logo
ಕನ್ನಡ ಸುದ್ದಿ  /  ಮನರಂಜನೆ  /   Choo Mantar Update: 'ಛೂ ಮಂತರ್' ಎನ್ನುತ್ತಾ ಟಾಪ್‌ ಹುಡುಗಿ ಜೊತೆ ಬರೋಕೆ ರೆಡಿಯಾದ ಶರಣ್‌..ಇಲ್ಲಿದೆ ನೋಡಿ ಫುಲ್‌ ಡೀಟೆಲ್ಸ್‌

Choo Mantar Update: 'ಛೂ ಮಂತರ್' ಎನ್ನುತ್ತಾ ಟಾಪ್‌ ಹುಡುಗಿ ಜೊತೆ ಬರೋಕೆ ರೆಡಿಯಾದ ಶರಣ್‌..ಇಲ್ಲಿದೆ ನೋಡಿ ಫುಲ್‌ ಡೀಟೆಲ್ಸ್‌

HT Kannada Desk HT Kannada

Dec 20, 2022 05:51 PM IST

'ಛೂ ಮಂತರ್' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಶರಣ್‌, ಅದಿತಿ ಪ್ರಭುದೇವ

    • ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆಜಿಎಫ್‌ ಖ್ಯಾತಿಯ ಶಿವಕುಮಾರ್ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ 'ಛೂ ಮಂತರ್' ಚಿತ್ರಕ್ಕೆ ಇದೆ.
 'ಛೂ ಮಂತರ್' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಶರಣ್‌, ಅದಿತಿ ಪ್ರಭುದೇವ
'ಛೂ ಮಂತರ್' ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ಶರಣ್‌, ಅದಿತಿ ಪ್ರಭುದೇವ

ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅದಿತಿ ಪ್ರಭುದೇವ ಈಗ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಜೊತೆಗೆ ಅವರು ಅಭಿನಯಿಸಿರುವ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಅದಿತಿ, ಶರಣ್‌ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಛೂ ಮಂತರ್‌ ಎಂದು ಹೆಸರಿಡಲಾಗಿದೆ. ಇದೊಂದು ಕಾಮಿಡಿ ಚಿತ್ರವಾಗಿದ್ದು ಈ ಚಿತ್ರದಲ್ಲಿ ಶರಣ್‌ ಜೊತೆ ಚಿಕ್ಕಣ್ಣ ಕೂಡಾ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

ಪೂಜಾ ಹೆಗ್ಡೆ ತುಳು ಹುಡುಗನ ಮದುವೆಯಾಗ್ತಾರ, ಕನ್ನಡ ಸಿನಿಮಾದಲ್ಲಿ ನಟಿಸ್ತಾರ? ಕಣಜಾರು ದೇಗುಲಕ್ಕೆ ಭೇಟಿ ನೀಡಿದ ತುಳುನಾಡಿನ ನಟಿ ಹೀಗಂದ್ರು

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಆವೇಶಂ ಬಿಡುಗಡೆ; ಫಹಾದ್‌ ಫಾಸಿಲ್‌ ನಟನೆಗೆ ಉಘೇ ಉಘೇ ಅಂದ ಒಟಿಟಿ ಪ್ರೇಕ್ಷಕರು

ಈ ವಾರ ಚಿತ್ರಮಂದಿರಗಳಲ್ಲಿ 20+ ಸಿನಿಮಾಗಳು ರಿಲೀಸ್‌; ಕನ್ನಡದಲ್ಲಿ 4 ಚಿತ್ರಗಳು ಬಿಡುಗಡೆ, ವಿಜಯ ರಾಘವೇಂದ್ರರ ಹೊಸ ಆಟ ಶುರು

ಸದಭಿರುಚಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ, ತರುಣ್ ಸ್ಟುಡಿಯೋಸ್ ಬ್ಯಾನರ್‌ನ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾವಾಗಿದೆ. 'ಕರ್ವ' ಚಿತ್ರದ‌ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್ 'ಛೂ ಮಂತರ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್‌ ಕಟ್‌ ಕೂಡಾ ಹೇಳಿದ್ದಾರೆ. ಹಾರರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕ, ಲಂಡನ್‌ ಹಾಗೂ ಇನ್ನಿತರ ಕಡೆಗಳಲ್ಲಿ 'ಛೂ ಮಂತರ್' ಸಿನಿಮಾ ಚಿತ್ರೀಕರಣ ಜರುಗಿದೆ.

ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆಜಿಎಫ್‌ ಖ್ಯಾತಿಯ ಶಿವಕುಮಾರ್ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ 'ಛೂ ಮಂತರ್' ಚಿತ್ರಕ್ಕೆ ಇದೆ. ಅನೇಕ ಸಿನಿಮಾಗಳಲ್ಲಿ ಶರಣ್‌ ಜೊತೆ ನಟಿಸಿರುವ ಹಾಸ್ಯ ನಟ ಚಿಕ್ಕಣ್ಣ, ಈ ಚಿತ್ರದಲ್ಲಿ ಕೂಡಾ ಇದ್ದಾರೆ. ಶರಣ್‌ ಹಾಗೂ ಚಿಕ್ಕಣ ಇಬ್ಬರ ಕಾಂಬಿನೇಷನ್‌, ಸಿನಿಪ್ರಿಯರನ್ನು ನಕ್ಕು ನಲಿಸುವುದು ಗ್ಯಾರಂಟಿ. ಉಳಿದಂತೆ ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಹಾಗೂ ಇನ್ನಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ಶರಣ್‌ ಹಾರರ್‌ ಚಿತ್ರದಲ್ಲಿ ನಟಿಸಿದ್ದು ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ರಾಧಾ ಮಿಸ್‌ ಸೌದಿ ಅರೇಬಿಯಾ ಪ್ರವಾಸದ ಫೋಟೋ ಗ್ಯಾಲರಿ

ಸೌದಿ ಅರೇಬಿಯಾ ಪ್ರವಾಸೋದ್ಯಮ ಪ್ರಾಧಿಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಬೇರೆ ಬೇರೆ ದೇಶದ ಸೆಲೆಬ್ರಿಟಿಗಳನ್ನು ತನ್ನ ದೇಶಕ್ಕೆ ಆಹ್ವಾನಿಸುತ್ತಿದೆ. ಈ ರೀತಿ ಆಹ್ವಾನ ದೊರೆತ ಸೆಲೆಬ್ರಿಟಿಗಳಲ್ಲಿ ಶ್ವೇತಾ ಪ್ರಸಾದ್‌ ಕೂಡಾ ಒಬ್ಬರು. ಇನ್ನೂ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳನ್ನು ನೋಡಿಕೊಂಡು ಮತ್ತೆ ಬಿಗ್‌ಬಾಸ್‌ಗೆ ವಾಪಸಾದ ಅರುಣ್‌ ಸಾಗರ್‌

ಅರುಣ್‌ ಸಾಗರ್‌, ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿ ಮತ್ತೆ ವಾಪಸ್‌ ಬಂದಿದ್ದಾರೆ. ಅರುಣ್‌ ಸಾಗರ್‌, ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾದಾಗ ಇದ್ದಕ್ಕಿದ್ದಂತೆ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿದ್ದರು. ಬಹುಶ: ಇದು ಬಿಗ್‌ ಬಾಸ್‌ ಬೇಕಂತಲೇ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಅರುಣ್‌ ಸಾಗರ್‌ ವಾಪಸ್‌ ಬಂದಾಗ ನಿಜ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ದರ್ಶನ್‌ಗೆ ರೌಡಿ ಬಾಸ್‌ ಎಂದ ಅಹೋರಾತ್ರ...ಆಧ್ಯಾತ್ಮ ಚಿಂತಕನ ವಿರುದ್ಧ ತಿರುಗಿಬಿದ್ದ ಡಿಬಾಸ್‌ ಫ್ಯಾನ್ಸ್‌

ಅಹೋರಾತ್ರ ಆಧ್ಯಾತ್ಮ ಚಿಂತಕ ಹಾಗೂ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅನುಭವ ಇರುವವರು ಎನ್ನಲಾಗಿದೆ. ಜೊತೆಗೆ ವೃಕ್ಷರಕ್ಷ ಎಂಬ ತಂಡವನ್ನು ಕಟ್ಟಿಕೊಂಡು ಪ್ರಕೃತಿ ರಕ್ಷಣೆಯಲ್ಲೂ ತೊಡಗಿದ್ದಾರೆ. ಆದರೆ ಸ್ಯಾಂಡಲ್‌ವುಡ್‌ ಮಂದಿಯ ಬಗ್ಗೆ ಮಾತ್ರ ಅವರು ಅನೇಕ ವಿಡಿಯೊ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಪೂರ್ತಿ ಸ್ಟೋರಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು