Shekhar Suman: ‘ಬಾಲಿವುಡ್ ತೊರೆದು ಪುಣ್ಯ ಕಟ್ಕೊಂಡ್ರಿ, ಇಲ್ಲಿರೋರು ರಾಟಲ್ ಹಾವಿಗಿಂತ ವಿಷಕಾರಿ!ʼ ಪಿಗ್ಗಿ ಪರ ನಿಂತ ಶೇಖರ್ ಸುಮನ್..
Apr 01, 2023 10:54 AM IST
‘ಬಾಲಿವುಡ್ ತೊರೆದು ಪುಣ್ಯ ಕಟ್ಕೊಂಡ್ರಿ, ಇಲ್ಲಿರೋರು ರಾಟಲ್ ಹಾವಿಗಿಂತ ವಿಷಕಾರಿ!ʼ ಪಿಗ್ಗಿ ಪರ ನಿಂತ ಶೇಖರ್ ಸುಮನ್..
- ಬಾಲಿವುಡ್ ಚಿತ್ರೋದ್ಯಮದಲ್ಲಿನ ತಾರತಮ್ಯದ ಬಗ್ಗೆ ಟ್ವಿಟ್ ಮಾಡಿರುವ ನಟ ಶೇಖರ್ ಸುಮನ್, ನನ್ನ ಮತ್ತು ಮಗ ಅಧ್ಯಾಯನ್ ವಿರುದ್ಧ ಬಾಲಿವುಡ್ನ ನಾಲ್ಕು ಗುಂಪುಗಳು ಒಂದುಗೂಡಿದವು ಎಂದಿದ್ದಾರೆ.
Shekhar Suman: ಬಾಲಿವುಡ್ನಿಂದ ದೂರವೇ ಉಳಿದು, ಹಾಲಿವುಡ್ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಪತಿ ನಿಕ್ ಜೋನಸ್ ಜತೆ ಯೂಎಸ್ನಲ್ಲಿಯೇ ನೆಲೆಸಿದ್ದಾರೆ. ಹೀಗಿರುವಾಗಲೇ ಬಾಲಿವುಡ್ ಚಿತ್ರರಂಗ ಹೇಗೆ ತಮ್ಮನ್ನು ಬದಿಗೊತ್ತಿದೆ ಎಂಬುದನ್ನು ಇತ್ತೀಚೆಗಷ್ಟೇ ಪಿಗ್ಗಿ ಹೇಳಿಕೊಂಡಿದ್ದರು. ಪ್ರಿಯಾಂಕಾ ಅವರ ಈ ಹೇಳಿಕೆ ಬಳಿಕ, ಕಂಗನಾ ರಣಾವತ್ ಅವರಿಂದ ಹಿಡಿದು ಅಮಲ್ ಮಲಿಕ್, ಅಪೂರ್ವಾ ಅಸ್ರಾನಿವರೆಗಿನ ಅನೇಕ ಸೆಲೆಬ್ರಿಟಿಗಳು ಬಿ-ಟೌನ್ ವಿರುದ್ಧ ಗುಡುಗಿದರು. ಇದೀಗ ನಟ, ನಿರೂಪಕ ಶೇಖರ್ ಸುಮನ್ ಸಹ ಕೊಂಚ ಗರಂ ಆಗಿಯೇ ಬಾಲಿವುಡ್ನ ಗ್ಯಾಂಗ್ ಬಗ್ಗೆ ಮೌನ ಮುರಿದಿದ್ದಾರೆ.
ಬಾಲಿವುಡ್ ಚಿತ್ರೋದ್ಯಮದಲ್ಲಿನ ತಾರತಮ್ಯದ ಬಗ್ಗೆ ಟ್ವಿಟ್ ಮಾಡಿರುವ ಶೇಖರ್ ಸುಮನ್, ನನ್ನ ಮತ್ತು ಮಗ ಅಧ್ಯಾಯನ್ ವಿರುದ್ಧ ಬಾಲಿವುಡ್ನ ನಾಲ್ಕು ಗುಂಪುಗಳು ಒಂದುಗೂಡಿದವು ಎಂದಿದ್ದಾರೆ. ಅಷ್ಟೇ ಅಲ್ಲ ಅವೆಷ್ಟು ಅಪಾಯಕಾರಿ ಎಂಬುದನ್ನೂ ಹೇಳಿಕೊಂಡಿದ್ದಾರೆ ಶೇಖರ್ ಸುಮನ್.
ಕಾಳಿಂಗ ಸರ್ಪಕ್ಕಿಂತ ವಿಷಕಾರಿ
“ನನ್ನನ್ನು ಮತ್ತು ಮಗ ಅಧ್ಯಯನ್ಗೆ ಹಲವಾರು ಪ್ರಾಜೆಕ್ಟ್ಗಳಿಂದ ತೆಗೆದುಹಾಕಲು ಇಲ್ಲಿನ ನಾಲ್ಕು ಗುಂಪುಗಳು ಒಂದುಗೂಡಿದರು ಎಂದು ನನಗೆ ತಿಳಿದಿದೆ. ಈ ಗ್ಯಾಂಗ್ಸ್ಟರ್ಗಳು ಸಾಕಷ್ಟು ಪ್ರಭಾವಿಗಳು. ಅದ್ಯಾವ ಮಟ್ಟಿಗೆ ಎಂದರೆ, ಕಾಳಿಂಗ ಸರ್ಪಕ್ಕಿಂತ ಹೆಚ್ಚು ಅಪಾಯಕಾರಿ ಮತ್ತು ವಿಷಕಾರಿ. ಆದರೆ ಸತ್ಯವೆಂದರೆ ಅವರು ಎಷ್ಟೇ ಅಡೆತಡೆ ಹಾಕಬಹುದು. ಆದರೆ, ನಮ್ಮನ್ನು ತಡೆಯಲು ಸಾಧ್ಯವಿಲ್ಲ" ಎಂದಿದ್ದಾರೆ.
ಸುಶಾಂತ್ ಸಿಂಗ್ ಬಗ್ಗೆಯೂ ಪ್ರಸ್ತಾಪ..
ಶೇಖರ್ ಮತ್ತೊಂದು ಟ್ವೀಟ್ನಲ್ಲಿ ಸುಶಾಂತ್ ಸಿಂಗ್ ಬಗ್ಗೆಯೂ ಬರೆದುಕೊಂಡಿದ್ದಾರೆ, “ಚಿತ್ರರಂಗದಲ್ಲಿ ಗ್ಯಾಂಗ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈಗಾಗಲೇ ಸುಶಾಂತ್ ಸಿಂಗ್ ರಜಪೂತ್ ವಿಚಾರದಲ್ಲಿ ಅದು ಸಂಭವಿಸಿದೆ. ಇದು ಇತರರಿಗೂ ಆಗಲಿದೆ. ಇಲ್ಲೇ ಇರಿ ಇಲ್ಲವಾದರೆ ಹೊರಡಿ. ಪ್ರಿಯಾಂಕಾ ಸಹ ಹೊರಡುವ ನಿರ್ಧಾರ ಮಾಡಿದರು. ನಿಜಕ್ಕೂ ಅವರ ನಿರ್ಧಾರ ತುಂಬ ಒಳ್ಳೆಯದು. ಇದೀಗ ಹಾಲಿವುಡ್ನಲ್ಲಿ ಭಾರತವನ್ನು ಬೆಳಗುತ್ತಿದ್ದಾರವರು" ಎಂದು ಬಾಲಿವುಡ್ನ ಕರಾಳತೆಯನ್ನು ತೆರೆದಿಟ್ಟಿದ್ದಾರೆ.
ಇದನ್ನೂ ಓದಿ
Priyanka Chopra: ಅಮ್ಮನ ಸಲಹೆಯಂತೆ ಆ ವಯಸ್ಸಿಗೇ ಅಂಡಾಣು ಶೇಖರಿಸಿ ಇಟ್ಟಿದ್ದೆ.. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ
ಪ್ರಿಯಾಂಕ ಚೋಪ್ರಾ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಾಗ ಆಕೆ ಟ್ರೋಲ್ ಆಗಿದ್ದರು. ಇಂದಿನ ನಟಿಯರಿಗೆ ಅದೊಂದು ಫ್ಯಾಷನ್ ಆಗಿದೆ ಎಂದು ಅಪಹಾಸ್ಯ ಮಾಡಿದ್ದರು. ಆದರೆ ಪ್ರಿಯಾಂಕ, ತಮಗಿರುವ ಆರೋಗ್ಯ ಸಮಸ್ಯೆ ಕಾರಣ ಗರ್ಭ ಧರಿಸಲು ಆಗದೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಇತ್ತೀಚೆಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಿಗ್ಗಿ, ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. 30ನೇ ವಯಸ್ಸಿಗೆ ತಮ್ಮ ಅಂಡಾಣುವನ್ನು ತೆಗೆದು ಶೇಖರಿಸಿ ಇಟ್ಟಿದ್ಧಾಗಿ ಹೇಳಿಕೊಂಡಿದ್ದಾರೆ. ಅದೂ ಕೂಡಾ ಪ್ರಿಯಾಂಕ ತಾಯಿ ಮಧು ಚೋಪ್ರಾ ಸ್ತ್ರೀ ರೋಗ ಹಾಗೂ ಪ್ರಸೂತಿ ತಜ್ಞೆ ಆಗಿದ್ದು ಅಮ್ಮನ ಸಲಹೆ ಮೇರೆಗೆ ಅಂಡಾಣು ತೆಗೆದು ಶೇಖರಿಸಿ ಇಟ್ಟಿದ್ದರಂತೆ ಪ್ರಿಯಾಂಕ.
ನಾನು ಯಾರನ್ನು ಮದುವೆ ಆಗುತ್ತೇನೆ ಎಂಬುದು ನನಗೆ ಗೊತ್ತಿರಲಿಲ್ಲ. ಆದರೆ ನಿಕ್ ಜೋನಸ್ ಪರಿಚಯ ಆಗುವುದಕ್ಕೂ ಮುನ್ನವೇ ಅಮ್ಮ ಅಂಡಾಣುವನ್ನು ಶೇಖರಿಸುವಂತೆ ಸಲಹೆ ನೀಡಿದ್ದರು. ನನಗೆ ತಾಯಿ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿದ್ದರು. ನಾನು ಇನ್ನೂ ಸಾಧನೆ ಮಾಡಬೇಕಿತ್ತು. ವೃತ್ತಿ ಬದುಕಿನಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಬೇಕಿತ್ತು. 35 ವರ್ಷ ತುಂಬಿದ ನಂತರ ಗರ್ಭ ಧರಿಸುವುದು ಕಷ್ಟವಾದ್ದರಿಂದ ನನ್ನ ತಾಯಿ ಈ ಸಲಹೆ ನೀಡಿದರು. ನನಗೂ ಅದು ಸರಿ ಎನ್ನಿಸಿತು. ಆದ್ದರಿಂದ 30 ನೇ ವಯಸ್ಸಿಗೆ ಅಂಡಾಣು ಶೇಖರಿಸಿ ಇಟ್ಟಿದ್ದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.