Latest hindu community Photos

<p>ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|</p><p>ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||&nbsp;</p><p>ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|</p><p>ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ|</p><p><strong>ಎಲ್ಲರಿಗೂ ಶುಭವಾಗಲಿ - ಶ್ರೀರಾಮನವಮಿಯ ಶುಭಾಶಯಗಳು&nbsp;</strong></p>

ರಾಮನವಮಿಯ ಶುಭಾಶಯಗಳು; ಎಲ್ಲರಿಗೂ ಶುಭ ಹಾರೈಸುವ ಶ್ರೀ ರಾಮನವಮಿಯ 9 ಸರಳ ಶುಭ ಸಂದೇಶಗಳು, ಫೋಟೋಗಳು

Tuesday, April 16, 2024

<p>ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯನ್ನು ರಥ ಸಪ್ತಮಿ ಎಂದು ಕರೆಯಲಾಗುತ್ತದೆ. ರಥ ಸಪ್ತಮಿಯನ್ನು ಸೂರ್ಯ ಜಯಂತಿ ಮತ್ತು ಅಚಲ ಸಪ್ತಮಿ ಎಂದೂ ಕರೆಯುತ್ತಾರೆ. ರಥ ಸಪ್ತಮಿಯಂದು ಸೂರ್ಯನಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ರಥ ಸಪ್ತಮಿಯಂದು ಸೂರ್ಯನನ್ನು ಪೂಜಿಸುವುದರಿಂದ ದೀರ್ಘಾಯುಷ್ಯ, ಸಂಪತ್ತು, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.</p>

Ratha Saptami 2024: ರಥ ಸಪ್ತಮಿ ಯಾವಾಗ? ಈ ದಿನದ ಆಚರಣೆಯ ಮಹತ್ವ, ಪಾಲಿಸಬೇಕಾದ ಕ್ರಮಗಳ ಕುರಿತ ವಿವರ ಇಲ್ಲಿದೆ

Tuesday, February 13, 2024

<p>ಮೌನಿ ಅಮಾವಾಸ್ಯೆ ದಿನವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಈ ದಿನ ಪವಿತ್ರ ನದಿಯಲ್ಲಿ ಮಿಂದು, ಉಪವಾಸ &nbsp;ಮಾಡುವುದು ಬಹಳ ಒಳ್ಳೆಯದು. ಮೌನಿ ಅಮಾವಾಸ್ಯೆಯ ದಿನ ಮೌನವ್ರತವನ್ನು ಆಚರಿಸುವ ಮೂಲಕ ಉಪವಾಸವನ್ನು ಆಚರಿಸುತ್ತಾರೆ. 2024 ರಲ್ಲಿ, ಮಾಘ ಮಾಸ, ಫೆಬ್ರವರಿ 9 ರಂದು ಮೌನಿ ಅಮಾವಾಸ್ಯೆಯನ್ನು ಆಚರಿಸಲಾಗುತ್ತದೆ.&nbsp;</p>

Mauni Amavasya 2024: ಮೌನಿ ಅಮಾವಾಸ್ಯೆ ಯಾವಾಗ, ಆಚರಣೆ ಹೇಗೆ; ಈ ದಿನ ದಾನ ಮಾಡುವುದು ಏಕೆ ಶ್ರೇಷ್ಠ?

Friday, February 2, 2024

<p>ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಯನ್ನು ಗ್ರಹಚಾರ ಪೀಡಕ ಎಂದು ಪರಿಗಣಿಸಲಾಗುತ್ತದೆ. ಶನಿಯು ಪ್ರತಿಯೊಬ್ಬ ವ್ಯಕ್ತಿಗೂ ಅವನ ಕ್ರಿಯೆಗಳ ಪ್ರಕಾರ ಫಲಿತಾಂಶಗಳನ್ನು ನೀಡುತ್ತಾನೆ. ಆದರೆ ಶನಿಯಿಂದ ಶುಭ ದೃಷ್ಠಿ ಪಡೆದ ವ್ಯಕ್ತಿಯು ಜೀವನದಲ್ಲಿ ತುಂಬಾ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾನೆ.</p>

Shani Dev Blessings: ಈ ವರ್ಷ ಮೂರು ಬಾರಿ ಶನಿದೇವನ ಸ್ಥಾನಪಲ್ಲಟ; 3 ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ

Tuesday, January 23, 2024

<p>ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲಾನ ಪ್ರಾಣಪ್ರತಿಷ್ಠೆಯ ವಿಧಿವಿಧಾನಗಳು ಶುರುವಾಗಿವೆ. ಭವ್ಯ ಬಾಲರಾಮನ ವಿಗ್ರಹ ನಿನ್ನೆ (ಜ.17) ರಾಮ ಮಂದಿರ ತಲುಪಿದೆ. 200 ಕಿಲೋ ತೂಕದ ಬಾಲರಾಮನ ವಿಗ್ರಹದ ಮೆರವಣಿಗೆ ಕಷ್ಟವೆಂಬ ಕಾರಣಕ್ಕೆ 10 ಕಿಲೋ ತೂಕದ ಬೆಳ್ಳಿಯ ರಾಮಲಲಾನ ವಿಗ್ರಹದ ಪಲ್ಲಕ್ಕಿ ಮೆರವಣಿಗೆ ನಡೆಯಿತು.</p>

Ayodhya Ram Temple: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲಾ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಯ ಕ್ಷಣಗಳು

Thursday, January 18, 2024

<p>ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸದಲ್ಲಿ ಅನೇಕ ಪ್ರಮುಖ ಹಬ್ಬಗಳ ಆಚರಣೆ ಇದೆ. ಈ ಪೈಕಿ ಅಕ್ಷಯ ನವಮಿ ಅಥವಾ ಆಮ್ಲ ನವಮಿಯನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಆಚರಿಸಲಾಗುತ್ತದೆ. ಆಮ್ಲ ನವಮಿಯಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ &nbsp;ಶ್ರೀಹರಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಭಕ್ತರಿಗೆ ಶಾಶ್ವತ ಫಲಗಳು ಸಿಗುತ್ತವೆ ಎಂಬುದು ಧಾರ್ಮಿಕ ನಂಬಿಕೆ.</p>

Amla Navami 2023: ಇಂದು ಅಕ್ಷಯ ನವಮಿ, ಇಷ್ಟಾರ್ಥ ಸಿದ್ಧಿಗೆ ಈ ಆಮ್ಲ ನವಮಿಯೇ ಉತ್ತಮ ದಿನ

Monday, November 20, 2023

<p>ಜ್ಯೋತಿಷ್ಯದಲ್ಲಿ ರಾಹು-ಕೇತುಗಳನ್ನು ದುಷ್ಟ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಈ ಎರಡು ಗ್ರಹಗಳನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ರಾಹು-ಕೇತು ಇಂದು ರಾಶಿ ಬದಲಾಯಿಸಲಿದ್ದಾರೆ. ಜಾತಕದಲ್ಲಿ ರಾಹು-ಕೇತು ದೋಷವಿದ್ದರೆ, ವ್ಯಕ್ತಿಯು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ಅವರು ಭಾರೀ ಆರ್ಥಿಕ ಮತ್ತು ದೈಹಿಕ ನಷ್ಟವನ್ನು ಅನುಭವಿಸುವ ಸಾಧ್ಯತೆಯಿದೆ.</p>

Rahu Ketu transit: ರಾಹು ಕೇತು ಸಂಕ್ರಮಣವಾಗಿದೆ, ದೋಷ ಪರಿಹಾರಕ್ಕೆ ಇಲ್ಲಿವೆ 7 ಪರಿಹಾರೋಪಾಯ

Monday, October 30, 2023

<p>ಪಾಪಾಂಕುಶ ಏಕಾದಶಿ: ಇಂದು (ಅಕ್ಟೋಬರ್ 25 ರಂದು) ಪಾಪಾಂಕುಶ ಏಕಾದಶಿ ವ್ರತವನ್ನು ಸಂಪೂರ್ಣ ವಿಧಿವಿಧಾನಗಳೊಂದಿಗೆ ಆಚರಿಸುವುದರಿಂದ ಅಶ್ವಮೇಧ ಮತ್ತು ಸೂರ್ಯ ಯಜ್ಞದ ಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಧಾರ್ವಿುಕ ಗ್ರಂಥಗಳ ಪ್ರಕಾರ, ಈ ಏಕಾದಶಿಯಂದು ಉಪವಾಸ ಮತ್ತು ವಿಷ್ಣುವನ್ನು ಪೂಜಿಸುವುದು ಕಠಿಣ ತಪಸ್ಸಿನ ಫಲವನ್ನು ಪಡೆಯುತ್ತದೆ.</p>

ಪಾಪಾಂಕುಶ ಏಕಾದಶಿಯಂದು ಉಪವಾಸ ಮಾಡಿದರೆ ಸಾಕು ಪಾಪಗಳೆಲ್ಲವೂ ದೂರವಾಗುವುದೆಂಬ ನಂಬಿಕೆ, ಶುಭ ಮುಹೂರ್ತ, ಮಹತ್ವವನ್ನು ತಿಳಿಯಿರಿ

Tuesday, October 24, 2023

<p>ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವದ ಅಂಗವಾಗಿ ಆರನೇ ದಿನವಾದ ಶನಿವಾರ ಸಂಜೆ 4 ಗಂಟೆಗೆ ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ್ವರ ಸ್ವಾಮಿ ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಿದರು.</p>

ತಿರುಮಲ ಬ್ರಹ್ಮೋತ್ಸವ, ಶ್ರೀ ವೆಂಕಟೇಶ್ವರ ದೇವರ ರಥೋತ್ಸವ, ಚಿನ್ನದ ರಥವೇರಿದ ಶ್ರೀವಾರಿ ದೇವರು, ಇಲ್ಲಿವೆ ಚಿತ್ತಾಕರ್ಷಕ ಫೋಟೋಸ್

Saturday, September 23, 2023

<p>ನರೇಗಲ್ಲ ಪಟ್ಟಣದ ಜನರು ದೇವರ ಆರಾಧನೆ ಜತೆಗೆ ವಿಶಿಷ್ಟ ಜನಪದ ನೃತ್ಯದ ಮೂಲಕ ದೇವಿಯ ಆರಾಧನೆಗೂ ಮಾಡುತ್ತಾರೆ. ದೇವಿ ಮತ್ತು ರಾಕ್ಷಸರ ನಡುವೆ ನಡೆಯುವ ಹೋರಾಟವನ್ನು ಸೋಗಿನ ಮೂಲಕ ಪ್ರದರ್ಶನ ನೀಡಲಾಗುತ್ತಿದೆ. ಇದನ್ನು ‘ಕಡಬಡ ಸೋಗು’ ಎಂದು ಕರೆಯಲಾಗುತ್ತದೆ. ಗದಗ ಜಿಲ್ಲೆ ಬಿಟ್ಟರೆ ಈ ‘ಕಡಬಡ ಸೋಗು’ ರಾಜ್ಯದ ಬೇರೆಡೆ ಎಲ್ಲಿಯೂ ಕಾಣ ಸಿಗುವುದಿಲ್ಲ. ಶ್ರಾವಣ ಮಾಸದಲ್ಲಿ ಅದರಲ್ಲೂ ಮುಂಗಾರು ಮಳೆ ಬಾರದಿದ್ದಾಗ ನಡೆಯುವ ಪ್ರದರ್ಶನದ ಉತ್ಸವ ವಿಶೇಷ ಎನಿಸಿದೆ.</p>

ಶ್ರಾವಣದ ಕಡಬಡ ಸೋಗು, ಗದಗ ಜಿಲ್ಲೆ ನರೇಗಲ್‌ ಬಿಟ್ಟು ಬೇರೆಲ್ಲೂ ಕಾಣ ಸಿಗದ ವಿಶಿಷ್ಟ ಆಟ, ಇಲ್ಲಿದೆ ಸಚಿತ್ರ ವರದಿ

Monday, September 11, 2023

<p>ಭಗವಾನ್ ವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬ. ಜಗತ್ತಿನಾದ್ಯಂತ ಭಕ್ತರಿಂದ ಪೂಜಿಸಲ್ಪಡುವ ದೇವರು. ಶಾಸ್ತ್ರಗಳ ಪ್ರಕಾರ ಭಗವಾನ್ ವಿಷ್ಣುವಿನ ಅವತಾರಗಳು 10. ಅಂದರೆ ದಶಾವತಾರದಲ್ಲಿ ಮಹಾವಿಷ್ಣುವನ್ನು ಜನ ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ಭಗವಾನ್ ವಿಷ್ಣುವಿನ ಅನುಗ್ರಹ ಪಡೆಯುವುದಕ್ಕೆ ಹಲವು ದಾರಿಗಳಿವೆ.</p>

Aja Ekadashi: ಅಜಾ ಏಕಾದಶಿ ಇಂದು, ಶ್ರೀ ಮಹಾವಿಷ್ಣುವಿನ ಒಲುಮೆ ಪಡೆಯಲು ಶುಭ ದಿನ, ಈ 5 ಚಮತ್ಕಾರಿ ಶ್ಲೋಕಗಳನ್ನು ತಿಳಿದಿರಿ

Sunday, September 10, 2023

<p>ಅಜಾ ಏಕಾದಶಿ ಬಹಳ ವಿಶೇಷ. ಈ ಸಲ ಅಜ ಏಕಾದಶಿ 2023ರ ಸೆಪ್ಟೆಂಬರ್ 10ರಂದು ಬಂದಿದೆ. ಈ ದಿನ ಏಕಾದಶಿ ಉಪವಾಸ ವ್ರತಾಚರಣೆ ಮಾಡಿದರೆ, ಮಹಾವಿಷ್ಣುವಿನ ಕಥೆಯನ್ನು ಆಲಿಸಿದರೆ ಅಶ್ವಮೇಧ ಯಾಗ ಮಾಡಿದ ಫಲ ದೊರೆಯುವುದೆಂಬ ನಂಬಿಕೆ ದೈವಭಕ್ತರದ್ದು. ಅಜಾ ಏಕಾದಶಿ ದಿನದ ಉಪವಾಸ ವ್ರತಾಚರಣೆ ಬೆಳಗ್ಗೆ ಸೂರ್ಯೋದಯದಿಂದ ಶುರುವಾಗಿ ಮಾರನೇ ದಿನ ಗೋವತ್ಸ ದ್ವಾದಶಿಯಂದು ಕೊನೆಯಾಗುತ್ತದೆ.</p>

ರವಿ ಪುಷ್ಯ ಸೇರಿ 3 ಯೋಗದಿಂದ ಅಜಾ ಏಕಾದಶಿ ಪವರ್‌ಫುಲ್‌, ಶುಭ ಫಲಕ್ಕಾಗಿ ನಂಬಿಕೆ ಆಚರಣೆ ಹೀಗಿದೆ

Saturday, September 9, 2023

<p>ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 352ರನೇ ಆರಾಧನಾ ಮಹೋತ್ಸವಕ್ಕೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಮಂಗಳವಾರ (ಆ.29) ಚಾಲನೆ ನೀಡಿದರು. ಇದು ಸಪ್ತಾಹ ಕಾರ್ಯಕ್ರಮವಾಗಿದ್ದು ಸೆಪ್ಟೆಂಬರ್ 4ರ ತನಕ ನಡೆಯುತ್ತದೆ.&nbsp;</p>

ರಾಯರ ಆರಾಧನಾ ಸಪ್ತಾಹ ಮಹೋತ್ಸವದ ಮೊದಲ ದಿನ ಏನೇನು ನಡೆಯಿತು, ಇಲ್ಲಿದೆ ಸಚಿತ್ರ ವರದಿ

Tuesday, August 29, 2023

<p>ಭಗವಾನ್ ಶ್ರೀಕೃಷ್ಣನ ಲೀಲೆಗಳಿಗೇನು ಕೊರತೆಯೇ. ಬಹುತೇಕರು ಶ್ರೀಕೃಷ್ಣನ ಲೀಲಾ ವಿನೋದಗಳ ಕಥೆಗಳನ್ನು ಓದುತ್ತ, ಕೇಳುತ್ತ, ಈ ಕುರಿತ ಧಾರಾವಾಹಿ ನೋಡುತ್ತ ಬೆಳೆದವರು. ಇಂತಹ ಶ್ರೀಕೃಷ್ಣ ಭಗವಾನ್ ನಾರಾಯಣನ 8ನೇ ಅವತಾರ ಎಂದು ಪರಿಗಣಿಸಲಾಗಿದೆ. ಶ್ರೀಕೃಷ್ಣ ಪರಮಾತ್ಮನ ಮಟ್ಟಿಗೆ ಗುರುವಾರ ವಿಶೇಷ ಎಂಬುದು ನಂಬಿಕೆ. ಆದ್ದರಿಂದಈ ದಿನ ತುಳಸಿ ಮಾಲೆ ಹಿಡಿದು ಶ್ರೀಕೃಷ್ಣ ಮಂತ್ರ ಜಪಿಸಿದರೆ ಜೀವನದ ಅನೇಕ ಸಮಸ್ಯೆಗಳು ನಿವಾರಣೆ ಆಗುವುದೆಂಬುದು ಆಸ್ತಿಕರ ನಂಬಿಕೆ.</p>

ಶ್ರೀಕೃಷ್ಣನ ಒಲುಮೆ ಒಂದಿದ್ದರೆ ಸಾಕು, ಈ ಅದ್ಭುತ ಕೃಷ್ಣಮಂತ್ರ ಪಠಿಸಿ ನೋಡಿ ಬದುಕು ಬದಲಾಗಬಹುದು

Monday, August 28, 2023

<p>ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ರಂಗೋಲಿ ಹಾಕಿ, ಬಣ್ಣ ತುಂಬಿಸುವುದೇ ದೊಡ್ಡ ಸಂಭ್ರಮ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಹಬ್ಬಕ್ಕೆ ಯಾವ ರಂಗೋಲಿ ಬಿಡಿಸಬೇಕೆಂದುಕೊಂಡಿದ್ದೀರಿ? ಇನ್ನೂ ಗೊಂದಲ ಇದ್ದಲ್ಲಿ ಇಲ್ಲಿದೆ ನೋಡಿ ಕೆಲವು ರಂಗೋಲಿ ಐಡಿಯಾಗಳು.&nbsp;</p>

Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡಿಸಬಹುದಾದ ಆಕರ್ಷಕ ರಂಗೋಲಿ ಡಿಸೈನ್‌ಗಳು; ಯಾವುದು ಇಷ್ಟ ಆಯ್ತು?

Tuesday, August 22, 2023

<p>ಹಿಂದೂ ಧರ್ಮದಲ್ಲಿ ಏಕಾದಶಿ ತಿಥಿಯನ್ನು &nbsp;ಎಲ್ಲಾ ತಿಥಿಗಳ ಪೈಕಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಕಾದಶಿ ತಿಥಿಯು ಭಗವಾನ್ ಮಹಾವಿಷ್ಣುವಿಗೆ ಸಮರ್ಪಿತವಾಗಿದೆ. ಶಾಸ್ತ್ರಗಳ ಪ್ರಕಾರ, ಏಕಾದಶಿಯಂದು ಉಪವಾಸ ಮಾಡುವುದರಿಂದ ಪ್ರಾಪಂಚಿಕ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಮತ್ತು ಜನನ ಮತ್ತು ಮರಣದ ಬಂಧನದಿಂದ ಜನರನ್ನು ಮುಕ್ತಗೊಳಿಸುತ್ತದೆ ಮತ್ತು ಅಂತಿಮವಾಗಿ ವೈಕುಂಠ ಧಾಮವನ್ನು ಪಡೆಯಲು ನೆರವಾಗುತ್ತದೆ. ಈ ದಿನದಂದು ಕೆಲವು ಚಟುವಟಿಕೆಗಳಿವೆ, ಅದನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗುತ್ತದೆ. ಏಕಾದಶಿ ದಿನದಂದು ಮಾಡಬೇಕಾದ ಕೆಲಸಗಳು ಮತ್ತು ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವೆ.</p>

Padmini Ekdashi 2023: ಇಂದು ಪದ್ಮಿನಿ ಏಕಾದಶಿ, ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬೇಡಿ, ಒಳ್ಳೆಯದಲ್ಲ ಎನ್ನುತ್ತಾರೆ ಆಸ್ತಿಕರು

Friday, July 28, 2023

<p>ಈಗಾಗಲೇ ಹೇಳಿದಂತೆ, ಹಿಂದೂ ಧರ್ಮಗ್ರಂಥಗಳ ಪ್ರಕಾರ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ತುಳಸಿ ಸಸ್ಯವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ. ತುಳಸಿ ಮನೆಯಲ್ಲಿದ್ದರೆ ವಿಷ್ಣು ಮತ್ತು ಲಕ್ಷ್ಮಿಯ ಅನುಗ್ರಹವು ಏಕಕಾಲದಲ್ಲಿ ಸಿಗುತ್ತದೆ &nbsp;ಎನ್ನುವ ನಂಬಿಕೆಯಿದೆ. ಇತರೆ ಸಸ್ಯಗಳನ್ನು ಉಡುಗೊರೆಯಾಗಿ ನೀಡುವಂತೆ ತುಳಸಿ ಗಿಡವನ್ನು ಉಡುಗೊರೆಯಾಗಿ ನೀಡಬಹುದೇ, ಈ ಕುರಿತು ವಾಸ್ತುಶಾಸ್ತ್ರದ ಅಭಿಪ್ರಾಯ ಬೇರೆಯೇ ಆಗಿದೆ.<br>&nbsp;</p>

Vastu Tips: ತುಳಸಿ ಗಿಡ ಉಡುಗೊರೆಯಾಗಿ ನೀಡುವುದು ಶುಭವೇ ಅಶುಭವೇ, ತುಳಸಿ ಗಿಡ ಗಿಫ್ಟ್‌ ಕುರಿತು ವಾಸ್ತುಶಾಸ್ತ್ರದ ನಿಯಮಗಳೇನು

Tuesday, July 25, 2023

<p>ಪಂಚಾಂಗದ ಪ್ರಕಾರ, ಶ್ರಾವಣ ಕೃಷ್ಣ ಪಕ್ಷದ ಏಕಾದಶಿಯ ದಿನದಂದು ಕಾಮಿಕ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಈ ಬಾರಿಯ ಕಾಮಿಕಾ ಏಕಾದಶಿ ಉಪವಾಸ ಜುಲೈ 13 ರಂದು ಆಚರಿಸಲಾಗುತ್ತದೆ. ಇದು ಚಾತುರ್ಮಾಸದ ಮೊದಲ ಏಕಾದಶಿ. ಭಗವಾನ್ ಮಹಾವಿಷ್ಣುವು ಚಾತುರ್ಮಾಸದಲ್ಲಿ 4 ತಿಂಗಳ ಕಾಲ ಯೋಗ ನಿದ್ರಾ ಭಂಗಿಯಲ್ಲಿ ಇರುತ್ತಾನೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸವನ್ನು ಆಚರಿಸಲಾಗುತ್ತದೆ. .</p>

Kamika Ekadashi 2023: ಇಂದು ಕಾಮಿಕ ಏಕಾದಶಿ, ಸರ್ವೈಕಾದಶಿ; ಚಾತುರ್ಮಾಸದ ಮೊದಲ ಏಕಾದಶಿ; ದಿನ ಮಹತ್ವ, ಕಥೆ ಇತ್ಯಾದಿ

Wednesday, July 12, 2023

<p>ಮುಕ್ಕಣ್ಣ ಶಂಕರನನ್ನು ಉತ್ರರ ಭಾರತ, ಪೂರ್ವ, ಈಶಾನ್ಯ ಭಾಗಗಳಲ್ಲಿ ಬೋಲೇನಾಥ್‌ ಎಂದು ಹೇಳುವುದು ವಾಡಿಕೆ. ದಕ್ಷಿಣ ಭಾರತದಲ್ಲಿ ಶಿವ, ಶಂಕರ, ಮಹಾಲಿಂಗೇಶ್ವರ, ಈಶ್ವರ ಮುಂತಾದ ಹೆಸರುಗಳಿಂದ ಆರಾಧಿಸುವುದು ರೂಢಿ. ಶಿವಲಿಂಗಕ್ಕೆ ಒಂದು ಲೋಟ ನೀರನ್ನು ಪ್ರಾಮಾಣಿಕವಾಗಿ ಅರ್ಪಿಸುವವನಿಗೆ ಮಹಾದೇವನು ಅನುಗ್ರಹಿಸುತ್ತಾನೆ ಎಂಬುದು ನಂಬಿಕೆ. ಪ್ರತಿ ಸೋಮವಾರವು ಭಗವಾನ್ ಶಿವನಿಗೆ ಸಮರ್ಪಿತವಾಗಿದ್ದರೂ, ಮಹಾದೇವನನ್ನು ಮೆಚ್ಚಿಸಲು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿ ತಿಥಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ, ಈ ತಿಥಿಯನ್ನು ಮಾಸ ಶಿವರಾತ್ರಿ ಎಂದು ಕರೆಯಲಾಗುತ್ತದೆ.</p>

Masa Shivaratri: ಇಂದು ಮಾಸ ಶಿವರಾತ್ರಿ; ಈಶ ಕೃಪೆ ಸದಾ ನಿಮ್ಮೊಂದಿಗೆ; ಪೂಜಾ ಸಮಯ ಮತ್ತುಇತರೆ ವಿವರ

Friday, June 16, 2023

<p>ಪೂರ್ವ ಜಾವಾ ಪ್ರಾಂತ್ಯದ ಪ್ರೊಬೋಲಿಂಗ್ಗೊದಲ್ಲಿ ತೆಂಗರ್‌ ಉಪ ಸಮುದಾಯದವರು ಅಚರಿಸುವ ಹಬ್ಬ ಈ ಯಾದ್ನ್ಯಾ ಕಸದ ಹಬ್ಬ. ಯಾದ್ನ್ಯಾ ಕಸದ ಹಬ್ಬವು ಸರ್ವಶಕ್ತ ದೇವರಾದ ಸಾಂಗ್ ಹಯಾಂಗ್ವಿಧಿ, ರಾಜ ಮಜಾಪಹಿತ್‌ನ ಮಗಳು ರೋರೊ ಆಂಟೆಂಗ್ ಮತ್ತು ಬ್ರಾಹ್ಮಣನ ಮಗ ಜೋಕೊ ಸೆಗರ್ ಅವರನ್ನು ಗೌರವಿಸುವ ಸಲುವಾಗಿ ನಡೆಯುವ ಆಚರಣೆ. ತೆಂಗರ್ ಉಪ-ಜನಾಂಗೀಯ ಗುಂಪಿನ ಸದಸ್ಯರು ಜಾವಾದಲ್ಲಿ ಯದ್ನ್ಯಾ ಕಸದ ಹಬ್ಬವನ್ನು ಆಚರಿಸುತ್ತಾರೆ&nbsp;</p>

Yadnya Kasada festival: ಇಂಡೋನೇಷ್ಯಾದ ಜಾವಾದಲ್ಲಿ ಯಾದ್ನ್ಯಾ ಕಸದ ಹಬ್ಬ; ವಿಚಿತ್ರ ಆಚರಣೆಯ ಆಯ್ದ ಸಚಿತ್ರ ವಿವರಣೆ

Wednesday, June 7, 2023