logo
ಕನ್ನಡ ಸುದ್ದಿ  /  ಮನರಂಜನೆ  /  Prabhas On Kantara Movie: ಪ್ರಭಾಸ್‌ಗೂ ‘ಕಾಂತಾರ’ ಸಿನಿಮಾ ಹ್ಯಾಂಗೋವರ್‌; ಕ್ಲೈಮ್ಯಾಕ್ಸ್‌ ನೋಡಿ ಹೇಳಿದ್ದೇನು?

Prabhas on Kantara Movie: ಪ್ರಭಾಸ್‌ಗೂ ‘ಕಾಂತಾರ’ ಸಿನಿಮಾ ಹ್ಯಾಂಗೋವರ್‌; ಕ್ಲೈಮ್ಯಾಕ್ಸ್‌ ನೋಡಿ ಹೇಳಿದ್ದೇನು?

HT Kannada Desk HT Kannada

Oct 01, 2022 01:34 PM IST

ಪ್ರಭಾಸ್‌ಗೂ ಕಾಂತಾರ ಸಿನಿಮಾ ಹ್ಯಾಂಗೋವರ್‌; ಕ್ಲೈಮ್ಯಾಕ್ಸ್‌ ನೋಡಿ ಹೇಳಿದ್ದೇನು?

    • ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಈ ಮಧ್ಯೆ, ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ.
ಪ್ರಭಾಸ್‌ಗೂ ಕಾಂತಾರ ಸಿನಿಮಾ ಹ್ಯಾಂಗೋವರ್‌; ಕ್ಲೈಮ್ಯಾಕ್ಸ್‌ ನೋಡಿ ಹೇಳಿದ್ದೇನು?
ಪ್ರಭಾಸ್‌ಗೂ ಕಾಂತಾರ ಸಿನಿಮಾ ಹ್ಯಾಂಗೋವರ್‌; ಕ್ಲೈಮ್ಯಾಕ್ಸ್‌ ನೋಡಿ ಹೇಳಿದ್ದೇನು?

ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’, ಶುಕ್ರವಾರವಷ್ಟೇ ಜಗತ್ತಿನಾದ್ಯಂತ ಬಿಡುಗಡೆಯಾಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದೆ. ಈ ಮಧ್ಯೆ, ಪ್ಯಾನ್ ಇಂಡಿಯಾ ಸ್ಟಾರ್ ಮತ್ತು ‘ಬಾಹುಬಲಿ’ ಖ್ಯಾತಿಯ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ಜಾರಾಂದಾಯ, ಪರಿವಾರ ದೈವಗಳ ನೇಮೋತ್ಸವದಲ್ಲಿ ಶ್ರೀನಿಧಿ ಶೆಟ್ಟಿ ಭಾಗಿ; ಕಿಚ್ಚ ಸುದೀಪ್‌ ಜತೆ ಕೆಜಿಎಫ್‌ ನಟಿಯ ಮುಂದಿನ ಸಿನಿಮಾ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

Jio Cinema OTT: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಂತೋಷದಿಂದ ಬರೆದುಕೊಂಡಿರುವ ಪ್ರಭಾಸ್, ‘’ಕಾಂತಾರ’ ಚಿತ್ರ ನೋಡಿ ಬಹಳ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರ ದೊಡ್ಡ ಯಶಸ್ಸು ಗಳಿಸಲಿ’ ಎಂದು ಹಾರೈಸಿದ್ದಾರೆ.

‘ಕೆಜಿಎಫ್’, ’ಯುವರತ್ನ’ ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು, ‘ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲಂಸ್‌ನಡಿ ನಿರ್ಮಿಸಿದ್ದು, ಅದರ ಜೊತೆಗೆ ಪ್ರಭಾಸ್ ಅಭಿನಯದ ‘ಸಲಾರ್’ ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.

ಪ್ರಭಾಸ್ ಅಲ್ಲದೆ ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದ ವಿಶಿಷ್ಟ ಆಚರಣೆಗಳನ್ನು ಕಟ್ಟಿಕೊಟ್ಟಿರುವ ರೀತಿಯ ಜೊತೆಗೆ, ಕ್ಲೈಮ್ಯಾಕ್ಸ್ ರೂಪಿಸಿರುವ ರೀತಿ ಮತ್ತು ಅದರಲ್ಲಿ ರಿಷಬ್ ಶೆಟ್ಟಿ ನಟಿಸಿರುವ ರೀತಿಯ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಕಾಂತಾರ ನೋಡಿ ವಿಮರ್ಶೆ ಬರೆದ ರಮ್ಯಾ

"ಒಮ್ಮೊಮ್ಮೆ ಒಂದೊಂದು ಸಿನಿಮಾ ನೋಡಿದಾಗ ನಿಮಗೆ ಮಾತುಗಳೇ ಹೊರಡುವುದಿಲ್ಲ. ಯಾಕೆಂದರೆ, ಆ ಚಿತ್ರ ನಿಮಗೆ ಅಂಥ ವರ್ಣಿಸಲು ಆಗದಂಥ ಅನುಭವ ನೀಡಿರುತ್ತದೆ. ಇದೀಗ ಆ ಸಾಲಿನಲ್ಲಿ ರಿಷಬ್‌ ಶೆಟ್ಟಿಯ ಕಾಂತಾರ ಸಿನಿಮಾ ಸಹ ಒಂದು. ಇದನ್ನು ಕೇವಲ ಮಾತಿನಲ್ಲಿ ಅಥವಾ ಪದಗಳಿಂದ ಹೊಗಳಲು ಸಾಧ್ಯವಿಲ್ಲ"

"ಕಾಂತಾರ ಸಿನಿಮಾ ಮೂಲಕ ನಾನು ಭೂತ ಕೋಲದ ಬಗ್ಗೆ ತುಂಬಾ ತಿಳಿದುಕೊಂಡೆ. ಅದರಲ್ಲೂ ಚಿತ್ರದ ಕೊನೆಯ 10 ನಿಮಿಷಗಳಲ್ಲಿ ರಿಷಬ್ ಅವರ ನಟನೆ ನೋಡಿದಾಗ ಅವರ ಮೈಯೊಳಗೆ ದೈವಿಕ ಹಸ್ತಕ್ಷೇಪವಾಗಿರಬಹುದೆಂಬುದು ನನ್ನ ಊಹೆ. ನೀವು ಸಿನಿಮಾ ನೋಡಿ ಆವಾಗ ನನ್ನ ಮಾತಿನ ಮೇಲೆ ನಿಮಗೆ ಶೇ. 100 ನಂಬಿಕೆ ಬರಲಿದೆ"

"ರಿಷಬ್‌ ಶೆಟ್ಟಿ ಅವರ ನಟನೆ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ಈ ಸಿನಿಮಾ ಮಾಡಿ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದೀರಿ. ಆ ಕಾರಣಕ್ಕೆ ನಿಮಗೆ ಧನ್ಯವಾದ ಅರ್ಪಿಸುತ್ತೇನೆ. ಸಪ್ತಮಿ ಗೌಡ ನೀವು ಅದ್ಭುತವಾದ ಸ್ಕ್ರೀನ್ ಪ್ರೆಸೆನ್ಸ್ ಹೊಂದಿದ್ದೀರಿ. ನಿಮ್ಮ ಎರಡನೇ ಚಿತ್ರದಲ್ಲಿಯೇ ಈ ರೀತಿಯಲ್ಲಿ ನಟಿಸಿದ್ದು, ನನಗೇ ಆಶ್ಚರ್ಯ ಉಂಟು ಮಾಡಿತು. ಅರವಿಂದ್ ನಿಮ್ಮ ಅದ್ಭುತ ದೃಶ್ಯಗಳು ನಮ್ಮನ್ನು ಕಾಂತಾರ ಲೋಕದಲ್ಲಿ ಮುಳುಗಿಸಿವೆ" ಎಂದು ಸುದೀರ್ಘವಾಗಿ ಹೇಳಿಕೊಂಡಿದ್ದಾರೆ ರಮ್ಯಾ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು