ಕನ್ನಡ ಸುದ್ದಿ  /  ಮನರಂಜನೆ  /  ಕೆಟ್ಟ ದೃಷ್ಟಿ ಬಿದ್ದಿದೆ, ನಿನ್ನ ಹೆಸರಿಗೆ ಕಳಂಕ ತರುವ ಸಂಚು ನಡೀತಿದೆ, ಹೆದರಬೇಡ ನಾನಿದ್ದೇನೆ; ರಕ್ಷಿತ್‌ ಶೆಟ್ಟಿಗೆ ಕೊರಗಜ್ಜನ ಅಭಯ

ಕೆಟ್ಟ ದೃಷ್ಟಿ ಬಿದ್ದಿದೆ, ನಿನ್ನ ಹೆಸರಿಗೆ ಕಳಂಕ ತರುವ ಸಂಚು ನಡೀತಿದೆ, ಹೆದರಬೇಡ ನಾನಿದ್ದೇನೆ; ರಕ್ಷಿತ್‌ ಶೆಟ್ಟಿಗೆ ಕೊರಗಜ್ಜನ ಅಭಯ

Rakshit Shetty daivaradhane: ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ನಟ ರಕ್ಷಿತ್‌ ಶೆಟ್ಟಿ ಉಡುಪಿಯ ಅಲಿವೂರಿನ ಬಬ್ಬು ಸ್ವಾಮಿ ನೇಮೋತ್ಸವದಲ್ಲಿ ಪಾಲ್ಗೊಂಡು, ಕೊರಗಜ್ಜನ ಆಶೀರ್ವಾದ ಪಡೆದಿದ್ದಾರೆ. ನಿನ್ನ ಹೆಸರಿಗೆ ಕಳಂಕ ತರುವ ಕೆಲಸ ನಡೆಯುತ್ತಿದೆ ಎಂದು ಕೊರಗಜ್ಜ ಕಾರ್ಣಿಕ ನುಡಿದಿದ್ದು, ಹೆದರಬೇಡ ನಾನಿದ್ದೇನೆ ಎಂದು ಅಭಯ ನೀಡಿದ್ದಾನೆ.

ಕೆಟ್ಟ ದೃಷ್ಟಿ ಬಿದ್ದಿದೆ, ನಿನ್ನ ಹೆಸರಿಗೆ ಕಳಂಕ ತರುವ ಸಂಚು ನಡೀತಿದೆ, ಹೆದರಬೇಡ ನಾನಿದ್ದೇನೆ; ರಕ್ಷಿತ್‌ ಶೆಟ್ಟಿಗೆ ಕೊರಗಜ್ಜನ ಅಭಯ
ಕೆಟ್ಟ ದೃಷ್ಟಿ ಬಿದ್ದಿದೆ, ನಿನ್ನ ಹೆಸರಿಗೆ ಕಳಂಕ ತರುವ ಸಂಚು ನಡೀತಿದೆ, ಹೆದರಬೇಡ ನಾನಿದ್ದೇನೆ; ರಕ್ಷಿತ್‌ ಶೆಟ್ಟಿಗೆ ಕೊರಗಜ್ಜನ ಅಭಯ

Rakshit Shetty: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಸದ್ಯ ರಿಚರ್ಡ್‌ ಆಂಟನಿ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಯಶಸ್ಸಿನ ಬಳಿಕ ರಿಚರ್ಡ್‌ ಆಂಟನಿ ಬರವಣಿಗೆಯಲ್ಲಿ ಕೂತಿದ್ದಾರೆ. ಈ ನಡುವೆ ಕೆಲಸದಿಂದ ಒಂದಷ್ಟು ಬಿಡುವು ಪಡೆದುಕೊಂಡ ರಕ್ಷಿತ್‌, ಹುಟ್ಟೂರಿನಲ್ಲಿ ಬಿಡಾರ ಹೂಡಿದ್ದಾರೆ. ಆಚಾರ ವಿಚಾರ ಸಂಪ್ರದಾಯಗಳ ಮೊರೆ ಹೋದ ರಕ್ಷಿತ್‌, ದೈವದ ನೇಮೋತ್ಸವದಲ್ಲಿ ಭಾಗವಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಿನಿಮಾ ಕೆಲಸಗಳು ಎಷ್ಟೇ ಇದ್ದರೂ, ಅದೆಲ್ಲದರ ನಡುವೆಯೂ ಸಮಯ ಮಾಡಿಕೊಂಡು ದೈವದ ಕಾರ್ಯಗಳಲ್ಲಿ ಆಗಾಗ ಭಾಗವಹಿಸುತ್ತಲೇ ಇರುತ್ತಾರೆ. ಹೀಗಿರುವಾಗಲೇ ಉಡುಪಿಯ ಅಲೆವೂರಿನಲ್ಲಿ ನಡೆದ ನೇಮೋತ್ಸವದಲ್ಲಿ ರಕ್ಷಿತ್ ಇತ್ತೀಚೆಗೆ ಭಾಗವಹಿಸಿದ್ದರು. ಅಲೆವೂರು ಜೋಡು ರಸ್ತೆಯಲ್ಲಿ ನಡೆದ ಕರಾವಳಿಯ ಕಾರ್ಣಿಕ 118ನೇ‌ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ರಕ್ಷಿತ್ ಭಾಗಿಯಾಗವಹಿಸಿ ದೈವದ ಆಶೀರ್ವಾದ ಪಡೆದರು.

ಬೆಂಗಾವಲಾಗಿ ನಿಲ್ಲಬೇಕು..

ಇದೇ ವೇಳೆ ದೈವದ ಬಳಿಕ ಬೇಡಿಕೊಂಡ ರಕ್ಷಿತ್‌ ಶೆಟ್ಟಿ, ನಾನು ಹಿಡಿದಿ ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ, ಸಾಂಗವಾಗಿ ನೆರವೇರಬೇಕು. ಅದಕ್ಕೆ ನಿನ್ನ ಅನುಗ್ರಹ ಬೇಕು. ನನ್ನ ಜತೆಗೆ ಬೆಂಗಾವಲಾಗಿ ನೀನು ನಿಲ್ಲಬೇಕು ಎಂದು ನೇಮೋತ್ಸವದಲ್ಲಿ ಕೊರಗಜ್ಜ ದೈವದ ಬಳಿ ಬೇಡಿಕೊಂಡಿದ್ದಾರೆ ರಕ್ಷಿತ್‌ ಶೆಟ್ಟಿ. ರಕ್ಷಿತ್‌ ಅವರ ಈ ಬೇಡಿಕೆಗೆ ಕೊರಗಜ್ಜನಿಂದಲೂ ಧನಾತ್ಮಕ ಪ್ರತಿಕ್ರಿಯೆ ಬಂದಿದೆ. ನಿನ್ನ ಹಿಂದೆ ನಾನಿದ್ದೇನೆ, ನಿನ್ನ ಅಡೆತಡೆಗಳಿಗೆ ನಾನು ದಾರಿ ಮಾಡಿಕೊಡುವೆ ಎಂದು ದೈವ ಹರಸಿದೆ.

ದೈವದ ಉತ್ತರ ಹೀಗಿತ್ತು..

"ನೀನು ಹೆದರಬೇಡ. ನಿನಗೆ ಎದುರಾಗುವ ಎಲ್ಲ ಅಡೆತಡೆಗಳಿಗೆ ನಾನು ಬೆಂಗಾವಲಾಗಿರುತ್ತೇನೆ. ನೀನು ಮಾಡಬೇಕೆಂದುಕೊಂಡಿರುವ ಕೆಲಸ ಕಾರ್ಯಗಳಿಗೆ ನನ್ನ ಆಶೀರ್ವಾದ ಇದ್ದೇ ಇರುತ್ತದೆ. ಅದು ಮುನ್ನಡೆಯತ್ತ ಸಾಗಲಿದೆ. ಏನೇ ಸಮಸ್ಯೆ ಎದುರಾದರೂ, ಅದಕ್ಕೆ ನಾನು ಉತ್ತರ ಕೊಡಲಿದ್ದೇನೆ. ಈ ನಡುವೆ ತೆರೆಮರೆಯಲ್ಲಿ ನಿನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ" ಎಂದು ದೈವ ರಕ್ಷಿತ್‌ ಶೆಟ್ಟಿ ನುಡಿದಿದೆ.

ಅಷ್ಟೇ ಅಲ್ಲ, "ಜನರ ಕೆಟ್ಟ ದೃಷ್ಟಿ ನಿನ್ನ ಮೇಲೆ ಬಿದ್ದಿದೆ. ನಿನ್ನ ಹೆಸರು ಹಾಳು ಮಾಡಲು ಕೆಲವರು ಸಂಚು ರೂಪಿಸಿದ್ದಾರೆ. ಆ ಸಂಚೂ ನನ್ನ ಗಮನಕ್ಕೆ ಬಂದಿದೆ. ನೀನು ಚಿಂತಿಸಬೇಡ. ಆ ದುಷ್ಟ ಶಕ್ತಿಗಳನ್ನು ನಾನು ಮಟ್ಟ ಹಾಕುವೆ. ನನ್ನ ಕಾಲ ಬುಡದಲ್ಲಿಟ್ಟು ಶಿಕ್ಷಿಸುವೆ. ನಿನ್ನ ಕಾರ್ಯಗಳು ಯಶಸ್ವಿಯಾಗಲಿವೆ. ಹಿಡಿದ ಕೆಲಸಗಳತ್ತ ನೀನು ಮುನ್ನಡೆ" ಎಂದು ಕೊರಗಜ್ಜ ದೈವ ರಕ್ಷಿತ್‌ ಶೆಟ್ಟಿ ಅವರಿಗೆ ಹರಸಿದೆ. ಇದೇ ವೇಳೆ ದೈವದಿಂದ ಪ್ರಸಾದವನ್ನೂ ಪಡೆದುಕೊಂಡಿದ್ದಾರೆ.

ಒಟಿಟಿಯಲ್ಲಿ ಸಪ್ತಸಾಗರದಾಚೆ ಎಲ್ಲೋ ಟ್ರೆಂಡಿಂಗ್‌

ಚಿತ್ರಮಂದಿರದಲ್ಲಿ ಸದ್ದು ಮಾಡಿ, ಒಟಿಟಿಯಲ್ಲೂ ಸುದ್ದಿಯಲ್ಲಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ನೋಡುಗರಿಂದ ಬಹುಪರಾಕ್‌ ಸಿಕ್ಕಿದೆ. ಹೇಮಂತ್‌ ರಾವ್‌ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಕಳೆದ ವರ್ಷದ ನವೆಂಬರ್‌ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅದಾದ ಮೇಲೆ ಎರಡು ತಿಂಗಳು ಕಳೆದರೂ ಒಟಿಟಿಯತ್ತ ಮುಖ ಮಾಡಿರಲಿಲ್ಲ ಈ ಸಿನಿಮಾ. ಈಗ ಕಳೆದ ವಾರವಷ್ಟೇ ಅಮೆಜಾನ್‌ ಪ್ರೈಂ ಒಟಿಟಿಯಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ.

ರಿಚರ್ಡ್‌ ಆಂಟನಿಯಲ್ಲಿ ಬಿಜಿ..

ಈಗಾಗಗಲೇ ಕಳೆದ ವರ್ಷ ರಕ್ಷಿತ್‌ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಿದೆ. ಹಾಗಾದರೆ ರಕ್ಷಿತ್‌ ಮುಂದಿನ ಸಿನಿಮಾ ಯಾವುದು? ಸದ್ಯಕ್ಕೆ ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ರಿಚರ್ಡ್‌ ಆಂಟನಿ ಸಿನಿಮಾವನ್ನು ಎರಡು ವರ್ಷದ ಹಿಂದೆಯೇ ಘೋಷಿಸಿದ್ದಾರೆ ರಕ್ಷಿತ್.‌ ಆ ಸಿನಿಮಾ ಬಗ್ಗೆ ಆವತ್ತೇ ಶೀರ್ಷಿಕೆ ಟೀಸರ್‌ ಬಿಟ್ಟರೆ ಬೇರಾವುದೇ ಅಪ್‌ಡೇಟ್‌ ಮಾಹಿತಿ ಹೊರಬಿದ್ದಿಲ್ಲ. ಇದೀಗ ಮುಂದೇನು ಎಂಬ ಬಗ್ಗೆ ಸ್ವತಃ ರಕ್ಷಿತ್‌ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

IPL_Entry_Point