ಕನ್ನಡ ಸುದ್ದಿ  /  Nation And-world  /  Assam Cm Himant Biswa Sarma Mastermind For Bjp Victory In Tripura And Nagaland

Tripura Nagaland Result: ಈಶಾನ್ಯದ ಎರಡು ರಾಜ್ಯಗಳಲ್ಲಿ ಕಮಲ ಅರಳಲು ಇವರೇ ಸೂತ್ರಧಾರಿ!

ಇಂದು ಹೊರ ಬಿದ್ದಿರುವ ಮೂರು ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕೇಸರಿ ಪಕ್ಷದ ಈ ಗೆಲುವಿಗೆ ಕಾರಣಕರ್ತರಾದವರು ಪಕ್ಕದ ರಾಜ್ಯದ ಸಿಎಂ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (ಫೋಟೋ-ಫೈಲ್)
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (ಫೋಟೋ-ಫೈಲ್)

ನವದೆಹಲಿ: ತ್ರಿಪುರಾ ಮತ್ತು ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ದಡ ಸೇರಿದೆ. ಈಶಾನ್ಯ ರಾಜ್ಯಗಳಲ್ಲಿ ಒಂದು ಕಾಲದಲ್ಲಿ ಸ್ಥಳೀಯ ಚುನಾವಣೆಯಲ್ಲೂ ಕಾಣಿಸಿದ ಪಕ್ಷ ಇವತ್ತು ಅಧಿಕಾರಕ್ಕೆ ಬರುತ್ತಿರುವುದರ ಹಿಂದೆ ಸಾಕಷ್ಟು ಶ್ರಮವಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಸತತ ಭೇಟಿಗಳು ಮತ್ತು ಮೋದಿ ಅವರ ಇಮೇಜ್ ಈ ಯಶಸ್ಸಿಗೆ ಕಾರಣ ಅಂತ ಯಾರು ಬೇಕಾದರೂ ಥಟ್ ಅಂತ ಹೇಳುತ್ತಾರೆ. ಆದರೆ ಇವರ ಜೊತೆಗೆ ಈಶಾನ್ಯ ರಾಜ್ಯದ ನಾಯಕರೊಬ್ಬರ ಶ್ರಮವೂ ಇದೆ. ಅವರೇ ಬಿಜೆಪಿಯ ಹಿರಿಯ ನಾಯಕ ಹಿಮಂತ್ ಬಿಸ್ವಾ ಶರ್ಮಾ.

ಹಿಮಂತ್ ಬಿಸ್ವಾ ಶರ್ಮಾ ಅವರ ತಂತ್ರಗಾರಿಕೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಆಯಾ ರಾಜ್ಯಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬರುವುದು, ಕ್ರಮೇಣ ಆಯಾ ರಾಜ್ಯಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ಪಕ್ಷದ ಬಲ ಹೆಚ್ಚುವಂತೆ ನೋಡಿಕೊಳ್ಳುವುದು ಹಿಮಂತ್ ಶರ್ಮಾ ಅವರ ತಂತ್ರಗಳಲ್ಲಿ ಒಂದಾಗಿದೆ.

ಹಿಮಂತ್ ಬಿಸ್ವಾ ಶರ್ಮಾ ಈಶಾನ್ಯ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗಿನ ಗುಜರಾತ್ ಮತ್ತು ದೆಹಲಿ ಚುನಾವಣೆಗಳಲ್ಲಿ ಹಿಮಂತ್ ಶರ್ಮಾ ಅವರು ಸ್ಟಾರ್ ಪ್ರಚಾರಕರಲ್ಲಿ ಒಬ್ಬರಾಗಿದ್ದರು ಎಂಬುದು ಮರೆಯುವಂತಿಲ್ಲ.

ಚುನಾವಣಾ ರಣತಂತ್ರಗಳಲ್ಲಿ ಹಿಮಂತ ಶರ್ಮಾ ಅವರ ಕೈಚಳಕವಿದೆ ಎನ್ನುತ್ತಾರೆ ಪಕ್ಷದ ಮುಖಂಡರು. ಅದರಲ್ಲೂ ಹಿಂದುತ್ವದ ಅಜೆಂಡಾವೇ ಪ್ರಬಲವಾಗಿರುವ ಬಿಜೆಪಿಗೆ ಕ್ರಿಶ್ಚಿಯನ್ನರು ಹೆಚ್ಚಾಗಿರುವ ಈಶಾನ್ಯ ರಾಜ್ಯಗಳಲ್ಲೂ ಗೆಲುವು ಸಾಧಿಸುವುದು ಸುಲಭದ ಮಾತಲ್ಲ ಎನ್ನಲಾಗಿದೆ.

ನಿತ್ಯ ಪ್ರಚಾರ ಮಾಡುತ್ತಿದ್ದ ಬಿಸ್ವಾ

ಈಶಾನ್ಯ ರಾಜ್ಯಗಳ ಚುನಾವಣೆ ಸಮೀಪಿಸುತ್ತಿರುವ ಕಾರಣ, ಹಿಮಂತ್ ಶರ್ಮಾ ಪ್ರತಿದಿನ ಅಸ್ಸಾಂನ ರಾಜಧಾನಿ ಗುವಾಹಟಿಯಿಂದ ಈ ಈಶಾನ್ಯ ರಾಜ್ಯಗಳಿಗೆ ವಿಮಾನದಲ್ಲಿ ಬರುತ್ತಿದ್ದರು.

ನಾಗಾಲ್ಯಾಂಡ್‌ನಲ್ಲಿ ನೀಫು ರಿಯೊಗೆ ಬೆಂಬಲ ನೀಡಿ, ಎನ್‌ಪಿಪಿ ನಾಯಕ ಕಾನ್ರಾಡ್ ಸಂಗ್ಮಾ ಅವರ ಅಸಾಧಾರಣ ಕ್ಲೀನ್ ಇಮೇಜ್ ಹೊಂದಿರುವ ಮಾಣಿಕ್ ಸಹಾ ಅವರನ್ನು ತ್ರಿಪುರಾದಲ್ಲಿ ಪಕ್ಷದ ಪರವಾಗಿ ಕರೆತಂದರು. ಮತ್ತೆ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಾಗುವ ಮೂಲಕ ಹೊಸ ತಂತ್ರಗಳನ್ನು ಎಣಿದಿದ್ದರು.

ಎನ್‌ಪಿಪಿಗೆ ಸಂಪೂರ್ಣ ಬಹುಮತ ಸಿಗುವುದಿಲ್ಲ ಎಂದು ಎಕ್ಸಿಟ್ ಪೋಲ್‌ಗಳು ತೋರಿಸಿರುವ ಹಿನ್ನೆಲೆಯಲ್ಲಿ ಈ ಮತ ಎಣಿಕೆಗೂ ಮುನ್ನ ಕಾನ್ರಾಡ್ ಸಂಗ್ಮಾ ಎರಡು ಬಾರಿ ಗುವಾಹಟಿಗೆ ತೆರಳಿ ಅಸ್ಸಾಂ ಸಿಎಂ ಹಿಮಂತ್ ಶರ್ಮಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಹೊಸದಾಗಿ ಹುಟ್ಟಿಕೊಂಡಿದ್ದ ತಿಪ್ರಾ ಮೋಥಾ ಜೊತೆಗಿನ ಮಾತುಕತೆ ವಿಫಲವಾಗಿದೆ. ಆದರೆ, ತ್ರಿಪುರಾ ರಾಜವಂಶದ ಪ್ರತಿನಿಧಿ ತಿಪ್ರಾ ಮೋಥಾ ಅವರನ್ನು ಬಿಜೆಪಿ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವ ಹಿಮಂತ್ ಬಿಸ್ವಾ ಶರ್ಮಾ ಅವರ ಪ್ರಯತ್ನ ವಿಫಲವಾಯಿತು. ಪ್ರತ್ಯೇಕ ರಾಜ್ಯಕ್ಕೆ ತಿಪ್ರಾ ಮೋಥಾ ಪಟ್ಟು ಹಿಡಿದಿದ್ದು, ಬಿಜೆಪಿ ಅದಕ್ಕೆ ಸಿದ್ಧವಾಗದ ಕಾರಣ ಮಾತುಕತೆ ವಿಫಲವಾಗಿತ್ತು.

ಭಾರತೀಯ ಜನತಾಪಾರ್ಟಿ ಮತ್ತು ಮಿತ್ರಪಕ್ಷ ನ್ಯಾಷನಲಿಸ್ಟ್‌ ಡೆಮಾಕ್ರಟಿಕ್‌ ಪ್ರೋಗ್ರೆಸಿವ್‌ ಪಾರ್ಟಿ ನಾಗಾಲ್ಯಾಂಡ್‌ನಲ್ಲಿ ಸರಳ ಬಹುಮತ ಗಿಟ್ಟಿಸಿಕೊಂಡು ಅಧಿಕಾರ ಚುಕ್ಕಾಣಿ ಭದ್ರಪಡಿಸಿಕೊಂಡಿವೆ.

60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ 32 ಸ್ಥಾನಗಳನ್ನು ಗೆಲ್ಲುವ ಮೂಲಕ ಕೇಸರಿ ಪಕ್ಷ ಇಲ್ಲಿ ಸ್ಪಷ್ಟ ಬಹುಮತದೊಂದಿಗೆ ಎರಡನೇ ಬಾರಿಗೆ ಜಯದ ನಗೆ ಬೀರಿದೆ. ಮೇಘಾಲಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿ ಎನ್ ಪಿಪಿ 27 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

IPL_Entry_Point