ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದವರು ಇವರು; ಇಲ್ಲಿದೆ ಪ್ರಮುಖರ ಪಟ್ಟಿ

ಲೋಕಸಭಾ ಚುನಾವಣೆ; 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದವರು ಇವರು; ಇಲ್ಲಿದೆ ಪ್ರಮುಖರ ಪಟ್ಟಿ

ಲೋಕಸಭಾ ಚುನಾವಣೆ ಚಾಲ್ತಿಯಲ್ಲಿದ್ದು ಗುಜರಾತ್‌ನ ಸೂರತ್‌ನಿಂದ ಬಿಜೆಪಿ ಅಭ್ಯರ್ಥಿ ಮುಖೇಶ್ ಕುಮಾರ್ ದಲಾಲ್ ಅವಿರೋಧ ಆಯ್ಕೆ ಕಂಡರು. ತನ್ನಿಮಿತ್ತವಾಗಿ 1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಮುಖರ ಪಟ್ಟಿ ಇಲ್ಲಿದೆ.

ಸೂರತ್‌ನಿಂದ ಅವಿರೋಧ ಆಯ್ಕೆ ಕಂಡ ಬಿಜೆಪಿಯ ಮುಖೇಶ್ ದಲಾಲ್‌, ಜಮ್ಮು-ಕಾಶ್ಮೀರದ ಶ್ರೀನಗರದಿಂದ ಈ ಹಿಂದೆ ಅವಿರೋಧ ಆಯ್ಕೆಯಾಗಿದ್ದ ಫಾರೂಕ್ ಅಬ್ದುಲ್ಲಾ, ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದ ವೈಬಿ ಚವಾಣ್‌.
ಸೂರತ್‌ನಿಂದ ಅವಿರೋಧ ಆಯ್ಕೆ ಕಂಡ ಬಿಜೆಪಿಯ ಮುಖೇಶ್ ದಲಾಲ್‌, ಜಮ್ಮು-ಕಾಶ್ಮೀರದ ಶ್ರೀನಗರದಿಂದ ಈ ಹಿಂದೆ ಅವಿರೋಧ ಆಯ್ಕೆಯಾಗಿದ್ದ ಫಾರೂಕ್ ಅಬ್ದುಲ್ಲಾ, ಉಪಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗಿದ್ದ ವೈಬಿ ಚವಾಣ್‌.

ಬೆಂಗಳೂರು/ನವದೆಹಲಿ: ಲೋಕಸಭಾ ಚುನಾವಣೆ 2024ರ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗುವ ಮೊದಲೇ ಬಿಜೆಪಿ ತನ್ನ ಖಾತೆ ತೆರೆದಿದೆ. ಗುಜರಾತಿನ ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುಖೇಶ್ ಕುಮಾರ್ ದಲಾಲ್‌ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿಗಳು ಘೋ‍ಷಿಸಿದ್ದಾರೆ.

ಮುಖೇಶ್ ಕುಮಾರ್ ಅವಿರೋಧ ಆಯ್ಕೆಗೆ ಮೊದಲು ಕಾಂಗ್ರೆಸ್ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿತ್ತು. ಇದಾದ ಬಳಿಕ, ಇತರೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ಕಾರಣ ಮುಖೇಶ್ ಕುಮಾರ್ ಅವಿರೋಧ ಆಯ್ಕೆ ಸುಲಭವಾಯಿತು.

ಲೋಕಸಭೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರ ಪೈಕಿ ಮುಖೇಶ್ ಕುಮಾರ್ ಮೊದಲಿಗರಲ್ಲ. 1951ರಿಂದೀಚೆಗೆ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ. ಅಂಥವರ ವಿವರ ಇಲ್ಲಿದೆ.

1951 ರಿಂದ ಇದುವರೆಗೆ ಲೋಕಸಭೆಗೆ ಅವಿರೋಧವಾಗಿ ಆಯ್ಕೆಯಾದ ಪ್ರಮುಖರ ಪಟ್ಟಿ

ಲೋಕಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದವರು 1951- 2024

ಲೋಕಸಭಾ ಚುನಾವಣೆ ವರ್ಷಅಭ್ಯರ್ಥಿಪಕ್ಷ ಲೋಕಸಭಾ ಕ್ಷೇತ್ರರಾಜ್ಯ
1951ಟಿ.ಎ ರಾಮಲಿಂಗ ಚೆಟ್ಟಿಯಾರ್ಕಾಂಗ್ರೆಸ್‌ಕೊಯಮತ್ತೂರು ತಮಿಳುನಾಡು
1951ಟಿ ಸಂಗನಕಾಂಗ್ರೆಸ್ರಾಯಗಡ ಫುಲ್ಬಾಒಡಿಶಾ
1951ಕೃಷ್ಣಚಾರ್ಯ ಜೋಶಿಕಾಂಗ್ರೆಸ್ಯಾದಗಿರಿಹೈದರಾಬಾದ್
1951ಮೇಜರ್ ಜನರಲ್ ಎಂಎಸ್ ಹಿಮಂತ ಸಿನ್ಹಾಜಿಕಾಂಗ್ರೆಸ್ಹಲರ್ಸೌರಾಷ್ಟ್ರ
1951ಆನಂದ ಚಾಂದ್‌ ಪಕ್ಷೇತರಬಿಲಾಸ್‌ಪುರಬಿಲಾಸ್‌ಪುರ
1957ಡಿ ಸತ್ಯನಾರಾಯಣ ರಾಜುಕಾಂಗ್ರೆಸ್ರಾಜಮಂಡ್ರಿಆಂಧ್ರಪ್ರದೇಶ
1957ಟಿ ಎನ್ ವಿಶ್ವನಾಥ ರೆಡ್ಡಿಕಾಂಗ್ರೆಸ್ರಾಜಂಪೇಟ್ಆಂಧ್ರಪ್ರದೇಶ
1957ಸಂಗಂ ಲಕ್ಷ್ಮೀ ಬಾಯಿಕಾಂಗ್ರೆಸ್ವಿಕಾರಾಬಾದ್ಆಂಧ್ರಪ್ರದೇಶ
1957ಬಿಜಯೋ ಚಂದ್ರ ಭಗವತಿಕಾಂಗ್ರೆಸ್ ದರಂಗ್ಅಸ್ಸಾಂ
1957ಮಂಗ್ರುಬಾಬು ಉಯಿಕೆಕಾಂಗ್ರೆಸ್ಮಂಡ್ಲಮಧ್ಯಪ್ರದೇಶ
1957ಟಿ ಗಣಪತಿ ಕಾಂಗ್ರೆಸ್ತಿರುಚೆಂಡೂರು ಮದ್ರಾಸ್‌
1957ಜೆ ಸಿದ್ದನಂಜಪ್ಪ ಎಚ್‌ಕಾಂಗ್ರೆಸ್ಹಾಸನಮದ್ರಾಸ್‌
1962ಟಿಟಿ ಕೃಷ್ಣಮಾಚಾರಿ ಕಾಂಗ್ರೆಸ್ ತಿರುಚೆಂಡೂರುಮದ್ರಾಸ್‌
1962ಹರೇಕೃಷ್ಣ ಮಹತಾಬ್‌ಕಾಂಗ್ರೆಸ್ಅಂಗುಲ್ ಒಡಿಶಾ
1962ಮಾನವೇಂದ್ರ ಷಾಕಾಂಗ್ರೆಸ್ತೆಹ್ರಿ ಘರ್‌ವಾಲಾ ಉತ್ತರ ಪ್ರದೇಶ
1967ಕೆಎಲ್ ರಾವ್ಕಾಂಗ್ರೆಸ್ ವಿಜಯವಾಡಆಂಧ್ರ ಪ್ರದೇಶ
1967ಆರ್ ಬ್ರಹ್ಮಕಾಂಗ್ರೆಸ್ಕೋಕ್ರಜಾರ್ಅಸ್ಸಾಂ
1967ಎಂಎಸ್ ಖುರೇಶಿಕಾಂಗ್ರೆಸ್ಅನಂತನಾಗ್ಜಮ್ಮು - ಕಾಶ್ಮೀರ
1967ಕೆ ಬಾಕುಲಕಾಂಗ್ರೆಸ್‌ಲಡಾಖ್ ಜಮ್ಮು-ಕಾಶ್ಮೀರ
1967ಚುಬಾತೋಷಿಎನ್‌ಎನ್‌ಒನಾಗಾಲ್ಯಾಂಡ್ನಾಗಾಲ್ಯಾಂಡ್‌
1971ಪದನಾಥ ಮೊಹಮ್ಮದ್ ಸಯೀದ್ಕಾಂಗ್ರೆಸ್ಎಲ್‌ಎಂ ಆಂಡ್ ಎ ಐಲ್ಯಾಂಡ್ಸ್ಲ್ಯಾಕಡೀವ್, ಮಿನಿಕಾಯ್‌ ಮತ್ತು ಅಮಿಂಡಿವಿ ದ್ವೀಪಗಳು
1977ರಿನ್‌ಚಿನ್ ಖಂಡು ಕಿಮ್ರೆಕಾಂಗ್ರೆಸ್ಅರುಣಾಚಲ ಪಶ್ಚಿಮ ಅರುಣಾಚಲ ಪ್ರದೇಶ
1977ಛಾತ್ರ ಬಹದೂರ್ ಛೆಟ್ರಿಕಾಂಗ್ರೆಸ್ಸಿಕ್ಕಿಂಸಿಕ್ಕಿಂ
1980ಫಾರೂಕ್ ಅಬ್ದುಲ್ಲಾಜೆಕೆಎನ್ ಶ್ರೀನಗರಜಮ್ಮು-ಕಾಶ್ಮೀರ
1989ಮೊಹಮ್ಮದ್ ಷಫಿ ಭಟ್ಜೆಕೆಎನ್ಶ್ರೀನಗರಜಮ್ಮು-ಕಾಶ್ಮೀರ
2024ಮುಕೇರ್ಶ ಕುಮಾರ್ ದಲಾಲ್ಬಿಜೆಪಿ ಸೂರತ್ಗುಜರಾತ್

ಒಟ್ಟು ಸಾರ್ವತ್ರಿಕ ಚುನಾವಣೆಗಳನ್ನು ಗಮನಿಸುವಾಗ, 1957ರ ಸಾರ್ವತ್ರಿಕ ಚುನಾವಣೆಗಳಲ್ಲಿ ಗರಿಷ್ಠ ಏಳು ಅಭ್ಯರ್ಥಿಗಳು ಅವಿರೋಧವಾಗಿ ಗೆದ್ದರು. ನಂತರ 1951 ಮತ್ತು 1967ರ ಚುನಾವಣೆಯಲ್ಲಿ ತಲಾ ಐವರು. 1962ರಲ್ಲಿ ಮೂವರು ಮತ್ತು 1977ರಲ್ಲಿ ಇಬ್ಬರು ಅವಿರೋಧವಾಗಿ ಗೆಲುವು ಕಂಡಿದ್ದಾರೆ. 1971, 1980 ಮತ್ತು 1989ರಲ್ಲಿ ತಲಾ ಒಬ್ಬ ಅಭ್ಯರ್ಥಿ ಇದೇ ಮಾದರಿಯಲ್ಲಿ ಗೆದ್ದಿದ್ದರು.

ಲೋಕಸಭೆ ಉಪಚುನಾವಣೆ, ಎರಡೆರಡು ಸಲ ಒಂದೇ ಕ್ಷೇತ್ರದಿಂದ ಅವಿರೋಧ ಆಯ್ಕೆ

ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಗಮನಿಸಿದರೆ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ 2012ರಲ್ಲಿ ಕನೌಜ್ ಲೋಕಸಭೆ ಉಪಚುನಾವಣೆಯಲ್ಲಿ ಅವಿರೋಧವಾಗಿ ಗೆಲುವು ಸಾಧಿಸಿದ್ದರು. ಡಿಂಪಲ್ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಲೋಕಸಭೆ ಉಪಚುನಾವಣೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿ ಲೋಕಸಭೆ ಪ್ರವೇಶಿಸಿದ್ದಾರೆ.

ಸಂಸದೀಯ ಚುನಾವಣೆಯಲ್ಲಿ ಅವಿರೋಧವಾಗಿ ಗೆದ್ದಿರುವ ಪ್ರಮುಖ ರಾಜಕಾರಣಿಗಳಲ್ಲಿ ವೈಬಿ ಚವಾಣ್ (ಉಪ ಚುನಾವಣೆಯಲ್ಲಿ ಅವಿರೋಧ ಆಯ್ಕೆ), ಫಾರೂಕ್ ಅಬ್ದುಲ್ಲಾ, ಹರೇ ಕೃಷ್ಣ ಮಹತಾಬ್, ಟಿಟಿ ಕೃಷ್ಣಮಾಚಾರಿ, ಪಿಎಂ ಸಯೀದ್ ಮತ್ತು ಎಸ್‌ಸಿ ಜಮೀರ್ (ಚುಬಾತೋಷಿ ಜಮೀರ್‌) ಸೇರಿದ್ದಾರೆ. ಸ್ಪರ್ಧೆಯಿಲ್ಲದೆ ಲೋಕಸಭೆ ಪ್ರವೇಶಿಸಿದ ಅಭ್ಯರ್ಥಿಗಳ ಪೈಕಿ ಗರಿಷ್ಠ ಅಭ್ಯರ್ಥಿಗಳು ಕಾಂಗ್ರೆಸ್‌ನವರೇ ಆಗಿದ್ದಾರೆ. ಸಿಕ್ಕಿಂ ಮತ್ತು ಶ್ರೀನಗರ ಕ್ಷೇತ್ರಗಳಲ್ಲಿ ಎರಡು ಬಾರಿ ಇಂತಹ ಅವಿರೋಧ ಆಯ್ಕೆಗಳಾಗಿವೆ.