logo
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ವಿಶ್ವಕಪ್‌ನಿಂದ ಗಾಯಾಳು ಹಾರ್ದಿಕ್‌ ಹೊರಬಿದ್ರೆ, ಅವರ ಸ್ಥಾನ ತುಂಬಬಲ್ಲ ಐವರು ಆಲ್​ರೌಂಡರ್​ಗಳು ಇವರೇ

ಏಕದಿನ ವಿಶ್ವಕಪ್‌ನಿಂದ ಗಾಯಾಳು ಹಾರ್ದಿಕ್‌ ಹೊರಬಿದ್ರೆ, ಅವರ ಸ್ಥಾನ ತುಂಬಬಲ್ಲ ಐವರು ಆಲ್​ರೌಂಡರ್​ಗಳು ಇವರೇ

Prasanna Kumar P N HT Kannada

Oct 20, 2023 03:38 PM IST

ಹಾರ್ದಿಕ್ ಪಾಂಡ್ಯ ಗಾಯಗೊಂಡ ಸಂದರ್ಭ.

    • Hardik Pandya Injury: ಒಂದು ವೇಳೆ ಐಸಿಸಿ ಏಕದಿನ ವಿಶ್ವಕಪ್​ನಿಂದ ಪಾಂಡ್ಯ ಹೊರಬಿದ್ದರೆ ಅವರ ಸ್ಥಾನ ತುಂಬುವ ಪ್ರಮುಖ ಐವರು ಆಲ್​ರೌಂಡರ್​​​ಗಳನ್ನು ಈ ಮುಂದೆ ನೋಡೋಣ.
ಹಾರ್ದಿಕ್ ಪಾಂಡ್ಯ ಗಾಯಗೊಂಡ ಸಂದರ್ಭ.
ಹಾರ್ದಿಕ್ ಪಾಂಡ್ಯ ಗಾಯಗೊಂಡ ಸಂದರ್ಭ.

ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ (India vs Bangladesh) ಭರ್ಜರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup 2023) ಸತತ 4 ಗೆಲುವು ಸಾಧಿಸಿರುವ ಭಾರತ, ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಗೆಲುವಿನ ನಾಗಾಲೋಟ ಮುಂದುವರೆಸಿರುವ ರೋಹಿತ್ ಪಡೆಗೆ ಇದೀಗ ಇಂಜುರಿ ಸಮಸ್ಯೆ ಎದುರಾಗಿದೆ. ಬಾಂಗ್ಲಾದೇಶ ಎದುರಿನ ವಿಶ್ವಕಪ್ ಪಂದ್ಯದ ವೇಳೆ ಪ್ರಮುಖ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya Injury), ಪಾದದ ಗಾಯಕ್ಕೆ ಒಳಗಾಗಿದ್ದು, ಭಾರತಕ್ಕೆ ದೊಡ್ಡ ಹೊಡೆತ ಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಒಂದು ಅವಕಾಶ ಕೊಡಿ ಎಂದು ಅಂಗಾಲಾಚಿದ್ದಾತ ಈಗ ಆರ್‌ಸಿಬಿ ಲಕ್ಕೀ ಚಾರ್ಮ್; ನಡೆದು ಬಂದ ಹಾದಿ ನೆನೆದು ಕಣ್ಣೀರಿಟ್ಟ ಸ್ವಪ್ನಿಲ್‌ ಸಿಂಗ್

ನೀನು ನಮ್ಮ ಪ್ರಮುಖ ಬೌಲರ್‌ ಎಂದು ಮೊದಲ ದಿನವೇ ಆರ್‌ಸಿಬಿ ಹೇಳಿತ್ತು; ಕಂಬ್ಯಾಕ್‌ ಕುರಿತು ಯಶ್‌ ದಯಾಳ್ ಮಾತು

ಆರ್‌ಸಿಬಿ vs ಆರ್‌ಆರ್‌, ಕೆಕೆಆರ್‌ vs ಎಸ್‌ಆರ್‌ಎಚ್‌ ಪ್ಲೇಆಫ್‌ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್‌ ಹವಾಮಾನ ವರದಿ ಹೀಗಿದೆ

ಐಪಿಎಲ್‌ ಪ್ಲೇಆಫ್ ಪಂದ್ಯಗಳು ಮಳೆಯಿಂದ ರದ್ದಾದರೆ ಮುಂದೇನು; ಮೀಸಲು ದಿನ ಇದೆಯೇ? ನಿಯಮಗಳು ಹೀಗಿವೆ

ಬೌಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಲಿಟ್ಟನ್ ದಾಸ್ (Litton Das) ಸ್ಟ್ರೈಟ್​ ಡ್ರೈವ್​ ಮಾಡಿದರು. ಆ ಚೆಂಡನ್ನು ಕಾಲಿನಿಂದ ತಡೆಯುವ ಯತ್ನಿಸಿದರು. ಆದರೆ ಕಾಲು ಉಳುಕಿತು. ಆಲ್​ರೌಂಡರ್​ ಕೇವಲ 3 ಎಸೆತಗಳನ್ನಷ್ಟೇ ಬೌಲಿಂಗ್​ ಮಾಡಿ ಹೊರ ನಡೆದರು. ಬಳಿಕ ಉಳಿದ ಮೂರು ಎಸೆತಗಳನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು. ಸದ್ಯ ಹಾರ್ದಿಕ್ ಬೆಂಗಳೂರಿನ ಎನ್​ಸಿಎ ಬಂದಿದ್ದು, ಪುನಃಶ್ಚೇತನ ತರಬೇತಿ ಪಡೆಯಲಿದ್ದಾರೆ.

ಕಿವೀಸ್ ಪಂದ್ಯಕ್ಕೆ ಹಾರ್ದಿಕ್ ಅಲಭ್ಯ

ಸದ್ಯ ಅವರನ್ನು ಸ್ಕ್ಯಾನ್​ಗೆ ಒಳಪಡಿಸಿದ್ದು, ಭಾನುವಾರ ನಡೆಯುವ ನ್ಯೂಜಿಲೆಂಡ್ ಎದುರಿನ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಒಂದು ವೇಳೆ ಹಾರ್ದಿಕ್ ಪಾಂಡ್ಯ ಗಾಯ ಗಂಭೀರವಾಗಿದ್ದರೆ ಅಥವಾ ಉಳಿದ ಟೂರ್ನಿಯಿಂದ ಹೊರಬಿದ್ದರೆ ಭಾರತ ತಂಡಕ್ಕೆ ಆರನೇ ಬೌಲಿಂಗ್ ಕೊರತೆ ಕಾಡಲಿದೆ. ಒಂದು ವೇಳೆ ವಿಶ್ವಕಪ್​ನಿಂದ ಪಾಂಡ್ಯ ಹೊರಬಿದ್ದರೆ ಅವರ ಸ್ಥಾನ ತುಂಬುವ ಪ್ರಮುಖ ಐವರು ಆಲ್​ರೌಂಡರ್​​​ಗಳನ್ನು ಈ ಮುಂದೆ ನೋಡೋಣ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಪ್ರಮುಖ ಆಟಗಾರ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ತನ್ನ ಆಲ್​ರೌಂಡ್ ಕೌಶಲದಿಂದ ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆಡುವ 11ರ ಬಳಗದಲ್ಲಿ ಅವರ ಉಪಸ್ಥಿತಿ ಮುಖ್ಯವಾಗಿದೆ. ತಂಡದ ಬಲವನ್ನೂ ಹೆಚ್ಚಿಸುತ್ತದೆ. ಆದರೆ ಒಂದು ವೇಳೆ ಹೊರಬಿದ್ದರೆ, ತಂಡಕ್ಕೆ ಭಾರಿ ಹಿನ್ನಡೆಯಾಗಲಿದೆ. ಆರನೇ ಬೌಲಿಂಗ್ ಆಯ್ಕೆ ಇಲ್ಲದೆ, ಸಂಕಷ್ಟಕ್ಕೆ ಸಿಲುಕಲಿದೆ.

ಅಕ್ಷರ್ ಪಟೇಲ್​

ಹಾರ್ದಿಕ್ ಪಾಂಡ್ಯ ಬದಲಿಗೆ ಅಕ್ಷರ್ ಪಟೇಲ್​ ಅವರನ್ನು ಪರಿಗಣಿಸಬಹುದು. ಇಂಜುರಿಯಿಂದ ಚೇತರಿಸಿಕೊಂಡಿರುವ ಅಕ್ಷರ್, ಏಷ್ಯಾಕಪ್​ನಲ್ಲಿ ಗಾಯದ ಸಮಸ್ಯೆಗೂ ಮುನ್ನ ವಿಶ್ವಕಪ್ ತಂಡದಲ್ಲಿದ್ದರು. ಆದರೆ ಏಷ್ಯಾಕಪ್​ನಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಕಾರಣ ಅವರ ಬದಲಿಗೆ ಅಶ್ವಿನ್​ಗೆ ಅವಕಾಶ ನೀಡಲಾಗಿತ್ತು. ಅಕ್ಷರ್​ ಪಟೇಲ್ ಸದ್ಯ ಫಾರ್ಮ್​​ನಲ್ಲಿದ್ದು, 59 ಏಕದಿನ ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. 481 ರನ್ ಕೂಡ ಸಿಡಿಸಿದ್ದಾರೆ.

ವಾಷಿಂಗ್ಟನ್ ಸುಂದರ್

ವಾಷಿಂಗ್ಟನ್ ಸುಂದರ್​ ವಿಶ್ವಕಪ್​​ಗೂ ಮುನ್ನ ಆಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ತಂಡದ ಭಾಗವಾಗಿದ್ದರು. ಸುಂದರ್​ ಕೂಡ ಹಾರ್ದಿಕ್​ಗೆ ಉತ್ತಮ ಬದಲಿ ಆಟಗಾರ. ಬೌಲಿಂಗ್​​​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಬಲ್ಲರು. ಆದರೆ ತಂಡದಲ್ಲಿ ಕುಲ್ದೀಪ್ ಮತ್ತು ಅಶ್ವಿನ್ ಈಗಾಗಲೇ ಸ್ಫಿನ್ನರ್​ಗಳಿದ್ದು, ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್​ ಅವಶ್ಯಕತೆ ಇದೆ.

ದೀಪಕ್ ಚಹರ್, ದುಬೆ, ವಿಜಯ್ ಶಂಕರ್

ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​​​ಗಳೇ ಬೇಕೆಂದು ಬಯಸಿದರೆ, ಮೂವರು ಪ್ರಮುಖ ಆಟಗಾರರು ಇದ್ದಾರೆ. ದೀಪರ್​ ಚಹರ್​​​ ಅವರನ್ನು ಪರಿಗಣಿಸಬಹುದು. ಚಹರ್​ ಟೀಮ್ ಇಂಡಿಯಾ ಪರ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಜೊತೆಗೆ ಶಿವಂ ದುಬೆ ಅವರು ಕೂಡ ಉತ್ತಮ ಆಯ್ಕೆ. ಐಪಿಎಲ್, ದೇಶೀಯ ಕ್ರಿಕೆಟ್ ಮತ್ತು ಭಾರತ ತಂಡದ ಪರವೂ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಮತ್ತೊಬ್ಬ ಆಟಗಾರ ಅಂದರೆ ವಿಜಯ್ ಶಂಕರ್​. ಈತ ದೇಶಿಯ ಕ್ರಿಕೆಟ್​ನಲ್ಲಿ ಬೊಂಬಾಟ್​ ಪ್ರದರ್ಶನ ನೀಡಿದ್ದಾರೆ. ಈ ಮೂವರು ಬ್ಯಾಟಿಂಗ್-ಬೌಲಿಂಗ್​ನಲ್ಲಿ ತಂಡದ ಬಲವನ್ನು ಹೆಚ್ಚಿಸಲಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ. ಶಂಕರ್​ 2019ರ ವಿಶ್ವಕಪ್ ತಂಡದ ಭಾಗವಾಗಿದ್ದರು. ಒಂದು ವೇಳೆ ಹಾರ್ದಿಕ್ ಹೊರಬಿದ್ದರೆ, ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ