O Muddu Manase: ಓ ಮುದ್ದು ಮನಸೆ ಆಗಿ ಬದಲಾಯ್ತು ಮುದ್ದು ಮಣಿಗಳು; ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ಇಂದಿನಿಂದ ರೋಚಕ ತಿರುವು
ಹೊಸ ಅಧ್ಯಾಯವು ಜಾಹ್ನವಿಯ ಸುತ್ತ ಸುತ್ತುವರೆಯುತ್ತದೆ. ದೃಷ್ಟಿಯ ಸಾವಿನಿಂದ ಮನ ನೊಂದ ಜಾಹ್ನವಿ ದೇವರ ಬಳಿ ತನ್ನ ನೋವನ್ನು ವ್ಯಕ್ತಪಡಿಸುತ್ತಾಳೆ. ಅದೇ ಸಂದರ್ಭದಲ್ಲಿ ಆಕೆಗೆ ನದಿಯಲ್ಲಿ ಗಾಯಗೊಂಡಿರುವ ಮಗುವೊಂದು ಕಾಣಿಸುತ್ತದೆ. ಆ ಮಗುವಿಗೆ ಚಿಕಿತ್ಸೆ ನೀಡಿ ಅದನ್ನು ಮನೆಗೆ ತಂದು ಸಾಕುತ್ತಾಳೆ
ಕನ್ನಡ ಕಿರುತೆರೆಯಲ್ಲಿ ಹೊಸತನಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದು ಮಣಿಗಳು' ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ. ಇದೀಗ ಈ ಧಾರಾವಾಹಿ ಹೊಸ ತಿರುವಿನೊಂದಿಗೆ ಹೊಸದೊಂದು ಅಧ್ಯಾಯಕ್ಕೆ ಕಾಲಿಡುತ್ತಿದೆ.
ಟ್ರೆಂಡಿಂಗ್ ಸುದ್ದಿ
ಈ ಧಾರಾವಾಹಿ 2018 ರಲ್ಲಿ 'ಮುದ್ದುಲಕ್ಷ್ಮಿ' ಹೆಸರಿನಲ್ಲಿ ಆರಂಭವಾಗಿತ್ತು. ಸದ್ಯಕ್ಕೆ ಇದು ಮುದ್ದು ಮಣಿಗಳು ಎಂಬ ಹೆಸರಿನಲ್ಲಿ ಪ್ರಸಾರವಾಗುತ್ತಿದ್ದು ಇಂದಿನಿಂದ ( ಮೇ 22) 'ಓ ಮುದ್ದುಮನಸೆ' ಹೆಸರಿನಿಂದ ಪ್ರಸಾರ ಆರಂಭಿಸಲಿದೆ.
ಧಾರಾವಾಹಿಯು ಅದ್ಭುತ ಕಥೆಯಿಂದಾಗಿ ಸಾವಿರ ಸಂಚಿಕೆಗಳನ್ನು ದಾಟಿ ಪ್ರೇಕ್ಷಕರ ಮನಗೆದ್ದಿತ್ತು. 'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ಇತ್ತೀಚಿಗಷ್ಟೇ ಮುದ್ದುಲಕ್ಷ್ಮಿಯ ಪುನರ್ಜನ್ಮ ಜಾಹ್ನವಿಯ ಆಗಮನವಾಗಿತ್ತು. ರೂಪದಲ್ಲಿ ಲಕ್ಷ್ಮಿಯಂತೆ ಕಾಣುವ ಜಾಹ್ನವಿಯಲ್ಲಿ ದೃಷ್ಟಿ ಹಾಗೂ ಭೂಮಿ ತಾಯಿಯ ಪ್ರೀತಿಯನ್ನು ಕಾಣುತ್ತಿದ್ದರು. ಆದರೆ ದುರದೃಷ್ಟವಶಾತ್ ಕುತಂತ್ರಿ ಶಾರ್ವರಿಯ ದಾಳಿಗೆ ದೃಷ್ಟಿ ಪ್ರಾಣ ಕಳೆದುಕೊಳ್ಳುತ್ತಾಳೆ. ಇಲ್ಲಿಂದ ಧಾರಾವಾಹಿಯು ಹೊಸ ತಿರುವು ಪಡೆದುಕೊಳ್ಳುತ್ತದೆ.
ಹೊಸ ಅಧ್ಯಾಯವು ಜಾಹ್ನವಿಯ ಸುತ್ತ ಸುತ್ತುವರೆಯುತ್ತದೆ. ದೃಷ್ಟಿಯ ಸಾವಿನಿಂದ ಮನ ನೊಂದ ಜಾಹ್ನವಿ ದೇವರ ಬಳಿ ತನ್ನ ನೋವನ್ನು ವ್ಯಕ್ತಪಡಿಸುತ್ತಾಳೆ. ಅದೇ ಸಂದರ್ಭದಲ್ಲಿ ಆಕೆಗೆ ನದಿಯಲ್ಲಿ ಗಾಯಗೊಂಡಿರುವ ಮಗುವೊಂದು ಕಾಣಿಸುತ್ತದೆ. ಆ ಮಗುವಿಗೆ ಚಿಕಿತ್ಸೆ ನೀಡಿ ಅದನ್ನು ಮನೆಗೆ ತಂದು ಸಾಕುತ್ತಾಳೆ. ಆದರೆ ಆ ಮಗುವಿನ ಜೀವ ಆಪತ್ತಿನಲ್ಲಿರುತ್ತೆ, ಕೆಲವರು ಆ ಮಗುವಿನ ಸಾವಿಗೆ ಸಂಚು ರೂಪಿಸುತ್ತಿರುತ್ತಾರೆ. ಬದುಕಿನಲ್ಲಿ ಭರವಸೆ ಕಳೆದುಕೊಂಡ ಜಾಹ್ನವಿಯ ಜೀವನದಲ್ಲಿ ಇನ್ಮುಂದೆ ಹೊಸ ಪರ್ವ ಶುರುವಾಗಲಿದೆ. ಇನ್ನು ಮುದ್ದುಲಕ್ಷ್ಮಿ ಧಾರಾವಾಹಿಯ ಖ್ಯಾತಿಯ ಧ್ರುವಂತ್ ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದು ಡಾ. ಮನಸ್ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಹಾಗಿದ್ರೆ ನಿಜವಾಗಿಯೂ ಮನಸ್, ಧ್ರುವಂತ್ನ ಪುನರ್ಜನ್ಮವೇ.. ? ಜಾಹ್ನವಿಗೆ ಸಿಕ್ಕಿರುವ ಮಗು ಯಾರದ್ದು..? ಜಾಹ್ನವಿ ಹಾಗು ಮನಸ್ನನ್ನು ಹೃದಯ್ ಹೇಗೆ ಒಂದು ಮಾಡ್ತಾನೆ ಎಂಬುದೇ 'ಓ ಮುದ್ದುಮನಸೆ' ಧಾರಾವಾಹಿಯ ಮುಖ್ಯ ಕಥಾ ಹಂದರ. ಓ ಮುದ್ದುಮನಸೆ ಧಾರಾವಾಹಿ ಸೋಮವಾರದಿಂದ ರಾತ್ರಿ 7.30 ಕ್ಕೆ ಹೊಸ ಅಧ್ಯಾಯದೊಂದಿಗೆ ಹೊಸದೊಂದು ಟೈಟಲ್ನಲ್ಲಿ ವೀಕ್ಷಕರನ್ನು ರಂಜಿಸಲು ನಿಮ್ಮ ಮುಂದೆ ಬರುತ್ತಿದೆ.
ಮತ್ತಷ್ಟು ಮನರಂಜನೆ ಸುದ್ದಿಗಳು
ಒಟಿಟಿಗೆ ಬಂದೇ ಬಿಡ್ತು ಜಗ್ಗೇಶ್ ರಾಘವೇಂದ್ರ ಸ್ಟೋರ್ಸ್ ಸಿನಿಮಾ; ಸದ್ದಿಲ್ಲದೆ ಶುರುವಾಯ್ತು ಸ್ಟ್ರೀಮಿಂಗ್
ರಾಜ್ಯದಲ್ಲಿ ಚುನಾವಣೆ ಬಿರುಸುಗೊಳ್ಳುವುದಕ್ಕೂ ಮುನ್ನ ಅಂದರೆ ಏ. 28ರಂದು ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಕೇವಲ 20 ದಿನಕ್ಕೆ ನೇರವಾಗಿ ಒಟಿಟಿಯಲ್ಲಿ ಸ್ಕ್ರೀಮಿಂಗ್ ಆರಂಭಿಸಿದೆ. ಮೇ 18ರ ಮಧ್ಯರಾತ್ರಿ ಅಮೆಜಾನ್ ಪ್ರೈಂ (Amazon Prime Video) ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭವಾಗಿದೆ. ಚಿತ್ರನಿರ್ಮಾಣ ಸಂಸ್ಥೆಯಾಗಲಿ, ನಾಯಕ, ನಿರ್ದೇಶಕರಾಗಲಿ ಯಾವುದೇ ಸುಳಿವು ನೀಡದೇ, ನೇರವಾಗಿ ಪ್ರಸಾರ ಆರಂಭಿಸಿದೆ. ಪೂರ್ತಿ ಓದಲು ಇಲ್ಲಿ ಕ್ಲಿಕ್ ಮಾಡಿ.
ದೇವತೆಗಳು ರಾಜರು ಬಹುಪತ್ನಿತ್ವ ಅನುಸರಿಸುತ್ತಿದ್ದರು, ನಾನು ಪವಿತ್ರಾ ಲಿವ್ ಇನ್ ರಿಲೇಶನ್ನಲ್ಲಿದ್ದೇವೆ; ನರೇಶ್ ಕೃಷ್ಣ
ಟಾಲಿವುಡ್ ನಟ ನರೇಶ್ ಕೃಷ್ಣ ಹಾಗೂ ಪವಿತ್ರಾ ಲೋಕೇಶ್ ಅಭಿನಯದ ಮತ್ತೆ ಮದುವೆ ಸಿನಿಮಾ ಮೇ 26ರಂದು ತೆರೆ ಕಾಣುತ್ತಿದೆ. ಪವಿತ್ರಾ ಹಾಗೂ ನರೇಶ್ ಸದ್ಯಕ್ಕೆ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಬುಧವಾರ, ಈ ಜೋಡಿ ಬೆಂಗಳೂರಿಗೆ ಆಗಮಿಸಿತ್ತು. ನಗರದ ಖಾಸಗಿ ಹೋಟೆಲ್ನಲ್ಲಿ ತಮ್ಮ ಸಿನಿಮಾ ಬಗ್ಗೆ ಮಾತನಾಡಲು ಸುದ್ದಿಗೋಷ್ಠಿ ಏರ್ಪಡಿಸಿದ್ದರು. ಸಂಪೂರ್ಣ ಸ್ಟೋರಿ ಓದಲು ಈ ಲಿಂಕ್ ಒತ್ತಿ.