logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Tortoise Ring: ಆಮೆ ಉಂಗುರದಿಂದ ಸಿಗುವ ಪ್ರಯೋಜನ ಏನು? ಈ ಬೆರಳಿಗೆ ಧರಿಸಿದರೆ ಸುಖ, ಸಮೃದ್ಧಿ ನಿಮ್ಮದಾಗುತ್ತದೆ

Tortoise Ring: ಆಮೆ ಉಂಗುರದಿಂದ ಸಿಗುವ ಪ್ರಯೋಜನ ಏನು? ಈ ಬೆರಳಿಗೆ ಧರಿಸಿದರೆ ಸುಖ, ಸಮೃದ್ಧಿ ನಿಮ್ಮದಾಗುತ್ತದೆ

HT Kannada Desk HT Kannada

Feb 01, 2024 09:00 AM IST

ಆಮೆ ಉಂಗುರ ಏಕೆ ಧರಿಸುತ್ತಾರೆ?

    • Tortoise ring: ಬಹಳಷ್ಟು ಜನರು ತಮ್ಮ ಬೆರಳುಗಳಲ್ಲಿ ಆಮೆಯ ಅಥವಾ ಕೂರ್ಮ ಉಂಗುರ ಧರಿಸಿರುವುದನ್ನು ನೀವು ನೋಡಿರುತ್ತೀರಿ. ಈ ಆಮೆಯ ಉಂಗುರವನ್ನು ಏಕೆ ಧರಿಸಲಾಗುತ್ತದೆ ಎಂದು ನಿಮಗೆ ಗೊತ್ತಾ? ನೀವು ಈ ಉಂಗುರವನ್ನು ಧರಿಸಿದರೆ ಏನಾಗುತ್ತದೆ? ಇಲ್ಲಿದೆ ಓದಿ.
ಆಮೆ ಉಂಗುರ ಏಕೆ ಧರಿಸುತ್ತಾರೆ?
ಆಮೆ ಉಂಗುರ ಏಕೆ ಧರಿಸುತ್ತಾರೆ? (HT File Photo)

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಮೆಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಹರಳಿನ ಆಮೆಯ ಪ್ರತಿಮೆಯನ್ನು ಇಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಾತ್ರವಲ್ಲದೆ ಫೆಂಗ್ ಶುಯಿ ಪ್ರಕಾರವೂ ಆಮೆ ಮನೆಯಲ್ಲಿದ್ದರೆ ಸಕಲ ವಾಸ್ತು ದೋಷಗಳು ನಿವಾರಣೆಯಾಗಿ, ಸುಖಮಯ ಜೀವನ ನಡೆಸುತ್ತಾರೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಆಮೆಯ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ. ಇದರಿಂದ ಮನೆಯಲ್ಲಿ ಒಳ್ಳೆಯದಾಗಿ, ಸಂಪತ್ತು ಸಿಗಲಿ ಎಂಬುದಾಗಿದೆ.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಆಮೆಯ ಪ್ರತಿಮೆ ಮಾತ್ರವಲ್ಲದೆ ಆಮೆ ಉಂಗುರವನ್ನು ಸಹ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಬೆರಳಿಗೆ ಆಮೆಯ ಉಂಗುರವನ್ನು ಕಡ್ಡಾಯವಾಗಿ ಧರಿಸುತ್ತಾರೆ. ಈ ಉಂಗುರವನ್ನು ಧರಿಸುವುದರಿಂದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ನಂಬಲಾಗಿದೆ. ಆಮೆಯ ಉಂಗುರವನ್ನು ಧರಿಸುವುದರಿಂದ ಲಕ್ಷ್ಮೀ ದೇವಿಯ ಆಶೀರ್ವಾದವೂ ದೊರೆಯುತ್ತದೆ. ಭಗವಾನ್ ವಿಷ್ಣುವಿನ ಎರಡನೇ ಅವತಾರ ಕೂರ್ಮಾವತಾರವಾಗಿದೆ. ಅದಕ್ಕಾಗಿಯೇ ಆಮೆಯನ್ನು ಒಳ್ಳೆಯದರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆಮೆಯ ಉಂಗುರವನ್ನು ಧರಿಸುವಾಗ ಕೆಲವು ತಪ್ಪುಗಳನ್ನು ಮಾಡಿದರೆ ಅದು ಶುಭ ಫಲಿತಾಂಶವನ್ನು ನೀಡುವುದಿಲ್ಲ.

ಆಮೆಯ ಉಂಗುರವನ್ನು ಧರಿಸುವುದರಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ. ವಿಶೇಷವಾಗಿ ಆಮೆಯ ಉಂಗುರವನ್ನು ಧರಿಸುವಾಗ ಕೆಲವು ವಿಷಯಗಳ ಬಗ್ಗೆ ತಿಳಿದಿರಬೇಕು. ಅದರ ಪ್ರಕಾರವೇ ಈ ಉಂಗುರವನ್ನು ಧರಿಸಬೇಕು.

ಆಮೆಯ ಉಂಗುರವನ್ನು ಧರಿಸುವ ನಿಯಮಗಳು

– ಆಮೆಯ ಉಂಗುರವನ್ನು ನಿಮ್ಮ ಮನಸ್ಸಿಗೆ ಬಂದ ದಿನ ಖರೀದಿಸಬೇಡಿ ಅಥವಾ ಧರಿಸಲೂಬೇಡಿ. ಈ ಉಂಗುರವನ್ನು ಶುಕ್ರವಾರವೇ ಖರೀದಿಸಬೇಕು. ಅಲ್ಲದೆ ಅದನ್ನು ಸ್ವಚ್ಛಗೊಳಿಸದೆ ಹಾಕಿಕೊಳ್ಳಬಾರದು. ಉಂಗುರವನ್ನು ಖರೀದಿಸಿ ಮನೆಗೆ ತಂದ ನಂತರ ಅದನ್ನು ಹಾಲು ಮತ್ತು ಗಂಗಾಜಲದಲ್ಲಿ ಕೆಲವು ಗಂಟೆಗಳ ಕಾಲ ಇರಿಸಿ. ಉಂಗುರವನ್ನು ಸ್ವಚ್ಛಗೊಳಿಸಿದ ನಂತರ ಅದನ್ನು ಲಕ್ಷ್ಮೀ ದೇವಿಗೆ ಅರ್ಪಿಸಿ ಪೂಜಿಸಬೇಕು. ಹಾಗೆಯೇ ಲಕ್ಷ್ಮೀ ನಾರಾಯಣನನ್ನೂ ಪೂಜಿಸಬೇಕು. ಗುರುವಾರ ಅಥವಾ ಶುಕ್ರವಾರದಂದು ಈ ಉಂಗುರವನ್ನು ಧರಿಸುವುದು ಶುಭ ಎಂದು ಹೇಳಲಾಗುತ್ತದೆ.

– ಆಮೆ ಉಂಗುರವನ್ನು ತೋರು ಅಥವಾ ಮಧ್ಯದ ಬೆರಳಿಗೆ ಮಾತ್ರ ಧರಿಸಬೇಕು. ಆಮೆಯ ತಲೆಯನ್ನು ನಿಮ್ಮ ಕಡೆಗೆ ಮಾತ್ರ ಇಟ್ಟುಕೊಳ್ಳಿ. ವಿರುದ್ಧ ದಿಕ್ಕಿನಲ್ಲಿ ಧರಿಸಬೇಡಿ. ಬೆಳ್ಳಿಯಿಂದ ಮಾಡಿದ ಆಮೆಯ ಉಂಗುರವನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳನ್ನು ಸಹ ತೆಗೆದುಹಾಕುತ್ತದೆ. ಧನಾತ್ಮಕ ಶಕ್ತಿಯು ನಿಮಗೆ ನೀಡುತ್ತದೆ.

ಆಮೆಯ ಉಂಗುರವನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು

* ಆಮೆಯ ಉಂಗುರವನ್ನು ಧರಿಸುವುದರಿಂದ ಮನೆಯಲ್ಲಿ ಹಣದ ಕೊರತೆಯುಂಟಾಗುವುದಿಲ್ಲ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಆಮೆಯು ಭಗವಾನ್ ವಿಷ್ಣುವಿನ ಅವತಾರವಾದ್ದರಿಂದ ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ. ನೀವು ಜೀವನದಲ್ಲಿ ನಿಮ್ಮ ಗುರಿಗಳನ್ನು ಸಾಧಿಸಬಹುದು. ಈ ಉಂಗುರವನ್ನು ಧರಿಸುವುದರಿಂದ ಸಂಪತ್ತು ಮತ್ತು ಯಶಸ್ಸನ್ನು ತರುತ್ತದೆ.

* ಮನೆಯಲ್ಲಿ ಸಕಾರಾತ್ಮಕ ವಾತಾವರಣವಿದ್ದು ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಆದರೆ ಈ ಉಂಗುರವನ್ನು ಯಾರು ಬೇಕಾದರೂ ಧರಿಸುವುದು ಸಾಧ್ಯವಿಲ್ಲ. ಜ್ಯೋತಿಷಿಯನ್ನು ಸಂಪರ್ಕಿಸಿದ ನಂತರ ಜಾತಕದ ಪ್ರಕಾರ ಈ ಉಂಗುರವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ಮೇಷ, ವೃಶ್ಚಿಕ, ಕರ್ಕ ಮತ್ತು ಮೀನ ರಾಶಿಯವರು ಈ ಆಮೆಯ ಉಂಗುರವನ್ನು ಧರಿಸಬಾರದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ