ಕನ್ನಡ ಸುದ್ದಿ  /  ಮನರಂಜನೆ  /  Namma Lacchi Serial: ಹಾಡುವ ಹಂಬಲದ ಮರಿ ಕೋಗಿಲೆಯ ಕಥೆಯೇ ‘ನಮ್ಮ ಲಚ್ಚಿ’; ಫೆ. 6ರಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

Namma Lacchi Serial: ಹಾಡುವ ಹಂಬಲದ ಮರಿ ಕೋಗಿಲೆಯ ಕಥೆಯೇ ‘ನಮ್ಮ ಲಚ್ಚಿ’; ಫೆ. 6ರಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ನಮ್ಮ ಲಚ್ಚಿ ಹೆಸರಿನ ಹೊಸದೊಂದು ಧಾರಾವಾಹಿ ಶುರುವಾಗುತ್ತಿದೆ. ಇದೇ ಫೆ. 6 ರಿಂದ ರಾತ್ರಿ 8ಕ್ಕೆ ಪ್ರಸಾರವಾಗಲಿದೆ.

ಹಾಡುವ ಹಂಬಲದ ಮರಿ ಕೋಗಿಲೆಯ ಕಥೆಯೇ ‘ನಮ್ಮ ಲಚ್ಚಿ’; ಫೆ. 6ರಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ
ಹಾಡುವ ಹಂಬಲದ ಮರಿ ಕೋಗಿಲೆಯ ಕಥೆಯೇ ‘ನಮ್ಮ ಲಚ್ಚಿ’; ಫೆ. 6ರಿಂದ ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

Namma Lacchi Serial on Star Suvarna: ಪೌರಾಣಿಕ ಧಾರಾವಾಹಿ ಮತ್ತು ಕೌಟುಂಬಿಕ ಸೀರಿಯಲ್‌ಗಳ ಮೂಲಕ ವಿಭಿನ್ನ ರೀತಿಯ ಕಥೆಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿ ಇದೀಗ ನೋಡುಗ ವರ್ಗಕ್ಕೆ ಮತ್ತೊಂದು ಹೊಸ ಕಥೆಯೊಂದನ್ನು ಹೊತ್ತು ತರುತ್ತಿದೆ ಅದೇ ‘ನಮ್ಮ ಲಚ್ಚಿ’.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು ಹಾಗೂ ಹೊಂಗನಸು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮನೆಯ ಮಾತಾಗಿವೆ. ಈ ಸಾಲಿಗೆ ಇದೀಗ 'ನಮ್ಮ ಲಚ್ಚಿ' ಎಂಬ ಹೊಸ ಕಥೆಯೊಂದು ಸೇರ್ಪಡೆಯಾಗಲಿದೆ.

ಹಳ್ಳಿಯಲ್ಲಿ ಬೆಳೆದಿರುವ ಪುಟ್ಟ ಮಗುವಿಗೆ ಸಂಗೀತ ಅಂದ್ರೆ ಪಂಚ ಪ್ರಾಣ. ಆದರೆ ತಾಯಿ ಅದನ್ನು ವಿರೋಧಿಸುತ್ತಾಳೆ. ತಂದೆ ಯಾರೆಂದು ತಿಳಿಯದ ಈ ಮಗುವಿಗೆ ಅಪ್ಪನನ್ನು ಹುಡುಕುವ ಹಂಬಲ. ಹಿಂದೆ ನಡೆದಿರುವ ಕೆಲವೊಂದು ಘಟನೆಗಳಿಂದ ಈ ಮಗುವಿನ ತಂದೆ ತಾಯಿ ದೂರವಾಗಿರುತ್ತಾರೆ. ಹೆತ್ತ ತಂದೆ ದೂರವಾಗಿದ್ರು ಆತನ ಗಾಯನ ಕಲೆ ರಕ್ತಗತವಾಗಿ ಬಂದಿರುತ್ತೆ ಈ ಮರಿ ಕೋಗಿಲೆಗೆ. ಸಂಗೀತ ಮಾಂತ್ರಿಕ ಸಂಗಮ್ ಸಾತ್ನೂರ್‌ನ ಅತೀ ದೊಡ್ಡ ಅಭಿಮಾನಿಯಾಗಿರುವ ಈ ಮರಿ ಕೋಗಿಲೆಗೆ, ಆತನೇ ತನ್ನ ತಂದೆ ಎಂಬ ಕಟು ಸತ್ಯ ಹೇಗೆ ತಿಳಿಯುತ್ತೆ ಎಂಬುದೇ 'ನಮ್ಮ ಲಚ್ಚಿ' ಧಾರಾವಾಹಿಯ ಕಥಾ ಹಂದರ.

ಇನ್ನು ಈ ಧಾರಾವಾಹಿಯಲ್ಲಿ ವಿಜಯ್ ಸೂರ್ಯ, ನೇಹಾ ಗೌಡ, ಹಾಗೂ ಲಚ್ಚಿಯಾಗಿ ಸಂಘವಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ‘ನಮ್ಮ ಲಚ್ಚಿ’ ಇದೇ ಫೆಬ್ರವರಿ 6 ರಿಂದ ರಾತ್ರಿ 8 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ..

Malashree Visits Siddhivinayaka Temple: ಮುಂಬೈನ ಸಿದ್ಧಿವಿನಾಯಕನ ಸನ್ನಿಧಾನದಲ್ಲಿ ‘ಕನಸಿನ ರಾಣಿ’ ಮಾಲಾಶ್ರೀ ಮತ್ತು ಮಕ್ಕಳು..

Actress Malashree: ಸ್ಯಾಂಡಲ್‌ವುಡ್‌ ನಟಿ ಮಾಲಾಶ್ರೀ ಸದಾ ಒಂದಿಲ್ಲೊಂದು ಪ್ರವಾಸದಲ್ಲಿರುತ್ತಾರೆ. ಅದರಲ್ಲೂ ದೇವರು, ದೇವಸ್ಥಾನಗಳೆಂದರೆ ವಿಶೇಷ ಭಕ್ತಿ. ಕುಟುಂಬದ ಜತೆಗೆ ಸದಾ ಸುತ್ತಾಡುತ್ತಿರುತ್ತಾರೆ. ಇದೀಗ ತಮ್ಮ ಮಕ್ಕಳೊಂದಿಗೆ ಮುಂಬೈನ ಶ್ರೀ ಸಿದ್ಧಿ ವಿನಾಯಕನ ದರ್ಶನ ಪಡೆದು ಬಂದಿದ್ದಾರೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Dulquer Salmaan‌ on Yash: ‘ಯಶ್‌ ಕಳುಹಿಸಿದ ಊಟ, ಆತಿಥ್ಯ ಎಂದೂ ಮರೆಯಲಾರೆ’; ಮೈಸೂರಿನ ದಿನಗಳನ್ನು ನೆನೆದ ದುಲ್ಖರ್‌ ಸಲ್ಮಾನ್

Dulquer Salmaan‌ on Yash: ಸೌತ್‌ ಸಿನಿಮಾ ಸ್ಟಾರ್ಸ್‌ಗಳಾದ ಯಶ್‌ ಮತ್ತು ದುಲ್ಖರ್‌ ಸಲ್ಮಾನ್‌ ಆಪ್ತ ಸ್ನೇಹಿತರು. ಈ ಇಬ್ಬರು ಕಲಾವಿದರು ಮುಖತಃ ಮಾತಿಗೆ ಸಿಕ್ಕಿದ್ದು ಕೆಲವೇ ಬಾರಿಯಾದರೂ, ಸಿನಿಮಾಗಳ ವಿಚಾರದಲ್ಲಿ ಒಬ್ಬರಿಗೊಬ್ಬರು ಸಾಥ್‌ ನೀಡಿದ ಉದಾಹರಣೆಗಳಿವೆ. ಇದೀಗ ಇದೇ ನಟ ಸ್ಯಾಂಡಲ್‌ವುಡ್‌ ಬಗ್ಗೆ ಮಾತನಾಡಿದ್ದಾರೆ. ಇಲ್ಲಿನ ಹೀರೋಗಳ ಬಗ್ಗೆಯೂ ಮನಸ್ಸಿನಾಳದಿಂದ ಉತ್ತರಿಸಿದ್ದಾರೆ. ನಟ ಯಶ್‌ ಅವರ ಆತಿಥ್ಯವನ್ನೂ ನೆನಪಿಸಿಕೊಂಡಿದ್ದಾರೆ. ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point