು