NIA bounty: ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಸಂಧು ಪತ್ತೆಗೆ 15 ಲಕ್ಷ ರೂಪಾಯಿ ಇನಾಮು ಘೋಷಿಸಿದೆ ಎನ್ಐಎ
Feb 16, 2023 10:36 AM IST
ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಂಡಾ
NIA bounty: ಪಂಜಾಬ್ನ ತರ್ನ್ತರಣ್ ಜಿಲ್ಲೆಯ ಹರಿಕೆ ಗ್ರಾಮದ ನಿವಾಸಿ ಈ ಲಖ್ಬೀರ್ ಸಿಂಗ್ ಸಂಧು. ಪ್ರಸ್ತುತ ಕೆನಡಾದ ಅಲ್ಬರ್ಟಾ, ಎಡ್ಮಂಟನ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಪಂಜಾಬ್ನಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾದ ಈತ, ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಕೇಸ್ನಲ್ಲೂ ಆರೋಪಿ.
ಕೆನಡಾದಲ್ಲಿ ನೆಲೆಸಿರುವ ಪಂಜಾಬ್ ಮೂಲದ ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಂಡಾ ಪತ್ತೆಗೆ ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (NIA) ಬುಧವಾರ 15 ಲಕ್ಷ ರೂಪಾಯಿ ಇನಾಮು ಘೋಷಿಸಿದೆ. ಪಂಜಾಬ್ನಲ್ಲಿ ಭಯೋತ್ಪಾದನೆ ಸಂಬಂಧ ಕೇಸ್ನಲ್ಲಿ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ದೇಶದ ಭದ್ರತಾ ಪಡೆಗಳಿಗೆ ಬೇಕಾದನಾಗಿದ್ದಾನೆ.
ಪಂಜಾಬ್ನ ತರ್ನ್ತರಣ್ ಜಿಲ್ಲೆಯ ಹರಿಕೆ ಗ್ರಾಮದ ನಿವಾಸಿ ಈ ಲಾಂಡಾ. ಪ್ರಸ್ತುತ ಕೆನಡಾದ ಅಲ್ಬರ್ಟಾ, ಎಡ್ಮಂಟನ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಪಂಜಾಬ್ನಲ್ಲಿ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ಲಾಂಡಾ ಭಾಗಿಯಾಗಿದ್ದಾನೆ. ಅಲ್ಲದೆ, ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಕೇಸ್ನಲ್ಲೂ ಲಾಂಡಾ ಆರೋಪಿ.
ಲಾಂಡಾ ಬಗ್ಗೆ ಯಾವುದೇ ಮಾಹಿತಿ ಒದಗಿಸಿದರೂ, ಆ ಮಾಹಿತಿ ಒದಗಿಸಿದವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಎನ್ಐಎ ಈ ಇನಾಮು ಘೋಷಿಸಿದ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ವಿರುದ್ಧ ಕಳೆದ ವರ್ಷ ಆಗಸ್ಟ್ 20ರಂದು ಐಪಿಸಿ ಸೆಕ್ಷನ್ 120B, 121, 121A ಮತ್ತು ಯುಎಪಿಎ ಸೆಕ್ಷನ್ಗಳಾದ 17, 18, 18-B ಮತ್ತು 38ರ ಪ್ರಕಾರ ಎನ್ಐಎ ಕೇಸ್ ದಾಖಲಿಸಿದೆ. ದೇಶದ ನಾನಾ ಭಾಗಗಳಲ್ಲಿ ಇಂತಹ ಕೃತ್ಯಗಳಲ್ಲಿ ಭಾಗವಹಿಸಿದ್ದಾನೆ ಎಂದು ಎನ್ಐಎ ಎಫ್ಐಆರ್ನಲ್ಲಿ ವಿವರಿಸಿದೆ.
ಕಳೆದ ತಿಂಗಳು ಗಣರಾಜ್ಯೋತ್ಸವದ ದಿನಕ್ಕೆ ಸ್ವಲ್ಪ ಮುಂಚಿತವಾಗಿ ದೆಹಲಿ ಪೊಲೀಸರು ಪಂಜಾಬ್ನಿಂದ ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಸಂಧುವಿನ ಇಬ್ಬರು ಶಂಕಿತ ಸಹಚರರನ್ನು ಬಂಧಿಸಿದರು. ರಾಜನ್ ಭಟ್ಟಿ ಮತ್ತು ಕನ್ವಲ್ಜೀತ್ ಸಿಂಗ್ ಅಲಿಯಾಸ್ ಚಿನ್ನ ಎಂದು ಬಂಧಿತರನ್ನು ಗುರುತಿಸಲಾಗಿದೆ.
ಖಲಿಸ್ತಾನಿ ಭಯೋತ್ಪಾದಕ-ದರೋಡೆಕೋರರ ಸಂಬಂಧದ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಪೊಲೀಸರು ಭಟ್ಟಿಯನ್ನು ಬಂಧಿಸಿದ್ದಾರೆ. ಆತ ಪಂಜಾಬ್ನ ವಾಂಟೆಡ್ ದರೋಡೆಕೋರರಲ್ಲಿ ಒಬ್ಬನಾಗಿದ್ದು, ಮತ್ತೊಬ್ಬ ಪರಾರಿಯಾಗಿರುವ ಲಂಡಾನ ನಿಕಟ ಸಹಚರ ಎಂದು ಪೊಲೀಸ್ ಉಪ ಆಯುಕ್ತ (ವಿಶೇಷ ಸೆಲ್) ಮನೀಷಿ ಚಂದ್ರ ಹೇಳಿದ್ದಾರೆ.
ಭಟ್ಟಿ 15ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪಂಜಾಬ್ನ ಮೊಹಾಲಿಯಲ್ಲಿ ದಾಖಲಾದ ಪ್ರಕರಣದಲ್ಲಿ ಬೇಕಾಗಿದ್ದ.
ಲಾಂಡಾ ಮತ್ತು ಹರ್ವಿಂದರ್ ಸಿಂಗ್ ರಿಂಡಾ ಅವರ ಸೂಚನೆಯ ಮೇರೆಗೆ ಪಂಜಾಬ್ನಲ್ಲಿ ಕೋಮು ಸೌಹಾರ್ದವನ್ನು ಕದಡುವ ಉದ್ದೇಶಿತ ಹತ್ಯೆಗಳಿಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ಟಿ ಮಾಡಿದ ಬಹಿರಂಗಪಡಿಸುವಿಕೆ ಮತ್ತು ತಾಂತ್ರಿಕ ವಿಶ್ಲೇಷಣೆಯ ಆಧಾರದ ಮೇಲೆ, ಪಂಜಾಬ್ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯಲ್ಲಿ ಸಿಂಗ್ ಅವರನ್ನು ಬಂಧಿಸಲಾಯಿತು ಎಂದು ಡಿಸಿಪಿ ಹೇಳಿದರು.