logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ

ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ

Umesh Kumar S HT Kannada

Feb 23, 2024 06:06 AM IST

ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

  • ಕರ್ನಾಟಕ ಹವಾಮಾನ ಫೆ.23 ರಂದು ಬಹುತೇಕ ಒಣಹವೆ ಇರಲಿದೆ. ಕರಾವಳಿ, ಒಳನಾಡುಗಳ ಗ್ರಾಮಾಂತರ ಪ್ರದೇಶಗಳಲ್ಲಿ ಮುಂಜಾನೆ ಸ್ವಲ್ಪ ಹೊತ್ತು ತಂಪಾದ ವಾತಾವರಣ ಕಾಣಬಹುದು.  ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ಹವಾಮಾನ ಫೆ 23; ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಭಾಗಶಃ ಮೋಡ, ರಾಜ್ಯದಲ್ಲಿ ಒಣ ಹವೆ, ಉಷ್ಣಾಂಶ ಹೆಚ್ಚಳ ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಮುಂಜಾನೆ ವೇಳೆ ಮಂಜು, ತಂಪಾದ ವಾತಾವರಣ ಇರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಮತ್ತು ಮುಂಜಾನೆ ಸ್ವಲ್ಪ ತಂಪು ವಾತಾವರಣ ಇರಲಿದೆ. ಉಳಿದಂತೆ ರಾಜ್ಯದಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಶಿಯಸ್‌ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಮುಂದಿನ 24 ಗಂಟೆಗಳ ಅವಧಿಗೆ ರಾಜ್ಯದ ಮಳೆ ಮುನ್ಸೂಚನೆ ನೀಡಿರುವ ಬೆಂಗಳೂರು ಹವಾಮಾನ ಕೇಂದ್ರ, ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಬೇರೆ ಯಾವುದೇ ಮುನ್ನೆಚ್ಚರಿಕೆ ಇಲ್ಲ ಎಂದು ಹೇಳಿದೆ. ಅದೇ ರೀತಿ, ರಾಜ್ಯದ ಒಂದೆರಡು ಕಡೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಶಿಯಸ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಎಲ್ಲೂ ಮಳೆ ಬಿದ್ದ ವರದಿ ಇಲ್ಲ. ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಉಷ್ಣಾಂಶ 2.1 ಡಿಗ್ರಿ ಸೆಲ್ಶಿಯಸ್‌ನಿಂದ 4 ಡಿಗ್ರಿ ಸೆಲ್ಶಿಯಸ್ ತನಕ ಇಳಿಕೆಯಾಗಿದೆ. ಕರಾವಳಿ, ಒಳನಾಡಿನ ಹಲವು ಕಡೆ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ತಾಪಮಾನ 2.1 ಡಿಗ್ರಿ ಸೆಲ್ಶಿಯಸ್‌ನಿಂದ 4 ಡಿಗ್ರಿ ಸೆಲ್ಶಿಯಸ್ ತನಕ ಏರಿಕೆಯಾಗಿದೆ. ಅತಿ ಕಡಿಮೆ ಉಷ್ಣಾಂಶ 12.6 ಡಿಗ್ರಿ ಸೆಲ್ಶಿಯಸ್‌ ಬೆಳಗಾವಿ ವಿಮಾನ ನಿಲ್ದಾಣ ಪ್ರದೇಶದಲ್ಲಿ ದಾಖಲಾಗಿದೆ ಎಂದು ವರದಿ ಹೇಳಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಹವಾಮಾನ ಇಂದು (ಫೆ. 23)

ಬೆಂಗಳೂರು ನಗರ, ಬೆಂಗಳೂರುಗ್ರಾಮಾಂತರಹಾಗೂಸುತ್ತಮುತ್ತಜಿಲ್ಲೆಗಳಲ್ಲಿಶುಕ್ರ ವಾರ (ಫೆ 23) ಕೆಲವೆಡೆಮುಂಜಾನೆಮಂಜುಮುಸುಕಿದವಾತಾವರಣಇರಲಿದೆ. ಸ್ವಲ್ಪ ತಂಪುವಾತಾವರಣ ಕೂಡ ಇರಲಿದ್ದು, ಕೆಲವುಕಡೆಮೋಡಮುಸುಕಿದವಾತಾವರಣಇರಲಿದೆ ಎಂದುವರದಿಹೇಳಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇಂದು (ಫೆ. 23) ಗರಿಷ್ಠತಾಪಮಾನ 33 ಡಿಗ್ರಿಸೆಲ್ಶಿಯಸ್‌ ಮತ್ತುಕನಿಷ್ಠತಾಪಮಾನ 20 ಡಿಗ್ರಿಸೆಲ್ಶಿಯಸ್ಅನುಭವಕ್ಕೆಬರಲಿದೆ. ನಿನ್ನೆ (ಫೆ.22) 32.8 ಡಿಗ್ರಿಸೆಲ್ಶಿಯಸ್ಮತ್ತುಕನಿಷ್ಠ 21.8 ಡಿಗ್ರಿಸೆಲ್ಶಿಯಸ್ಇತ್ತು. ಅದೇರೀತಿಬೆಂಗಳೂರುಗ್ರಾಮಾಂತರದಲ್ಲಿ ಗರಿಷ್ಠತಾಪಮಾನ 33 ಡಿಗ್ರಿಸೆಲ್ಶಿಯಸ್‌ ಮತ್ತುಕನಿಷ್ಠತಾಪಮಾನ 20 ಡಿಗ್ರಿಸೆಲ್ಶಿಯಸ್ಇರಲಿದೆ. ನಿನ್ನೆ (ಫೆ. 21) ತಾಪಮಾನ 33.1 ಡಿಗ್ರಿಸೆಲ್ಶಿಯಸ್ ಮತ್ತು ಕನಿಷ್ಠ ತಾಪಮಾನ 21.2 ಡಿಗ್ರಿ ಸೆಲ್ಶಿಯಸ್‌ ಇತ್ತು ಎಂದು ಹವಾಮಾನಇಲಾಖೆತಿಳಿಸಿದೆ.

ಪ್ರಮುಖ ನಗರಗಳಲ್ಲಿ ಈಗಿನ (ಫೆ. 23 ರ ಬೆಳಗ್ಗೆ 6 ಗಂಟೆಗೆ) ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಫೆ.23 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 24.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 48)

ಮಂಗಳೂರು - 25.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 78)

ಚಿತ್ರದುರ್ಗ – 23.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 51)

ಗದಗ – 24.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 53)

ಹೊನ್ನಾವರ - 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61)

ಕಲಬುರಗಿ - 26 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 44)

ಬೆಳಗಾವಿ - 31.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 19)

ಕಾರವಾರ – 30.2 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 65)

ರಾಜ್ಯದ ಪ್ರಮುಖ ಕೃಷಿ ಸಲಹೆಗಳು

ಭಾರತೀಯ ಹವಾಮಾನ ಇಲಾಖೆ ಕರ್ನಾಟಕದ ಕೃಷಿಕರಿಗೆ ಫೆ.25ರ ತನಕ ಅನ್ವಯವಾಗುವಂತೆ ನೀಡಿರುವ ಪ್ರಮುಖ ಕೃಷಿ ಸಲಹೆ ಹೀಗಿದೆ.

• ಮುಂಜಾನೆಯ ಸಮಯದಲ್ಲಿ ತಂಪಾದ ವಾತಾವರಣದಿಂದ ರೋಗಗಳು ಸಂಭವಿಸುವ ಸಾಧ್ಯತೆಗಳಿವೆ, ಆದ್ದರಿಂದ ರೈತರು ಬೆಳೆದ ಬೆಳೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.

• ಚಾಲ್ತಿಯಲ್ಲಿರುವ ಶುಷ್ಕ ಹವಾಮಾನ ಮತ್ತು ಮುನ್ಸೂಚನೆಯ ಶುಷ್ಕ ಹವಾಮಾನವು ಕೊಯ್ದು ಮಾಡಿದ ಬೆಳೆಗಳನ್ನು ಬಿಸಿಲಿನಲ್ಲಿ ಒಣಗಿಸಲು ಅನುಕೂಲಕರವಾಗಿದೆ. ಉಗ್ರಾಣದಲ್ಲಿ ಕೀಟ ಹಾನಿಯನ್ನು ಕಡಿಮೆ ಮಾಡಲು ಸರಿಯಾದ ತೇವಾಂಶದ ಶೇಕಡಾವಾರು ಪ್ರಮಾಣವನ್ನು ಉಳಿಸಿಕೊಳ್ಳುವ ಮೂಲಕ ಧಾನ್ಯಗಳನ್ನು ಸರಿಯಾಗಿ ಒಣಗಿಸಲು ರೈತರಿಗೆ ಸಲಹೆ ನೀಡಲಾಗುತ್ತದೆ. ಹತ್ತಿ, ಕಬ್ಬು, ರಾಬಿ ಸೋರ್ಗಮ್, ಕಡ್ಲೆಕಾಳು, ಈರುಳ್ಳಿ ಮತ್ತು ಮೆಣಸಿನಕಾಯಿಗಳ ಕೊಯ್ದು ಮುಂದುವರಿಸಿ.

• ಕಾಳು ತುಂಬುವ ಹಂತಗಳಲ್ಲಿ ರಾಬಿ ಸೋರ್ಗಮ್ ಧಾನ್ಯಗಳ ಸರಿಯಾದ ಅಭಿವೃದ್ಧಿಗಾಗಿ ಒಂದು ಅಥವಾ ಎರಡು ಸಲ ರಕ್ಷಣಾತ್ಮಕ ನೀರಾವರಿ ಒದಗಿಸಿ ಮತ್ತು ಕಬ್ಬಿಗೆ ನೀರಾವರಿಯನ್ನು ಮಾಡಿ.

• ಮಣ್ಣಿನ ತೇವಾಂಶದ ಅವಿಯಾಗುವ ನಷ್ಟವನ್ನು ತಪ್ಪಿಸಲು ಬೆಳೆ ಕ್ಷೇತ್ರದಲ್ಲಿ ಮಲ್ಟಿಂಗ್‌ನಂತಹ ತೇವಾಂಶ ಸಂರಕ್ಷಣೆ ಅಭ್ಯಾಸವನ್ನು ಅಳವಡಿಸಿಕೊಳ್ಳಿ.

• ಮಲೆನಾಡು ಪ್ರದೇಶದಲ್ಲಿ ಭತ್ತದ ನರ್ಸರಿ ತಯಾರಿಯನ್ನು ಮತ್ತು ಹೆಸರುಬೇಳೆ ಹಾಗೂ ಕರಿಬೇವಿನ ಬಿತ್ತನೆಯನ್ನು ಕೈಗೊಳ್ಳಿ.

----------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ