logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri Katha 2023: ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಮಹಾ ಶಿವರಾತ್ರಿಯ ವಿಶೇಷ ಪುರಾಣ ಕಥೆ ಬಗ್ಗೆ ತಿಳಿಯಿರಿ..

Maha Shivaratri Katha 2023: ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಮಹಾ ಶಿವರಾತ್ರಿಯ ವಿಶೇಷ ಪುರಾಣ ಕಥೆ ಬಗ್ಗೆ ತಿಳಿಯಿರಿ..

HT Kannada Desk HT Kannada

Feb 17, 2023 08:04 AM IST

ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಮಹಾ ಶಿವರಾತ್ರಿಯ ವಿಶೇಷ ಪುರಾಣ ಕಥೆ ಬಗ್ಗೆ ತಿಳಿಯಿರಿ..

    • ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಶಿವನನ್ನು ಲಿಂಗ ರೂಪದಲ್ಲಿ ಏಕೆ ಪೂಜಿಸಲಾಗುತ್ತದೆ? ಮಹಾ ಶಿವರಾತ್ರಿಯ ವಿಶೇಷ ಲೇಖನವನ್ನು ಇಲ್ಲಿ ಓದಿ.
ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಮಹಾ ಶಿವರಾತ್ರಿಯ ವಿಶೇಷ ಪುರಾಣ ಕಥೆ ಬಗ್ಗೆ ತಿಳಿಯಿರಿ..
ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠರು? ಮಹಾ ಶಿವರಾತ್ರಿಯ ವಿಶೇಷ ಪುರಾಣ ಕಥೆ ಬಗ್ಗೆ ತಿಳಿಯಿರಿ..

Maha Shivaratri Katha: ಮಾಘ ಮಾಸದ ಕೃಷ್ಣ ಪಕ್ಷ ಚತುರ್ದಶಿಯಂದು ಬರುವ ಶಿವರಾತ್ರಿಯನ್ನು ಮಹಾ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಶಿವ ಪುರಾಣದ ಪ್ರಕಾರ, ಶಿವನು ಶಿವರಾತ್ರಿಯ ದಿನ ಲಿಂಗಕಾರನಾಗಿ ಕಾಣಿಸಿಕೊಂಡನೆಂದು ಹೇಳಲಾಗುತ್ತದೆ. ಇದರ ಹಿಂದೆ ಪುರಾಣದ ಕಥೆಗಳಿವೆ. ಶಿವನು ಲಿಂಗಕಾರನಾಗಿ ಏಕೆ ಕಾಣಿಸಿಕೊಂಡನು? ತ್ರಿಮೂರ್ತಿಗಳಲ್ಲಿ ಶಿವ ಮತ್ತು ವಿಷ್ಣುವನ್ನಷ್ಟೇ ಪೂಜಿಸಲಾಗುತ್ತದೆ, ಬ್ರಹ್ಮನಿಗೆ ಏಕೆ ಪೂಜಿಸುವುದಿಲ್ಲ? ಕೇತಕಿ ಹೂವು ಶಿವನ ಪೂಜೆಗೆ ಏಕೆ ಇಲ್ಲ? ಇವೆಲ್ಲವುಗಳ ಬಗ್ಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಷ್ಟಾದಶ ಪುರಾಣಗಳಲ್ಲಿ ಲಿಂಗೋದ್ಭವ ಹೇಗೆ ನಡೆಯಿತು ಎಂಬ ಕಥೆಯನ್ನು ಖ್ಯಾತ ಆಧ್ಯಾತ್ಮ, ಪಂಚಾಂಗ, ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ನಿರೂಪಿಸಿದ್ದಾರೆ. ಆ ಪುರಾಣ ಕಥೆ ಇಲ್ಲಿದೆ..

ತಾಜಾ ಫೋಟೊಗಳು

Mars Transit: ಮೀನ ರಾಶಿಗೆ ಮಂಗಳನ ಪ್ರವೇಶ; ಸಿಂಹ, ಕನ್ಯಾ ಸೇರಿ ಈ ರಾಶಿಗಳಿಗೆ ಕಷ್ಟಕಷ್ಟ

May 06, 2024 10:00 AM

ಲಕ್ಷ್ಮೀದೇವಿಯ ಕೃಪೆ ಬೇಕು ಅಂದ್ರೆ ಈ 5 ಅಭ್ಯಾಸ ಬಿಟ್ಟುಬಿಡಿ; ಮನೆಯಲ್ಲಿ ಸಂತೋಷದೊಂದಿಗೆ ಸಮೃದ್ಧಿ ನೆಲೆಸುತ್ತೆ

May 06, 2024 09:00 AM

Venus Transit: ವೃಷಭ ರಾಶಿಯಲ್ಲಿ ಶುಕ್ರ ಸಂಚಾರ; ಈ 3 ರಾಶಿಯವರಿಗೆ ಭಾರಿ ಲಾಭ, ಸಂಪತ್ತು ದುಪ್ಪಟ್ಟಿನ ಭವಿಷ್ಯ

May 04, 2024 07:00 AM

Saturn Retrograde: ಶನಿ ಹಿಮ್ಮುಖ ಚಲನೆ; ಮುಂದಿನ 5 ತಿಂಗಳು ಈ 3 ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ

May 03, 2024 06:43 PM

Gajakesari Yoga: ಗುರು ಚಂದ್ರ ಸಂಯೋಗದಿಂದ ಗಜಕೇಸರಿ ಯೋಗ; ಮೇ ತಿಂಗಳಲ್ಲಿ ಸಂತೋಷದ ದಿನಗಳನ್ನು ಕಾಣುವ ರಾಶಿಗಳಿವು

May 01, 2024 12:22 PM

Saturn Transit: ಶನಿ ಸಂಕ್ರಮಣದಿಂದ ಈ ರಾಶಿಗಳಿಗೆ ಒಂದಿಡೀ ವರ್ಷ ಖುಷಿಯೋ ಖುಷಿ

Apr 29, 2024 03:37 PM

ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠ?

ಬ್ರಹ್ಮ ವಿಷ್ಣು ಮಹೇಶ್ವರರಲ್ಲಿ ಯಾರು ಶ್ರೇಷ್ಠ ಎಂಬ ವಾದವು ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಉದ್ಭವಿಸಿತು. ವಾದವು ಕ್ರಮೇಣ ಉಲ್ಬಣಗೊಂಡುದನ್ನು ಕಂಡು ದೇವತೆಗಳೆಲ್ಲರೂ ಶಿವನ ಬಳಿಗೆ ಹೋಗಿ ವಿವಾದವನ್ನು ಪರಿಹರಿಸುವಂತೆ ಬೇಡಿಕೊಂಡರು. ನಂತರ ಬ್ರಹ್ಮ ಮತ್ತು ವಿಷ್ಣುವಿನ ನಡುವೆ, ಬೆರಗುಗೊಳಿಸುವ ತೇಜಸ್ಸಿನ ಬೃಹತ್ ಸ್ತಂಭದಂತಹ ಲಿಂಗವು ರೂಪುಗೊಂಡಿತು. ಆ ಲಿಂಗದಲ್ಲಿ ಶಿವನು ಕಾಣಿಸಿಕೊಂಡನು. ಈ ಲಿಂಗದ ಆದಿ ಮತ್ತು ಅಂತ್ಯವನ್ನು ಕಂಡುಹಿಡಿದವನು ಶ್ರೇಷ್ಠನೆಂದು ನಿರ್ಣಯಿಸಲ್ಪಡುತ್ತಾನೆ ಎಂದು ಶಿವನು ಹೇಳಿದನು. ಸರಿ ಎಂಬಂತೆ ಬ್ರಹ್ಮನು ಹಂಸ ವಾಹನದ ರೂಪ ತಾಳಿ ಮೇಲಕ್ಕೆ ಹೊರಟರು. ಮಹಾಲಿಂಗದ ಮೂಲವನ್ನು ಹುಡುಕಲು ವಿಷ್ಣುವು ಬಿಳಿ ವರಾಹ ರೂಪದಲ್ಲಿ ಕೆಳಕ್ಕೆ ಇಳಿದರು. ಇಬ್ಬರೂ ಎಷ್ಟು ಪ್ರಯಾಣ ಮಾಡಿದರೂ ಆ ಲಿಂಗದ ಆದಿ ಮತ್ತು ಅಂತ್ಯ ತಿಳಿಯಲಾಗಲಿಲ್ಲ.

ಆ ಸಮಯದಲ್ಲಿ ಬ್ರಹ್ಮನು ಶಿವಲಿಂಗದ ಮೇಲಿನಿಂದ ಬೀಳುವ ಕೇತಕಿ ಹೂವು ನೋಡಿದನು. ಆಗ ಬ್ರಹ್ಮನು ಕೇತಕಿ ಹೂವಿಗೆ ಹೀಗೆ ಹೇಳಿದನು, "ನೀವು ಮೇಲಿನಿಂದ ಬರುತ್ತಿದ್ದೀರಿ. ನನಗೆ ಸಹಾಯ ಬೇಕು. ಶಿವಲಿಂಗದ ಆದಿ ಭಾಗವನ್ನು ನೋಡಿದ್ದೇನೆ ಎಂದು ಸಾಕ್ಷಿ ಹೇಳಬೇಕು' ಎಂದರು. ಅದಕ್ಕೆ ಕೇತಕಿ ಪುಷ್ಪ ಸರಿ ಎಂದಿತು. ಇಬ್ಬರೂ ಒಟ್ಟಿಗೆ ಕೆಳಗೆ ಬರುತ್ತಿರುವಾಗ ದಾರಿಯಲ್ಲಿ ಒಂದು ಹಸು ಬ್ರಹ್ಮನಿಗೆ ಕಾಣಿಸುತ್ತದೆ. ಬ್ರಹ್ಮನು ಗೋವಿಗೆ ಹೀಗೆ ಕೇಳುತ್ತಾನೆ, ಶಿವಲಿಂಗದ ಅಂತ್ಯವನ್ನು ನೋಡಿದ್ದೇನೆ ಎಂದು ಸಾಕ್ಷಿ ಹೇಳಬೇಕು ಎಂದು. ಬ್ರಹ್ಮನ ಮಾತಿಗೆ ಗೋಮಾತೆ ಇಲ್ಲ ಎನ್ನುತ್ತದೆ.

ಇದೆಲ್ಲ ಮುಗಿದ ಬಳಿಕ ಶಿವನ ಬಳಿ ಬಂದ ಬ್ರಹ್ಮ, 'ಲಿಂಗದ ಅಂತ್ಯ ಎಲ್ಲಿದೆ ಎಂದು ನೀವು ಕಂಡುಕೊಂಡಿದ್ದೀರಾ ಎಂದು ಶಿವ ಬ್ರಹ್ಮನಿಗೆ ಕೇಳುತ್ತಾರೆ. ಅದಕ್ಕೆ ಪ್ರತಿಯಾಗಿ, ಲಿಂಗದ ಅಂತ್ಯ ಎಲ್ಲಿದೆ ಎಂದು ನಾನು ಕಂಡುಕೊಂಡೆ. ಅದಕ್ಕೆ ಈ ಕೇತಕಿ ಹೂವು, ಗೋವುಗಳೇ ಸಾಕ್ಷಿ' ಎನ್ನುತ್ತಾರೆ. ಶಿವನು ಕೇತಕಿ ಹೂವನ್ನು ಕೇಳಿದರೆ, ಹೌದು ಬ್ರಹ್ಮನು ನೋಡಿದ್ದಾನೆ ಎಂದು ಹೇಳುತ್ತದೆ. ಇದೇ ವಿಷಯವನ್ನು ಗೋಮಾತೆಗೆ ಕೇಳಿದಾಗ ಇಲ್ಲ ಎಂದು ಬಾಲ ಅಲ್ಲಾಡಿಸುತ್ತಾಳೆ. ಇತ್ತ ಕೋಪಗೊಂಡ ಶಿವನು ಬ್ರಹ್ಮನಿಗೆ ಭೂಮಿಯ ಮೇಲೆ ಎಲ್ಲಿಯೂ ಯಾವುದೇ ದೇವಾಲಯ, ಪೂಜೆ ನಡೆಯಕೂಡದು ಎಂದು ಶಾಪ ನೀಡುತ್ತಾನೆ. ಕೇತಕಿ ಪುಷ್ಪ ಸುಳ್ಳು ಹೇಳಿದ್ದಕ್ಕೆ, ನನ್ನ ಪೂಜೆಯಲ್ಲಿ ನಿನಗೆ ಸ್ಥಾನವಿಲ್ಲ ಎಂದು ಶಾಪ ಹಾಕುತ್ತಾನೆ.

ಹಿಂದಿರುಗಿದ ವಿಷ್ಣು ಲಿಂಗದ ಆದಿಯನ್ನು ನೋಡಲಾಗಲಿಲ್ಲ ಎಂಬ ಸತ್ಯವನ್ನು ಹೇಳುತ್ತಾನೆ. ವಿಷ್ಣುವಿನ ಪ್ರಾಮಾಣಿಕತೆಯಿಂದ ಮೆಚ್ಚಿದ ಶಿವನು ವಿಷ್ಣುವಿಗೆ ಸರ್ವವ್ಯಾಪಿತ್ವವನ್ನು ನೀಡುತ್ತಾನೆ. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜೀವಿಗಳನ್ನು ರಕ್ಷಿಸುವ ಶಕ್ತಿಯನ್ನು ಮತ್ತು ಮೋಕ್ಷ ನೀಡುವ ಶಕ್ತಿಯನ್ನು ವಿಷ್ಣುವಿಗೆ ನೀಡುತ್ತಾನೆ.

ನಂತರ ಬ್ರಹ್ಮನು ಸಹ ಶಿವನನ್ನು ಸಹ್ಯಾದ್ರಿ ಪರ್ವತಗಳಲ್ಲಿ ಲಿಂಗದ ರೂಪದಲ್ಲಿ ಇರುವಂತೆ ಶಪಿಸುತ್ತಾನೆ. ಆ ಸಹ್ಯಾದ್ರಿ ಪರ್ವತಗಳಲ್ಲಿರುವ ಶಿವಲಿಂಗವೇ ತ್ರಯಂಬಕೇಶ್ವರ. ಇದು ಲಿಂಗದ ಕಥೆ. ಈ ಕಥೆಯನ್ನು ಅಷ್ಟಾದಶ ಪುರಾಣಗಳ ಕೂರ್ಮ, ವಾಯು ಮತ್ತು ಶಿವ ಪುರಾಣಗಳಲ್ಲಿ ಹೇಳಲಾಗಿದೆ.

ವಾಸ್ತವದಲ್ಲಿ ಬ್ರಹ್ಮ ವಿಷ್ಣು ಮಹೇಶ್ವರರೆಲ್ಲರೂ ಒಂದೇ ರೂಪವಾಗಿದ್ದರೂ, ಶಿವನ ರೂಪವೇ ಪ್ರಧಾನ. ಇದು ಎಲ್ಲಾ ರೂಪಗಳ ಮೂಲವಾಗಿದೆ. ಶ್ರೀಹರಿ ಮಹಾದೇವನು ಎಡಭಾಗದಿಂದ ಮತ್ತು ಬ್ರಹ್ಮನು ದಕ್ಷಿಣ ಭಾಗದಲ್ಲಿದ್ದಾನೆ. ಶಿವನನ್ನು ಹಲವು ಗುಣಗಳಿಂದ ವರ್ಣಿಸಲಾಗುತ್ತದೆ. ವಿಭಿನ್ನ, ಪ್ರಕೃತಿ ಪುರುಷರನ್ನು ಮೀರಿ, ಶಾಶ್ವತ, ಅನನ್ಯ, ಅನಂತ, ಪೂರ್ಣ, ನಿರಂಜನ, ಪರಬ್ರಹ್ಮ, ಪರಮಾತ್ಮ. 'ಶಿವ' ಎಂದರೆ ಶುಭ, ಸಂತೋಷ, ಮಂಗಳಕರ.

- ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮ

(Source: Hindustan Times Telugu)

ವಿಭಾಗ

    ಹಂಚಿಕೊಳ್ಳಲು ಲೇಖನಗಳು