ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಸಚಿವ ಕೆಎನ್ ರಾಜಣ್ಣ ಅವರು ರಾಜಕೀಯದಿಂದ ನಿವೃತ್ತರಾಗುತ್ತೇನೆ ಎಂದು ಹೇಳುವುದು ಇದೇ ಮೊದಲಲ್ಲ. ಆದಾಗ್ಯೂ ಈ ಹೇಳಿಕೆಗಳ ನಡುವೆ, ತಮ್ಮ 75ನೇ ಹುಟ್ಟುಹಬ್ಬದ ನಿಮಿತ್ತ ಮನೆಯಲ್ಲೇ ಆಯೋಜಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ರಾಜಣ್ಣ ಆಡಿದ ಮಾತು ಬಹಳ ಆತ್ಮವಿಶ್ವಾಸದಿಂದ ಕೂಡಿತ್ತು. (ವಿಶ್ಲೇಷಣೆ - ಈಶ್ವರ್, ತುಮಕೂರು)