logo
ಕನ್ನಡ ಸುದ್ದಿ  /  ಮನರಂಜನೆ  /  ನಿಜ ಜೀವನದಲ್ಲಿ ನನ್ನ ಪತ್ನಿ ವಿಲನ್‌ ಅಲ್ಲ; ಅರ್ಧಾಂಗಿ ಶ್ರೀವಿದ್ಯಾ ಕುರಿತು ಗಾಯಕ, ಹಾಸ್ಯ ಕಲಾವಿದ ಗಣೇಶ್‌ ಕಾರಂತ್‌ ಹೃದಯಸ್ಪರ್ಶಿ ಮಾತುಗಳು

ನಿಜ ಜೀವನದಲ್ಲಿ ನನ್ನ ಪತ್ನಿ ವಿಲನ್‌ ಅಲ್ಲ; ಅರ್ಧಾಂಗಿ ಶ್ರೀವಿದ್ಯಾ ಕುರಿತು ಗಾಯಕ, ಹಾಸ್ಯ ಕಲಾವಿದ ಗಣೇಶ್‌ ಕಾರಂತ್‌ ಹೃದಯಸ್ಪರ್ಶಿ ಮಾತುಗಳು

HT Kannada Desk HT Kannada

Jan 10, 2024 09:05 AM IST

ಗಣೇಶ್‌ ಕಾರಂತ್‌ ಮತ್ತು ಶ್ರೀವಿದ್ಯಾ

    • ಕನ್ನಡ ಕೋಗಿಲೆ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದ ಗಣೇಶ್‌ ಕಾರಂತ್‌ ಅವರು ಬಿಯಾರ್ಡ್‌ ಬಾಲಕ ವಿಡಿಯೋಗಳ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌. ಗಾಯಕ, ಐಟಿ ಉದ್ಯೋಗಿ ಗಣೇಶ್‌ ಕಾರಂತ್‌ ಇತ್ತೀಚೆಗೆ ಜೋಡಿ ನಂಬರ್‌ 1ರ ವಿಡಿಯೋ ತುಣುಕೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗಣೇಶ್‌ ಕಾರಂತ್‌ ಮತ್ತು ಶ್ರೀವಿದ್ಯಾ
ಗಣೇಶ್‌ ಕಾರಂತ್‌ ಮತ್ತು ಶ್ರೀವಿದ್ಯಾ

ಸೋಷಿಯಲ್‌ ಮೀಡಿಯಾದಲ್ಲಿ ಬಿಯರ್ಡ್‌ ಬಾಲಕ ಕಾಮಿಡಿ ಮೂಲಕ ಜನಪ್ರಿಯತೆ ಪಡೆದಿರುವ ಗಣೇಶ್‌ ಕಾರಂತ್‌ ಕನ್ನಡದ ಪ್ರತಿಭಾನ್ವಿತ ಗಾಯಕ. ಕನ್ನಡ ಕೋಗಿಲೆ ಎಂಬ ಕಿರುತೆರೆ ರಿಯಾಲಿಟಿ ಶೋ ಮೂಲಕ ಇವರು ಕನ್ನಡ ಪ್ರೇಕ್ಷಕರ ಗಮನ ಸೆಳೆದಿದ್ದರು. ಇವರ ಅರ್ಧಾಂಗಿ ಹೆಸರು ಶ್ರೀವಿದ್ಯಾ. ಜೋಡಿ ನಂಬರ್‌ 1 ಕಿರುತೆರೆ ಕಾರ್ಯಕ್ರಮದಲ್ಲಿ ಇವರಿಬ್ಬರ ಪ್ರೀತಿ, ತಮಾಷೆಯನ್ನು ನೀವು ಈಗಾಗಲೇ ನೋಡಿರಬಹುದು. ಇದಕ್ಕೆ ಸಂಬಂಧಪಟ್ಟಂತೆ ಒಂದು ವಿಡಿಯೋ ಕ್ಲಿಪ್‌ ಅನ್ನು ಗಣೇಶ್‌ ಕಾರಂತ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

Aadujeevitham OTT: ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ಆಡುಜೀವಿತಂ ಸಿನಿಮಾವನ್ನು ಮನೆಯಲ್ಲೇ ನೋಡಿ, ಇಲ್ಲಿದೆ ಒಟಿಟಿ ಬಿಡುಗಡೆ ವಿವರ

ಬ್ಲಿಂಕ್ ಸಿನಿಮಾ ನಿರ್ದೇಶಕ ಶ್ರೀನಿಧಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿರುವ ಕ್ರಿಸ್ಟೋಫರ್ ನೋಲನ್, ಸಂಜೀವ್ ಜಾಗೀರ್ದರ್ ಎಡಿಟಿಂಗ್‌ ಸೂಪರ್‌

ನಾನು ಜೋರು ಇವಳು ಪಾಪ

ಜೋಡಿ ನಂಬರ್‌ 1ರಲ್ಲಿ ತನ್ನ ಪತ್ನಿ ಶ್ರೀವಿದ್ಯಾರ ಕುರಿತು ಹೇಳಿರುವ ಮಾತನ್ನು ರೀಲ್ಸ್‌ ಆಗಿ ಗಣೇಶ್‌ ಕಾರಂತ್‌ ಹಂಚಿಕೊಂಡಿದ್ದಾರೆ. "ವಿಡಿಯೋದಲ್ಲಷ್ಟೇ ನಾನು ಪಾಪ, ಅವರು ವಿಲನ್‌ರಂತೆ ಕಾಣಿಸ್ತಾರೆ. ಆದರೆ ನಿಜ ಜೀವನದಲ್ಲಿ ಹಾಗೆ ಇಲ್ಲ. ಆಫ್ಟರ್‌ ಸಮ್‌ ಟೈಮ್‌ ಯಾವುದೇ ಹೆಂಗಸರಿಗೂ ಅನಿಸಬಹುದು, ಅದ್ಯಾಕೆ ನನ್ನನ್ನು ವಿಲನ್‌ ತರನೇ ತೋರಿಸ್ತಿರಿ ಎನಿಸಬಹುದು. ಆದರೆ, ಇವಳು ಹಾಗೆ ಅಲ್ಲ. ರಿಯಲ್‌ ಲೈಫ್‌ನಲ್ಲಿ ನಾನು ಜೋರು ಇವರು ಪಾಪ" ಎಂದು ಗಣೇಶ್‌ ಕಾರಂತ್‌ ಹೇಳಿದ್ದಾರೆ.

ನನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾಳೆ

"ನಿಜ ಜೀವನದಲ್ಲಿ ಇವಳು ತುಂಬಾ ಪಾಪ. ನಾನು ಜೋರು. ಇವಳು ನನ್ನ ಸಿಕ್ಕಾಪಟ್ಟೆ ಪ್ರೀತಿ ಮಾಡ್ತಾಳೆ. ನನಗೆ ಅದು ಗೊತ್ತಾಗ್ತ ಇರುತ್ತದೆ. ಗೊತ್ತಾಯ್ತೆಂದು ಅದನ್ನು ನಾನು ಎಕ್ಸ್‌ಪ್ರೆಸ್‌ ಮಾಡುವುದಿಲ್ಲ. ಸುಮ್ಮನೆ ಕಾಲು ಎಳೆಯುತ್ತ ಇರುತ್ತೇನೆ" ಎಂದಿದ್ದಾರೆ.

"ಅರೇಂಜ್‌ ಮ್ಯಾರೇಜ್‌ನಲ್ಲಿ ಯಾವುದೋ ಭಯ ಇರುತ್ತದೆ. ಲವ್‌ ಮ್ಯಾರೇಜ್‌ನಲ್ಲಿ ಏನೋ ಅಡ್ವಾಂಟೇಜ್‌ ಇರುತ್ತದೆ. ಸಾಕಷ್ಟು ಸಮಯದ ಪರಿಚಯ ಇರುತ್ತದೆ. ಅರೇಂಜ್ಡ್‌ ಮ್ಯಾರೇಜ್‌ನಲ್ಲಿ ಮೊದಲ ಬಾರಿಗೆ ಪರಿಚಯ ಆಗುತ್ತದೆ. ಮದುವೆಯಾದ ಮೇಲೆ ಪ್ರೀತಿ ಹುಟ್ಟಬೇಕು. ಲವ್‌ ಮ್ಯಾರೇಜ್‌ನಲ್ಲಿ ಎಷ್ಟೋ ವರ್ಷದ ಪರಿಚಯ ಇರುತ್ತದೆ. ಅರೇಂಜ್‌ ಮ್ಯಾರೇಜ್‌ನಲ್ಲಿ ಇಬ್ಬರು ಪರಿಚಯ ಆಗಬೇಕು, ಅಪ್ಪ ಅಮ್ಮನ ಬಿಟ್ಟು ಬಂದಿರ್ತಾರೆ. ಲವ್‌ ಮ್ಯಾರೇಜ್‌ನಲ್ಲಿ ತುಂಬಾ ಅಡ್ವಾಂಟೇಜ್‌ ಇರುತ್ತದೆ. ಜೆನ್ಯೂನ್‌ ಆಗಿ ಹೇಳ್ತಿನಿ ನನಗೆ ಇವಳು ದೊರಕಿರುವುದು ನಿಜಕ್ಕೂ ಲಕ್ಕಿ" ಎಂದು ಹೇಳಿರುವ ವಿಡಿಯೋವನ್ನು ಗಣೇಶ್‌ ಕಾರಂತ್‌ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ ಗಣೇಶ್‌ ಕಾರಂತ್‌ ಫ್ಯಾನ್ಸ್‌ ಖುಷಿಯಿಂದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ನಿಮ್ಮ ಜೋಡಿನ ನೋಡಿ ತುಂಬಾ ಖುಷಿಯಾಯ್ತು. ತುಂಬಾ ಒಳ್ಳೆ ಜೋಡಿ ನಿಮ್ದು" "ಲವ್‌ ಮ್ಯಾರೇಜ್‌ಗಿಂತ ಅರೇಂಜ್ಡ್‌ ಮ್ಯಾರೇಜ್‌ ಬೆಸ್ಟ್‌ ಸರ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. ಗಣೇಶ್‌ ಕಾರಂತ್‌ ಅವರು ಈ ಹಿಂದೆಯೂ ಹಲವು ಬಾರಿ ತನ್ನ ಪತ್ನಿ ಕುರಿತು ಮುಕ್ತವಾಗಿ ಮಾತನಾಡಿದ್ದರು. ಶ್ರೀವಿದ್ಯಾ ದೊರಕಿರುವುದು ನನ್ನ ಅದೃಷ್ಟ ಎಂದಿದ್ದರು.

ಐಟಿ ಉದ್ಯೋಗಿಯಾಗಿರುವ ಗಣೇಶ್‌ ಕಾರಂತ್‌ ಸಮಯ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಕನ್ನಡ ಕೋಗಿಲೆ ಕಾರ್ಯಕ್ರಮದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದರು. ಒಳ್ಳೆಯ ಗಾಯಕ ಎಂದು ಖ್ಯಾತಿ ಪಡೆದಿದ್ದಾರೆ. ಗುರುಕಿರಣ್‌ ನೈಟ್ಸ್‌ ಮುಂತಾದ ಸಂಗೀತ ಕಾರ್ಯಕ್ರಮಗಳ ಮೂಲಕವೂ ಇವರು ಸಂಗೀತ ಪ್ರೇಮಿಗಳಿಗೆ ಹತ್ತಿರವಾಗಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮಗುವಿನಂತಹ ಮುಖದಲ್ಲಿ (ಬಿಯರ್ಡ್‌ ಬಾಲಕ) ಹಾಸ್ಯ ವಿಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ಇವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಗಣೇಶ್‌ ಕಾರಂತ್‌ ಅವರು ಉಡುಪಿಯವರು. ಶ್ರೀವಿದ್ಯಾ ಚಿಕ್ಕಬಳ್ಳಾಪುರದವರು.

ನಾನು ಕಾಮಿಡಿ ವಿಡಿಯೋ ಮಾಡುವವ ಎಂದು ಪತ್ನಿಗೆ ಗೊತ್ತಿರಲಿಲ್ಲ

ಈ ಹಿಂದೆ ಗಣೇಶ್‌ ಕಾರಂತ್‌ ಅವರು ಹಿಂದೂಸ್ತಾನ್‌ ಟೈಮ್ಸ್‌ ಜತೆಗಿನ ಸಂದರ್ಶನದಲ್ಲಿ ತನ್ನ ಕುರಿತು ಮತ್ತು ಪತ್ನಿ ಶ್ರೀವಿದ್ಯಾ ಕುರಿತು ಹಲವು ಮಾಹಿತಿ ಹಂಚಿಕೊಂಡಿದ್ದರು. "ಮದುವೆ ಆಗುವ ಮೊದಲು ಕಾಮಿಡಿ ವಿಡಿಯೋಗಳಲ್ಲಿ ನಟಿಸಬೇಕು ಎಂದು ಪತ್ನಿಗೆ ಕಂಡಿಷನ್‌ ಹಾಕಿದ್ರ? ನಿಮ್ಮದು ಲವ್‌ ಮ್ಯಾರೇಜಾ? ಎಂದೆಲ್ಲ ಜನರು ಕೇಳುತ್ತಾರೆ. ನಿಜ ಹೇಳಬೇಕೆಂದರೆ ವಿದ್ಯಾಗೆ ನಾನು ಸಿಂಗರ್‌ ಅಥವಾ ಕಾಮಿಡಿ ವಿಡಿಯೋ ಮಾಡುತ್ತೇನೆ ಅನ್ನೋದೆ ಗೊತ್ತಿರಲಿಲ್ಲ. ನಮ್ಮದು ಪಕ್ಕಾ ಅರೇಂಜ್‌ ಮ್ಯಾರೇಜ್.‌ ನಾನು ನಿಮ್ಮ ಕಾಮಿಡಿ ವಿಡಿಯೋಗಳಲ್ಲಿ ನಟಿಸೋದಿಲ್ಲ ಅಂತ ವಿದ್ಯಾ ಹೇಳಿದ್ದರು. ಆದರೆ ಈಗ ಆಕೆಯೇ ಆಸಕ್ತಿಯಿಂದ ಇನ್ವಾಲ್ವ್‌ ಆಗ್ತಿದ್ದಾರೆ. ಆಕೆ ಬಹಳ ಸಪೋರ್ಟಿವ್.‌ ಅರೇಂಜ್‌ ಮ್ಯಾರೇಜ್‌ನಲ್ಲಿ ನನಗೆ ಹೊಂದುವಂತ ಹುಡುಗಿ ಸಿಕ್ಕಿದ್ದು ನಿಜಕ್ಕೂ ನಾನು ಬಹಳ ಲಕ್ಕಿ" ಎಂದು ಗಣೇಶ್‌ ಕಾರಂತ್‌ ಹೇಳಿದ್ದಾರೆ. ಪೂರ್ತಿ ಸಂದರ್ಶನ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ