logo
ಕನ್ನಡ ಸುದ್ದಿ  /  ಮನರಂಜನೆ  /  Madhavan: ನಿಮಗೆ ಮದುವೆ ಆಗಿರುವ ವಿಚಾರ ಹೇಳಬೇಡಿ, ಸಿನಿಮಾಗೆ ಸಮಸ್ಯೆ ಆಗುತ್ತೆ; ಮಾಧವನ್‌ಗೆ ಸಲಹೆ ನೀಡಿದ್ದ ಚಿತ್ರತಂಡ, ಮುಂದೆ ಆಗಿದ್ದೇ ಬೇರೆ

Madhavan: ನಿಮಗೆ ಮದುವೆ ಆಗಿರುವ ವಿಚಾರ ಹೇಳಬೇಡಿ, ಸಿನಿಮಾಗೆ ಸಮಸ್ಯೆ ಆಗುತ್ತೆ; ಮಾಧವನ್‌ಗೆ ಸಲಹೆ ನೀಡಿದ್ದ ಚಿತ್ರತಂಡ, ಮುಂದೆ ಆಗಿದ್ದೇ ಬೇರೆ

Rakshitha Sowmya HT Kannada

Jun 01, 2023 03:10 PM IST

ಬಹುಭಾಷಾ ನಟ ಮಾಧವನ್‌ 53ನೇ ಹುಟ್ಟುಹಬ್ಬ

  • 'ಅಲೈಪಾಯುದೆ' ಸಿನಿಮಾ ಬಿಡುಗಡೆಯಾದ 4 ತಿಂಗಳ ಹಿಂದೆ ಮಾಧವನ್‌ ಮದುವೆ ಆಗಿದ್ದರು. ಆದರೆ ಹೀರೋಗೆ ಮದುವೆ ಆಗಿದೆ ಎಂಬ ವಿಷಯ ತಿಳಿದರೆ ಮಹಿಳಾ ಅಭಿಮಾನಿಗಳು ಬೇಸರಗೊಳ್ಳುತ್ತಾರೆ, ಇದರಿಂದ ಸಿನಿಮಾಗೆ ಸಮಸ್ಯೆ ಆಗಬಹುದು ಎಂದು ಚಿತ್ರತಂಡದ ಕೆಲವರು ಮದುವೆ ವಿಚಾರವನ್ನು ಮುಚ್ಚಿಡಲು ಹೇಳುತ್ತಾರೆ.

ಬಹುಭಾಷಾ ನಟ ಮಾಧವನ್‌ 53ನೇ ಹುಟ್ಟುಹಬ್ಬ
ಬಹುಭಾಷಾ ನಟ ಮಾಧವನ್‌ 53ನೇ ಹುಟ್ಟುಹಬ್ಬ

ಬಹುಭಾಷಾ ನಟ ಮಾಧವನ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 53ನೇ ವಸಂತಕ್ಕೆ ಕಾಲಿಟ್ಟಿರುವ ಮಾಧವನ್‌ಗೆ ಅಭಿಮಾನಿಗಳು ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ. ಸದ್ಯಕ್ಕೆ ಮಾಧವನ್‌ ಚೆನ್ನೈನಲ್ಲಿ 'ಟೆಸ್ಟ್‌' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಶೂಟಿಂಗ್‌ ಸೆಟ್‌ನಲ್ಲೇ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಲಯಾಳಂನ ಮಂಜುಮ್ಮೆಲ್‌ ಬಾಯ್ಸ್‌ ಸಿನಿಮಾ ನಿಜಕ್ಕೂ ಚೆನ್ನಾಗಿದೆಯಾ? ಅಥವಾ ಬರೀ ಹೈಪಾ? ಹೀಗಿದೆ ಚಿತ್ರ ವಿಮರ್ಶೆ

ಕೋಟಿ ಸಿನಿಮಾ ಖಳನಾಯಕ ‘ದಿನೂ ಸಾವ್ಕಾರ್’ ಫಸ್ಟ್‌ ಲುಕ್‌ ರಿಲೀಸ್‌; ಡಾಲಿ ಧನಂಜಯ್ ಎದುರು ರಮೇಶ್‌ ಇಂದಿರಾ ಅಬ್ಬರ

Sathyam: ಸತ್ಯಂ ಚಿತ್ರದಲ್ಲಿ ತುಳುನಾಡ ದೈವದ ಕಥೆ; ಸೆನ್ಸಾರ್‌ ಪಾಸ್‌, ಶೀಘ್ರದಲ್ಲಿ ಚಿತ್ರಮಂದಿರದಲ್ಲಿ ‘ಗಣಪ’ನ ಸಿನಿಮಾ

Kangaroo Review: ಕ್ರೈಂ ಥ್ರಿಲ್ಲರ್‌ನಲ್ಲಿ ಮೇಳೈಸಿದ ಹಾರರ್‌ ಅನುಭವ! ಕಾಂಗರೂ ಚಿತ್ರದಲ್ಲಿ ಕಾಡಲಿದೆ ಕರುಳು ಬಳ್ಳಿಯ ಕಥೆ

''ಪ್ರತಿಯೊಬ್ಬರಿಗೂ ಹುಟ್ಟುಹಬ್ಬ ಅನ್ನೋದು ಬಹಳ ಮುಖ್ಯ. ಆದರೆ ನನಗೆ ಕೆಲಸಕ್ಕಿಂತ ಬರ್ತ್‌ಡೇ ಆಚರಣೆ ಮುಖ್ಯವಲ್ಲ, ನನ್ನ ವೃತ್ತಿಯಲ್ಲೇ ನಾನು ಹೆಚ್ಚು ಖುಷಿ ಕಾಣುತ್ತೇನೆ'' ಎಂದು ಮಾಧವನ್‌ ಹೇಳಿದ್ದಾರೆ. ಮಾಧವನ್‌ ಈಗ ಸ್ಟಾರ್‌ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಹಂತಕ್ಕೆ ಬರಲು ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ತಮಿಳು ಅಯ್ಯಂಗಾರ್‌ ಕುಟುಂಬಕ್ಕೆ ಸೇರಿದ ರಂಗನಾಥನ್‌ ಮಾಧವನ್‌ ಹಿಂದಿಯ 'ಇಸ್‌ ರಾತ್‌ ಕಿ ಸುಬ್ಹ ನಹಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ ಒಂದು ಇಂಗ್ಲೀಷ್‌ ಸಿನಿಮಾದಲ್ಲಿ ನಟಿಸಿ ಕನ್ನಡದ 'ಶಾಂತಿ ಶಾಂತಿ ಶಾಂತಿ' ಚಿತ್ರದ ನಾಯಕನಾಗಿ ನಟಿಸಿದರು.

ಮೂರು ಸಿನಿಮಾಗಳಲ್ಲಿ ನಟಿಸಿದರೂ ಮಾಧವನ್‌ಗೆ ಬ್ರೇಕ್‌ ಕೊಟ್ಟಿದ್ದು ಮಣಿರತ್ನಂ ನಿರ್ದೇಶನದ 'ಅಲೈಪಾಯುದೆ' ಸಿನಿಮಾ. ಈ ಚಿತ್ರದ ರಿಲೀಸ್‌ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಮಾಧವನ್‌ ಅಭಿಮಾನಿಗಳು ಆಗ್ಗಾಗ್ಗೆ ನೆನಪಿಸಿಕೊಳ್ಳುತ್ತಾರೆ. ಮಾಧವನ್‌ ಕೂಡಾ ಅನೇಕ ಇಂಟರ್‌ವ್ಯೂಗಳನ್ನು ಇದನ್ನು ಹೇಳಿಕೊಂಡಿದ್ದಾರೆ. 'ಅಲೈಪಾಯುದೆ' ಸಿನಿಮಾ ಬಿಡುಗಡೆಯಾದ 4 ತಿಂಗಳ ಹಿಂದೆ ಮಾಧವನ್‌ ಮದುವೆ ಆಗಿದ್ದರು. ಆದರೆ ಹೀರೋಗೆ ಮದುವೆ ಆಗಿದೆ ಎಂಬ ವಿಷಯ ತಿಳಿದರೆ ಮಹಿಳಾ ಅಭಿಮಾನಿಗಳು ಬೇಸರಗೊಳ್ಳುತ್ತಾರೆ, ಇದರಿಂದ ಸಿನಿಮಾಗೆ ಸಮಸ್ಯೆ ಆಗಬಹುದು ಎಂದು ಚಿತ್ರತಂಡದ ಕೆಲವರು ಮದುವೆ ವಿಚಾರವನ್ನು ಮುಚ್ಚಿಡಲು ಹೇಳುತ್ತಾರೆ.

ಆದರೆ ಮಾಧವನ್‌ಗೆ ಇದು ಸರಿ ಎನಿಸಿಲ್ಲ. ಪ್ರೀತಿಸಿ ಮದುವೆಯಾದ ಹುಡುಗಿ ಬಗ್ಗೆ ಹೇಗೆ ಸುಳ್ಳು ಹೇಳುವುದು ಎಂಬುದು ಅವರಿಗೆ ಯೋಚನೆ ಆಗಿತ್ತು. ಕೂಡಲೇ ಅವರು ನಿರ್ದೇಶಕ ಮಣಿರತ್ನಂ ಜೊತೆ ಮಾತನಾಡಿದ್ದಾರೆ. ನಿನಗೆ ತೋಚಿದ್ದು ಮಾಡು ಎಂದು ಮಣಿರತ್ನಂ ಸಲಹೆ ನೀಡಿದ್ದಾರೆ. ಪ್ರೆಸ್‌ಮೀಟ್‌ ಸಮಯದಲ್ಲಿ ಮಾಧವನ್‌ಗೆ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದೆ. ಇತ್ತೀಚೆಗೆ ನೀವು ಮದುವೆ ಆಗಿದ್ದೀರಂತೆ ಹೌದಾ ಎಂದು ಮಾಧವನ್‌ ಕೇಳಿದಾಗ ಮಾಧವನ್‌ ಹೌದು ಎಂದಿದ್ದಾರೆ.

''9 ವರ್ಷಗಳ ಪ್ರೀತಿ ನಂತರ ಕಳೆದ 4 ತಿಂಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಧೇನೆ. ಆಕೆ ಹೆಸರು ಸರಿತಾ. ನಾನೊಬ್ಬ ನಟ ಆಗಿ ನನ್ನ ಸಿನಿಮಾಗಳು ಗೆಲ್ಲುವಂತೆ ನಾನು ಪ್ರಮೋಷನ್‌ ಮಾಡಬೇಕಿದೆ. ಆದರೆ ಅದಕ್ಕಾಗಿ ಮದುವೆ ವಿಚಾರವನ್ನು ಮುಚ್ಚಿಟ್ಟು ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ನಮ್ಮನ್ನು ಗೌರವಿಸಿ, ನಮ್ಮ ಸಿನಿಮಾವನ್ನು ನೋಡಿ ಹಾರೈಸಿ'' ಎಂದು ಮಾಧವನ್‌ ಪ್ರೆಸ್‌ಮೀಟ್‌ನಲ್ಲಿ ಹೇಳಿದ್ದಾರೆ. ಮಾಧವನ್‌ ಸುಳ್ಳು ಹೇಳದೆ ಪ್ರೀತಿ, ಮದುವೆ ಹಾಗೂ ಪತ್ನಿ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದು ಎಲ್ಲರಿಗೂ ಮೆಚ್ಚುಗೆ ಆಗಿದೆ. ಮಾಧವನ್‌ ದಂಪತಿಗೆ ವೇದಾಂತ್‌ ಎಂಬ ಪುತ್ರ ಇದ್ದಾರೆ. ವೇದಾಂತ್‌ ನ್ಯಾಷನಲ್‌ ಲೆವೆಲ್‌ ಸ್ವಿಮ್ಮರ್. ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಕಷ್ಟು ಪದಕಗಳನ್ನು ಗೆದ್ದಿದ್ದಾರೆ.

ಮಾಧವನ್‌ ಸದ್ಯದ ಸಿನಿಮಾಗಳ ಬಗ್ಗೆ ಹೇಳುವುದಾದರೆ 2 ಹಿಂದಿ ಹಾಗೂ 3 ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮಾಧವನ್‌ ನಟನಾಗಿ ಮಾತ್ರವಲ್ಲ ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸಿನಿಮಾಗೆ ಬರುವ ಮುನ್ನ ಮಾಧವನ್‌ ಕೆಲವೊಂದು ಜಾಹೀರಾತು ಹಾಗೂ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು