logo
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ಕಾಂಗ್ರೆಸ್‌ನ 5 ಯೋಜನೆಗಳ ವಿಚಾರದಲ್ಲಿ ಪ್ರಕಾಶ್‌ ರಾಜ್‌ಗೆ ದೂರದೃಷ್ಟಿಯೇ ಇಲ್ಲ! ಇವು ಥ್ಯಾಪೇ ಗ್ಯಾರಂಟಿ ಎಂದ ಚೇತನ್‌ ಅಹಿಂಸಾ

Chetan Ahimsa: ಕಾಂಗ್ರೆಸ್‌ನ 5 ಯೋಜನೆಗಳ ವಿಚಾರದಲ್ಲಿ ಪ್ರಕಾಶ್‌ ರಾಜ್‌ಗೆ ದೂರದೃಷ್ಟಿಯೇ ಇಲ್ಲ! ಇವು ಥ್ಯಾಪೇ ಗ್ಯಾರಂಟಿ ಎಂದ ಚೇತನ್‌ ಅಹಿಂಸಾ

Aug 10, 2023 02:34 PM IST

Chetan Ahimsa: ಕಾಂಗ್ರೆಸ್‌ನ 5 ಗ್ಯಾರಂಟಿಗಳ ವಿಚಾರದಲ್ಲಿ ಪ್ರಕಾಶ್‌ ರಾಜ್‌ಗೆ ದೂರದೃಷ್ಟಿಯೇ ಇಲ್ಲ! ಇವು ಥ್ಯಾಪೇ ಗ್ಯಾರಂಟಿ ಎಂದ ಚೇತನ್‌ ಅಹಿಂಸಾ

    • ಕಾಂಗ್ರೆಸ್‌ನ 5 ಗ್ಯಾರಂಟಿಗಳು ವರದಾನ ಎಂಬ ನಟ ಪ್ರಕಾಶ್‌ ರಾಜ್‌ ಅವರ ಮಾತಿಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್‌ ಅವರಿಗೆ ಗ್ಯಾರಂಟಿಗಳ ವಿಚಾರದಲ್ಲಿ ದೂರದೃಷ್ಟಿಯಿಲ್ಲ ಎಂದಿದ್ದಾರೆ. 
Chetan Ahimsa: ಕಾಂಗ್ರೆಸ್‌ನ 5 ಗ್ಯಾರಂಟಿಗಳ ವಿಚಾರದಲ್ಲಿ ಪ್ರಕಾಶ್‌ ರಾಜ್‌ಗೆ ದೂರದೃಷ್ಟಿಯೇ ಇಲ್ಲ! ಇವು ಥ್ಯಾಪೇ ಗ್ಯಾರಂಟಿ ಎಂದ ಚೇತನ್‌ ಅಹಿಂಸಾ
Chetan Ahimsa: ಕಾಂಗ್ರೆಸ್‌ನ 5 ಗ್ಯಾರಂಟಿಗಳ ವಿಚಾರದಲ್ಲಿ ಪ್ರಕಾಶ್‌ ರಾಜ್‌ಗೆ ದೂರದೃಷ್ಟಿಯೇ ಇಲ್ಲ! ಇವು ಥ್ಯಾಪೇ ಗ್ಯಾರಂಟಿ ಎಂದ ಚೇತನ್‌ ಅಹಿಂಸಾ

Chetan Ahimsa: ಸೋಷಿಯಲ್‌ ಮೀಡಿಯಾ ಮೂಲಕ ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ನಟ ಪ್ರಕಾಶ್‌ ರಾಜ್‌, ಇದೀಗ ಮತ್ತೆ ತಮ್ಮ ಹೇಳಿಕೆಗಳ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ವರದಾನವಾಗಿವೆ ಎಂದಿದ್ದರು. ಈಗ ಪ್ರಕಾಶ್‌ ರಾಜ್‌ ಅವರ ಇದೇ ಮಾತಿಗೆ ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕಾಶ್‌ ಅವರಿಗೆ ದೂರದೃಷ್ಟಿಯಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Jyothi Rai: ಹೆಸರು ಕೆಡಿಸುವ ಹುನ್ನಾರ, ಇದು ಪ್ರೀ ಪ್ಲಾನ್‌; ಖಾಸಗಿ ವಿಡಿಯೋ ಲೀಕ್‌ ಬಗ್ಗೆ ಜ್ಯೋತಿ ರೈಗೆ ಸಿಕ್ಕಿತ್ತು ಮುನ್ಸೂಚನೆ!

ದಕ್ಷಿಣ ಭಾರತದವ್ರು ಆಫ್ರಿಕನ್ನರಂತೆ ಕಾಣ್ತಾರೆ ಅನ್ನೋ ಸ್ಯಾಮ್‌ ಪಿತ್ರೋಡಾ ಹೇಳಿಕೆಗೆ ಗುನ್ನ ಕೊಟ್ಟ ಕನ್ನಡ ನಟಿ ಪ್ರಣೀತಾ ಸುಭಾಷ್‌

ಸ್ನಾನದ ವೇಳೆ ನನ್ನ ಖಾಸಗಿ ಅಂಗ ನೋಡಲು ಮುಜುಗರ ಆಗ್ತಿತ್ತು, ಯಾವಾಗ ಹೆಣ್ಣಾಗ್ತಿನೋ ಅನಿಸ್ತಿತ್ತು; ಬಿಗ್‌ಬಾಸ್‌ ನೀತು ವನಜಾಕ್ಷಿ

Bhagyalakshmi Serial:ರುಚಿಯಾದ ಒತ್ತು ಶ್ಯಾವಿಗೆ,ಮಾವಿನ ಸೀಕರಣೆ ಮಾಡಿಕೊಟ್ಟು ಹೋಟೆಲ್‌ನಲ್ಲಿ ಕೆಲಸ ಪಡೆದ ಕುಸುಮಾ; ಭಾಗ್ಯಲಕ್ಷ್ಮಿ ಧಾರಾವಾಹಿ

ಪ್ರಕಾಶ್‌ ರೈ ಹೇಳಿದ್ದೇನು

ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಕಾಶ್‌ ರೈ, "ರಾಜ್ಯದಲ್ಲಿ ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿರುವವರಿಗೆ ತುತ್ತು ಅನ್ನ ನೀಡುವುದೇ ತಪ್ಪೇ? ನ್ಯಾಯವಲ್ಲವೇ. ಈ ಯೋಜನೆಗಳು ನಮ್ಮ ತೆರಿಗೆಯಿಂದಲೇ ರೂಪಿತವಾದರೂ, ಇದಕ್ಕೆ ನಾವು ಹೊಟ್ಟೆಕಿಚ್ಚು ಪಡುವುದು ಬೇಡ. ಮನುಷ್ಯರಾಗಿ ಇಂಥ ಕೆಲಸಗಳನ್ನು ನಾವು ಸ್ವಾಗತಿಸೋಣ. ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ವರದಾನವಾಗಿವೆ" ಎಂದಿದ್ದರು. ಪ್ರಕಾಶ್‌ ರಾಜ್‌ ಅವರ ಈ ಮಾತಿಗೆ ನಟ ಚೇತನ್‌ ಅಹಿಂಸಾ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ನ ಐದು ಗ್ಯಾರಂಟಿಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಗೃಹಶಕ್ತಿ, ಅನ್ನಭಾಗ್ಯ ಯೋಜನೆಗಳ ಪೈಕಿ ಈಗಾಗಲೇ ಹಲವು ಯೋಜನೆಗಳು ಜಾರಿಗೆ ಬಂದಿವೆ. ಜನರಿಂದಲೂ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಈ ಯೋಜನೆಗಳ ಬಗ್ಗೆ ನಟ ಪ್ರಕಾಶ್‌ ರಾಜ್‌ ಮೆಚ್ಚುಗೆ ಸೂಚಿಸಿದ್ದಾರೆ. ಹೀಗೆ ಬೆಂಬಲ ಸೂಚಿಸಿದ್ದಕ್ಕೆ, ನಿಮಗೆ ಉದಾರವಾದಿಗಳಂತೆ ದೂರದೃಷ್ಟಿಯ ಕೊರತೆಯಿದೆ ಎಂದಿದ್ದಾರೆ.

ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್‌ ಜಸ್ಟ್‌ ಪಾಸ್‌...

ಕಾಂಗ್ರೆಸ್‌ನ 5 ಥ್ಯಾಪೇ ಹಚ್ಚೋ ಗ್ಯಾರಂಟಿಗಳನ್ನು ಬಡವರಿಗೆ 'ವರದಾನ' ಎಂದು ಪ್ರಕಾಶ್ ರೈ ಹೈಪ್ ಮಾಡಿದ್ದಾರೆ. ಇದು ಒಂದು ಅತಿಪ್ರಶಂಸೆ. ಈ ಯಥಾಸ್ಥಿತಿಯ ಯೋಜನೆಗಳು ಅಗತ್ಯವಿರುವಾಗ ಯಾವುದೇ ಕಾಳಜಿಯುಳ್ಳ ಸರ್ಕಾರವು ತನ್ನ ಸಾರ್ವಜನಿಕರಿಗೆ ಸಹಾಯ ಮಾಡಲು ಮಾಡಬಹುದಾದ ಕನಿಷ್ಠ ಯೋಜನೆಯಾಗಿವೆ. ಕಾಂಗ್ರೆಸ್‌ಗೆ ಕೇವಲ ಪಾಸ್ ಅಂಕಗಳು (35/100). ಈ 5 ಟಿಂಕರಿಂಗ್ ಯೋಜನೆಗಳನ್ನು ವರದಾನ ಎಂದು ಪರಿಗಣಿಸುವುದಾದರೆ, ರೈ ಅವರಿಗೆ ಎಲ್ಲಾ ಉದಾರವಾದಿಗಳಂತೆ ದೂರದೃಷ್ಟಿಯ ಕೊರತೆಯಿದೆ" ಎಂದು ಲೇವಡಿ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು