logo
ಕನ್ನಡ ಸುದ್ದಿ  /  Astrology  /  Daily Astrological Prediction For May 21th 2023 Today S Horoscope Mnk

Horoscope Today: ರಕ್ತ ಸಂಬಂಧಿಗಳ ಜೊತೆ ವಿರಸ, ಹಣಕಾಸಿನ ವಿಚಾರದಲ್ಲಿ ಲಾಭವೇ ಹೆಚ್ಚು; ಹೀಗಿದೆ ಇಂದಿನ ದಿನ ಭವಿಷ್ಯ

HT Kannada Desk HT Kannada

May 21, 2023 05:30 AM IST

ರಕ್ತ ಸಂಬಂಧಿಗಳ ಜೊತೆ ವಿರಸ, ಹಣಕಾಸಿನ ವಿಚಾರದಲ್ಲಿ ಲಾಭವೇ ಹೆಚ್ಚು; ಹೀಗಿದೆ ಇಂದಿನ ದಿನ ಭವಿಷ್ಯ

    • ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ...? ಯಾರಿಗೆ ಅಶುಭ..? ಎಂಬುದನ್ನು ನೋಡೋಣ.
ರಕ್ತ ಸಂಬಂಧಿಗಳ ಜೊತೆ ವಿರಸ, ಹಣಕಾಸಿನ ವಿಚಾರದಲ್ಲಿ ಲಾಭವೇ ಹೆಚ್ಚು; ಹೀಗಿದೆ ಇಂದಿನ ದಿನ ಭವಿಷ್ಯ
ರಕ್ತ ಸಂಬಂಧಿಗಳ ಜೊತೆ ವಿರಸ, ಹಣಕಾಸಿನ ವಿಚಾರದಲ್ಲಿ ಲಾಭವೇ ಹೆಚ್ಚು; ಹೀಗಿದೆ ಇಂದಿನ ದಿನ ಭವಿಷ್ಯ

ರಾಶಿ ಫಲಗಳು

ಮೇಷ

ಚುರುಕುತನದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಉದ್ಯೋಗದಲ್ಲಿ ಗೌರವಯುತ ಸ್ಥಾನ ಮಾನ ದೊರೆಯುತ್ತದೆ. ಸಂಗಾತಿಯೊಂದಿಗೆ ವಿರಸವಿರುತ್ತದೆ. ಸೋದರನ ವೃತ್ತಿಯಲ್ಲಿನ ತೊಂದರೆಗೆ ಪರಿಹಾರವನ್ನು ಸೂಚಿಸುವಿರಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ರಕ್ತ ಸಂಬಂಧಿಗಳ ಜೊತೆಯಲ್ಲಿ ವಿರಸ ಇರುತ್ತದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ಧೈರ್ಯವನ್ನು ಕಳೆದುಕೊಳ್ಳದೆ ಮುಂದುವರಿಯಬೇಕು. ಹಣೆಗೆ ಪೆಟ್ಟು ಬೀಳಬಹುದು. ಭೂವ್ಯವಹಾರದಲ್ಲಿ ತೊಂದರೆ ಇರುತ್ತದೆ. ಬಿಳಿ ಮಿಶ್ರಿತ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.

ತಾಜಾ ಫೋಟೊಗಳು

ಬುಧ, ಮಂಗಳ, ರಾಹು ಸಂಕ್ರಮಣ; ಮುಂದಿನ 12 ದಿನ ಈ 3 ರಾಶಿಯವರಿಗೆ ಭಾರಿ ಲಾಭ -Mercury Mars Rahu Transit

Apr 28, 2024 02:56 PM

Zodiac Signs: ಮೋಸ, ಪ್ರಾಮಾಣಿಕತೆ, ಆವೇಶ; ಸಂಬಂಧಗಳ ವಿಚಾರದಲ್ಲಿ ಯಾವ ರಾಶಿಯವರು ಯಾವ ರೀತಿ ನಡೆದುಕೊಳ್ಳುತ್ತಾರೆ?

Apr 24, 2024 12:21 PM

Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Apr 21, 2024 07:00 AM

Vipreet Rajyoga: ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗದಿಂದ ರಾಜಯೋಗ, ಈ 6 ರಾಶಿಯವರಿಗೆ ಲಕ್ಷ್ಮೀದೇವಿ ಒಲಿಯುವ ಕಾಲ

Apr 18, 2024 09:48 AM

Vastu Tips: ಚಿನ್ನವನ್ನು ಮನೆಯ ಈ ಭಾಗದಲ್ಲಿಟ್ಟರೆ ನಿಮ್ಮ ಸಂಪತ್ತು ವೃದ್ಧಿಯಾಗುವುದರಲ್ಲಿ ಅನುಮಾನವೇ ಇಲ್ಲ

Apr 16, 2024 11:10 AM

Jupiter Transit: ಕೃತ್ತಿಕಾ ನಕ್ಷತ್ರದಲ್ಲಿ ಗುರುವಿನ ಸಂಕ್ರಮಣ; ಈ 3 ರಾಶಿಯವರಿಗೆ ಸಕಲ ಸೌಭಾಗ್ಯ ನೀಡಲಿದ್ದಾನೆ ಬೃಹಸ್ಪತಿ

Apr 15, 2024 01:08 PM

ವೃಷಭ

ಸೋದರನಿಗೆ ತೊಂದರೆ ಇದೆ. ಹಠ ಮತ್ತು ಛಲದ ಗುಣದಿಂದ ಕೆಲಸ ಕಾರ್ಯದಲ್ಲಿ ಗೆಲುವು ಸಾಧಿಸುವಿರಿ. ಗುರುಸ್ಥಾನವನ್ನು ಅಲಂಕರಿಸುವಿರಿ. ಯಾರ ಮಾತನ್ನೂ ಸುಲಭವಾಗಿ ನಂಬುವುದಿಲ್ಲ. ಬಂಧು ಮಿತ್ರರ ಸಹಾಯ ದೊರೆಯುವುದಿಲ್ಲ. ಸಮಾಜದ ಗಣ್ಯವ್ಯಕ್ತಿಗಳ ಸಹಕಾರ ದೊರೆಯುತ್ತದೆ. ಸೋದರನ ವಿವಾಹದ ಮಾತುಕತೆ ನಡೆಯುತ್ತದೆ. ವಿದ್ಯಾಭ್ಯಾಸದಲ್ಲಿ ತೊಂದರೆ ಇರದು. ವ್ಯಾಪಾರ ವ್ಯವಹಾರದಲ್ಲಿ ಲಾಭವಿರುತ್ತದೆ. ಮನೆತನದ ಮನೆಯ ವಿಚಾರದಲ್ಲಿ ವಿವಾದವಿರುತ್ತದೆ. ಮಾಡದ ತಪ್ಪನ್ನು ಒಪ್ಪಿಗೊಳ್ಳಬೇಕಾಗುತ್ತದೆ. ಧಾರ್ಮಿಕ ಕೇಂದ್ರಕ್ಕೆ ಹಳದಿ ಬಟ್ಟೆ ಮತ್ತು ಹಳದಿ ಹೂಗಳನ್ನು ನೀಡಿ.

ಮಿಥುನ

ಸೋದರಮಾವನ ಜೊತೆಯಲ್ಲಿ ಹಣಕಾಸಿನ ವಿವಾದ ಇರುತ್ತದೆ. ಕುಟುಂಬದ ವಿವಾದವೊಂದು ಕೊನೆಗೊಳ್ಳುತ್ತದೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ. ಪರಿಸ್ಥಿತಿಯನ್ನು ಅವಲೋಕಿಸಿ ವರ್ತಿಸುವ ಕಾರಣ ಯಾವುದೇ ತೊಂದರೆ ಬಾರದು. ಉದ್ಯೋಗದಲ್ಲಿ ಯಾವುದೇ ತೊಂದರೆ ಇರದು. ಭೂ ವ್ಯವಹಾರದಲ್ಲಿ ಹೇರಳ ಲಾಭವಿರುತ್ತದೆ. ಸಂಗಾತಿಯ ಸಹಾಯದಿಂದ ಮನೆಯನ್ನು ಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ವಿಶೇಷ ಫಲಗಳು ದೊರೆಯುತ್ತವೆ. ಹಣಕಾಸಿನ ಏಜೆನ್ಸಿಯಿಂದ ಉತ್ತಮ ಲಾಭಾಂಶ ದೊರೆಯುತ್ತದೆ. ಹಣದ ಲೆಕ್ಕಾಚಾರದ ಕೆಲಸದಲ್ಲಿ ಲಾಭವಿದೆ. ಹೆಣ್ಣುಮಕ್ಕಳ ಪ್ರಸಾದನ ವಸ್ತುವನ್ನು ನೀಡಿ.

ಕಟಕ

ವೈಭವೋಪೇತ ಪದಾರ್ಥಗಳ ಮಾರಾಟ ಮಳಿಗೆಯಲ್ಲಿ ಉದ್ಯೋಗ ದೊರೆಯುತ್ತದೆ. ಸಂಗಾತಿಯ ಮಾರ್ಗದರ್ಶನದಲ್ಲಿ ಮಾಡುವ ಕೆಲಸ ಕಾರ್ಯಗಳಿಂದ ಲಾಭವಿರುತ್ತದೆ. ಆತುರದ ತೀರ್ಮಾನದಿಂದ ತೊಂದರೆ ಉಂಟಾಗುತ್ತದೆ. ಜನಸೇವೆ ಮಾಡುವಲ್ಲಿ ಸಂತಸವನ್ನು ಕಾಣುವಿರಿ. ವಿದ್ಯಾರ್ಥಿಗಳು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ವೃತ್ತಿಯಲ್ಲಿ ಬಡ್ತಿ ದೊರೆಯುತ್ತದೆ. ಅನಿರೀಕ್ಷಿತ ಧನಲಾಭ ಇರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಪುಸ್ತಕಗಳಿಗೆ ಸಂಬಂಧಿಸಿದ ವ್ಯಾಪಾರದಲ್ಲಿ ಲಾಭವಿರುತ್ತದೆ. ಹಠದ ಪ್ರವೃತ್ತಿ ಬೇಡ. ಕೋತಿಗಳಿಗೆ ಬೆಲ್ಲ ಮತ್ತು ಕಡಲೆಕಾಯಿ ಕೊಟ್ಟ ನಂತರ ದಿನದ ಕೆಲಸ ಆರಂಬಿಸಿ.

ಸಿಂಹ

ಸೋದರನಿಗೆ ಹಣದ ಸಹಾಯ ಮಾಡುವಿರಿ. ಕುಟುಂಬದಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಸಂಗಾತಿಯ ವ್ಯಾಪಾರಕ್ಕಾಗಿ ಹಣದ ಸಹಾಯ ಮಾಡುವಿರಿ. ಮಗಳಿಗೆ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ವಿಶ್ವಾಸದ ಮಾತುಗಳಿಂದ ಕೆಲಸ ಸಾಧಿಸುವಿರಿ. ಯಂತ್ರೋಪಕರಣಗಳ ಸರಬರಾಜಿನ ವ್ಯಾಪಾರದಲ್ಲಿ ಉತ್ತಮ ಆದಾಯ ಗಳಿಸುವಿರಿ. ಮಹಡಿಮನೆ ಕಟ್ಟುವ ಯೋಜನೆ ರೂಪಿಸುವಿರಿ. ಕೋಪ ಕಡಿಮೆ ಮಾಡಿಕೊಳ್ಳಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಕಲುಷಿತ ಆಹಾರ ಸೇವನೆಯಿಂದ ಉದರದೋಷ ಉಂಟಾಗುತ್ತದೆ. ತಂದೆಯವರಿಗೆ ಕುಡಿಯಲು ಹಾಲು ನೀಡಿದ ನಂತರ ಕೆಲಸವನ್ನು ಆರಂಭಿಸಿ.

ಕನ್ಯಾ

ಬಹುವರ್ಷದಿಂದ ಇದ್ದ ಕೌಟುಂಬಿಕ ಕಲಹವೊಂದನ್ನು ಕೊನೆಗಾಣಿಸುವಿರಿ. ಒಳ್ಳೆಯದೋ ಕೆಟ್ಟದ್ದೋ ಪ್ರತಿ ವಿಷಯವನ್ನು ಟೀಕಿಸುವ ಗುಣದಿಂದ ಕೇಳುಗರಲ್ಲಿ ಬೇಸರ ಉಂಟಾಗುತ್ತದೆ. ಸೋದರನ ಕೌಟುಂಬಿಕ ಜೀವನದಲ್ಲಿ ವಿವಾದವೊಂದು ಎದುರಾಗುತ್ತದೆ. ನರದ ನಿಶ್ಯಕ್ತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಶುಭ ವರ್ತಮಾನವೊಂದು ದೊರೆಯಲಿದೆ. ಕುಟುಂಬದಲ್ಲಿ ಹಣದ ಕೊರತೆ ಉಂಟಾಗುತ್ತದೆ. ಉದ್ಯೋಗದಲ್ಲಿ ತೊಂದರೆ ಇರದು. ಮೌನವಾಗಿದ್ದಷ್ಟೂ ಒಳ್ಳೆಯದು. ತಪ್ಪು ಕಂಡುಹಿಡಿಯುವ ಜನರಬಗ್ಗೆ ಎಚ್ಚರಿಕೆ ಇರಲಿ. ಗೋಧಿಯಿಂದ ಮಾಡಿದ ಸಿಹಿತಿಂಡಿಯನ್ನು ವಯೋವೃದ್ದರಿಗೆ ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ತುಲಾ

ಸ್ನೇಹಿತನ ಜೊತೆ ಉಂಟಾದ ಸೋದರನ ಹಣಕಾಸಿನ ವಿವಾದಕ್ಕೆ ಸುಖಾಂತ್ಯ ಹಾಡುವಿರಿ. ಸಂಗಾತಿಗೆ ನರದ ತೊಂದರೆ ಉಂಟಾಗಬಹುದು. ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯಲಿದೆ. ಯಂತ್ರೋಪಕರಣಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುವಿರಿ. ಸೋದರಿಗೆ ವಿವಾದವೊಂದರಲ್ಲಿ ಕಾನೂನಾತ್ಮಕ ಜಯ ದೊರೆಯುತ್ತದೆ. ತಂದೆಗೆ ರಕ್ತಸಂಬಂಧಿಗಳ ಜೊತೆಗಿನ ವಿವಾದವೊಂದನ್ನು ಬಗೆಹರಿಸುವಿರಿ. ವಿದ್ಯಾರ್ಥಿಗಳು ಉನ್ನತಿಯ ಹಾದಿಯಲ್ಲಿ ಸಾಗುತ್ತಾರೆ. ವ್ಯಾಪಾರದಲ್ಲಿ ತೊಂದರೆ ಬಾರದು. ನೀಲಿ ಅಥವ ಕಪ್ಪು ಬಟ್ಟೆಯನ್ನು ದಾನ ನೀಡಿದ ನಂತರ ದಿನದ ಕೆಲಸ ಆರಂಭಿಸಿ.

ವೃಶ್ಚಿಕ

ನೇರ ನಿಷ್ಠುರದ ನಡೆ ನುಡಿ ವಿರೋಧಿಗಳನ್ನು ಸೃಷ್ಟಿಸುತ್ತದೆ. ಕೋಪತೊರೆದು ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲಿರಿ. ವೃತ್ತಿಯಲ್ಲಿ ತೊಂದರೆ ಇರದು. ಪ್ರಯತ್ನ ಪಟ್ಟಲ್ಲಿ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೇರಬಹುದು. ಹಣದ ಕೊರತೆ ಬಾರದು. ತಾಳ್ಮೆಯೇ ಶತೃತ್ವಕ್ಕೆ ಸಿದ್ದೌಷದಿ. ಜ್ಞಾನಾರ್ಜನೆಯಲ್ಲಿ ಆತಂಕದ ಪರಿಸ್ಥಿತಿ ಎದುರಾದರೂ , ಪರಿಸ್ಥಿಯನ್ನು ತಿಳಿಗೊಳಿಸುವ ಬುದ್ಧಿವಂತಿಕೆ ತೋರುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಹೊಸ ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ. ನವ ವಿವಾಹಿತರಿಗೆ ಸಿಹಿ ನೀಡಿದ ನಂತರ ದಿನದ ಕೆಲಸ ಕಾರ್ಯಗಳನ್ನು ಆರಂಭಿಸಿ.

ಧನಸ್ಸು

ಅದೃಷ್ಟವಿದೆ. ಮಾಡಿದ ತಪ್ಪುಗಳನ್ನು ಮರೆವ ಜನರೇ ಸುತ್ತಮುತ್ತಲಿರುತ್ತಾರೆ. ದಂಪತಿಗಳ ನಡುವೆ ಉತ್ತಮ ಹೊಂದಾಣಿಕೆ ಇರುತ್ತದೆ. ಸಂತಾನ ಲಾಭವಿದೆ. ಒಂದೇ ಬಾರಿ ಅನೇಕ ಕೆಲಸಗಳನ್ನು ಮಾಡಬಲ್ಲಿರಿ. ಆದರೆ ಸ್ಥಿರವಾದ ಮನಸ್ಸಿರುವುದಿಲ್ಲ. ವೃತ್ತಿಜೀವನದಲ್ಲಿ ಯಾವುದೇ ತೊಂದರೆ ಬಾರದು. ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ಸಾಧನೆ ಮಾಡುವರು. ವ್ಯಾಪಾರ ವ್ಯವಹಾರದಲ್ಲಿ ತೊಂದರೆ ಬಾರದು. ಹಣದ ತೊಂದರೆ ಬಾರದು. ತಂದೆಯ ಸಹಾಯದಿಂದ ವಾಣಿಜ್ಯೋದ್ಯಮ ಕೇಂದ್ರವನ್ನು ಆರಂಭಿಸುವಿರಿ. ಕುಟುಂಬದವರ ಜೊತೆಯಲ್ಲಿ ಕಿರು ಪ್ರವಾಸ ಹೋಗುವಿರಿ. ಕನ್ಯೆಯರ ಆಶೀರ್ವಾದ ಪಡೆದು ಕೆಲಸ ಆರಂಭಿಸಿ.

ಮಕರ

ಯಾವುದೇ ಕೆಲಸವನ್ನು ಅತಿ ನಿಧಾನಗತಿಯಲ್ಲಿ ಆರಂಭಿಸುವಿರಿ. ತಂದೆಯ ಸೋದರಾಂಶದಲ್ಲಿನ ವಿವಾದವನ್ನು ಬಗೆಹರಿಸುವಿರಿ. ಆಡುವ ಮಾತಿಗೆ ಗೌರವ ಬಾರದಿದ್ದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಉಂಟಾಗುತ್ತದೆ. ಕಷ್ಟದ ಕೆಲಸಗಳನ್ನು ಮಾಡಲು ಬಯಸುವಿರಿ. ಮಕ್ಕಳಿಗೆ ಶುಭಫಲಗಳು ದೊರೆಯುತ್ತವೆ. ಲಾಭವಿಲ್ಲದ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಲೋಹಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಮಾಡುವಿರಿ. ಬೇಸರವಾದಲ್ಲಿ ಮಾಡಬೇಕಾದ ಕೆಲಸವನ್ನು ಅರ್ಧಕ್ಕೆ ನಿಲ್ಲಿಸುವುವಿರಿ. ಬಲಗೈಯಲ್ಲಿ ಬೆಳ್ಳಿಕಡಗ ಅಥವ ಉಂಗುರವನ್ನು ಧರಿಸಿದಲ್ಲಿ ಶುಭಫಲಗಳು ದೊರೆಯುತ್ತವೆ.

ಕುಂಭ

ಒಲ್ಲದ ಮನಸ್ಸಿನಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಜವಾಬ್ದಾರಿಯ ಕೆಲಸ ಮಾಡುವುದಿಲ್ಲ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ ಕಂಡುಬರುತ್ತದೆ. ಪುಸ್ತಕದ ವ್ಯಾಪಾರದಲ್ಲಿ ಲಾಭವಿರುತ್ತದೆ. ವಿದ್ಯಾರ್ಥಿಗಳು ಆತಂಕವನ್ನು ಬಿಟ್ಟಲ್ಲಿ ಯಶಸ್ಸನ್ನು ಗಳಿಸುವರು. ಬರವಣಿಗೆಯಲ್ಲಿ ಹಣ ಮತ್ತು ಜನಪ್ರಿಯತೆ ದೊರೆಯುತ್ತದೆ. ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಕುಟುಂಬದವರ ಸಹಾಯದಿಂದ ವಾಹನವನ್ನು ಕೊಳ್ಳುವಿರಿ. ವಂಶದ ಆಸ್ತಿಯಲ್ಲಿ ಅಲ್ಪಪಾಲು ದೊರೆಯುತ್ತದೆ. ಸಾಲದ ವ್ಯವಹಾರ ಬೇಡ. ಕಲಾವಿದರಿಗೆ ಸತತ ಅವಕಾಶಗಳು ದೊರೆಯುತ್ತವೆ. ಅತಿಯಾಸೆ ಇರುವುದಿಲ್ಲ. ಇರುವೆಗೆ ಆಹಾರ ಧಾನ್ಯವನ್ನು ಹಾಕಿ ದೈನಂದಿನ ಕೆಲಸ ಹಾಕಿರಿ.

ಮೀನ

ಆತ್ಮೀಯರ ಸಹಕಾರ ನಿಮಗೆ ಇರುತ್ತದೆ. ಮಾತಿನಿಂದಲೇ ಯಾವುದೇ ಕೆಲಸವನ್ನು ಮಾಡಬಲ್ಲಿರಿ. ಹಣದ ತೊಂದರೆ ಬಾರದು. ಬರವಣಿಗೆಯಿಂದ ಲಾಭವಿದೆ. ಸಾಕುಪ್ರಾಣಿಗಳ ಆರೈಕೆ ಮತ್ತು ಮಾರಾಟದಲ್ಲಿ ಲಾಭವಿರುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನು ದೊಡ್ಡ ವಿವಾದವಾಗಿ ಮಾಡುವಿರಿ. ಆರಂಭದಲ್ಲಿ ಉದ್ಯೋಗದಲ್ಲಿ ತೊಂದರೆ ಎದುರಾದರೂ, ಕ್ರಮೇಣ ಸಾಧಾರಣ ಸ್ಥಿತಿಗೆ ಮರಳುತ್ತದೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮುಂದುವರಿಯುತ್ತಾರೆ. ಸ್ಥಿರವಾದ ಮನಸ್ಸು ಇರುವುದಿಲ್ಲ. ಹೊಸ ವ್ಯಾಪಾರ ಆರಂಭಿಸಲು ಮನಸ್ಸಿರುವುದಿಲ್ಲ. ಅಶ್ವತ್ಥ ಮರಕ್ಕೆ ನೀರನ್ನು ಹಾಕಿ ದಿನದ ಕೆಲಸ ಆರಂಭಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು