logo
ಕನ್ನಡ ಸುದ್ದಿ  /  Karnataka  /  India News Imd Predicts Normal Monsoon Rains Karnataka Agriculture Bengaluru Weather Predictions Weather Update Rst

Monsson Forecast: ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ, ರೈತರಿಗೆ ಖುಷಿಕೊಟ್ಟ ಹವಾಮಾನ ಇಲಾಖೆ ಭವಿಷ್ಯ

Reshma HT Kannada

May 26, 2023 01:00 PM IST

ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ

    • ಈ ಬಾರಿ ಮುಂಗಾರು ಮಳೆ ಸಾಮಾನ್ಯವಾಗಿರಲಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ನಡುವೆ ಶೇ 96 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ಕೃಷಿಕರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ. 
ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ
ಮುಂಗಾರು ಮಳೆಯಲ್ಲಿ ವ್ಯತ್ಯಯವಿಲ್ಲ; ಭಾರತಕ್ಕೆ ಮಳೆರಾಯನ ಕೃಪೆ

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ತಾಪ ಜೋರಾಗಿಯೇ ಇದೆ. ಸುಡು, ಸುಡು ಬಿಸಿಲಿಗೆ ನಾವು ಈ ವರ್ಷ ಸಾಕ್ಷಿಯಾಗಿದ್ದೇವೆ. ಇದರೊಂದಿಗೆ ಎಲ್‌ ನಿನೋ ಕಾರಣದಿಂದಲೂ ಅಪಾಯವನ್ನು ಎದುರಿಸುತ್ತಿರುವ ಕೃಷಿ ಆರ್ಥಿಕತೆಗೆ ಶುಭಸುದ್ದಿಯೊಂದಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ತನಿಖೆ ಚುರುಕು; ಪ್ರಮುಖ ಆರೋಪಿಗಳ ಕರೆದೊಯ್ದು ಮಹಜರು ನಡೆಸುತ್ತಿರುವ ಎನ್‌ಐಎ

ವಿ ಶ್ರೀನಿವಾಸ್ ಪ್ರಸಾದ್ ನಿಧನ; ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ ಸಂದೇಶ

ಬೆಂಗಳೂರಲ್ಲಿ ಅಪಾರ್ಟ್‌ಮೆಂಟ್ ಭೋಗ್ಯಕ್ಕೆ ನೀಡಿ 40 ಲಕ್ಷ ರೂ ವಂಚನೆ, ಎಸ್‌ಬಿಐ ಆಸ್ತಿವಶಕ್ಕೆ ಮುಂದಾದಾಗ ಪ್ರಕರಣ ಬೆಳಕಿಗೆ, ದೂರು ದಾಖಲು

ಹುಬ್ಬಳ್ಳಿ -ಋಷಿಕೇಶ ವಿಶೇಷ ರೈಲು ಸಂಚಾರ, ಇಂದಿನಿಂದ ಮೇ 27ರ ತನಕ 5 ಟ್ರಿಪ್‌, ಋಷಿಕೇಶ -ಹುಬ್ಬಳ್ಳಿ ನಡುವೆಯೂ 5 ರೈಲು ಸಂಚಾರ

ಈ ವರ್ಷ ಮುಂಗಾರು ಮಳೆ ಸಾಮಾನ್ಯವಾಗಿರಲಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ನಡುವೆ ಶೇ 96 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆಯು 2023ರ 2ನೇ ಹಂತದ ನೈಋತ್ಯ ಮಾನ್ಸೂನ್‌ ಸ್ಥಿತಿಯನ್ನು ಪ್ರಕಟಿಸಿದ್ದು, ಜೂನ್‌ ಹಾಗೂ ಸೆಪ್ಟೆಂಬರ್‌ ಅವಧಿಯಲ್ಲಿ ದೀರ್ಘಾವಧಿಯ ಸರಾಸರಿ ಶೇ 96 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏಪ್ರಿಲ್‌ ತಿಂಗಳಿನಲ್ಲಿ ಹವಾಮಾನ ಇಲಾಖೆಯು ಈ ವರ್ಷದ ಮುಂಗಾಳೆ ಮಳೆಯ ದೀರ್ಘಾವಧಿ ಸರಾಸರಿ ಶೇ 96 ಎಂದು ಊಹಿಸಿತ್ತು. ಆದರೆ, ದೀರ್ಘಕಾಲ ಸರಾಸರಿಯಲ್ಲಿ ಶೇಕಡ 5ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಅಂದಾಜಿಸಿತ್ತು.

ಜೂನ್‌ನಿಂದ ಪ್ರಾರಂಭವಾಗುವ ನಾಲ್ಕು ತಿಂಗಳ ಮಳೆಗಾಲದ ಅವಧಿಯಲ್ಲಿ ಕಳೆದ 50 ವರ್ಷಗಳ ಸರಾಸರಿಯಲ್ಲಿ ಶೇ 96 ರಿಂದ ಶೇ 104ರಷ್ಟು ಮಳೆಯಾಗಿತ್ತು.

ಆದರೆ ದೇಶದ ವಾಯುವ್ಯ ಭಾಗದಲ್ಲಿ ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಭಾರತದ ಈಶಾನ್ಯ ಭಾಗ, ಮಧ್ಯಭಾರತ ಹಾಗೂ ದಕ್ಷಿಣ ಭಾರತದ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಐಎಂಡಿ ಅಂದಾಜಿಸಿದೆ.

ಮುಂಗಾರಿನ ಋತುವಿನಲ್ಲಿ ಎಲ್‌ ನಿನೋ ಪರಿಸ್ಥಿತಿಗಳ ಬೆಳವಣಿಗೆಯ ಸಾಧ್ಯತೆಯೂ ಹೆಚ್ಚಿದೆ. ಆದರೆ, ಎಲ್ ನಿನೊ ಮತ್ತು ಮಾನ್ಸೂನ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ʼಮಳೆ ಹಂಚಿಕೆ ಸಮಾನವಾಗಿದ್ದರೆ ಉತ್ತಮ. ಆದರೆ ಮಾನ್ಸೂನ್‌ ಮಳೆಯನ್ನು ಹಾಗೆ ಅಂದಾಜಿಸಲು ಆಗುವುದಿಲ್ಲ. ನಾವು ಸಮಾನ ಹಂಚಿಕೆಯನ್ನು ಪಡೆದರೆ ಈ ವರ್ಷ ಭಾರತದಲ್ಲಿ ಕೃಷಿಯ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲʼ ಎಂದು ಐಎಂಡಿ ವಿಜ್ಞಾನಿ ಡಿಎಸ್‌ ಪೈ ಹೇಳಿದ್ದಾರೆ.

ಈ ವರ್ಷ ಮುಂಗಾರು ಮಳೆಯು ಮೊದಲೇ ನಿರೀಕ್ಷಿಸಿದಂತೆ ಜೂನ್‌ 4 ರಂದು ಕೇರಳದ ಪ್ರವೇಶಿಸಲಿದೆ ಎಂದು ನಿರೀಕ್ಷಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು