Rashmika Mandanna: ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಾಗಲಿ ಎಂದು ತಮಗೆ ತಾವೇ ಹಾರೈಸಿಕೊಂಡ ರಶ್ಮಿಕಾ!
ಇತ್ತೀಚೆಗೆ ಟ್ವಿಟ್ಟರ್ನಲ್ಲಿ ರಶ್ಮಿಕಾ ಕುರಿತಾದ ಸುದ್ದಿ ಹರಿದಾಡುತ್ತಿದೆ. ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಹಾಗೂ ಬೆಂಗಳೂರು ನಗರಗಳಲ್ಲಿ ರಶ್ಮಿಕಾ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.
ತೆಲುಗು, ಹಿಂದಿ ಸಿನಿಮಾಗಳಲ್ಲೇ ಸದ್ಯಕ್ಕೆ ಬ್ಯುಸಿ ಆಗಿರುವ ರಶ್ಮಿಕಾ ಮಂದಣ್ಣ, ಪಾಪರಾಜಿಗಳಿಗೆ ಹೆಚ್ಚಾಗಿ ಏರ್ಪೋರ್ಟ್ಗಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಹೈದರಾಬಾದ್, ನಾಳೆ ಮುಂಬೈ ಏರ್ಪೋರ್ಟ್, ಇನ್ನೊಂದು ದಿನ ಚೆನ್ನೈ ಏರ್ಪೋರ್ಟ್, ಕೆಲವೊಮ್ಮೆ ಬೆಂಗಳೂರು ಏರ್ಪೋರ್ಟ್ ಹೀಗೆ ಪ್ರಮುಖ ಸಿಟಿಗಳಿಗೆ ಟ್ರಾವೆಲ್ ಮಾಡುತ್ತಿದ್ದಾರೆ.
ರಶ್ಮಿಕಾ ಈಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಆಕೆ ಚಿತ್ರರಂಗಕ್ಕೆ ಬಂದು 6 ವರ್ಷಗಳಾಗಿವೆ. ಇಷ್ಟು ವರ್ಷಗಳಲ್ಲಿ ರಶ್ಮಿಕಾ ಬಹಳ ಆಸ್ತಿ ಸಂಪಾದನೆ ಮಾಡಿದ್ದಾರೆ. ಐದು ಪ್ರತ್ಯೇಕ ಸಿಟಿಗಳಲ್ಲಿ ಅವರು ಐಷಾರಾಮಿ ಫ್ಲಾಟ್ಗಳನ್ನು ಖರೀದಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ಟ್ವಿಟ್ಟರ್ನಲ್ಲಿ ರಶ್ಮಿಕಾ ಕುರಿತಾದ ಸುದ್ದಿ ಹರಿದಾಡುತ್ತಿದೆ. ಹೈದರಾಬಾದ್, ಗೋವಾ, ಕೂರ್ಗ್, ಮುಂಬೈ ಹಾಗೂ ಬೆಂಗಳೂರು ನಗರಗಳಲ್ಲಿ ರಶ್ಮಿಕಾ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ ಇಷ್ಟೆಲ್ಲಾ ಆಸ್ತಿ ಹೊಂದಿದ್ದಾರೆ ಎಂದು ತಿಳಿದ ನೆಟಿಜನ್ಸ್ ನಾನಾ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಒಂದು ಸಿನಿಮಾಗೆ ಎಷ್ಟು ಸಂಭಾವನೆ ಪಡೆಯುತ್ತೀರಿ..? ಇದು ನೀವೇ ಖರೀದಿಸಿದ್ದಾ..ಗಿಫ್ಟ್ ಬಂದಿದ್ದಾ..? ಫ್ಲಾಟ್ ಬೆಲೆ ಎಷ್ಟು...? ಇಷ್ಟೇನಾ, ಇನ್ನೂ ಬೇರೆ ಕಡೆ ಆಸ್ತಿ ಇದ್ಯಾ..? ಎಂದೆಲ್ಲಾ ಕೇಳುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ಈ ಸುದ್ದಿಯನ್ನು ನಿರಾಕರಿಸಿದ್ದಾರೆ. ಟ್ವಿಟ್ಟರ್ನಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಮಂದಣ್ಣ, ಇದು ನಿಜವಾಗಲಿ ಎಂದು ನಾನೂ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ದುಬೈ ತೆರಳಿದ್ದ ರಶ್ಮಿಕಾ
ಕಳೆದ ವರ್ಷ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ಮಾಲ್ಡೀವ್ಸ್ ತೆರಳಿದ್ದ ಸುದ್ದಿ ವೈರಲ್ ಆಗಿತ್ತು. ಇಬ್ಬರೂ ಜೊತೆಯಾಗಿರುವ ಫೋಟೋ ಎಲ್ಲೂ ರಿವೀಲ್ ಆಗಿರಲಿಲ್ಲ. ಆದರೆ ಒಂದೇ ಸ್ಥಳದಲ್ಲಿ ತೆಗೆಸಿದ್ದ ಬೇರೆ ಬೇರೆ ಫೋಟೋ ವೈರಲ್ ಆಗಿತ್ತು. ಜೊತೆಗೆ ರಶ್ಮಿಕಾ ಲೈವ್ನಲ್ಲಿದ್ದಾಗ ವಿಜಯ್ ದೇವರಕೊಂಡ, ಧ್ವನಿ ಕೇಳಿತ್ತು. ಇದಾದ ಕೆಲವು ದಿನಗಳ ನಂತರ ವಿಜಯ್ ದೇವರಕೊಂಡ ಕುಟುಂಬದೊಂದಿಗೆ ರಶ್ಮಿಕಾ ಮತ್ತೆ ದುಬೈಗೆ ತೆರಳಿದ್ದರು. ಇಬ್ಬರೂ ಒಟ್ಟಿಗೆ ಇರುವ ಫೋಟೋ ಲೀಕ್ ಆಗಿತ್ತು.
'ಗೀತ ಗೋವಿಂದಂ' ಸೀಕ್ವೆಲ್ನಲ್ಲಿ ವಿಜಯ್ ದೇವರಕೊಂಡ ಮತ್ತೆ ನಟಿಸಲಿದ್ದಾರಾ ರಶ್ಮಿಕಾ..?
2018ರಲ್ಲಿ ತರೆ ಕಂಡ 'ಗೀತ ಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಕೆಮಿಸ್ಟ್ರಿ ಹೈಲೈಟ್ ಆಗಿತ್ತು. ಇವರಿಬ್ಬರ ಜೋಡಿ ಹಾಗೂ ಲವ್ ಸ್ಟೋರಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ವಿಜಯ್ ಮತ್ತು ರಶ್ಮಿಕಾ ಅವರ ಪಾತ್ರಗಳನ್ನು ಆಧರಿಸಿ ನಿರ್ದೇಶಕ ಪರಶುರಾಮ್ ಸೀಕ್ವೆಲ್ ಮಾಡಲು ಸಿದ್ಧರಾಗುತ್ತಿದ್ದಾರೆ ಎಂಬ ಮಾತು ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದ್ದು ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆಯಂತೆ. ಚಿತ್ರದಲ್ಲಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುವುದು ಪಕ್ಕಾ ಎನ್ನಲಾಗುತ್ತಿದೆ. ಆದರೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೋ ಅಥವಾ ಆ ಜಾಗಕ್ಕೆ ಬೇರೆ ನಟಿ ಬರಲಿದ್ದಾರೋ ಎಂಬುದು ಇನ್ನೂ ಸೀಕ್ರೇಟ್ ಆಗಿ ಉಳಿದಿದೆ.