Seetha Rama Serial: ಸೂರಿ ಮಗ -ಸೊಸೆಗೆ ಆಸ್ತಿ ಚಿಂತೆಯಾದ್ರೆ, ಸೀತಾ ರಾಮನಿಗೆ ಮದುವೆ ಟೆನ್ಷನ್! ಇದರ ನಡುವೆ ಸಿಹಿ ಸತ್ಯವೂ ಬಹಿರಂಗ
ಸೂರ್ಯ ಪ್ರಕಾಶ್ ದೇಸಾಯಿ ಮನೆಯಲ್ಲಿ ಆಸ್ತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಭಾರ್ಗವಿ ಮಾತಂತೆ, ವಿಶ್ವ ಆಸ್ತಿ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ರಾಮ್ ಮದುವೆಗೂ ಮುನ್ನ ನಮ್ಮ ಪಾಲಿನ ಆಸ್ತಿ ಎಷ್ಟೆಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ಈ ನಡುವೆ ಸಿಹಿ ಸತ್ಯವೂ ಸೂರಿಗೆ ತಿಳಿದಿದೆ.
Seetha Rama Serial: ಲಾಯರ್ ರುದ್ರಪ್ರತಾಪ್ನ ಉಪಟಳ ಮತ್ತೆ ಶುರುವಾದ ಹಿನ್ನೆಲೆಯಲ್ಲಿ ಸೀತಾ ಮತ್ತು ಸಿಹಿಗೆ ಭದ್ರತೆ ನೀಡುವ ದೃಷ್ಟಿಯಿಂದ ಅವರ ಕಾವಲಿಗೆ ಇಬ್ಬರು ಅಂಗರಕ್ಷಕರನ್ನು ನೇಮಿಸಿದ್ದಾನೆ ರಾಮ. ಇದೆಲ್ಲದರ ನಡುವೆ, ಶಾಂತಮ್ಮನ ವಠಾರದಲ್ಲೂ ಸೀತಾಳ ಮೇಲೆ ಪಕ್ಕದ ಮನೆಯವರ ಕೆಟ್ಟ ಕಣ್ಣು ಬಿದ್ದಿದೆ. ನೀನೇ ಪುಣ್ಯವಂತೆ ಎಂದೆಲ್ಲ ಅಣಕ ಮಾಡುತ್ತಿದ್ದಾರೆ. ಆದರೆ, ಅವರ ಮಾತುಗಳಿಂದ ಸೀತಾ ಬೇಸರಿಸಿಕೊಂಡಿದ್ದಾಳೆ. ಅವರ ಮಾತಿಗೆ ಉತ್ತರ ಕೊಡದೇ ಮೌನದಲ್ಲಿಯೇ ಆಫೀಸ್ ಕಡೆ ಹೊರಟಿದ್ದಾಳೆ.
ಇನ್ನೊಂದು ಬದಿಯಲ್ಲಿ ಸೂರ್ಯ ಪ್ರಕಾಶ್ ದೇಸಾಯಿ ಮನೆಯಲ್ಲಿ ಆಸ್ತಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಭಾರ್ಗವಿ ಮಾತಂತೆ, ವಿಶ್ವ ಆಸ್ತಿ ಬಗ್ಗೆ ಪ್ರಸ್ತಾಪ ಮಾಡಿದ್ದಾನೆ. ರಾಮ್ ಮದುವೆಗೂ ಮುನ್ನ ನಮ್ಮ ಪಾಲಿನ ಆಸ್ತಿ ಎಷ್ಟೆಷ್ಟು ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. ವಿಶ್ವನ ಮಾತಿಂದ ಸೂರ್ಯಪ್ರಕಾಶ್ ಕೊಂಚ ವಿಚಲಿತನಾಗಿದ್ದಾನೆ. ಅಲ್ಲೇ ಇದ್ದ ಸತ್ಯಜೀತ್, ಇದು ಭಾರ್ಗವಿಯ ಕುಮ್ಮಕ್ಕು ಎಂದು ಒಳಗೊಳಗೇ ಮರುಗುತ್ತಿದ್ದಾನೆ. ಮದುವೆ ಹೊತ್ತಲ್ಲಿ ಆಸ್ತಿ ಬಗ್ಗೆ ಯಾಕೆ ಮಾತು ಎಂದಿದ್ದಾನೆ ರಾಮ್.
ಆಸ್ತಿಯಲ್ಲಿ ಪಾಲು ಕೇಳಿದ ವಿಶ್ವ
ಆಸ್ತಿಯಲ್ಲಿ ಯಾರಿಗೆ ಎಷ್ಟೆಷ್ಟು ಸಿಗುತ್ತದೆ ಎಂಬ ಕ್ಲಾರಿಟಿ ನನಗೆ ಬೇಕು. ನಿಮಗೂ ವಯಸ್ಸಾಯ್ತು, ನೀವು ಹೋದ ಮೇಲೆ ಆಸ್ತಿ ವಿಚಾರಕ್ಕೆ ಇಲ್ಲಿ ಯಾರಿಗೂ ಗೊಂದಲ ಇರಬಾರದು. ಹಾಗಾಗಿ ಯಾರಿಗೆ ಏನೆಲ್ಲ ಸಿಗುತ್ತೆ ಕೊಂಚ ವಿವರಿಸಿ ಎಂದು ಅಪ್ಪ ಸೂರಿಗೆ ಕೇಳಿದ್ದಾನೆ. ಇದಕ್ಕೆ ವಿವರಿಸಿದ ಸೂರಿ, ನಾನು ನನ್ನ ಮಕ್ಕಳಿಗೆ ಏನು ನೀಡಬೇಕೋ ಅದನ್ನು ಕೊಟ್ಟೇ ಹೋಗೋದು. ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಭಾಗ ವಿಶ್ವನಿಗೆ ಇನ್ನೊಂದು ಭಾಗ ಸತ್ಯನಿಗೆ ಸಿಗಲಿದೆ ಎಂದಿದ್ದಾನೆ.
ಪರೋಕ್ಷವಾಗಿ ಬೇಳೆ ಬೇಯಿಸಿಕೊಂಡ ಭಾರ್ಗವಿ
ಬೇಕು ಅಂತಲೇ ಇದೇ ವಿಚಾರದಲ್ಲಿ ಮೂಗು ತೂರಿಸಿದ ಭಾರ್ಗವಿ, ತಾನು ತುಂಬ ಒಳ್ಳೆಯವಳು ಎಂದು ಬಿಂಬಿಸಿಕೊಂಡಿದ್ದಾಳೆ. ತನಗೆ ಬೇಕಿರೋ ವಿಲ್ ವಿಚಾರದ ಗುಟ್ಟನ್ನು ತಿಳಿದುಕೊಳ್ಳಲು, ಪರೋಕ್ಷವಾಗಿಯೇ ಕೇಳಿದ್ದಾಳೆ. ರಾಮ್, ಲಾಯರ್ಗೆ ಫೋನ್ ಮಾಡು, ವಿಲ್ನಲ್ಲಿ ಏನು ಬರೆದಿದೆ ಕೇಳಿ ನೋಡು. ಇವರಿಗೆ ಮೊದಲು ಕ್ಲಾರಿಟಿ ಕೊಡೋಣ ಎಂದಿದ್ದಾಳೆ. ಸರಿ ಚಿಕ್ಕಿ ಈಗಲೇ ಫೋನ್ ಮಾಡುವೆ ಎಂದಿದ್ದಾನೆ ರಾಮ್. ಈ ನೋವಿನ ನಡುವೆಯೇ ತಾತ ಸೂರಿಗೆ ಸಿಹಿ ಕಡೆಯಿಂದ ಫೋನ್ ಬಂದಿದೆ. ಖುಷಿಯಲ್ಲಿಯೇ ಎದ್ದು ನಡೆದಿದ್ದಾನೆ ಸೂರಿ.
ಶಾಂತಮ್ಮನ ವಠಾರಕ್ಕೆ ಬಂದ ಸೂರ್ಯಪ್ರಕಾಶ್
ಹೇಗಿದೆ ಆರೋಗ್ಯ ಎಂದೆಲ್ಲ ವಿಚಾರಿಸಿದ್ದಾಳೆ ಸಿಹಿ. ಹೀಗೆ ಇಬರಿಬ್ಬರ ಮಾತುಕತೆ ಮುಂದುವರಿದಿದೆ. ತಕ್ಷಣಕ್ಕೆ ಸಿಹಿಯನ್ನು ನೋಡಲೆಂದೋ ಅಥವಾ ಸೀತಾ ಮನೆಗೆ ಭೇಟಿ ನೀಡುವ ಸಲುವಾಗಿಯೋ ಶಾಂತಮ್ಮನ ವಠಾರಕ್ಕೆ ಅಚ್ಚರಿಯ ರೀತಿಯಲ್ಲಿ ಎಂಟ್ರಿ ಕೊಟ್ಟಿದ್ದಾನೆ ಸೂರ್ಯಪ್ರಕಾಶ್. ಸೂರಿಯನ್ನು ನೋಡಿದ ಸಿಹಿ ಕೂಡ ಹಿರಿ ಹಿರಿ ಹಿಗ್ಗಿದ್ದಾಳೆ. ಇಲ್ಲಿ ಸೀತಾ ಮನೆ ಎಲ್ಲಿ ಎಂದಿದ್ದಾನೆ. ಅಯ್ಯೋ ಸೀತಮ್ಮನ ಮನೇನಾ? ಬನ್ನಿ ತೋರಿಸ್ತಿನಿ ಎಂದು ಕರೆದೊಯ್ದು ಇದೇ ನೋಡಿ ನಮ್ಮ ಮನೆ ಎಂದಿದ್ದಾಳೆ. ಅರೇ, ನಿಂದಲ್ಲಮ್ಮ ಸೀತಾಂದು ಎಂದಿದ್ದಾನೆ.
ಸೂರಿಗೆ ಗೊತ್ತಾಯ್ತು ಸಿಹಿ ಹುಟ್ಟಿನ ಸತ್ಯ!
ಅದಕ್ಕೆ ನನ್ನ ಮನೆಯೂ ಇದೇ, ಸೀತಮ್ಮನ ಮನೆಯೂ ಇದೆ. ನಾನು ಸೀತಮ್ಮನ ಮಗಳು ಎಂದಿದ್ದಾಳೆ ಸಿಹಿ. ಅಲ್ಲಿಗೆ ಸೂರ್ಯಪ್ರಕಾಶ್ಗೆ ಸೀತಾಗೆ ಮಗಳಿದ್ದಾಳೆ ಎಂಬ ಕಟು ಸತ್ಯ ಸಿಹಿ ಬಾಯಿಂದಲೇ ಹೊರಬಿದ್ದಿದೆ. ಆ ಸಮಯಕ್ಕೆ ಸರಿಯಾಗಿ ಆಫೀಸ್ನಿಂದ ಸೀತಾ ಸಹ ಆಗಮಿಸಿದ್ದಾಳೆ. ಸಿಹಿಯ ಮಾತು ಕೇಳಿ ಸೂರಿ ಮೌನಕ್ಕೆ ಜಾರಿದ್ದಾನೆ. ಹಾಗಾದರೆ, ಒಬ್ಬ ಮಗಳಿರೋ ತಾಯಿಯನ್ನು ತನ್ನ ಮನೆಯ ಸೊಸೆಯನ್ನಾಗಿಸಿಕೊಳ್ಳುತ್ತಾನಾ ಸೂರ್ಯಪ್ರಕಾಶ್? ರಾಮನ ಮದುವೆ ವಿಚಾರದಲ್ಲಿ ಸೂರಿಯ ನಿರ್ಧಾರ ಏನಿರಲಿದೆ? ಇದಕ್ಕೆಲ್ಲ ಮುಂದಿನ ದಿನಗಳಲ್ಲೇ ಉತ್ತರ ಸಿಗಲಿದೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಶ್ರೀನಿವಾಸ್: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)