logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು

ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು

Rakshitha Sowmya HT Kannada

May 06, 2024 01:58 PM IST

ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು

  • ನರ್ಮದಾ ಪುಷ್ಕರ 2024: ನರ್ಮದಾ ನದಿ ಪರಿಕ್ರಮ ಎಂದರೇನು? ನರ್ಮದಾ ಉತ್ತರ ವಾಹಿಯನ್ನು ಪರಿಕ್ರಮ ಎಂದು ಏಕೆ ಕರೆಯುತ್ತಾರೆ? ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು.

ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು
ನರ್ಮದಾ ಪುಷ್ಕರ ಸ್ನಾನ, ನರ್ಮದಾ ಪರಿಕ್ರಮದ ಬಗ್ಗೆ ನೀವು ತಿಳಿಯಬೇಕಾದ ಅತಿಮುಖ್ಯ ಅಂಶಗಳಿವು

ನರ್ಮದಾ ನದಿಯು ಆಧ್ಯಾತ್ಮಿಕ ಅಭ್ಯಾಸ ಮತ್ತು ತಪಸ್ಸಿಗೆ ಅತ್ಯುತ್ತಮವಾಗಿದೆ. ಆದಿ ಶಂಕರಾಚಾರ್ಯರು ತಮ್ಮ ಗುರು ಗೋವಿಂದ ಭಗವತ್ ಪಾದಸ್ವಾಮಿಗಳನ್ನು ಭೇಟಿ ಮಾಡಿದ ಪ್ರದೇಶವು ನರ್ಮದಾ ನದಿಯ ಕ್ಷೇತ್ರವಾಗಿದೆ. ಸಾಕಷ್ಟು ವಿಶೇಷತೆಯನ್ನು ಹೊಂದಿರುವ ನರ್ಮದಾ ಪರಿಕ್ರಮ ಯಾತ್ರೆಗೆ ಲಕ್ಷಾಂತರ ಭಕ್ತರು ದೇಶದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಮೇ 1 ರಿಂದ ನರ್ಮದಾ ಪುಷ್ಕರ ಆರಂಭವಾಗಿದ್ದು ಮೇ 12ವರೆಗೂ ಮುಂದುವರೆಯಲಿದೆ. ಪುಷ್ಕರ ಎಂದರೆ ಜಲದೇವತೆ ಎಂದು ಅರ್ಥ. ಸುಮಾರು 12 ದಿನಗಳವರೆಗೆ ಈ ನದಿ ದೈವಿಕ ಶಕ್ತಿಯನ್ನು ಹೊಂದುತ್ತದೆ, ಆ ಸಮಯದಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡಿದರೆ ವಿಶೇಷ ಪುಣ್ಯಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಮತ್ತೆ ಈ ರೀತಿಯ ಪುಷ್ಕರ ಬರಲು 12 ವರ್ಷಗಳು ಬೇಕಾಗುತ್ತದೆ.

ಗುರು ಗ್ರಹವು ಆಯಾ ರಾಶಿಯನ್ನು ಪ್ರವೇಶಿಸಿದಾಗ ಪುಷ್ಕರ ಉಂಟಾಗುತ್ತದೆ. ಈಗ ಮೇಷ ರಾಶಿಯನ್ನು ಪ್ರವೇಶಿಸಿದಾಗ ನರ್ಮದಾ ಪುಷ್ಕರ ಉಂಟಾಗಿದೆ. ರೇವಾ ತೀರ ತಪಃ ಕುರ್ಯಾತ್ ಆನಿ ಶಾಸ್ತ್ರ. ಅಂದರೆ ರೇವಾ ನದಿ (ನರ್ಮದಾ ನದಿ) ಪ್ರಾಯಶ್ಚಿತ್ತಕ್ಕೆ ಅತ್ಯಂತ ಸೂಕ್ತವಾಗಿದೆ ಎಂದು ಖ್ಯಾತ ಆಧ್ಯಾತ್ಮ, ಪಂಚಾಂಗಕರ್ತ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಹೇಳುತ್ತಾರೆ.

ನರ್ಮದಾ ಪರಿಕ್ರಮದಲ್ಲಿ 3 ವಿಧಗಳಿವೆ

1. ಪೂರ್ಣ ವಿಧಾನ: ಸಂಪೂರ್ಣ ವಿಧಾನವು ಸುಮಾರು 5-6 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

2. ಉತ್ತರ ವಾಹಿನಿ ಪರಿಕ್ರಮ: ಇದು ಸುಮಾರು 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಚೈತ್ರ ಮಾಸದಲ್ಲಿ ಈ ಪರಿಕ್ರಮ ಮಾಡಲಿದ್ದು ಇದು ಬಹಳ ಪವಿತ್ರವಾಗಿದೆ.

3. ವಿಶ್ರಾಂತಿ ಚಕ್ರ: ಒಂದೇ ಬಾರಿ ಯಾತ್ರೆ ಮಾಡಲು ಸಾಧ್ಯವಾಗದವರು ಕೆಲವು ದಿನಗಳ ಕಾಲ ಒಂದು ಸ್ಥಳದಲ್ಲಿ ಉಳಿದುಕೊಂಡು ವಿಶ್ರಾಂತಿ ಮಾಡುತ್ತಾ ಮಾಡುವುದು ವಿಶ್ರಾಂತಿ ಪರಿಶ್ರಮ ಎನ್ನುತ್ತಾರೆ.

ನರ್ಮದಾ ಉತ್ತರ ವಾಹಿನಿ ಪರಿಕ್ರಮ

ರೇವಾ ನದಿ ಎಂದೂ ಕರೆಯಲ್ಪಡುವ ನರ್ಮದಾ ನದಿಯು ನರ್ಮದಾ ಜಿಲ್ಲೆಯ ರಾಜ್ ಪಿಪಾಲದಲ್ಲಿರುವ ರಾಂಪುರ್ ಎಂಬ ಪಟ್ಟಣವಾದ ಗರುಡೇಶ್ವರದ ಸಮೀಪದಿಂದ ಉತ್ತರಕ್ಕೆ ಹರಿಯುತ್ತದೆ. ಈ ಪರಿಕ್ರಮಕ್ಕೆ ಹೋಗುವ ದಾರಿಯಲ್ಲಿ ಅನೇಕ ಆಶ್ರಮಗಳೂ ಇವೆ. ಆ ಆಶ್ರಮಗಳು ಪರಿಕ್ರಮವಾಸಿಗಳಿಗೆ ಸೇವೆ ಸಲ್ಲಿಸುತ್ತವೆ. ನದಿಯ ಇನ್ನೊಂದು ಬದಿಯಲ್ಲಿ ನರ್ಮದೇ ಹರ್ ನಾಮ್ ಮತ್ತು ತಪೋವನ ಆಶ್ರಮ ಬರುತ್ತದೆ. ಮುಂದೆ ಹೋದಲ್ಲಿ ಮಣಿ ನಾಗೇಶ್ವರ ಮಂದಿರ ಬರುತ್ತದೆ. ಕಪಿಲ ಮಹಾಮುನಿ ತಪಸ್ಸು ಮಾಡಿದ ಸ್ಥಳ. ಇಲ್ಲಿ ಅಭ್ಯಾಸ ಮಾಡಿದರೆ ಸಕಲ ಸಿದ್ಧಿಗಳೂ ಫಲಪ್ರದವಾಗುತ್ತವೆ ಎಂಬ ಮಾತಿದೆ.

ದತ್ತ ಕ್ಷೇತ್ರಗಳು (ಗುಜರಾತ್) ಗರುಡೇಶ್ವರ

ಶ್ರೀ ವಾಸುದೇವಾನಂದ ಸರಸ್ವತಿಯವರು ದೇಶಾದ್ಯಂತ ಸಂಚರಿಸಿ ಕೊನೆಗೆ ನರ್ಮದಾ ನದಿಯ ದಡದಲ್ಲಿ ಸಮಾಧಿಯಾದರು. ನರ್ಮದಾ ನದಿಯು ಇಲ್ಲಿ ಅತ್ಯಂತ ಪವಿತ್ರವಾಗಿದೆ ಮತ್ತು ಉತ್ತರಕ್ಕೆ ಹರಿಯುತ್ತದೆ. ಇಲ್ಲಿಂದ ನರ್ಮದಾ ಉತ್ತರ ವಾಹಿನಿ ಪರಿಕ್ರಮ ಪ್ರಾರಂಭವಾಗಿ 15 ದಿನಗಳಲ್ಲಿ ಗರುಡೇಶ್ವರದ ಇನ್ನೊಂದು ಬದಿಗೆ ಹಿಂದಿರುಗುತ್ತದೆ ಮತ್ತು ದೋಣಿಯ ಮೂಲಕ ಈ ಕಡೆಗೆ ಬರುತ್ತದೆ. ಪೂರ್ಣ ಪರಿಕ್ರಮ ಮಾಡಲು ಸಾಧ್ಯವಾಗದವರಿಗೆ ಇದು ಉತ್ತಮ ಆಯ್ಕೆ.

ಕಪಿಲೇಶ್ವರ

ಎರಡನೇ ಕ್ಷೇತ್ರ ಕಪಿಲೇಶ್ವರಕ್ಕೆ ಬರುತ್ತದೆ, ಇದು ಶಿವ ದೇವಾಲಯವಾಗಿದೆ. ಇದು ಕಪಿಲ ಋಷಿ ತಪಸ್ಸು ಮಾಡಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಈ ನದಿಯನ್ನು ಮಾಹೇಶ್ವರಿ ಗಂಗಾ, ದಕ್ಷಿಣ ಗಂಗೆ ಎಂದೂ ಕರೆಯುತ್ತಾರೆ. ರಾಂಪುರದಿಂದ ಆರಂಭವಾಗಿ, ರಾಂಚೋಡ್ರೈ ದೇವಸ್ಥಾನದಿಂದ ಮುಂಜಾನೆ ನರ್ಮದಾ ನದಿಯಲ್ಲಿ ಸ್ನಾನ ಮಾಡಿ ಮತ್ತು ಮಂಗ್ರೋಲ್ ಕಡೆಗೆ ಹೋಗಬೇಕು. ಮಂಗೋಲ್ ತಲುಪಿ ಅಲ್ಲಿಂದ ಸಿಯಾರಾಮ್ ಆಶ್ರಮದ ಕಡೆಗೆ ಹೋಗಬೇಕು. ನಂತರ ನರ್ಮದಾ ನದಿಯ ಇನ್ನೊಂದು ದಡದಲ್ಲಿರುವ ತಿಲಕವಾಡಕ್ಕೆ ದೋಣಿ ವಿಹಾರ ಮಾಡಿ, ಇನ್ನೊಂದು ಬದಿಯನ್ನು ತಲುಪಿ ಮತ್ತು ರಾಂಪುರಕ್ಕೆ ಹಿಂತಿರುಗಬಹುದು.

ತಿಲಕವಾಡಾ

ಇದು ಅತ್ಯಂತ ಹಳೆಯ ಕ್ಷೇತ್ರ. ಗೌತಮ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳ. ಅಹಲ್ಯಾಗೆ ಶಾಪ ಕೊಟ್ಟ ನಂತರ ಪಶ್ಚಾತಾಪ ಪಟ್ಟು ಇಲ್ಲಿ ಬಂದು ತಪಸ್ಸು ಮಾಡುತ್ತಾನೆ. ವಾಸುದೇವಾನಂದ ಸರಸ್ವತಿಯವರು ನರ್ಮದೆಗೆ ಪ್ರದಕ್ಷಿಣೆ ಹಾಕಿ ದತ್ತನ ಆದೇಶದಂತೆ ಇಲ್ಲಿಯೇ ಕಳೆಯುತ್ತಾರೆ. ಇಲ್ಲಿನ ಬೇಡಂಬರ ಮರದ ಕೆಳಗೆ ವಾಸುದೇವಾನಂದ ಸರಸ್ವತಿ ಸ್ವಾಮಿಗಳು ಸ್ವತಃ ದತ್ತಾತ್ರೇಯನ ವಿಗ್ರಹವನ್ನು ಸ್ಥಾಪಿಸಿದರು. ಸಮರ್ಥ ರಾಮದಾಸು ಸ್ವಾಮಿಗಳೂ ಇಲ್ಲಿ ತಪಸ್ಸು ಮಾಡಿ ಹನುಮಂತನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಅವರ ಜೀವಂತ ಸಮಾಧಿ ಇಲ್ಲಿದೆ. ವಾಸುದೇವಾನಂದ ಸರಸ್ವತಿ ಸ್ವಾಮಿಗಳು ಬಳಸಿದ ವಸ್ತುಗಳು ಮತ್ತು ಅವರು ಎಸೆದ ಕೋಲು ಇಲ್ಲಿದೆ. ಇಲ್ಲಿಂದ ಸ್ವಾಮಿಯ ಕುಟೀರಕ್ಕೆ ಹೋದರೆ ಅಲ್ಲಿ ತಾಮ್ರದ ಹಾಳೆಯ ಮೇಲೆ ಸ್ವಾಮಿಯ ಸ್ತೋತ್ರಗಳು ಮತ್ತು ಕೆಲವು ಕೈಬರಹಗಳಿವೆ. ಈ ಪ್ರದೇಶವು ಬರೋಡಾದಿಂದ 60 ಕಿ.ಮೀ ದೂರದಲ್ಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ