Entertainment News in Kannada Live December 15, 2024: ವ್ಯಕ್ತಿ ಚಿತ್ರ: ವಾಹ್ ಉಸ್ತಾದ್ ವಾಹ್ ಇನ್ನು ನೆನಪು ಮಾತ್ರ; ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಜೀವನ ಪಥ, ಪ್ರಶಸ್ತಿ ಪುರಸ್ಕಾರ ವಿವರ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 15 Dec 202406:25 PM IST
Zakir Hussain Death: ತಬಲಾ ಮೇಲೆ ಭಾರತದ ತಬಲಾ ಮಾಂತ್ರಿಕ ಉಸ್ತಾದ್ ಜಾಕಿರ್ ಹುಸೇನ್ ಅವರ ಕೈ ಬೆರಳುಗಳ ಕುಣಿತದ ಸದ್ದು ಕಿವಿಯೊಳಗೆ ಅನುರಣಿಸುತ್ತಿದ್ದರೂ ಅದು ಕ್ಷೀಣವಾಗಿದೆ. ವಾಹ್ ಉಸ್ತಾದ್ ವಾಹ್ ಇನ್ನು ನೆನಪು ಮಾತ್ರ. ಜಾಕಿರ್ ಹುಸೇನ್ ವಿಧಿವಶರಾದರು. ಅವರ ಜೀವನ ಪಥ, ಪ್ರಶಸ್ತಿ ಪುರಸ್ಕಾರ ವಿವರ ಇಲ್ಲಿದೆ.
Sun, 15 Dec 202404:36 PM IST
- Zakir Hussain Passed Away: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 73 ವರ್ಷದ ಜಾಕಿರ್ ಹುಸೇನ್ ಅವರು ಅಮೆರಿಕದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
Sun, 15 Dec 202404:04 PM IST
- Max Movie Song: ಡಿಸೆಂಬರ್ 25ರಂದು ಕ್ರಿಸ್ಮಸ್ಗೆ ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ.
Sun, 15 Dec 202411:26 AM IST
- Bigg Boss Kannada 11: ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಮನೆಯಿಂದ ಹೊರ ನಡೆದಿದ್ದಾರೆ. ಈ ವಾರದ ನಾಮಿನೇಷನ್ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಿಯೂ ಇತ್ತು. ಆದರೆ, ನಾಮಿನೇಷನ್ಗೂ ಮೊದಲೇ ಗೋಲ್ಡ್ ಸುರೇಶ್ ಕುಟುಂಬದಲ್ಲಿ ಸಮಸ್ಯೆ ಎದುರಾಗಿದ್ದರಿಂದ ಮನೆಯಿಂದ ಹೊರ ನಡೆದಿದ್ದಾರೆ.
Sun, 15 Dec 202410:48 AM IST
- ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಾಗಿತ್ತು. ಜೈಲು ಶಿಕ್ಷೆಯೂ ಪ್ರಕಟವಾಗಿ, ಕೊನೇ ಕ್ಷಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿತ್ತು. ಈ ಘಟನಾವಳಿ ಹಿಂದೆ ರಾಜಕೀಯ ಕೈವಾಡ ಇದೆ ಎಂದೇ ಹೇಳಲಾಗಿತ್ತು. ಈಗ ಇದೇ ಬೆಳವಣಿಗೆಗಳ ಬಗ್ಗೆ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದಾರೆ.
Sun, 15 Dec 202408:33 AM IST
- KFCC Election Result: ಈ ಸಲದ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಪ್ರದರ್ಶಕರ ವಲಯ ಮೀಸಲಾಗಿತ್ತು. ಅದರಂತೆ, ನಿರ್ಮಾಪಕ, ವಿತರಕ ಮತ್ತು ಪ್ರದರ್ಶಕ ವಲಯಗಳಿಂದ ಚಲನಚಿತ್ರ ವಾಣಿಜ್ಯ ಮಂಡಳಿಯ ವಿವಿಧ ಸ್ಥಾನಗಳಿಗೆ ಒಟ್ಟು 104 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Sun, 15 Dec 202407:37 AM IST
- CM Siddaramaiah: ಫೆಬ್ರವರಿ 16ರಂದು ಬಾಳ ಬಂಧನಕ್ಕೆ ಕಾಲಿಡಲಿರುವ ನಟ ಧನಂಜಯ್ ಮತ್ತು ಸಂಗಾತಿ ಧನ್ಯತಾ ಜೋಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದೆ.
Sun, 15 Dec 202406:40 AM IST
- ಸಿನಿಮಾ ಒಳ ಹೊರಗನ್ನು ಚೆನ್ನಾಗಿ ಬಲ್ಲವರಾದ ಹಂಸಲೇಖ, ಈ ಸುದೀರ್ಘ ಸಿನಿಮಾ ಪಯಣದಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿದ್ದಾರೆ. ಹಾಡುಗಳಿಗೆ ಸಂಗೀತ ನೀಡುವುದರಿಂದ ಹಿಡಿದು, ಸಾಹಿತ್ಯ, ಕಥೆ, ಸಂಭಾಷಣೆಯನ್ನೂ ನೀಡಿದ್ದಾರೆ. ಆದರೆ, ಸಿನಿಮಾ ನಿರ್ದೇಶನಕ್ಕೆ ಇಳಿದಿರಲಿಲ್ಲ. ಈಗ ಸದ್ದಿಲ್ಲದೆ ತಮ್ಮ 73ನೇ ವಯಸ್ಸಿನಲ್ಲಿ ಹೊಸ ಸಿನಿಮಾವೊಂದನ್ನು ಘೋಷಣೆ ಮಾಡಿದ್ದಾರೆ.
Sun, 15 Dec 202405:25 AM IST
- Rakshit Shetty: ರಕ್ಷಿತ್ ಶೆಟ್ಟಿಯ ರಿಚರ್ಡ್ ಆಂಟನಿ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಮುಗಿದಿರಬೇಕಿತ್ತು. ಆದರೆ, ಅಚ್ಚರಿಯ ವಿಚಾರ ಏನೆಂದರೆ ಈ ಸಿನಿಮಾ ಘೋಷಣೆಯಾಗಿಯೇ ಮೂರು ವರ್ಷ ಕಳೆದರೂ ಇನ್ನೂ ಸೆಟ್ಟೇರಿಲ್ಲ.
Sun, 15 Dec 202404:53 AM IST
- Colors Kannada serials: ಡಿಸೆಂಬರ್ 23ರಿಂದ ಕಲರ್ಸ್ ಕನ್ನಡದಲ್ಲಿ ನೂರು ಜನ್ಮಕೂ ಹೊಸ ಧಾರಾವಾಹಿ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ಸಲುವಾಗಿ ಶ್ರೀಗೌರಿ ಸೀರಿಯಲ್ ಕೊನೆಯಾಗಲಿದೆ. ನಾಳೆಯಿಂದ ಒಂದು ವಾರದಲ್ಲಿ ಶ್ರೀಗೌರಿ ಧಾರಾವಾಹಿಯ ಕೊನೇ ಏಪಿಸೋಡ್ಗಳು ಪ್ರಸಾರವಾಗಲಿವೆ.
Sun, 15 Dec 202403:56 AM IST
- Daali Dhananjaya Wedding Invitation: ಫೋನ್ ಬಳಕೆ ಕಡಿಮೆ ಇದ್ದ ಹಿಂದಿನ ಕಾಲಘಟ್ಟದಲ್ಲಿ ಪತ್ರಗಳೇ ಸಂವಹನದ ಕೇಂದ್ರಬಿಂದುವಾಗಿದ್ದವು. ಈಗ ಅದೇ ಪರಿಕಲ್ಪನೆಯಲ್ಲಿ ಮದುವೆ ಆಮಂತ್ರಣವನ್ನು ರೆಡಿ ಮಾಡಿದೆ ಧನಂಜಯ್ ಧನ್ಯತಾ ಜೋಡಿ. ಆ ಪತ್ರದ ಜತೆಗೆ ಮದುವೆಯ ಸ್ಥಳ ಮತ್ತು ದಿನಾಂಕವನ್ನೂ ಪ್ರಕಟಿಸಿದ್ದಾರೆ.
Sun, 15 Dec 202403:12 AM IST
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 14ರ ಎಪಿಸೋಡ್ನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಡಿವೋರ್ಸ್ ಪೇಪರ್ಗೆ ಸಹಿ ಹಾಕಿದ್ದಕ್ಕೆ ಸುನಂದಾ ಭಾಗ್ಯಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾಳೆ. ಅಪ್ಪ ಅಮ್ಮನ ಪರಿಸ್ಥಿತಿ ನೆನಪಿಸಿಕೊಂಡು ಗುಂಡಣ್ಣನಿಗೆ ಬಹಳ ನೋವಾಗುತ್ತದೆ. ಇದೇ ಬೇಸರದಿಂದ ಗುಂಡಣ್ಣ ಜ್ವರದಿಂದ ಬಳಲುತ್ತಿದ್ದಾನೆ.