ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Express: ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಭರವಸೆ

Vande Bharat Express: ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಭರವಸೆ

Kalaburagi-Bengaluru: ಕಲಬುರಗಿ ಸಂಸದ ಡಾ.ಉಮೇಶ ಜಾಧವ್​​ ಅವರ ಕೋರಿಕೆಯ ಮೇರೆಗೆ ಕಲಬುರಗಿ - ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಶೀಘ್ರ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಭರವಸೆ ನೀಡಿದ್ದಾರೆ

ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾರಂಭಿಸಲು ಸಚಿವ ಅಶ್ವಿನಿ ವೈಷ್ಣವ್​​ ಭರವಸೆ
ಕಲಬುರಗಿ-ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾರಂಭಿಸಲು ಸಚಿವ ಅಶ್ವಿನಿ ವೈಷ್ಣವ್​​ ಭರವಸೆ

ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಮಾರ್ಗವಾಗಿ ವಂದೇ ಭಾರತ್‌ ಎಕ್ಸಪ್ರೆಸ್‌ ರೈಲು ಪ್ರಾರಂಭಿಸಬೇಕೆಂಬ ಬೇಡಿಕೆಯಿದೆ. ಕಲಬುರಗಿ ಸಂಸದ ಡಾ.ಉಮೇಶ ಜಾಧವ್​​ ಅವರ ಕೋರಿಕೆಯ ಮೇರೆಗೆ ಕಲಬುರಗಿ - ಬೆಂಗಳೂರು ನಡುವೆ ವಂದೇ ಭಾರತ್‌ ರೈಲು ಶೀಘ್ರ ಪ್ರಾರಂಭಿಸಲು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​ ಭರವಸೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶುಕ್ರವಾರ (ಜುಲೈ 14) ದೆಹಲಿಯಲ್ಲಿ ಕಲಬುರಗಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಯೊಂದಿಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್​ ಅವರನ್ನು ಕಲಬುರಗಿ ಸಂಸದ ಡಾ. ಉಮೇಶ್ ಜಾಧವ ಭೇಟಿ ಮಾಡಿದರು.

ಕಲಬುರಗಿ ಮತ್ತು ಬೆಂಗಳೂರು ಮಧ್ಯೆ ಹೊಸ ರೈಲು ನಡೆಸುವುದು, ಮುಂಬೈ-ಸೋಲಾಪುರ್ ವಂದೇ ಭಾರತ್ ಎಕ್ಸಪ್ರೆಸ್‌ ಅನ್ನು ಕಲಬುರಗಿವರೆಗೆ ವಿಸ್ತರಿಸುವುದು, ಇಲ್ಲವಾದರೆ ಬೆಂಗಳೂರು-ಕಲಬುರಗಿ ಮಧ್ಯೆ ವಂದೇ ಭಾರತ್ ರೈಲನ್ನು ಪ್ರಾರಂಭಗೊಳಿಸುವುದರ ಬಗ್ಗೆ ಚರ್ಚಿಸಿದರು.

ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ವಿವಿಧ ರೈಲ್ವೆ ಸಂಬಂಧಿತ ಪ್ರತಿಭಟನೆಗಳನ್ನು ಉಲ್ಲೇಖಿಸಿದರು ಮತ್ತು ಕಲಬುರಗಿ-ಬೆಂಗಳೂರು ಹೋಗುವ ರೈಲಿನ ಬೋಗಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವ ಕುರಿತು ದಿನಪತ್ರಿಕೆಗಳಲ್ಲಿ ಬಂದಿರುವ ಸುದ್ದಿಗಳ ಬಗ್ಗೆ ಪ್ರಸ್ತಾಪಿಸಿದರು. ಇತ್ತೀಚಿನ ತಿಂಗಳಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಕಲಬುರಗಿ-ಬೆಂಗಳೂರು ಮಧ್ಯೆ ಪ್ರಯಾಣುಸುತ್ತಿರುವ ಮಾಹಿತಿಯನ್ನು ಸಚಿವರ ಗಮನಕ್ಕೆ ತಂದರು.

ಹಾಗೆಯೆ ಜಿಲ್ಲೆಯ ಶಹಾಬಾದ್ ಸ್ಟೇಷನ್​​ನಲ್ಲಿ ಈ ಕೆಳಕಂಡ ಐದು ರೈಲುಗಳ ನಿಲ್ಲಿಸುವುದರ ಬಗ್ಗೆ ಚರ್ಚಿಸಿದರು. ಚೆನ್ನೈ-ಎಗ್ಮೋರ್ ಎಕ್ಸ್​​ಪ್ರೆಸ್‌, ಮುಂಬೈ-ನಾಗರ್ಕೋಯಿಲ್ ಎಕ್ಸ್​ಪ್ರೆಸ್‌, ಕೊನಾರ್ಕ್ ಎಕ್ಸ್​ಪ್ರೆಸ್‌, ಮುಂಬೈ -ಹೈದರಾಬಾದ್ ಎಕ್ಸ್​ಪ್ರೆಸ್‌, ಹೈದರಾಬಾದ್-ವಿಜಯಪುರ ಎಕ್ಸ್​​ಪ್ರೆಸ್‌, ಜಾಲನಾ ತಿರುಪತಿ ಸ್ಪೆಷಲ್ ಎಕ್ಸ್​ಪ್ರೆಸ್‌, ಸೋಲಾಪುರ್- ಮುಂಬೈ ಎಕ್ಸ್​​ಪ್ರೆಸ್‌, ಸೋಲಾಪುರ್- ತಿರುಪತಿ ಸ್ಪೆಷಲ್ ಎಕ್ಸ್​​​ಪ್ರೆಸ್ ರೈಲುಗಳನ್ನು ಕಡ್ಡಾಯವಾಗಿ ಕಮಲಾಪುರ್ ರೈಲ್ವೆ ಸ್ಟೇಷನ್​​​​​ನಲ್ಲಿ ನಿಲ್ಲಿಸಲು ಮನವಿ ಮಾಡಿದರು.

ಅದೇ ರೀತಿ ಚಿತ್ತಾಪುರ ರೈಲ್ವೆ ಸ್ಟೇಷನ್​​​​ನಲ್ಲಿ ಗಾಡಿ ಸಂಖ್ಯೆ 07003/04 ನ್ನು ನಿಲ್ಲಿಸಲು ಕೋರಿದರು. ಕೋವಿಡ್ ಮುಂಚೆ ನಡೆಯುವ ಎಲ್ಲಾ ರೈಲುಗಳನ್ನು ಪುನಃ ಸ್ಥಾಪನೆಗೊಳಿಸಲು ಮನವಿ ಮಾಡಿದರು. ಅದರಲ್ಲಿ ವಿಶೇಷವಾಗಿ ಸೋಲಾಪುರ್ -ಕಲಬುರಗಿ ಗುಂತಕಲ್ ಡೆಮೋ (DEMU), ಸಿಕಂದರಾಬಾದ್ -ಚಿತ್ತಾಪುರ ಮೇಮು (MEMU) ಮತ್ತು ಫಲಕನುಮಾವಾಡಿ -ಕಾಚಿಗುಡ ಎಕ್ಸ್​​ಪ್ರೆಸ್‌ನ್ನು ಕಲಬುರಗಿ ವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಶೀಘ್ರವೇ ಕಲಬುರಗಿ-ಬೆಂಗಳೂರು ಮಧ್ಯೆ ರೈಲು ಶುರು ಮಾಡುವ ಬಗ್ಗೆ ಭರವಸೆ ನೀಡಿದರು. ಹಾಗೆಯೇ ಸಂಸದರು ಕೋರಿದ ವಿವಿಧ ಬೇಡಿಕೆಗಳಿಗೆ ಶೀಘ್ರವೇ ಅನುಷ್ಠಾನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದರು.

ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ

IPL_Entry_Point