ಕನ್ನಡ ಸುದ್ದಿ  /  ಕ್ರಿಕೆಟ್  /  ನಾನು ಸ್ಟಕ್ ಆಗಿದ್ದೆ, ನಾನಿದ್ದಿದ್ದರೆ ವರ್ಲ್ಡ್​ಕಪ್ ಗೆಲ್ತಿದ್ವಿ; ಏಕದಿನ ವಿಶ್ವಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

ನಾನು ಸ್ಟಕ್ ಆಗಿದ್ದೆ, ನಾನಿದ್ದಿದ್ದರೆ ವರ್ಲ್ಡ್​ಕಪ್ ಗೆಲ್ತಿದ್ವಿ; ಏಕದಿನ ವಿಶ್ವಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

Prasanna Kumar P N HT Kannada

Apr 19, 2024 09:22 PM IST

ಏಕದಿನ ವರ್ಲ್ಡ್​ಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

    • KL Rahul on ODI World Cup 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಕುರಿತು ಟೀಮ್ ಇಂಡಿಯಾ ವಿಕೆಟ್ ಕೀಪರ್ ಕೆಎಲ್ ರಾಹುಲ್​ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.
ಏಕದಿನ ವರ್ಲ್ಡ್​ಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ
ಏಕದಿನ ವರ್ಲ್ಡ್​ಕಪ್ ಸೋಲಿಗೆ ಕೆಎಲ್ ರಾಹುಲ್ ಪಶ್ಚಾತ್ತಾಪ

2023ರ ನವೆಂಬರ್ 19.. ಭಾರತೀಯ ಕ್ರಿಕೆಟ್​ನ ಕೋಟ್ಯಂತರ ಅಭಿಮಾನಿಗಳ ಕನಸನ್ನು ಭಗ್ನಗೊಳಿಸಿದ ದಿನ. ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಐಸಿಸಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ವಿಫಲವಾಗಿತ್ತು. ಸತತ 10 ಪಂದ್ಯ ಗೆದ್ದಿದ್ದ ಭಾರತ, ಪ್ರಶಸ್ತಿ ಸುತ್ತಿನ ಫೈಟ್​ನಲ್ಲಿ ಆಸೀಸ್​ಗೆ ಪ್ರಶಸ್ತಿ ಬಿಟ್ಟುಕೊಟ್ಟಿತ್ತು. ಆ ಸೋಲು ಈಗಲೂ ಕಾಡುತ್ತಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್​ನಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್​, ರೋಹಿತ್​ ನೇತೃತ್ವದ ಟೀಮ್ ಇಂಡಿಯಾವನ್ನು 6 ವಿಕೆಟ್​ಗಳಿಂದ ಸೋಲಿಸಿ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತ್ತು.

ಟ್ರೆಂಡಿಂಗ್​ ಸುದ್ದಿ

ವಿರಾಟ್‌ ಕೊಹ್ಲಿಯಿಂದ ನಾವು ತುಂಬಾ ಕಲಿತಿದ್ದೇವೆ; ಅವರ ಬಗ್ಗೆ ಗೌರವ ಇದೆ ಎಂದ ಮೊಹಮ್ಮದ್‌ ರಿಜ್ವಾನ್‌

Explainer: ಪ್ಲೇಆಫ್‌ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ

ಕೆಕೆಆರ್​ ವಿರುದ್ಧ ಗುಜರಾತ್ ಟೈಟಾನ್ಸ್ ಗೆದ್ದರಷ್ಟೇ ಉಳಿಗಾಲ; ಸಂಭಾವ್ಯ ತಂಡ, ಹವಾಮಾನ ವರದಿ, ಪಿಚ್ ರಿಪೋರ್ಟ್ ವಿವರ

ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲ್ಲುವುದರ ಜತೆಗೆ ಈ ತಂಡಗಳೂ ಸೋಲಬೇಕು; ಹೀಗಾದಾಗ ಮಾತ್ರ ನಮ್ಮವರ ಪ್ಲೇಆಫ್ ಕನಸು ನನಸು!

ಅಂದು ಟೀಮ್ ಇಂಡಿಯಾ ತಂಡದ ಭಾಗವಾಗಿದ್ದ ಕೆಎಲ್ ರಾಹುಲ್, ನಿರಾಶಾದಾಯಕ ಸೋಲಿನ ಬಗ್ಗೆ ತೆರೆದಿಟ್ಟಿದ್ದಾರೆ. ಶುಭ್ಮನ್ ಗಿಲ್ ಬೇಗನೇ ವಿಕೆಟ್ ಒಪ್ಪಿಸಿದ ಹೊರತಾಗಿ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಆದರೆ, ಹಿಟ್​ಮ್ಯಾನ್ ಜೊತೆಗೆ ಶ್ರೇಯಸ್ ಅಯ್ಯರ್ ವಿಕೆಟ್ ಪಡೆದ ನಂತರ, ರಾಹುಲ್ ಮತ್ತು ಕೊಹ್ಲಿ ರನ್ ಗಳಿಸಲು ವಿಫಲರಾದರು. ಇದರ ನಡುವೆ ಕೊಹ್ಲಿ 63 ಎಸೆತಗಳಲ್ಲಿ 54 ರನ್ ಗಳಿಸಿ ಔಟಾದರು. ಆಗ ರಾಹುಲ್ ಅವರ ಹೋರಾಟವು ಪ್ರಮುಖವಾಗಿತ್ತು.

ಅವಕಾಶ ಸಿಕ್ಕರೆ ಆ ಇನ್ನಿಂಗ್ಸ್ ಪುನರಾವರ್ತಿಸುತ್ತೇನೆ ಎಂದ ಕೆಎಲ್

ಇದರ ಹೊರತಾಗಿಯೂ ಕೆಎಲ್ ರಾಹುಲ್ 107 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 66 ರನ್​​ ಗಳಿಸಿ ಔಟಾದರು. ಇದು ತಂಡದ ಹಿನ್ನಡೆಗೆ ಕಾರಣವಾಗಿತ್ತು. ಮಿಚೆಲ್ ಸ್ಟಾರ್ಕ್​ ಎಸೆದ ಇನ್ನಿಂಗ್ಸ್​​ನ 42ನೇ ಓವರ್​​​​ನಲ್ಲಿ ರಾಹುಲ್​​ ಔಟಾದರು. ರವಿಚಂದ್ರನ್ ಅಶ್ವಿನ್ ಅವರೊಂದಿಗಿನ ಸಂದರ್ಶನದಲ್ಲಿ ರಾಹುಲ್, ಅವಕಾಶ ಸಿಕ್ಕರೆ ಆಸ್ಟ್ರೇಲಿಯಾ ವಿರುದ್ಧದ ತಮ್ಮ ಇನ್ನಿಂಗ್ಸ್ ಅನ್ನು ಮತ್ತೆ ಪುನರಾವರ್ತಿಸುವುದಾಗಿ ಹೇಳಿದ್ದಾರೆ.

ನಾನು ಸ್ಟಕ್ ಆಗಿದ್ದೆ ಎಂದ ಕೆಎಲ್ ರಾಹುಲ್

31 ವರ್ಷದ ಬ್ಯಾಟ್ಸ್​​ಮನ್,​ ತಾನು ಕೊನೆಯವರೆಗೂ ಕ್ರೀಸ್​ನಲ್ಲಿ ಉಳಿದಿದ್ದರೆ ಇನ್ನೂ 30-40 ರನ್​​ ಸೇರಿಸುತ್ತಿದ್ದೆ. ಇದು ಪಂದ್ಯದ ಫಲಿತಾಂಶ ಬದಲಾಯಿಸಬಹುದಿತ್ತು. ನನ್ನ ಮನಸ್ಸಿಗೆ ಬರುವ ಮೊದಲ ವಿಷಯವೆಂದರೆ 2023ರ ವಿಶ್ವಕಪ್ ಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದು. ನಾನು ಮಿಚೆಲ್ ಸ್ಟಾರ್ಕ್ ಬೌಲಿಂಗ್​ನಲ್ಲಿ ದಾಳಿ ನಡೆಸಲು ಮುಂದಾಗಿದ್ದೆ. ಆದರೆ ನಾನು ಸ್ಟಕ್ ಆಗಿದ್ದೆ. ರನ್​ ಗಳಿಸಲು ಸಾಧ್ಯವಾಗಲಿಲ್ಲ. ನನಗೂ ಕಷ್ಟಕರವಾಗಿತ್ತು ಎಂದು ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

ವೇರಿಯೇಷನ್ ಬೌಲಿಂಗ್​​ ಮೂಲಕ ನನ್ನನ್ನು ಕಟ್ಟಿ ಹಾಕಿದ್ದರು. ದಾಳಿ ಮಾಡಬೇಕೇ, ಬೇಡವೇ ಎಂಬ ಗೊಂದಲಕ್ಕೆ ಸಿಲುಕಿದ್ದೆ. ಇದೇ ಆ ಗೊಂದಲದಲ್ಲಿ, ನಾನು ಚೆಂಡನ್ನು ನಿಕ್ ಮಾಡಿ ನಿರ್ಣಾಯಕ ಸಮಯದಲ್ಲಿ ಔಟ್ ಆದೆ. ನಾನು ಆ ಇನ್ನಿಂಗ್ಸ್ ಅನ್ನು ಮುಂದುವರಿಸಿದ್ದರೆ ನಾವು ಬಹುಶಃ 30-40ಕ್ಕೂ ಹೆಚ್ಚು ರನ್​​ಗಳನ್ನು ಗಳಿಸಬಹುದಿತ್ತು. ಅದು ಸಾಧ್ಯವಾಗಿದ್ದರೆ ನಾವು ವಿಶ್ವಕಪ್ ಅನ್ನು ನಮ್ಮ ಕೈಯಲ್ಲಿ ಹೊಂದಬಹುದಿತ್ತು. ಅದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಅವರು ಆಡುವ 11ರ ಭಾಗವಾಗಿರಲಿಲ್ಲ. ಆದರೆ ವಿಶ್ವಕಪ್​ನ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿದ್ದರು. ಅಹ್ಮದಾಬಾದ್​​ನಲ್ಲಿ ನಡೆದ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಅವರ ಶತಕ ಸಿಡಿಸಿ ಭಾರತ ತಂಡದ ಸೋಲಿಗೆ ಕಾರಣರಾಗಿದ್ದರು. ಭಾರತ 50 ಓವರ್​​ಗಳಲ್ಲಿ 240 ರನ್​​​ಗಳಿಗೆ ಆಲೌಟ್ ಆಯಿತು. ವಿಶ್ವಕಪ್​​ ಸೋಲಿನ ನಂತರ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ಇಂಗ್ಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಐಪಿಎಲ್ 2024ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕನಾಗಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ