ಕನ್ನಡ ಸುದ್ದಿ  /  ಮನರಂಜನೆ  /  ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ, ದರ್ಶನ್‌ ಹುಟ್ಟುಹಬ್ಬದಂದು ಹಲವು ಸಿನಿಮಾಗಳ ಘೋಷಣೆ, 2 ಸಿನಿಮಾಕ್ಕೆ ತರುಣ್‌ ಸುಧೀರ್‌ ನಿರ್ದೇಶನ

ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ, ದರ್ಶನ್‌ ಹುಟ್ಟುಹಬ್ಬದಂದು ಹಲವು ಸಿನಿಮಾಗಳ ಘೋಷಣೆ, 2 ಸಿನಿಮಾಕ್ಕೆ ತರುಣ್‌ ಸುಧೀರ್‌ ನಿರ್ದೇಶನ

Challenging Star Darshan: ದರ್ಶನ್‌ ಹುಟ್ಟುಹಬ್ಬದಂದು ಚಾಲೆಂಜಿಂಗ್‌ ಸ್ಟಾರ್‌ ನಟನೆಯ ಹಲವು ಸಿನಿಮಾಗಳ ಘೋಷಣೆಯಾಗಿವೆ. ದರ್ಶನ್‌ 59ನೇ ಸಿನಿಮಾ ಮತ್ತು ಇನ್ನೊಂದು ಸಿನಿಮಾಕ್ಕೆ ಕಾಟೇರ ನಿರ್ದೇಶಕ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ, ದರ್ಶನ್‌ ಹುಟ್ಟುಹಬ್ಬದಂದು ಹಲವು ಸಿನಿಮಾಗಳ ಘೋಷಣೆ
ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ, ದರ್ಶನ್‌ ಹುಟ್ಟುಹಬ್ಬದಂದು ಹಲವು ಸಿನಿಮಾಗಳ ಘೋಷಣೆ

ಬೆಂಗಳೂರು: ಕಾಟೇರವೆಂಬ ಬ್ಲಾಕ್‌ಬಸ್ಟರ್‌ ಸಿನಿಮಾವನ್ನು ಸ್ಯಾಂಡಲ್‌ವುಡ್‌ಗೆ ನೀಡಿರುವ ತರುಣ್‌ ಸುಧೀರ್‌ ನಿರ್ದೇಶನದಲ್ಲಿ ದರ್ಶನ್‌ ನಟನೆಯ 59ನೇ ಸಿನಿಮಾ ಮೂಡಿ ಬರಲಿದೆ. ಡಿ59 ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆ ಎಂದು ಚಿತ್ರತಂಡ ತಿಳಿಸಿದೆ. ದರ್ಶನ್‌ ಹುಟ್ಟುಹಬ್ಬದಂದು ಡಿ59 ಸಿನಿಮಾದ ಘೋಷಣೆಯಾಗಿದೆ. ವೀರ ಸಿಂಧೂರ ಲಕ್ಷ್ಮಣನ ಸಾಹಸಗಾಥೆಯನ್ನು ಹೊಂದಿರುವ ಡಿ59 ಸಿನಿಮಾವನ್ನು ಮೀಡಿಯಾ ಹೌಸ್ ನ ಶೈಲಜಾ ನಾಗ್ ಮತ್ತು ಬಿ.ಸುರೇಶ ನಿರ್ಮಾಣ ಮಾಡಲಿದ್ದಾರೆ. ಯಜಮಾನ ಮತ್ತು ಕ್ರಾಂತಿ ಸಿನಿಮಾವನ್ನೂ ಇವರೇ ನಿರ್ಮಾಣ ಮಾಡಿದ್ದರು.

ಟ್ರೆಂಡಿಂಗ್​ ಸುದ್ದಿ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬದಂದು ಡಿ59 ಸಿನಿಮಾದ ಕುರಿತು ಮಾಹಿತಿ ನೀಡಲಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಪಟದ್ಟ ವೀರ ಯೋಧ ಸಿಂಧೂರ ಲಕ್ಷ್ಮಣನ ಕಥೆಯನ್ನು ಈ ಚಿತ್ರ ಹೊಂದಿರುವ ಸೂಚನೆಯಿದೆ. ತರುಣ್‌ ಸುಧೀರ್‌ ಅವರ ತಂದೆ ಸುಧೀರ್‌ ಅವರು ಸಿಂಧೂರ ಲಕ್ಷ್ಮಣ ನಾಟಕವನ್ನು ಜನಪ್ರಿಯಗೊಳಿಸಿದ್ದರು. ಇದೀಗ ತಮ್ಮ ತೀರ್ಥರೂಪರ ಅಭಿನಯದ ಪಾತ್ರವನ್ನು ದರ್ಶನ್‌ ಮೂಲಕ ತೆರೆಗೆ ತರಲಿದ್ದಾರೆ ತರುಣ್‌ ಸುಧೀರ್‌.

ಈ ಸಿನಿಮಾವು ದೊಡ್ಡ ಬಜೆಟ್‌ನ ಚಿತ್ರ ಎನ್ನಲಾಗಿದೆ. ಮೀಡಿಯಾ ಹೌಸ್ ಸ್ಟುಡಿಯೋ ಈಗಾಗಲೇ ಹಲವು ಜನಪ್ರಿಯ, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳನ್ನು ನೀಡಿದೆ. ಸದ್ಯ ದರ್ಶನ್‌ ಮುಂದಿನ ಚಿತ್ರವಾದ ಡೆವಿಲ್‌ ದಿ ಹೀರೋ ಚಿತ್ರದಲ್ಲಿ ಬ್ಯುಸಿ ಇರಲಿದ್ದಾರೆ. ಇದಾದ ಬಳಿಕ ಸಿಂಧೂರ ಲಕ್ಷ್ಮಣನ ಕಥೆ ಮಾತ್ರವಲ್ಲದೆ ಇನ್ನಷ್ಟು ಚಿತ್ರಗಳು ದರ್ಶನ್‌ಗಾಗಿ ಕಾಯುತ್ತಿವೆ.

ತರುಣ್‌ ಸುಧೀರ್‌ಗೆ ಎರಡು ಸಿನಿಮಾಗಳಿಗೆ ಕಾಲ್‌ಶೀಟ್‌

ವರದಿಗಳ ಪ್ರಕಾರ ದರ್ಶನ್‌ನ 59ನೇ ಸಿನಿಮಾ ಮಾತ್ರವಲ್ಲದೆ ಇನ್ನೊಂದು ಸಿನಿಮಾಕ್ಕೂ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ. ದರ್ಶನ್‌ ನಟನೆಯ ಇನ್ನೊಂದು ಚಿತ್ರವನ್ನು ದರ್ಶನ್‌ ಆಪ್ತ ಮತ್ತು ರಾಜಕಾರಣಿ ಸಚ್ಚಿದಾನಂದ ನಿರ್ಮಾಣ ಮಾಡಲಿದ್ದಾರೆ. ದರ್ಶನ್‌ ಹುಟ್ಟುಹಬ್ಬದಂದು ಈ ಸಿನಿಮಾದ ಘೋಷಣೆ ಮಾಡಲಾಗಿದೆ. ಈ ಸಿನಿಮಾಕ್ಕೂ ತರುಣ್‌ ಸುಧೀರ್‌ ಆಕ್ಷನ್‌ ಕಟ್‌ ಹೇಳಲಿದ್ದಾರೆ.

ದರ್ಶನ್‌ ಹುಟ್ಟುಹಬ್ಬದಂದು ಚಾಲೆಂಜಿಂಗ್‌ ಸ್ಟಾರ್‌ ನಟನೆಯ ಹಲವು ಸಿನಿಮಾಗಳ ಕುರಿತು ಘೋಷಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಲು ದರ್ಶನ್‌ ಒಪ್ಪಿದ್ದಾರೆ ಎನ್ನಲಾಗಿದೆ. ಶೈಲಜಾ ನಾಗ್ ಮತ್ತು ಬಿ.ಸುರೇಶ, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಮುಂತಾದವರ ನಿರ್ಮಾಣದ ಚಿತ್ರಗಳಿಗೆ ದರ್ಶನ್‌ ಒಪ್ಪಿದ್ದಾರೆ ಎನ್ನಲಾಗಿದೆ. ದರ್ಶನ್‌ ಹುಟ್ಟುಹಬ್ಬದಂದು ಇಷ್ಟೊಂದು ಚಿತ್ರಗಳಿಗೆ ಒಪ್ಪಿರುವುದು ವಿಶೇಷ.

ಡೆವಿಲ್‌ ದಿ ಹೀರೋ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ

ದರ್ಶನ್‌ ಹುಟ್ಟುಹಬ್ಬದಂದು ಚಾಲೆಂಜಿಂಗ್‌ ಸ್ಟಾರ್‌ ನಟನೆಯ ಡೆವಿಲ್‌ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆಯಾಗಿದೆ. ಬರ್ತ್‌ಡೇ ಪ್ರಯುಕ್ತ ಈ ಸಿನಿಮಾದ ಅಧಿಕೃತ ಘೋಷಣೆ ಆಗಿದ್ದು, ಇನ್ನೇನು ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣವೂ ಶುರುವಾಗಲಿದೆ. ಇನ್ನು ನಿರ್ದೇಶಕ ಪ್ರಕಾಶ್‌ ವೀರ್‌, ಈ ಹಿಂದೆ ದರ್ಶನ್‌ಗೆ ತಾರಕ್‌ ಸಿನಿಮಾ ಮಾಡಿದ್ದರು. ಇದೀಗ ಕೆಲ ವರ್ಷಗಳ ಬಳಿಕ ಡೆವಿಲ್‌ ಮೂಲಕ ಆಗಮಿಸಿದ್ದಾರೆ. ದರ್ಶನ್‌ ಅವರನ್ನು ಬೇರೆ ರೀತಿಯಲ್ಲಿ ತೋರಿಸುವೆ ಎಂದು ಈ ಹಿಂದೆ ನಿರ್ದೇಶಕರು ಹೇಳಿದ್ದರು. ಡೆವಿಲ್‌ ದಿ ಹೀರೋ ಫಸ್ಟ್‌ ಲುಕ್‌ ಕುರಿತಾದ ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point