logo
ಕನ್ನಡ ಸುದ್ದಿ  /  ಕ್ರಿಕೆಟ್  /  ದೇಶದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮರಿಲ್ಲ; ಮಾಜಿ ಚೀಫ್ ಸೆಲೆಕ್ಟರ್ ಎಂಎಸ್ ಪ್ರಸಾದ್ ಬೆಂಬಲ

ದೇಶದಲ್ಲಿ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮರಿಲ್ಲ; ಮಾಜಿ ಚೀಫ್ ಸೆಲೆಕ್ಟರ್ ಎಂಎಸ್ ಪ್ರಸಾದ್ ಬೆಂಬಲ

Prasanna Kumar P N HT Kannada

May 04, 2024 11:09 AM IST

ದೇಶದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಅತ್ಯುತ್ತಮ ಆಲ್​ರೌಂಡರ್ ಇಲ್ಲವೇ ಇಲ್ಲ; ವಿಶ್ವಕಪ್ ಆಯ್ಕೆ ಸಮರ್ಥಿಸಿದ ಮಾಜಿ ಚೀಫ್ ಸೆಲೆಕ್ಟರ್

    • MSK Prasad on Hardik Pandya : ಟಿ20 ವಿಶ್ವಕಪ್ ಟೂರ್ನಿಗೆ ಹಾರ್ದಿಕ್ ಪಾಂಡ್ಯ ಅವರ ಆಯ್ಕೆಯನ್ನು ಮಾಜಿ ಸೆಲೆಕ್ಟರ್ ಎಂಎಸ್​ಕೆ ಪ್ರಸಾದ್ ಬೆಂಬಲಿಸಿದ್ದಾರೆ.
ದೇಶದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಅತ್ಯುತ್ತಮ ಆಲ್​ರೌಂಡರ್ ಇಲ್ಲವೇ ಇಲ್ಲ; ವಿಶ್ವಕಪ್ ಆಯ್ಕೆ ಸಮರ್ಥಿಸಿದ ಮಾಜಿ ಚೀಫ್ ಸೆಲೆಕ್ಟರ್
ದೇಶದಲ್ಲಿ ಹಾರ್ದಿಕ್ ಪಾಂಡ್ಯಗಿಂತ ಅತ್ಯುತ್ತಮ ಆಲ್​ರೌಂಡರ್ ಇಲ್ಲವೇ ಇಲ್ಲ; ವಿಶ್ವಕಪ್ ಆಯ್ಕೆ ಸಮರ್ಥಿಸಿದ ಮಾಜಿ ಚೀಫ್ ಸೆಲೆಕ್ಟರ್

ಏಪ್ರಿಲ್ 30ರಂದು ಬಿಸಿಸಿಐ (BCCI) ಪ್ರಕಟಿಸಿದ ಟೀಮ್ ಇಂಡಿಯಾ (Team India) 15 ಸದಸ್ಯರ ಟಿ20 ವಿಶ್ವಕಪ್ ತಂಡದಲ್ಲಿ ಸ್ಟಾರ್ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರ ಆಯ್ಕೆಯನ್ನು ಭಾರತದ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್ (MSK Prasad) ಬೆಂಬಲಿಸಿದ್ದಾರೆ. ಮೂವತ್ತು ವರ್ಷದ ಕ್ರಿಕೆಟಿಗನನ್ನು ಮಹತ್ವದ ಟೂರ್ನಿಗೆ ಆಯ್ಕೆ ಮಾಡಿದ್ದಕ್ಕೆ ಕ್ರಿಕೆಟ್ ತಜ್ಞರು, ಮಾಜಿ ಕ್ರಿಕೆಟರ್ಸ್ ಮತ್ತು ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. 2024ರ ಐಪಿಎಲ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಕ್ಕೆ ಹಾರ್ದಿಕ್ ಆಯ್ಕೆಯನ್ನು ಪ್ರಶ್ನಿಸಿದ್ದರು.

ಟ್ರೆಂಡಿಂಗ್​ ಸುದ್ದಿ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

ನೋಡದೆಯೇ 98 ಮೀಟರ್​ ದೂರ ಸಿಕ್ಸರ್​ ಬಾರಿಸಿದ ವಿರಾಟ್ ಕೊಹ್ಲಿ; ಕಣ್ ಕಣ್ ಬಿಟ್ಟು ನೋಡಿದ ಎಂಎಸ್ ಧೋನಿ, VIDEO

ಆರ್‌ಸಿಬಿ-ಸಿಎಸ್‌ಕೆ ಮ್ಯಾಚ್‌ ಸಂದರ್ಭ ಮೈದಾನದಲ್ಲಿ ಓಡುವೆ ಎಂದು ರೀಲ್ಸ್‌ ಬಿಟ್ಟವನ ಸ್ಥಿತಿ ನೋಡಿ! ಬೆಂಗಳೂರು ಪೊಲೀಸರ ಪ್ರತಿಭೆಗೆ ಸಾಟಿಯುಂಟೆ

ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರು ಟೆಸ್ಟ್ ಮತ್ತು 17 ಏಕದಿನ ಪಂದ್ಯಗಳನ್ನಾಡಿರುವ ಮಾಜಿ ಮುಖ್ಯ ಆಯ್ಕೆಗಾರ ಎಂಎಸ್​ಕೆ ಪ್ರಸಾದ್, ಹಾರ್ದಿಕ್ ಪಾಂಡ್ಯ ಅವರನ್ನು ಬೆಂಬಲಿಸಿದ್ದಾರೆ. ಪ್ರಸ್ತುತ ಹಾರ್ದಿಕ್​ಗಿಂತ ಉತ್ತಮ ವೇಗದ ಆಲ್​ರೌಂಡರ್ ಯಾರಿದ್ದಾರೆ? ದೇಶದಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ ಟೂರ್ನಿ ಜೂನ್ 1 ರಿಂದ 29ರ ತನಕ ನಡೆಯಲಿದೆ. ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಈ ಮೆಗಾ ಟೂರ್ನಿ ಜರುಗಲಿದೆ. 20 ತಂಡಗಳು ಒಂದು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ಹಾರ್ದಿಕ್ ಆಯ್ಕೆ ಉತ್ತಮವಾಗಿದೆ ಎಂದ ಎಂಎಸ್​ಕೆ ಪ್ರಸಾದ್

ಹಾರ್ದಿಕ್ ಪಾಂಡ್ಯ ಕುರಿತು ಮಾತನಾಡಿರುವ ಎಂಎಸ್​ಕೆ ಪ್ರಸಾದ್, ಹಾರ್ದಿಕ್ ಪಾಂಡ್ಯ ಅವರು ತಂಡಕ್ಕೆ ಸೇರ್ಪಡೆಯಾಗಿದ್ದು ಹಾಗೂ ಅವರಿಗೆ ಉಪನಾಯಕತ್ವ ನೀಡಿದ್ದು ಉತ್ತಮ ಆಲೋಚನೆ ಎಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಹಾರ್ದಿಕ್​ಗೆ ನಾಯಕತ್ವದ ಕಿರೀಟ ನೀಡಲಾಗಿದೆ. ಇದು ಅವರು ಭಾರತ ತಂಡದ ಮುಂದಿನ ನಾಯಕರೂ ಹೌದು ಎಂಬುದನ್ನು ಸೂಚಿಸುತ್ತದೆ. ಅವರನ್ನು ಆಯ್ಕೆ ಮಾಡುವ ಮೂಲಕ ಆಯ್ಕೆದಾರರು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಸಾದ್ ತಿಳಿಸಿದ್ದಾರೆಂದು ರೆವ್ ಸ್ಪೋರ್ಟ್ಸ್ ವರದಿ ಮಾಡಿದೆ‌.

ಪಾಂಡ್ಯಗಿಂತ ಉತ್ತಮ ಆಲ್​ರೌಂಡರ್​ ಯಾರಿಲ್ಲ ಎಂದ ಮಾಜಿ ಸೆಲೆಕ್ಟರ್​

ಹಾರ್ದಿಕ್ ಆಯ್ಕೆ ಬಗ್ಗೆ ತುಂಬಾ ಪ್ರಶ್ನೆಗಳು ಕೇಳಿ ಬರುತ್ತಿವೆ. ಆದರೆ, ಪ್ರಸ್ತುತ ಪಾಂಡ್ಯ ಅವರಿಗಿಂತ ಉತ್ತಮ ವೇಗದ ಆಲ್​ರೌಂಡರ್ ಯಾರಿದ್ದಾರೆ? ನೀವೇ ಹೇಳಿ. ನಿಜ, ಇತ್ತೀಚಿನ ದಿನಗಳಲ್ಲಿ ಅವರು ಫಾರ್ಮ್​​ಗೆ ಮರಳಲು ಹೋರಾಟ ನಡೆಸುತ್ತಿದ್ದಾರೆ. ಆದರೆ ಅದಕ್ಕೆ ಕಾರಣಗಳು ತುಂಬಾ ಇವೆ. ಮುಂಬೈ ನಾಯಕತ್ವ ಬದಲಾವಣೆ ಅವರ ಫಾರ್ಮ್ ಮೇಲೂ ಪರಿಣಾಮ ಬೀರಿದೆ. ಆದರೆ ಪಾಂಡ್ಯ ಒಮ್ಮೆ ಟೀಮ್ ಇಂಡಿಯಾ ಜೆರ್ಸಿ ಧರಿಸಿದರೆ ಆ ಕೆಟ್ಟ ಫಾರ್ಮ್ ದೂರವಾಗಬಹುದು. ಪಂಡಿತರು, ತಜ್ಞರು ಹೀಗೆ ಯಾರು ಏನೇ ಹೇಳಿದರೂ ಹಾರ್ದಿಕ್ ಪಾಂಡ್ಯ ಅವರಿಗಿಂತ ಉತ್ತಮ ಆಲ್​ರೌಂಡರ್ ಪ್ರಸ್ತುತ‌ ದೇಶದಲ್ಲಿ ಇಲ್ಲವೇ ಇಲ್ಲ. ಪ್ರಸ್ತುತ ಅವರೇ ದೇಶದ ಅತ್ಯುತ್ತಮ ಆಲ್​ರೌಂಡರ್ ಎಂಬುದನ್ನು ಮತ್ತೊಮ್ಮೆ ಪುನರಾವರ್ತಿಸುತ್ತೇನೆ ಎಂದು ಪ್ರಸಾದ್ ಹೇಳಿದ್ದಾರೆ.

ಪ್ರಸ್ತುತ ಐಪಿಎಲ್​ನಲ್ಲಿ ಹಾರ್ದಿಕ್ ಮೈದಾನದಲ್ಲಿ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ತಂದುಕೊಡಲು ಎಡವಿದ್ದಾರೆ. ಎಂಐ ಪರ 11 ಪಂದ್ಯಗಳಿಗೆ ನಾಯಕತ್ವ ವಹಿಸಿದ್ದು, 3ರಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. 8 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಕೇವಲ 198 ರನ್ ಗಳಿಸಿದ್ದರೆ, ಬೌಲಿಂಗ್‌ನಲ್ಲಿ 8 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2024ರ ಟೂರ್ನಿಗೆ‌ ಟ್ರೇಡ್ ಮೂಲಕ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈ ಇಂಡಿಯನ್ಸ್ ಸೇರಿದ್ದರು. ಬಳಿಕ ನಾಯಕನಾಗಿ ನೇಮಕಗೊಂಡರು. ಆದರೆ ಅವರ ಮೇಲಿದ್ದ ನಂಬಿಕೆ ಹುಸಿಯಾಯಿತು. ಐದು ಬಾರಿಯ ಚಾಂಪಿಯನ್ ತಂಡದ ಅಭಿಮಾನಿಗಳಿಗೆ ನಿರಾಸೆಯಾಯಿತು.

 

IPL, 2024

Live

RCB

218/5

20.0 Overs

VS

CSK

19/1

(2.1)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ