logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Shanidev's Anger Remedies: ಶನಿದೇವರ ಕೋಪಕ್ಕೆ ಸಿಲುಕಿದರೆ ಸಂಕಷ್ಟಮಯ ಬದುಕು; ಶನಿದೇವರ ಅನುಗ್ರಹ ಪಡೆಯುವುದು ಹೇಗೆ?

Shanidev's Anger Remedies: ಶನಿದೇವರ ಕೋಪಕ್ಕೆ ಸಿಲುಕಿದರೆ ಸಂಕಷ್ಟಮಯ ಬದುಕು; ಶನಿದೇವರ ಅನುಗ್ರಹ ಪಡೆಯುವುದು ಹೇಗೆ?

HT Kannada Desk HT Kannada

Mar 18, 2023 03:14 PM IST

ಶನಿದೇವರು

  • Shanidev's Anger Remedies: ಇಂದು ಶನಿವಾರ. ಶನಿದೇವರ ಕೋಪಕ್ಕೆ ಒಳಗಾದರೆ ಬದುಕು ಸಂಕಷ್ಟಮಯ. ಶನಿದೇವರನ್ನು ಒಲಿಸುವ ಬಗೆ ಹೇಗೆ? ಇಲ್ಲಿದೆ ವಿವರ.

ಶನಿದೇವರು
ಶನಿದೇವರು

ಬದುಕಿನಲ್ಲಿ ಹೇಳತೀರದಷ್ಟು ಸಮಸ್ಯೆಗಳು ಉಳಿದಿವೆಯೇ?, ನಿಮ್ಮ ಗ್ರಹಗತಿಯ ಮೇಲೆ ಶನಿದೇವರ ಪ್ರಭಾವ ಏನಾದರೂ ಇರಬಹುದು. ಇಂದು ಶನಿವಾರ. ಶನಿದೇವರನ್ನು ಒಲಿಸಲು ಪೂಜಿಸಬೇಕಾದ್ದು ಅವಶ್ಯ.

ತಾಜಾ ಫೋಟೊಗಳು

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಶನಿಯ ಕೋಪಕ್ಕೆ ಸಿಲುಕಿದರೆ ಜೀವನ ಹಾಳಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಆದರೆ ಶನಿವಾರದಂದು ಕೆಲವು ವಿಶೇಷ ಕೆಲಸಗಳನ್ನು ಮಾಡುವುದರಿಂದ ಈ ಕೆಟ್ಟ ಪರಿಣಾಮವನ್ನು ಕಡಿಮೆ ಮಾಡಬಹುದು.

ಹಿಂದು ಧರ್ಮದಲ್ಲಿ ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಹಿಂದು ನಂಬಿಕೆಯ ಪ್ರಕಾರ ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿದೇವರ ಕೃಪೆಯಿಂದ ವ್ಯಕ್ತಿಯ ಜೀವನವೂ ಬದಲಾಗಬಹುದು. ಆದರೆ ವ್ಯಕ್ತಿಯ ಮೇಲೆ ಶನಿ ಕೋಪಗೊಂಡರೆ, ಆ ವ್ಯಕ್ತಿ ನಾಶವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಈ ಕಾರಣಗಳಿಗಾಗಿ ಜನರು ಶನಿದೇವನನ್ನು ಮೆಚ್ಚಿಸಲು ಜನ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ. ಈ ಪ್ರಯತ್ನಗಳಲ್ಲಿ ಶನಿವಾರದ ಶನಿದೇವರ ಪರಿಹಾರ ಉಪಕ್ರಮವೂ ಒಂದು. ಅನೇಕರು ಶನಿವಾರದಂದು ಶನಿ ದೇವಸ್ಥಾನಕ್ಕೆ ಸಾಸಿವೆ ಎಣ್ಣೆಯನ್ನು ಅರ್ಪಿಸುತ್ತಾರೆ. ಆದರೆ ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಏಕೆ ಅರ್ಪಿಸುತ್ತಾರೆ ಎಂದು ನಿಮಗೆ ತಿಳಿದಿದೆಯೇ?

ಧಾರ್ಮಿಕ ನಂಬಿಕೆಯ ಪ್ರಕಾರ, ಶನಿ ದೇವರಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸುವುದರಿಂದ ಶನಿಯ ಧಿಯ ಮತ್ತು ಸಾಡೇ ಸಾತಿ ದೋಷ ಪರಿಣಾಮಗಳು ಕಡಿಮೆಯಾಗುತ್ತವೆ. ಇದಲ್ಲದೆ, ಜಾತಕದಲ್ಲಿ ಶನಿದೋಷವು ಸಹ ಕಡಿಮೆಯಾಗುತ್ತದೆ. ಶನಿ ದೇವರ ವಿಗ್ರಹವು ಅದೃಷ್ಟವನ್ನು ತರುತ್ತದೆ.

ಆದರೆ, ಈ ಸಾಸಿವೆ ಎಣ್ಣೆಯನ್ನು ಏಕೆ ನೀಡಲಾಗುತ್ತದೆ? ಅದರ ಕಥೆಯೂ ಅದ್ಭುತವಾಗಿದೆ. ಭಗವಾನ್ ಶ್ರೀ ಹನುಮಂತನ ಪಾಲ್ಗೊಳ್ಳುವಿಕೆಯೂ ಈ ಕಥೆಯಲ್ಲಿದೆ. ಪೌರಾಣಿಕ ಕಥೆಯ ಪ್ರಕಾರ, ರಾಮಾಯಣ ಕಾಲದಲ್ಲಿ ಲಂಕಾದ ರಾವಣನು ತನ್ನ ಶಕ್ತಿಯಿಂದ ಶನಿ ದೇವನನ್ನು ತನ್ನ ಅರಮನೆಯಲ್ಲಿ ಬಂಧಿಸಿದನು. ಅಲ್ಲಿ ರಾವಣನ ಸೆರೆಯಲ್ಲಿ ಹನುಮಂತನು ರಾವಣನ ಸೆರೆಯಿಂದ ಶನಿದೇವನನ್ನು ಮುಕ್ತಗೊಳಿಸಿದನು. ಅಷ್ಟೇ ಅಲ್ಲ, ಶನಿದೇವರನ್ನು ಲಂಕೆಯಿಂದ ದೂರಕ್ಕೆ ಎಸೆದು ರಾವಣದ ದೃಷ್ಟಿಗೆ ಬೀಳದಂತೆ ನೋಡಿಕೊಂಡಿದ್ದ. ಈ ರೀತಿ ಎಸೆದಿದ್ದರಿಂದ ಶನಿದೇವನಿಗೆ ಶಾರೀರಿಕವಾಗಿ ನೋವು ಉಂಟಾ‌ಗಿತ್ತು. ಆಗ ಆ ನೋವು ಶಮನಗೊಳಿಸುವುದಕ್ಕಾಗಿ ಹನುಮಂತನು ಶನಿದೇವರ ಶರೀರದಲ್ಲಿ ನೋವಾದ ಜಾಗಕ್ಕೆ ಸಾಸಿವೆ ಎಣ್ಣೆಯನ್ನು ಲೇಪಿಸಿದನು.

ಈ ಪೌರಾಣಿಕ ಕಥೆಯ ಪ್ರಕಾರ, ಸಾಸಿವೆ ಎಣ್ಣೆಯನ್ನು ಇಂದಿಗೂ ಭಕ್ತರು ಶನಿದೇವರಿಗೆ ಸಮರ್ಪಿಸುತ್ತಿದ್ದಾರೆ. ಶನಿದೇವರ ಕೃಪೆ ಪಡೆಯಲು ಇದೂ ಒಂದು ವಿಧಾನ ಎಂಬುದು ಭಕ್ತರ ನಂಬಿಕೆ.

ಗಮನಿಸಬಹುದಾದ ವಿಚಾರ

ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ; ಶನಿದೇವರ ಅನುಗ್ರಹ ಪಡೆಯವುದು ಹೇಗೆ?

How to get blessings of shani dev: ಮಕರ, ಕುಂಭ, ಧನು, ಮಿಥುನ, ತುಲಾ ರಾಶಿಯವರಿಗೆ ಶನಿವಾರ ವಿಶೇಷ. ಈ ರಾಶಿಯವರು ಈ ದಿನ ಶನಿದೇವರ ಅನುಗ್ರಹಕ್ಕಾಗಿ ಶನಿದೇವರನ್ನು ಪೂಜಿಸಬೇಕು. ಸಾಡೇಸಾತಿ ಶನಿಯಿಂದಲೂ ಪರಿಹಾರಕ್ಕೆ ಇದು ಉತ್ತಮ ಪರಿಹಾರ ಒದಗಿಸಬಹುದು. ಶನಿದೇವರಿಗೆ ಸಂಬಂಧಿಸಿದ ಯಾವ ಸ್ತೋತ್ರ ಇಂದು ಪಠಿಸಬೇಕು? ಇಲ್ಲಿದೆ ಮಾಹಿತಿ.

ಈ ಶನಿವಾರದಿಂದ ಈ ರಾಶಿಯವರ ಅದೃಷ್ಟ ಖುಲಾಯಿಸಲಿದೆ; ಶನಿದೇವರ ಅನುಗ್ರಹ ಯಾರ ಮೇಲೆ ಇರಲಿದೆ ನೋಡಿ..

Lucky Zodiacs from 18th March due to Shani: ಶನಿವಾರ ಶನಿದೇವರಿಗೆ ಬಲುಪ್ರಿಯವಾದ ದಿನ. ಈ ಶನಿವಾರದಿಂದ ನಾಲ್ಕು ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಹಣದ ಅಲೆಯಲ್ಲಿ ಈ ರಾಶಿಯವರು ತೇಲಾಡಲಿದ್ದಾರೆ. ಯಾವ ರಾಶಿಯವರಿಗೆ ಏನು ಫಲ ಇಲ್ಲಿದೆ ವಿವರ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು