Bheema Movie Latest News: ಪ್ರೇಮಿಗಳ ದಿನದಂದು ಭೀಮನ ನಾಟಿ ಸ್ಟೈಲ್ ಹುಡುಗಿಯನ್ನು ಪರಿಚಯಿಸಿದ ದುನಿಯಾ ವಿಜಯ್
ಕಾರ್ಯಕ್ರಮವೊಂದರಲ್ಲಿ ದುನಿಯಾ ವಿಜಯ್ ಅವರನ್ನು ಭೇಟಿ ಆಗಿದ್ದೆ. ನನ್ನ ಚಿತ್ರದಲ್ಲಿ ನಿಮಗೊಂದು ಪಾತ್ರ ಇದೆ ಆಕ್ಟ್ ಮಾಡ್ತೀರಾ ಎಂದು ಕೇಳಿದರು. ಆಫರ್ ಬಂದಾಗ ನಾನು ಕಥೆಗಿಂತ, ವಿಜಯ್ ಸರ್ಗಾಗಿ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ನನಗೆ ಅವರ ದುನಿಯಾ ಸಿನಿಮಾ ಬಹಳ ಇಷ್ಟ. ಆದರೆ ನಂತರವಷ್ಟೇ ಆ ಚಿತ್ರದಲ್ಲಿ ನಾನೇ ನಾಯಕಿ ಅಂತ ತಿಳಿಯಿತು.
ಸ್ಯಾಂಡಲ್ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ 'ಸಲಗ' ಚಿತ್ರದ ಮೂಲಕ ತಾವೊಬ್ಬ ಒಳ್ಳೆ ನಿರ್ದೇಶಕ ಅನ್ನೋದನ್ನು ಪ್ರೂವ್ ಮಾಡಿದ್ದರು. ಈ ಸಿನಿಮಾ ನಂತರ ಮತ್ತೊಂದು ಚಿತ್ರ ಡೈರೆಕ್ಷನ್ ಮಾಡುವುದಾಗಿ ಹೇಳಿದ್ದ ವಿಜಯ್ ಕಳೆದ ವರ್ಷ ಹೊಸ ಚಿತ್ರದ ಪೋಸ್ಟರ್ ಹಂಚಿಕೊಂಡು ಚಿತ್ರಕ್ಕೆ 'ಭೀಮ' ಎಂದು ಹೆಸರಿಟ್ಟಿರುವುದಾಗಿ ಹೇಳಿದ್ದರು.
ಟ್ರೆಂಡಿಂಗ್ ಸುದ್ದಿ
ಸದ್ಯಕ್ಕೆ 'ಭೀಮ' ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಪ್ರೇಮಿಗಳ ದಿನಾಚರಣೆ ಅಂಗವಾಗಿ ವಿಜಯ್, ಚಿತ್ರದ ನಾಯಕಿಯ ಪರಿಚಯ ಮಾಡಿಸಿದ್ದಾರೆ. 'ಭೀಮ' ಚಿತ್ರದಲ್ಲಿ ಅಶ್ವಿನಿ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ದುನಿಯಾ ವಿಜಯ್, '' ಭೀಮ ಚಿತ್ರದ ನಾಯಕಿಯನ್ನು ಪರಿಚಯಿಸುತ್ತಿದ್ದೇವೆ'' ಎಂದಷ್ಟೇ ಬರೆದುಕೊಂಡಿದ್ದಾರೆ. ಲಂಗ ದಾವಣಿ ತೊಟ್ಟ ನಾಯಕಿ ಎರಡೂ ಕೈಗಳಲ್ಲಿ ಒಂದೊಂದು ಕೋಳಿಗಳನ್ನು ಹಿಡಿದು ದೇವಸ್ಥಾನದ ಮುಂದೆ ನಿಂತಿರುವ ಪೋಸ್ಟರ್ ಭಾರೀ ಗಮನ ಸೆಳೆಯುತ್ತಿದೆ. ಸಿನಿಪ್ರಿಯರು ಈ ಪೋಸ್ಟರ್ಗೆ ಲೈಕ್, ಕಮೆಂಟ್ ಮಾಡಿ ಶುಭ ಕೋರಿದ್ದಾರೆ. ಜೊತೆಗೆ ಹೊಸ ಪ್ರತಿಭೆಗೆ ಅವಕಾಶ ನೀಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಶ್ವಿನಿ, ಮೂಲತ: ರಂಗಭೂಮಿ ಕಲಾವಿದೆ. ಕಳೆದ ಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಶೋಗಳನ್ನು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ದುನಿಯಾ ವಿಜಯ್ ಅವರನ್ನು ಭೇಟಿ ಆಗಿದ್ದೆ. ನನ್ನ ಚಿತ್ರದಲ್ಲಿ ನಿಮಗೊಂದು ಪಾತ್ರ ಇದೆ ಆಕ್ಟ್ ಮಾಡ್ತೀರಾ ಎಂದು ಕೇಳಿದರು. ಆಫರ್ ಬಂದಾಗ ನಾನು ಕಥೆಗಿಂತ, ವಿಜಯ್ ಸರ್ಗಾಗಿ ಆ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ. ನನಗೆ ಅವರ ದುನಿಯಾ ಸಿನಿಮಾ ಬಹಳ ಇಷ್ಟ. ಆದರೆ ನಂತರವಷ್ಟೇ ಆ ಚಿತ್ರದಲ್ಲಿ ನಾನೇ ನಾಯಕಿ ಅಂತ ತಿಳಿಯಿತು. ಭೀಮ ಚಿತ್ರದಿಂದ ಸಾಕಷ್ಟು ಕಲಿತಿದ್ದೇನೆ. ನಾವು ಯಾವುದೇ ಕಷ್ಟ ಇಲ್ಲದೆ ಬೆಳೆದಿದ್ದೇವೆ. ಆದರೆ ಬೆಂಗಳೂರಿನ ಸಣ್ಣ ಸಣ್ಣ ಜಾಗಗಳಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿನ ಜನರು ಎಷ್ಟು ಕಷ್ಟ ಪಡುತ್ತಾರೆ ಅನ್ನೋದು ತಿಳಿಯಿತು ಎಂದು ನಟಿ ಅಶ್ವಿನಿ ಭೀಮ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಮತ್ತಷ್ಟು ಮನರಂಜನೆ ಸುದ್ದಿಗಳು ಇಲ್ಲಿವೆ
ಪಳನಿ ಮುರುಗನ್ ದೇವಸ್ಥಾನಕ್ಕೆ ಸಮಂತಾ ಭೇಟಿ..600 ಮೆಟ್ಟಿಲು ಹತ್ತಿ, ಪ್ರತಿ ಮೆಟ್ಟಿಲಿಗೂ ಕರ್ಪೂರ ಹಚ್ಚಿದ ನಟಿ
ಈಗ ಸಮಂತಾ ತಮಗಿರುವ ಆರೋಗ್ಯ ಸಮಸ್ಯೆಯಿಂದ ಹೊರ ಬರುತ್ತಿದ್ದಾರೆ. ಇದರ ಬೆನ್ನಲ್ಲೇ ಸಮಂತಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸರಳವಾದ ಸೆಲ್ವಾರ್ ಕಮೀಜ್ ಧರಿಸಿದ್ದ ಸಮಂತಾ, ತಮಿಳುನಾಡಿನ ಪಳನಿ ಮುರುಗನ್ ದೇವಸ್ಥಾನಕ್ಕೆ ತೆರಳಿ 600 ಮೆಟ್ಟಿಲುಗಳನ್ನು ಹತ್ತಿದ್ದಾರೆ. ಅಲ್ಲದೆ ಪ್ರತಿಯೊಂದು ಮೆಟ್ಟಿಲಿಗೂ ಕರ್ಪೂರ ಹಚ್ಚಿ ಪೂಜೆ ಮಾಡಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಷ್ಟು ಬೇಗ ಎಲ್ಲಾ ಸಮಸ್ಯೆಗಳಿಂದ ಹೊರ ಬನ್ನಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್ ಮಾಡಿ.
'ಉತ್ತರಕಾಂಡ' ನಂತರ ಬಯೋಪಿಕ್ ಚಿತ್ರದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿರುವ ರಮ್ಯಾ-ಡಾಲಿ!
ಕೆಲವು ದಿನಗಳ ಹಿಂದೆ ನಟ ಧನಂಜಯ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರೈತ ಹೋರಾಟಗಾರ, ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರ ಬಯೋಪಿಕ್ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಇದೀಗ ಅವರ ಜೀವನ ಚರಿತ್ರೆ ಸಿನಿಮಾ ತೆರೆಗೆ ಬರುತ್ತಿದೆ ಎನ್ನಲಾಗಿದೆ. ಎಂ.ಡಿ. ನಂಜುಂಡಸ್ವಾಮಿ ಅವರ ಪುತ್ರ ಪಚ್ಚೆ ನಂಜುಂಡಸ್ವಾಮಿ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಯೋಪಿಕ್ ಬಗ್ಗೆ ಮಾಹಿತಿ ನೀಡಿದ್ದು, ನಟ ಧನಂಜಯ್ ಈ ವಿಚಾರವಾಗಿ ತಮ್ಮೊಂದಿಗೆ ಮಾತನಾಡಿದ್ದಾರೆ ಎಂದಿದ್ದಾರೆ. ಪೂರ್ತಿ ಮಾಹಿತಿಗೆ ಈ ಲಿಂಕ್ ಒತ್ತಿ.