Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja: ಸೆಪ್ಟೆಂಬರ್ 17 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja 2024: ಹಿಂದೂ ಧರ್ಮದಲ್ಲ, ವಿಶ್ವಕರ್ಮ ದೇವರನ್ನು ದೇವರುಗಳು ಮತ್ತು ದೇವತೆಗಳ ಕುಶಲಕರ್ಮಿ ಎಂದು ಕರೆಯಲಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಪ್ರತಿವರ್ಷ ವಿಶ್ವಕರ್ಮ ಪೂಜೆಯ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸಲಾಗುತ್ತದೆ.

Vishwakarma Puja: ಸೆಪ್ಟೆಂಬರ್ 16 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ
Vishwakarma Puja: ಸೆಪ್ಟೆಂಬರ್ 16 ರಂದು ರವಿ ಯೋಗ, ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ಮಾಡಿ; ಈ ಲಾಭಗಳನ್ನ ಪಡೆಯಿರಿ

Vishwakarma Puja 2024: ಜೀವನದಲ್ಲಿ ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ವಿಶ್ವಕರ್ಮ ಪೂಜೆ ಬಹಳ ಮುಖ್ಯ. ಬ್ರಹ್ಮಾಂಡದ ಸೃಷ್ಟಿಯಲ್ಲಿ ಭಗವಾನ್ ವಿಶ್ವಕರ್ಮ ಬ್ರಹ್ಮಾಜಿಗೆ ಸಹಾಯ ಮಾಡಿದರು ಎಂದು ನಂಬಲಾಗಿದೆ. ಭಗವಾನ್ ವಿಶ್ವಕರ್ಮನನ್ನು ವಿಶ್ವದ ಮೊದಲ ಕುಶಲಕರ್ಮಿ ಎಂದು ಪರಿಗಣಿಸಲಾಗಿದೆ. ಈ ದಿನ ಕಲಾವಿದರು, ಉದ್ಯಮಿಗಳು ಹಾಗೂ ಕುಶಲಕರ್ಮಿಗಳಿಗೆ ಬಹಳ ಮಹತ್ವದ್ದಾಗಿದೆ. ದೃಕ್ ಪಂಚಾಂಗದ ಪ್ರಕಾರ, 2024 ರ ಸೆಪ್ಟೆಂಬರ್ 17 ರಂದು ರವಿ ಯೋಗ ಮತ್ತು ಸುಕರ್ಮ ಯೋಗದಲ್ಲಿ ವಿಶ್ವಕರ್ಮ ಪೂಜೆ ನಡೆಯಲಿದೆ. ಈ ದಿನ ವಿಶ್ವಕರ್ಮನನ್ನು ಬಟ್ಟೆ, ಆಯುಧಗಳಿಂದ ಅಲಂಕರಿಸಲಾಗುತ್ತದೆ. ವಿಶ್ವಕರ್ಮ ದೇವರ ಪೂಜಾ ವಿಧಾನ ಸೇರಿದಂತೆ ಆಸಕ್ತಿರ ಮಾಹಿತಿ ಇಲ್ಲಿ ನೀಡಲಾಗಿದೆ.

ಜ್ಯೋತಿಷಿ ಪಂಡಿತ್ ವಾಗೀಶ್ವರಿ ಪ್ರಸಾದ್ ಅವರ ಪ್ರಕಾರ, 2024 ರ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ಪೂಜೆ ನಡೆಯಲಿದೆ. ಈ ನಿರ್ದಿಷ್ಟ ದಿನದಂದು ಕುಶಲಕರ್ಮಿಗಳು, ಬಡಗಿಗಳು, ಯಂತ್ರೋಪಕರಣಗಳು, ಕಮ್ಮಾರರು ಹಾಗೂ ಕಾರ್ಮಿಕರು ವಿಶ್ವಕರ್ಮನನ್ನು ಪೂಜಿಸುತ್ತಾರೆ. ವಿಶ್ವಕರ್ಮ ಪೂಜೆಯ ಸರಳ ವಿಧಾನವನ್ನು ತಿಳಿದುಕೊಳ್ಳೋಣ.

ವಿಶ್ವಕರ್ಮ ದೇವರ ಆರಾಧನ

  • ವಿಶ್ವಕರ್ಮ ಪೂಜೆಯ ದಿನದಂದು ಬೆಳಿಗ್ಗೆ ಬೇಗನೆ ಎದ್ದೇಳಬೇಕು
  • ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ
  • ದೇವರ ಪ್ರತಿಷ್ಠಾಪನೆಗಾಗಿ ಕೆಂಪು ಅಥವಾ ಹಳದಿ ಬಟ್ಟೆಯನ್ನು ಸಿದ್ಧಮಾಡಿಕೊಳ್ಳಿ
  • ಭಗವಾನ್ ವಿಶ್ವಕರ್ಮನ ಪ್ರತಿಮೆ ಅಥವಾ ಚಿತ್ರವನ್ನು ಬಟ್ಟೆಯ ಮೇಲೆ ಪ್ರತಿಷ್ಠಾಪಿಸಿ
  • ವಿಶ್ವಕರ್ಮ ದೇವರಿಗೆ ಹಣ್ಣುಗಳು, ಹೂವುಗಳು, ಧೂಪದ್ರವ್ಯಗಳು ಹಾಗೂ ನೈವೇದ್ಯವನ್ನು ಅರ್ಪಿಸಿ

ಇದನ್ನೂ ಓದಿ: ಜಾತಕದಲ್ಲಿನ ದೋಷ ನಿವಾರಣೆ, ಸಂತಾನ ಫಲ ಪ್ರಾಪ್ತಿಗೆ ಹೆಸರುವಾಸಿ ಈ ಕಾಕಣಿ ಕ್ಷೇತ್ರ; ದೇವಾಲಯದ ರೋಚಕ ಕಥೆ ಇಲ್ಲಿದೆ

  • ಎಲ್ಲಾ ಯಂತ್ರಗಳು ಹಾಗೂ ಕೆಲಸ ಮಾಡುವ ವಸ್ತುಗಳಿಗೆ ಅರಿಶಿನ-ಅಕ್ಕಿಯನ್ನು ಹಚ್ಚಿ
  • ಪೂಜೆಯ ಸಮಯದಲ್ಲಿ ಶ್ರೀ ಹರಿ ವಿಷ್ಣುವನ್ನು ಧ್ಯಾನಿಸಿ
  • ವಿಶ್ವಕರ್ಮ ದೇವರನ್ನು ಧ್ಯಾನ ಮಾಡುತ್ತಾ ಪೂಜೆಯನ್ನು ಆರಂಭಿಸಿ
  • ದೇವರ ಮುಂದೆ ದೀಪವನ್ನು ಬೆಳಗಿಸಿ.
  • ಪೂಜಾ ಸ್ಥಳದಲ್ಲಿ 8 ದಳಗಳಿಂದ ಕೂಡಿದ ಕಮಲದ ರಂಗೋಲಿಯನ್ನು ಬಿಡಿಸಿ
  • ಅದರಲ್ಲಿ 7 ರೀತಿಯ ಧಾನ್ಯಗಳನ್ನು ಇಡಿ
  • ಒಂದು ಪಾತ್ರೆಯಲ್ಲಿ 7 ರೀತಿಯ ಮಣ್ಣು, ಐದು ಮರಗಳ ಎಲೆಗಳು, ಅಡಿಕೆ, ದಕ್ಷಿಣೆ ಹಾಕಿ ಮುಚ್ಚಿಡಿ

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಪೂಜಾ ವಿಧಿ ವಿಧಾನ; ಪೂಜೆಗೆ ಬೇಕಾದ ಸಾಮಗ್ರಿಗಳೇನು, ಬಾಲ ಗೋಪಾಲನನ್ನು ಪೂಜಿಸುವುದು ಹೇಗೆ?

  • ವಿಷ್ಣು ಮತ್ತು ವಿಶ್ವಕರ್ಮ ಹೆಸರಿನಲ್ಲಿ ಆರತಿ ಬೆಳಗಿಸಿ
  • ಯಂತ್ರಗಳು, ಉಪಕರಣಗಳು ಹಾಗೂ ಸಲಕರಣೆಗಳಿಗೆ ಆರತಿ ಬೆಳಗಿಸಿ
  • ಅಂತಿಮವಾಗಿ ಪೂಜೆಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಸಾದ ವಿತರಿಸಿ ಮತ್ತು ಅದನ್ನು ನೀವೂ ಸೇವಿಸಿ

ಇದನ್ನೂ ಓದಿ: ಆಂಧ್ರಪ್ರದೇಶದ ಸಿಂಹಾಚಲ ಬೆಟ್ಟದಲ್ಲಿದೆ ವರಾಹ ನರಸಿಂಹಸ್ವಾಮಿ ದೇಗುಲ; ಇಲ್ಲಿ ಪೂಜೆ ಸಲ್ಲಿಸಿದರೆ ಇನ್ನಿಲ್ಲ ಶತ್ರು ಭಯ

ಪುರಾಣಗಳ ಪ್ರಕಾರ, ವಿಶ್ವಕರ್ಮ ದೇವರು ಪುಷ್ಪಕ ವಿಮಾನ, ಚಿನ್ನದ ಲಂಕೆ, ಭೋಲೆನಾಥನ ತ್ರಿಶೂಲ, ರಾವಣನ ಲಂಕಾ, ಶ್ರೀಕೃಷ್ಣನ ದ್ವಾರಕಾ ನಗರ, ದೇವರು ಮತ್ತು ದೇವತೆಗಳ ಆಯುಧಗಳನ್ನು ಸೃಷ್ಟಿಸಿದನು. ಈ ದಿನ, ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಭಗವಾನ್ ವಿಶ್ವಕರ್ಮನನ್ನು ಪೂಜಿಸಲಾಗುತ್ತದೆ. ಇದರಿಂದ ಜೀವನದಲ್ಲಿ ಪ್ರಗತಿ ಇರುತ್ತದೆ. ಕರ್ನಾಟಕದಲ್ಲೂ ಸಡಗರ, ಸಂಭ್ರಮದಿಂದ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಗುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.