logo
ಕನ್ನಡ ಸುದ್ದಿ  /  ಮನರಂಜನೆ  /  ನೀರಿನ ವಿಚಾರದಲ್ಲಿ ರಾಜಕೀಯದ ನಂಟು! ಮಳೆಗಾಲದಲ್ಲಿ ತಂಪೆರೆಯಲು ಬರ್ತಿದೆ ಭಗೀರಥ ಹೆಸರಿನ ಸಿನಿಮಾ

ನೀರಿನ ವಿಚಾರದಲ್ಲಿ ರಾಜಕೀಯದ ನಂಟು! ಮಳೆಗಾಲದಲ್ಲಿ ತಂಪೆರೆಯಲು ಬರ್ತಿದೆ ಭಗೀರಥ ಹೆಸರಿನ ಸಿನಿಮಾ

May 10, 2024 06:36 AM IST

ನೀರಿನ ವಿಚಾರದಲ್ಲಿ ರಾಜಕೀಯದ ನಂಟು! ಮಳೆಗಾಲದಲ್ಲಿ ತಂಪೆರೆಯಲು ಬರ್ತಿದೆ ಭಗೀರಥ ಹೆಸರಿನ ಸಿನಿಮಾ

    • ಭಗೀರಥ ಹೆಸರಿನ ಸಿನಿಮಾವೊಂದು ಶೂಟಿಂಗ್‌ ಮುಗಿಸಿಕೊಂಡು, ಇನ್ನೇನು ಚಿತ್ರಮಂದಿರದಕ್ಕೆ ಆಗಮಿಸಲು ಸಿದ್ಧತೆ ನಡೆಸಿದೆ. ಅದಕ್ಕೂ ಮುನ್ನ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.
ನೀರಿನ ವಿಚಾರದಲ್ಲಿ ರಾಜಕೀಯದ ನಂಟು! ಮಳೆಗಾಲದಲ್ಲಿ ತಂಪೆರೆಯಲು ಬರ್ತಿದೆ ಭಗೀರಥ ಹೆಸರಿನ ಸಿನಿಮಾ
ನೀರಿನ ವಿಚಾರದಲ್ಲಿ ರಾಜಕೀಯದ ನಂಟು! ಮಳೆಗಾಲದಲ್ಲಿ ತಂಪೆರೆಯಲು ಬರ್ತಿದೆ ಭಗೀರಥ ಹೆಸರಿನ ಸಿನಿಮಾ

Bhageeratha: ಧರೆಗೆ ತನ್ನ ತಪ್ಪಸ್ಸಿನಿಂದ ಗಂಗೆಯನ್ನು ತಂದವರು ಭಗೀರಥ. ಅದರಿಂದ ಗಂಗೆಗೆ ಭಾಗೀರಥಿ ಎಂಬ ಹೆಸರು ಉಂಟು. ಹಿಡಿದ ಕೆಲಸವನ್ನು ಕಷ್ಟಪಟ್ಟು ಸಾಧಿಸಿದರೆ ಅದನ್ನು ಭಗೀರಥ ಪ್ರಯತ್ನ ಎಂದು ಕರೆಯುವುದುಂಟು. ಇಂತಹ ಒಂದು ವಿಭಿನ್ನ ಕಥೆಯನ್ನಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಭಗೀರಥ ಸಿನಿಮಾ ಬರುತ್ತಿದೆ. ಮುಂದಿನ ತಿಂಗಳು ಜೂನ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ; ಸದ್ಯದಲ್ಲಿಯೇ ಶೀರ್ಷಿಕೆ ಬಿಡುಗಡೆ

ಮಂಗ್ಲಿ ಕಂಠಕ್ಕೆ ಹುಚ್ಚೆದ್ದು ಕುಣಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಕಿಟ್ಟಿ, ರಚ್ಚು; ಇದು ಸಂಜು ವೆಡ್ಸ್ ಗೀತಾ-2 ಅಪ್‌ಡೇಟ್‌

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಬೆಂಗಳೂರಿನಲ್ಲಿ ಭರ್ಜರಿ ರೇವ್‌ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್‌ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ

ಸಾಯಿ ರಮೇಶ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಕೆ.ರಮೇಶ್ ಹಾಗೂ ಬಿ. ಭೈರಪ್ಪ ಮೈಸೂರು ನಿರ್ಮಿಸಿರುವ ಹಾಗೂ ರಾಮ್ ಜನಾರ್ದನ್ ನಿರ್ದೇಶನದ ಈ ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು‌. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ಕಳೆದ ಸೆಪ್ಟೆಂಬರ್ ನಲ್ಲಿ ನಮ್ಮ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಇದೀಗ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಇಡೀ ಟೀಮ್‌ ಸಹಕಾರ ಶ್ರಮದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಈ ಹಿಂದೆ ಬಾಯ್‌ ಫ್ರೆಂಡ್‌ ಚಿತ್ರ ನಿರ್ದೇಶಿಸಿದ್ದೆ. ಅಲ್ಲಿಂದ ನನ್ನ ನಿರ್ದೇಶಕ ಜರ್ನಿ ಶುರುವಾಯ್ತು. ಈಗ ಭಗೀರಥ ನನ್ನ ಐದನೇ ಚಿತ್ರ. ರಾಜಕೀಯ ಹಿನ್ನೆಲೆಯಲ್ಲಿ ತೆರೆದುಕೊಳ್ಳುವ ಈ ಚಿತ್ರದಲ್ಲಿ ಪತ್ರಕರ್ತನ ಕಥೆಯೂ ಇದೆ ಎಂದರು ನಿರ್ದೇಶಕ ರಾಮ್‌ ಜನಾರ್ಧನ್. ಟೀಸರ್ ಬಿಡುಗಡೆ ಮಾಡಿಕೊಟ್ಟ ಎನ್ ಎಂ ಸುರೇಶ್ ಅವರಿಗೂ ಇದೇ ವೇಳೆ ಧನ್ಯವಾದ ತಿಳಿಸಿದರು.

ಪತ್ರಿಕೋದ್ಯಮ ಓದಿ, ಜರ್ನಲಿಸ್ಟ್‌ ಆಗಿದ್ದ ನಾನು ಈ ಹಿಂದೆ ಜಮಾನ ಹೆಸರಿನ ಸಿನಿಮಾ ಮೂಲಕ ನಟನಾಗಿ ಚಂದನವನಕ್ಕೆ ಬಂದೆ. ಭಗೀರಥ ನನ್ನ ಮೂರನೇ ಸಿನಿಮಾ. ಸೂರ್ಯಪ್ರಕಾಶ್ ನನ್ನ ಪಾತ್ರದ ಹೆಸರು. ನಿರ್ದೇಶಕರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಭಗೀರಥ ಹೆಸರಿಗೆ ತಕ್ಕಂತೆ ನೀರಿಗೆ ಸಂಬಂಧಿಸಿದ ಕಥೆಯೂ ಈ ಚಿತ್ರದಲ್ಲಿದೆ ಎಂದರು ಜಯಪ್ರಕಾಶ್.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆವು. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದರು ನಿರ್ಮಾಪಕರಾದ ಕೆ.ರಮೇಶ್ ಹಾಗೂ ಬಿ.ಭೈರಪ್ಪ. ನಟಿ ಶ್ರೀಯಾ ಪಾವನಿ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರದ್ದಿಲ್ಲಿ ನಾಯಕನ ಸೋದರತ್ತೆಯ ಮಗಳ ಪಾತ್ರ ಎಂದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮ ಹಾಗೂ ಛಾಯಾಗ್ರಹಣದ ಕುರಿತು ಸೂರಿ ಚಿತ್ತೂರು ಮಾಹಿತಿ ನೀಡಿದರು.

ಇನ್ನು ಚಿತ್ರದ ತಾರಾಗಣದಲ್ಲಿ ಜಯಪ್ರಕಾಶ್, ಚಂದನ ರಾಘವೇಂದ್ರ, ಸುಧಾ ಬೆಳವಾಡಿ, ಶಿವರಾಜ್ ಕೆ.ಆರ್ ಪೇಟೆ, ರವಿಕಾಳೆ, ಶ್ರೀನಿವಾಸಪ್ರಭು, ಬಾಲ ರಾಜವಾಡಿ, ನಯನ, ಸುರಭಿ ರವಿ, ಶ್ರೀಯಾ ಪಾವನಿ ಮುಂತಾದವರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ