Karnataka Election 2023: ಬಿಜೆಪಿ, ಕಾಂಗ್ರೆಸ್ನಿಂದ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ಅಭ್ಯರ್ಥಿಗಳಿವರು
ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ಜೋರಾಗಿ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಉಳಿದಿವೆ. ಎರಡು ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಈಗಾಗಲೇ ಅಬ್ಬರದ ಪ್ರಚಾರಕ್ಕೆ ಧುಮುಕಿವೆ. ಈ ನಡುವೆ ಸ್ಥಳೀಯ ಪಕ್ಷ ಜೆಡಿಎಸ್, ರಾಷ್ಟ್ರೀಯ ಪಕ್ಷಗಳಿಗೆ ಸವಾಲೆಸೆಯಲು ಸಿದ್ಧವಾಗಿದೆ. ಆದರೆ, ಈ ಬಾರಿ ರಾಜ್ಯ ಚುನಾವಣೆಯಲ್ಲಿ ಮತ್ತೊಂದು ಟ್ವಿಸ್ಟ್ ಇದೆ. ರೋಚಕ ಹಣಾಹಣಿ ಹಾಗೂ ಸೋಲು ಗೆಲುವಿನ ಲೆಕ್ಕಾಚಾರ ಈ ಮೂರು ಪಕ್ಷಗಳ ನಡುವೆ ಮಾತ್ರವಲ್ಲ. ಘಟಾನುಘಟಿ ನಾಯಕರಿಗೆ ಪ್ರಬಲ ಪೈಪೋಟಿ ನೀಡಲು ಪಕ್ಷೇತರ ಅಭ್ಯರ್ಥಿಗಳು ಒಂಟಿ ಕಾಲಲ್ಲಿ ನಿಂತಿದ್ದಾರೆ.
ಟ್ರೆಂಡಿಂಗ್ ಸುದ್ದಿ
ರಾಷ್ಟ್ರೀಯ ಪಕ್ಷಗಳು ಟಿಕೆಟ್ ಘೋಷಿಸಿದ ಬೆನ್ನಲ್ಲೇ, ಟಿಕೆಟ್ ವಂಚಿತ ಹಲವು ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿತು. ಇವರಲ್ಲಿ ಪ್ರಬಲ ನಾಯಕರು ಕೂಡಾ ಸೇರಿದ್ದಾರೆ. ಈ ನಡುವೆ ಬಂಡಾಯವೆದ್ದ ಹಲವು ಧುರೀಣರು ಹಾಗೂ ಯುವ ನಾಯಕರು ಪಕ್ಷಾಂತರದ ಮೊರೆ ಹೋಗಿದ್ದಾರೆ. ಸದ್ಯ ರಾಜ್ಯದಲ್ಲಿ ಟಿಕೆಟ್ ಸಿಗದೆ ಪಕ್ಷೇತರರಾಗಿ ಕಣಕ್ಕಿಳಿದು, ರಾಷ್ಟ್ರೀಯ ಪಕ್ಷಗಳಿಗೆ ಪ್ರಮುಖ ಸವಾಲಾಗಿರುವ ಅಭ್ಯರ್ಥಿಗಳ ವಿವರ ಇಲ್ಲಿದೆ.
ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಬಿಜೆಪಿ ಬಂಡಾಯ ಅಭ್ಯರ್ಥಿಗಳು
ಬಿಜೆಪಿ ಬಂಡಾಯ ಅಭ್ಯರ್ಥಿಗಳು (ಪಕ್ಷೇತರ) | ಕ್ಷೇತ್ರ | ಬಿಜೆಪಿ ಅಭ್ಯರ್ಥಿಗಳು |
ಅರುಣ್ ಕುಮಾರ್ ಪುತ್ತಿಲ | ಪುತ್ತೂರು | ಆಶಾ ತಿಮ್ಮಪ್ಪ |
ಹೂಡಿ ವಿಜಯ್ ಕುಮಾರ್ | ಮಾಲೂರು | ಕೆ ಎಸ್ ಮಂಜುನಾಥ್ ಗೌಡ |
ವಿಶ್ವನಾಥ್ ಪಾಟಿಲ್ | ಬೈಲಹೊಂಗಲ | ಜಗದೀಶ್ ಮೆಟಗೂಡ |
ಮಲ್ಲಿಕಾರ್ಜುನ್ ಚರಂತಿಮಠ | ಬಾಗಲಕೋಟೆ | ವೀರಣ್ಣ ಚರಂತಿಮಠ |
ನಿತಿನ್ ಗುತ್ತೇದಾರ್ | ಅಫ್ಜಲ್ಪುರ | ಮಾಲಿಕಯ್ಯ ಗುತ್ತೇದಾರ್ |
ಎಸ್ಐ ಚಿಕ್ಕನಗೌಡರ್ | ಕುಂದಗೋಳ | ಎಂಆರ್ಪಾಟಿಲ್ |
ಎಂಪಿ ಸುನಿಲ್ | ಗುಂಡ್ಲುಪೇಟೆ | ಸಿಎಸ್ ನಿರಂಜನ್ ಕುಮಾರ್ |
ಬಿಎಂ ಮಲ್ಲಿಕಾರ್ಜುನ್ | ನಾಗಮಂಗಲ | ಸುಧಾ ಶಿವರಾಮೇಗೌಡ |
ಕೃಷ್ಣಯ್ಯ ಶೆಟ್ಟಿ | ಗಾಂಧಿನಗರ | ಎಆರ್ ಸಪ್ತಗಿರಿಗೌಡ |
ಕೆಟಿ ಕುಮಾರಸ್ವಾಮಿ | ಚಳ್ಳಕೆರೆ | ಅನಿಲ್ ಕುಮಾರ್ ಆರ್ |
ಮಾಡಾಳ್ ಮಲ್ಲಿಕಾರ್ಜುನ | ಚನ್ನಗಿರಿ | ಎಚ್ಎಸ್ ಶಿವಕುಮಾರ್ |
ಗೂಳಿಕಟ್ಟಿ ಡಿ ಶೇಖರ್ | ಹೊಸದುರ್ಗ | ಎಸ್ ಲಿಂಗಮೂರ್ತಿ |
ಸೊಗಡು ಶಿವಣ್ಣ | ತುಮಕೂರು ನಗರ | ಜಿಬಿ ಜ್ಯೀತಿ ಗಣೇಶ್ |
ಕೆಎಂ ಮುನಿಯಪ್ಪ | ಕೊರಟಗೆರೆ | ಬಿಎಚ್ ಅನಿಲ್ ಕುಮಾರ್ |
ಬಂಡಾಯವೆದ್ದ ಕಾಂಗ್ರೆಸ್ ಅಭ್ಯರ್ಥಿಗಳು
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳು (ಪಕ್ಷೇತರ) | ಕ್ಷೇತ್ರ | ಕಾಂಗ್ರೆಸ್ ಅಭ್ಯರ್ಥಿಗಳು |
ಟಿ ಮಂಜುನಾಥ್ | ಹೊಸದುರ್ಗ | ಬಿಜಿ ಗೋವಿಂದಪ್ಪ |
ಪಾಂಡುರಂಗ ಗರಗ್ | ಹೊಸದುರ್ಗ | ಬಿಜಿ ಗೋವಿಂದಪ್ಪ |
ಸೌಭಾಗ್ಯ ಬಸವರಾಜನ್ | ಚಿತ್ರದುರ್ಗ | ಕೆಸಿ ವೀರೇಂದ್ರ |
ರಾಮಕೃಷ್ಣ ದೊಡ್ಡಮನಿ | ಶಿರಹಟ್ಟಿ | ಸುಜಾತ ಎನ್ ದೊಡ್ಡಮನಿ |
ಮುಜೀಬುದ್ದಿನ್ | ರಾಯಚೂರು | ಮೊಹಮ್ಮದ್ ಶಲಮ್ |
ಚಂದ್ರ ಸಿಂಗ್ | ಬೀದರ್ ದಕ್ಷಿಣ | ಅಶೋಕ್ ಕೇಣಿ |
ಶಂಭು ಕಲ್ಲೊಲಿಕರ್ | ರಾಯಭಾಗ | ಮಹಾವೀರ್ ಲಕ್ಷ್ಮಣ ಮೊಹಿತೆ |
ಭೀಮಪ್ಪ ಗಡದ್ | ಅರಭಾವಿ | ಅರವಿಂದ್ ಮಹಾದೇವರಾವ್ ದಳವಾಯಿ |
ಸತಿಶ್ ಬಂಡಿವಡ್ಡರ್ | ಮುಧೋಳ | ಆರ್ಬಿ ತಿಮ್ನಾಪುರ್ |
ಎಚ್ ಪಿ ರಾಜೇಶ | ಜಗಳೂರು | ಬಿ ದೇವೇಂದ್ರಪ್ಪ |
ಲತಾ ಮಲ್ಲಿಕಾರ್ಜುನ್ | ಹರಪನಹಳ್ಳಿ | ಎನ್ ಕೊಟ್ರೇಶ್ |
ಸವಿತಾ ಮಲ್ಲೇಶ್ ನಾಯ್ಕ್ | ಮಯಕೊಂಡ | ಕೆಎಸ್ ಬಸವರಾಜು |
ಎಚ್ಎಂ ಗೋಪಿಕೃಷ್ಣ | ತರೀಕೆರೆ | ಜಿಹೆಚ್ ಶ್ರೀನಿವಾಸ್ |
ಬಿಬಿ ರಾಮಸ್ವಾಮಿ ಗೌಡ | ಕುಣಿಗಲ್ | ಎಚ್ಡಿ ರಂಗನಾಥ್ |
ಪುಟ್ಟಸ್ವಾಮಿ ಗೌಡ | ಗೌರಿಬಿದನೂರು | ಎನ್ಎಚ್ ಶಿವಶಂಕರರೆಡ್ಡಿ |
ಮಿಥುನ್ ರೆಡ್ಡಿ | ಬಗೇಪಲ್ಲಿ | ಎಸ್ಎನ್ ಸುಬ್ಬಾರೆಡ್ಡಿ |
ಪುಟ್ಟೂ ಅಂಜಿನಪ್ಪ | ಶಿಡ್ಲಘಟ್ಟ | ಬಿವಿ ರಾಜೀವ್ಗೌಡ |
ಎಂಟಿ ಕೃಷ್ಣೇ ಗೌಡ | ಅರಕಲಗೂಡು | ಎಚ್ಪಿ ಶರೀಧರ್ ಗೌಡ |
ಯೂಸುಫ್ ಶರೀಫ್ (ಕೆಜಿಎಫ್ ಬಾಬು) | ಚಿಕ್ಕಪೇಟೆ | ಆರ್ವಿ ದೇವರಾಜ್ |
ಸದ್ಯ ಪ್ರಮುಖ ಬಂಡಾಯವೆದ್ದ ಹಲವು ಘಟಾನುಘಟಿ ನಾಯಕರು ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಾಜ್ಯದ ಗಮನ ಸೆಳೆದಿದೆ. ಅಲ್ಲದೆ ಹಲವು ಕ್ಷೇತ್ರಗಳಲ್ಲಿ ಬಂಡಾಯ ನಾಯಕರ ಪರ ಕಾರ್ಯಕರ್ತರ ಪ್ರಚಾರ ನಡೆಯುತ್ತಿದೆ. ಬಂಡಾಯದ ಅಲೆಯಿಂದಾಗಿ ಮತವಿಭಜನೆಯಾಗಲಿದ್ದು, ಪ್ರಮುಖ ಪಕ್ಷಗಳಿಗೆ ಮತಗಳ ಕೊರತೆಯಾಗುವುದರ ಜೊತೆಗೆ, ಸೋಲಿನ ಭೀತಿಯೂ ಹೆಚ್ಚಾಗಲಿದೆ.