logo
ಕನ್ನಡ ಸುದ್ದಿ  /  Lifestyle  /  World Diabetes Day: Diabetic Retinopathy - Symptoms, Treatment And Causes

World Diabetes Day: ಮಧುಮೇಹದಿಂದ ದೃಷ್ಟಿನಷ್ಟವಾಗಬಹುದು, ಡಯಾಬಿಟಿಕ್ ರೆಟಿನೋಪತಿಯ ಬಗ್ಗೆ ನಿಮಗೆಷ್ಟು ಗೊತ್ತು?

HT Kannada Desk HT Kannada

Nov 11, 2022 12:54 PM IST

World Diabetes Day: ಮಧುಮೇಹದಿಂದ ದೃಷ್ಟಿನಷ್ಟವಾಗಬಹುದು, ಡಯಾಬಿಟಿಕ್ ರೆಟಿನೋಪತಿಯ ಬಗ್ಗೆ ನಿಮಗೆಷ್ಟು ಗೊತ್ತು?

    • ಇದೇ ನವೆಂಬರ್‌ 14ರಂದು ವಿಶ್ವ ಮಧುಮೇಹ ದಿನ (World Diabetes Day)ವಾಗಿದ್ದು, ಈ ಸಂದರ್ಭದಲ್ಲಿ ಮಧುಮೇಹದ ವಿವಿಧ ತೊಂದರೆಗಳ ಕುರಿತು ಆಲೋಚಿಸುವುದು ಅಗತ್ಯವಾಗಿದೆ. ಮಧುಮೇಹಿಗಳಲ್ಲಿ ಬಹುತೇಕರು ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
World Diabetes Day: ಮಧುಮೇಹದಿಂದ ದೃಷ್ಟಿನಷ್ಟವಾಗಬಹುದು, ಡಯಾಬಿಟಿಕ್ ರೆಟಿನೋಪತಿಯ ಬಗ್ಗೆ ನಿಮಗೆಷ್ಟು ಗೊತ್ತು?
World Diabetes Day: ಮಧುಮೇಹದಿಂದ ದೃಷ್ಟಿನಷ್ಟವಾಗಬಹುದು, ಡಯಾಬಿಟಿಕ್ ರೆಟಿನೋಪತಿಯ ಬಗ್ಗೆ ನಿಮಗೆಷ್ಟು ಗೊತ್ತು?

ಇದೇ ನವೆಂಬರ್‌ 14ರಂದು ವಿಶ್ವ ಮಧುಮೇಹ ದಿನ (World Diabetes Day)ವಾಗಿದ್ದು, ಈ ಸಂದರ್ಭದಲ್ಲಿ ಮಧುಮೇಹದ ವಿವಿಧ ತೊಂದರೆಗಳ ಕುರಿತು ಆಲೋಚಿಸುವುದು ಅಗತ್ಯವಾಗಿದೆ. ಮಧುಮೇಹಿಗಳಲ್ಲಿ ಬಹುತೇಕರು ಡಯಾಬಿಟಿಕ್ ರೆಟಿನೋಪತಿ ಎಂಬ ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Personality Test: ಟೂತ್‌ಪೇಸ್ಟ್‌ ಹೇಗೆ ಹಿಂಡ್ತೀರಿ ಅನ್ನೋದು ನಿಮ್ಮ ವ್ಯಕ್ತಿತ್ವ, ನಿಮಗೆಷ್ಟು ಧೈರ್ಯ ಎನ್ನುವುದನ್ನೂ ತೋರಿಸುತ್ತೆ

Parenting: ಮಗಳು ಹಸ್ತ ಮೈಥುನದ ಕೆಟ್ಟ ಚಟಕ್ಕೆ ಬಿದ್ದಿದ್ದಾಳೆ, ಮ್ಯಾಮ್ 'ಹೆಣ್ಣು ಮತ್ತು ಹಸ್ತ ಮೈಥುನ'; ಗಿರಿಜಾ ಹೆಗಡೆ ಬರಹ

Home Remedies for Lice: ಹೇನು ಸೀರುಗಳ ಸಮಸ್ಯೆಗಳಿಗೆ ಈ ಮನೆ ಮದ್ದು ಬಳಸಿ ನೋಡಿ; ಇವಿಷ್ಟೂ ವಸ್ತುಗಳು ನಿಮ್ಮಲ್ಲಿದ್ದರೆ ಸಾಕು

ಪನೀರ್ ಅಸಲಿಯೋ, ನಕಲಿಯೋ ಬಳಸುವ ಮೊದಲೇ ಹೀಗೆ ಪತ್ತೆ ಮಾಡಿ; ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಮಧುಮೇಹವು ನಮ್ಮ ಕಣ್ಣುಗಳ ಮೇಲೂ ಪರಿಣಾಮ ಬೀರಬಹುದು. ಸಕ್ಕರೆ ಕಾಯಿಲೆಯಿಂದ ದೃಷ್ಟಿ ನಷ್ಟವೂ ಆಗಬಹುದು. ಹೀಗಾಗಿ, ಮಧುಮೇಹದ ಜತೆಗೆ ಬರುವ ಡಯಾಬಿಟಿಕ್ ರೆಟಿನೋಪತಿ ಕುರಿತು ಜಾಗೃತಿ ಹೊಂದಿರಬೇಕು ಎಂದು ತಜ್ಞರು ಹೇಳಿದ್ದಾರೆ.

ಭಾರತದಲ್ಲಿ, 77 ಮಿಲಿಯನ್ ಜನರು ಮಧುಮೇಹದೊಂದಿಗೆ ಬದುಕುತ್ತಿದ್ದಾರೆ. ಅವರಲ್ಲಿ ಅಂದಾಜು 18% ಮಧುಮೇಹಿಗಳು ಡಯಾಬಿಟಿಕ್ ರೆಟಿನೋಪತಿ (DR) ನಿಂದ ಬಳಲುತ್ತಿದ್ದಾರೆ. ಈ ಆತಂಕಕಾರಿ ಸಂಖ್ಯೆಗಳ ಹೊರತಾಗಿಯೂ, ಡಯಾಬಿಟಿಸ್ ರೆಟಿನೋಪತಿ (DR) ಕುರಿತು ದೇಶದ ಜನರಲ್ಲಿ ಜಾಗೃತಿಯ ಕೊರತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಕಣ್ಣು ಕಳೆದುಕೊಳ್ಳಬೇಕಾಗಬಹುದು ಎಚ್ಚರ!

ಉದ್ಯೋಗದಲ್ಲಿರುವ (20-65 ವರ್ಷಗಳು) ವಯಸ್ಕರಲ್ಲಿ ದೃಷ್ಟಿ ನಷ್ಟಕ್ಕೆ ಡಯಾಬಿಟಿಕ್ ರೆಟಿನೋಪತಿ ಪ್ರಮುಖ ಕಾರಣವಾಗಿದೆ. ಜಾಗತಿಕವಾಗಿ, ಪ್ರತಿ 3 ರಲ್ಲಿ 1 ಮಧುಮೇಹ ರೋಗಿಗಳಲ್ಲಿ ಡಯಾಬಿಟಿಕ್ ಮ್ಯಾಕ್ಯುಲರ್ ಎಡಿಮಾ (DME) ಉಂಟಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಮಧುಮೇಹಿಗಳು ಮತ್ತು ವಯಸ್ಸಾದವರಿಗೆ, ಸಕಾಲಿಕ ರೋಗನಿರ್ಣಯ ಮತ್ತು ರೋಗ ನಿರ್ವಹಣೆಯನ್ನು ಸಕ್ರಿಯಗೊಳಿಸಲು ನಿಯಮಿತ ಕಣ್ಣಿನ ತಪಾಸಣೆಯು ಪ್ರಮುಖವಾಗಿದೆ. ಡಯಾಬಿಟಿಕ್ ರೆಟಿನೋಪತಿ ರೋಗನಿರ್ಣಯ ಮಾಡಿದ ನಂತರ, ಮಧುಮೇಹವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಕಣ್ಣಿನ ಕಾಯಿಲೆಗಳ ಪ್ರಗತಿಯನ್ನು ತಡೆಯಲು ಚಿಕಿತ್ಸೆಗೆ ಬದ್ಧವಾಗಿರುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

ತಪಾಸಣೆ ಮಾಡಿಸಿಕೊಳ್ಳಿ

"ಮಧುಮೇಹ ಬರುವ ಯುವ ವಯಸ್ಕರಲ್ಲಿ ಡಯಾಬಿಟಿಕ್ ರೆಟಿನೋಪತಿ ಬೆಳವಣಿಗೆಯ ಅಪಾಯವು ದ್ವಿಗುಣಗೊಳ್ಳಬಹುದು. ಮಧುಮೇಹಿಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದಿರುವುದು ಉತ್ತಮ, ಏಕೆಂದರೆ ರೋಗಲಕ್ಷಣಗಳು ಕಾಣಿಸಿಕೊಳ್ಳುವ ವೇಳೆಗೆ, ರೋಗವು ಸಾಕಷ್ಟು ಹೆಚ್ಚಾಗಿರಬಹುದು. ನಾವು ಎಷ್ಟು ಮುಂಚಿತವಾಗಿ ರೋಗನಿರ್ಣಯ ಮತ್ತು ಚಿಕಿತ್ಸೆ ಪ್ರಾರಂಭಿಸುತ್ತೇವೆಯೋ, ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳು ಅಷ್ಟೇ ಹೆಚ್ಚಿರುತ್ತವೆ. ಮಧುಮೇಹ ಪತ್ತೆಯಾದ ತಕ್ಷಣ, ವಿಶೇಷವಾಗಿ ಟೈಪ್ 2 ಮಧುಮೇಹಿಗಳು, ರಲ್ಲಿ ಕಣ್ಣಿನ ತಪಾಸಣೆಯನ್ನು ಪ್ರಾರಂಭಿಸುವುದು ಉತ್ತಮ. ಮಧುಮೇಹದ ಆರಂಭಿಕ ಹಂತಗಳಲ್ಲಿ ಕಣ್ಣಿನ ತಪಾಸಣೆಯ ಆವರ್ತನವನ್ನು ವರ್ಷಕ್ಕೊಮ್ಮೆಗೆ ಸೀಮಿತಗೊಳಿಸಬಹುದು. ದೀರ್ಘಾವಧಿಯ ಮಧುಮೇಹದಿಂದ ಬಳಲುತ್ತಿರುವ ಜನರು ಅಥವಾ ಗರ್ಭಧಾರಣೆಯಂತಹ ವಿಶೇಷ ಸಂದರ್ಭಗಳಲ್ಲಿ ಆಗಾಗ್ಗೆ ತಪಾಸಣೆ ಮಾಡಿಸುವ ಅಗತ್ಯವಿದೆ " ಎಂದು ಶಂಕರ ಐ ಫೌಂಡೇಶನ್ ಇಂಡಿಯಾದ ವಿಟ್ರಿಯೋ ರೆಟಿನಾ ಮತ್ತು ಆಕ್ಯುಲರ್ ಆಂಕೊಲಾಜಿಯ ಮುಖ್ಯಸ್ಥರಾದ ಡಾ. ಮಹೇಶ್ ಪಿ. ಷಣ್ಮುಗಂ ಹೇಳಿದ್ದಾರೆ.

ಈ ಲಕ್ಷಣಗಳನ್ನು ಕಡೆಗಣಿಸಬೇಡಿ

ಅನಿಯಂತ್ರಿತ ಮಧುಮೇಹವು ಆಖ, ಕಣ್ಣಿನ ಮಸೂರದಲ್ಲಿ ಪದರೆಯಂತೆ ಬರುವ ಕಣ್ಣಿನ ಪೊರೆ ಮತ್ತು ನಿಮ್ಮ ಆಪ್ಟಿಕ್ ನರವನ್ನು ಹಾನಿ ಮಾಡುವ ಗ್ಲುಕೋಮಾದಂತಹ ಹಲವಾರು ಕಣ್ಣಿನ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ಮಧುಮೇಹವು ನಿಮ್ಮನ್ನು ಕಣ್ಣಿನ ಕಾಯಿಲೆಗಳಿಗೆ ಹೆಚ್ಚು ಗುರಿಯಾಗಿಸಬಹುದು ಅಥವಾ ಕಿರಿಯ ವಯಸ್ಸಿನಲ್ಲಿಯೇ ನಿಮ್ಮಲ್ಲಿ ಬೆಳೆಯಬಹುದು. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ಈ ರೋಗಲಕ್ಷಣಗಳಲ್ಲಿ ಯಾವುದಾದರೂ ಕಂಡುಬಂದ ಸಂದರ್ಭದಲ್ಲಿ ತಕ್ಷಣವೇ ನೇತ್ರಶಾಸ್ತ್ರಜ್ಞರು ಅಥವಾ ರೆಟಿನಾ ತಜ್ಞರನ್ನು ಭೇಟಿ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

• ಅಸ್ಪಷ್ಟ ಅಥವಾ ಮಸುಕು ಅಥವಾ ವಿರೂಪಗೊಂಡ ದೃಷ್ಟಿ

• ಬಣ್ಣದ ಕುರುಡುತನ

• ಕಡಿಮೆಯಾದ ಕಾಂಟ್ರಾಸ್ಟ್ ಅಥವಾ ಬಣ್ಣ ಸಂವೇದನೆ

• ದೃಷ್ಟಿಯಲ್ಲಿ ಕಪ್ಪು ಕಲೆಗಳ ಅನುಭವ

• ಅಲೆಯಂತೆ ಅಥವಾ ವಕ್ರವಾಗಿ ಕಾಣುವ ನೇರ ರೇಖೆಗಳು

• ದೂರದೃಷ್ಟಿಯಲ್ಲಿ ತೊಂದರೆ

• ನಿಧಾನವಾಗಿ ಕುರುಡುತನ

ನವೆಂಬರ್ 14 ರಂದು ಆಚರಿಸಲಾಗುವ ವಿಶ್ವ ಮಧುಮೇಹ ದಿನವು, ಮಧುಮೇಹ-ಸಂಬಂಧಿತ ಅಕ್ಷಿಪಟಲದ ಕಾಯಿಲೆಗಳ ಬೆಳೆಯುತ್ತಿರುವ, ತಡೆಗಟ್ಟಬಹುದಾದ ಹೊರೆಯ ಬಗ್ಗೆ ಜಾಗೃತಿ ಮೂಡಿಸಲು ಒಂದು ಅವಕಾಶವನ್ನು ಸೂಚಿಸುತ್ತದೆ. ಇದು ಆರಂಭಿಕ ರೋಗನಿರ್ಣಯ ಮತ್ತು ರೋಗ ನಿರ್ವಹಣೆಯ ರೂಪದಲ್ಲಿ ಸಕಾಲಿಕ ಆರೈಕೆಯನ್ನು ನಡೆಸಬಹುದು, ಆದರಿಂದ ರೋಗಿಗಳು ತಡೆಗಟ್ಟಬಹುದಾದ ಕುರುಡುತನವನ್ನು ತಪ್ಪಿಸಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು