Entertainment News in Kannada Live December 14, 2024: Max Movie: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಬೇಕಿದ್ದ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದಿಂದ ಬೇಸರದ ಸುದ್ದಿ
ಇದು 'ಎಚ್ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 14 Dec 202405:20 PM IST
- Max Movie: ಕಿಚ್ಚ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 25ರಂದು ತೆರೆಗೆ ಬರಲಿರುವ ಈ ಸಿನಿಮಾ ಸೆನ್ಸಾರ್ ಅಂಗಳದಿಂದಲೂ ಪ್ರಮಾಣ ಪತ್ರ ಪಡೆದುಕೊಂಡಿದೆ. ಈ ನಡುವೆ ಅಚ್ಚರಿಯ ಸಂಗತಿ ಏನೆಂದರೆ, ಏಕಕಾಲದಲ್ಲಿ ಎಲ್ಲ ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿಲ್ಲ.
Sat, 14 Dec 202402:57 PM IST
- OTT Releases This Week: ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಹತ್ತು ಹಲವು ಬೇರೆ ಬೇರೆ ಜಾನರ್ನ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಅದರಲ್ಲೂ ಆಯ್ದ ಒಂದಷ್ಟು ಸಿನಿಮಾಗಳು ಇಲ್ಲಿವೆ. ಈ ವಾರಾಂತ್ಯಕ್ಕೆ ನಿಮ್ಮ ಲಿಸ್ಟ್ನಲ್ಲಿ ಈ ಸಿನಿಮಾ ಮತ್ತು ವೆಬ್ಸಿರೀಸ್ಗಳಿರಲಿ.
Sat, 14 Dec 202401:33 PM IST
- ಇನ್ನೇನು ಮುಂದಿನ 10 ದಿನಗಳ ಅವಧಿಯಲ್ಲಿ ಕನ್ನಡದ ಎರಡು ಬಹುನಿರೀಕ್ಷಿತ ಯುಐ ಮತ್ತು ಮ್ಯಾಕ್ಸ್ ಸಿನಿಮಾಗಳು ಬಿಡುಗಡೆ ಆಗಲಿವೆ. ಆದರೆ, ಎಲ್ಲೋ ಒಂದು ಕಡೆ ಪ್ರಚಾರ ವಿಚಾರದಲ್ಲಿ ನಮ್ಮ ಈ ಸಿನಿಮಾಗಳೇ ತುಂಬ ಹಿಂದುಳಿದಿವೆ. - ಚೇತನ್ ನಾಡಿಗೇರ್ ಬರಹ.
Sat, 14 Dec 202412:55 PM IST
- Bigg boss Kannada 11: ಈ ವಾರ ಧನರಾಜ್ ಮತ್ತು ರಜತ್ ಕಿಶನ್ ನಡುವಿನ ಕಿತ್ತಾಟ ಇಡೀ ಮನೆಯ ವಾತಾವರಣವನ್ನೇ ಹಾಳು ಮಾಡಿತ್ತು. ಮಾತಿನ ಮೂಲಕ ಆರಂಭವಾದ ಇವರಿಬ್ಬರ ಜಗಳ, ಕೈ ಕೈ ಮಿಲಾಯಿಸುವವರೆಗೂ ಹೋಗಿ ನಿಂತಿತ್ತು. ಕಳಪೆ ಕೊಡುವಾಗಲೂ ವಿಕೋಪಕ್ಕೆ ಹೋಗಿ, ಧನರಾಜ್ ಮೇಲೆ ರಜತ್ ಮುಗಿಬಿದ್ದರು. ಈಗ ಕಿಚ್ಚನ ಪಂಚಾಯ್ತಿಯಲ್ಲಿ ಈ ವಿಚಾರವೇ ಹಾಟ್ ಟಾಪಿಕ್ ಆಗಿದೆ.
Sat, 14 Dec 202411:55 AM IST
- Sahaja Organics Products: ನಟ, ನಿರ್ಮಾಪಕ ಡಾಲಿ ಧನಂಜಯ್ ಇದೀಗ ರೈತರ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ರೈತ ಕಂಪನಿಗಳು ಬೆಳೆಯಬೇಕು ಎನ್ನುತ್ತಲೇ “ಸಹಜ ಆರ್ಗಾನಿಕ್ಸ್” ಅನ್ನೋ ಕಂಪನಿಗೆ ಡಾಲಿ ರಾಯಭಾರಿಯಾಗಿದ್ದಾರೆ.
Sat, 14 Dec 202411:46 AM IST
- Red One Movie Review: ಕ್ರಿಸ್ಮಸ್ ಹಬ್ಬ ಹತ್ತಿರದಲ್ಲಿದೆ. ಇದೇ ಸಮಯದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ರೆಡ್ ಒನ್ ಎಂಬ ಕ್ರಿಸ್ಮಸ್ ಸಂಭ್ರಮಕ್ಕೆ ಸೂಕ್ತವಾದ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾದ ಅದ್ಧೂರಿ ದೃಶ್ಯವೈಭವ, ಸಾಹಸ, ಹಾಸ್ಯ ಮಕ್ಕಳು ಮಾತ್ರವಲ್ಲದೆ ದೊಡ್ಡವರಿಗೂ ಇಷ್ಟವಾಗಬಹುದು.
Sat, 14 Dec 202411:16 AM IST
- ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್ ಅಪಾರ ವೀಕ್ಷಕ ಬಳಗವನ್ನು ಹೊಂದಿದೆ. ಮಿಡಲ್ ಕ್ಲಾಸ್ ಮನೆಗಳ ವಾಸ್ತವ ಸ್ಥಿತಿಯನ್ನು ವೀಕ್ಷಕರ ಮುಂದೆ ಈ ತಂಡ ಇಡುತ್ತಿದೆ. ಬರೋಬ್ಬರಿ 60 ಜನ ಕಲಾವಿದರು ಈ ಸೀರಿಯಲ್ನಲ್ಲಿದ್ದಾರೆ. 200 ಕ್ಕೂ ಅಧಿಕ ತಂತ್ರಜ್ಞರು ನಿತ್ಯ ಕೆಲಸ ಮಾಡುತ್ತಾರೆ. ಹಾಗಾದರೆ ಇದೇ ಸೀರಿಯಲ್ ಬಜೆಟ್ ಎಷ್ಟು?
Sat, 14 Dec 202409:58 AM IST
- UI ಸಿನಿಮಾ ಪ್ರಚಾರಾರ್ಥವಾಗಿ ಹೈದರಾಬಾದ್ಗೆ ತೆರಳಿರುವ ಉಪೇಂದ್ರ, ಅಲ್ಲು ಅರ್ಜುನ್ ಅವರ ಜೊತೆಗೆ ಕುಶಲೋಪರಿ ನಡೆಸಿದ್ದಾರೆ. ಇಂದು (ಡಿ. 14) ಬೆಳಿಗ್ಗೆಯಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಅಲ್ಲು ಅರ್ಜುನ್ ಜೊತೆಗೆ ಸಮಯ ಕಳೆದಿದ್ದಾರೆ.
Sat, 14 Dec 202409:46 AM IST
- ನಾನು ಕ್ಯಾಪ್ ಹಾಕಿದರೆ, ಅದು ಬೇರೆ ಲೆವೆಲ್ಗೆ ಇರುತ್ತದೆ. ಮೊದಲ ಭಾಗ ಒಂದು ಪ್ರಯೋಗ ಅಷ್ಟೇ. ಮುಂದುವರೆದ ಭಾಗ ಮಾಡಿದರೆ ಅದರ ಯಶಸ್ಸು ಗ್ಯಾರಂಟಿ ಎಂದ ಆರ್. ಚಂದ್ರು. ಸುದೀಪ್ ಮತ್ತು ಚಂದ್ರು ಜೋಡಿಯ ಚಿತ್ರ ಬರುತ್ತಾ ಎಂಬ ಪ್ರಶ್ನೆ ಎಲ್ಲರದು.
Sat, 14 Dec 202409:20 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್ 13ರ ಎಪಿಸೋಡ್ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಮೇಲೆ ರೇಣುಕಾ ಕೋಪಗೊಳ್ಳುತ್ತಾಳೆ. ನಿನಗಿಂತ ಚಿಕ್ಕ ಹುಡುಗನನ್ನು ಮದುವೆ ಆಗಿ ಊರೆಲ್ಲಾ ಸುತ್ತುತ್ತಿದ್ದೀಯ, ತಾಳಿ ಬಿಚ್ಚಿಟ್ಟು ಮನೆಗೆ ವಾಪಸ್ ಹೋಗು ಎಂದು ಭಾವನಾಗೆ ಹೇಳುತ್ತಾಳೆ.
Sat, 14 Dec 202409:18 AM IST
- Puttakkana Makkalu Serial Sneha: ಜೀ ಕನ್ನಡದ ನಂಬರ್ 1 ಸೀರಿಯಲ್ ಪುಟ್ಟಕ್ಕನ ಮಕ್ಕಳು ಕಿರುತೆರೆ ವೀಕ್ಷಕರ ಫೇವರಿಟ್ ಧಾರಾವಾಹಿ. ಇತ್ತೀಚೆಗಷ್ಟೇ ಇದೇ ಸೀರಿಯಲ್ನ ಸ್ನೇಹಾ ಅಲಿಯಾಸ್ ಸಂಜನಾ ಬುರ್ಲಿ ಪಾತ್ರ ಅಂತ್ಯವಾಗಿತ್ತು. ಪಾತ್ರ ಮುಗಿದ ಬಳಿಕ ಇದೇ ನಟಿ ಸದ್ಯ ಏನ್ಮಾಡ್ತಿದ್ದಾರೆ? ಹೀಗಿದೆ ಮಾಹಿತಿ.
Sat, 14 Dec 202409:16 AM IST
- Bigg Boss Kannada: ಬಿಗ್ ಬಾಸ್ನಲ್ಲಿ ಯಾರಿಗೆ ಕಳಪೆ ಸಿಕ್ಕಿರುತ್ತದೆಯೋ ಅವರು ಜೈಲು ಸೇರಬೇಕು ಎಂಬ ನಿಯಮ ಇದೆ ಇದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಂ ಈ ನಿಯಮ ಉಲ್ಲಂಘನೆ ಮಾಡಿದ್ದಾರೆ.
Sat, 14 Dec 202408:27 AM IST
- Nooru Janmaku Serial: ಕಲರ್ಸ್ ಕನ್ನಡದಲ್ಲಿ ಹೊಸ ಸೀರಿಯಲ್ ನೂರು ಜನ್ಮಕೂ ಈಗಾಗಲೇ ಪ್ರೋಮೋ ಮೂಲಕವೇ ಗಮನ ಸೆಳೆದಿದೆ. ಇದೀಗ ಇದೇ ಧಾರಾವಾಹಿ ಪ್ರಸಾರಕ್ಕೆ ದಿನ ನಿಗದಿಯಾಗಿದೆ. ಹಾಗಾದರೆ, ಈ ಸೀರಿಯಲ್ ಕಥೆ ಏನು, ಯಾವಾಗಿನಿಂದ ಪ್ರಸಾರ? ಇಲ್ಲಿದೆ ಮಾಹಿತಿ.
Sat, 14 Dec 202408:04 AM IST
- ನಟಿ ಮಾಳವಿಕಾ ಅವಿನಾಶ್ ತಾವು ಮನೆ ಕಟ್ಟುವಾಗ ಎದುರಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಮನೆ ಕಟ್ಟುವ ಸಂದರ್ಭದಲ್ಲಿ ಏನೆಲ್ಲ ಕಷ್ಟ ಅನುಭವಿಸಬೇಕಾಗಿಬಂತು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.
Sat, 14 Dec 202407:45 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್ 13ರ ಎಪಿಸೋಡ್ನಲ್ಲಿ ಸುನಂದಾಳನ್ನು ಬಿಡಿಸಲು ತಾಂಡವ್ ಕಂಡಿಷನ್ಗೆ ಒಪ್ಪುವಂತೆ ಭಾಗ್ಯಾ ಬಳಿ ಹೇಳುತ್ತಾನೆ. ಆದರೆ ಭಾಗ್ಯಾ ಅವನ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ. ಬೇಲ್ ಕೊಟ್ಟು ಅಮ್ಮನನ್ನು ಬಿಡಿಸುತ್ತಾಳೆ. ಜೊತೆಗೆ ಡಿವೋರ್ಸ್ ಪೇಪರ್ಗೆ ಸಹಿ ಹಾಕಿ ತಾಂಡವ್ ಮುಖದ ಮೇಲೆ ಎಸೆಯುತ್ತಾಳೆ.
Sat, 14 Dec 202406:52 AM IST
- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮನೆಯ ಎಲ್ಲ ಸಮಸ್ಯೆಗಳು ಈಗ ನಿಲ್ಲುತ್ತವೆ ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೇನೋ ಒಂದು ಆಗಿದೆ. ರಾಮಾಚಾರಿ ಮನೆಗೆ ಗ್ರಹಚಾರ ತಪ್ಪಿದ್ದಲ್ಲ ಎನ್ನುವಂತಾಗಿದೆ.
Sat, 14 Dec 202405:36 AM IST
- ದರ್ಶನ್ ಹೈ ಕೋರ್ಟ್ ನೀಡಿದ ಷರತ್ತುಬದ್ಧ ಮಧ್ಯಂತರ ಜಾಮೀನು ಪಡೆದುಕೊಂಡು ಹೊರ ಬಂದಿದ್ದಾರೆ. ಅವರ ಸಿನಿಮಾ ‘ದಿ ಡೆವಿಲ್’ ಚಿತ್ರೀಕರಣ ನಿಂತು ಹೋಗಿತ್ತು. ಮತ್ತೆ ಯಾವಾಗಾ ಚಿತ್ರೀಕರಣ ಆರಂಭವಾಗುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
Sat, 14 Dec 202405:22 AM IST
- ಪುಷ್ಪ 2 ಚಿತ್ರದ ಬಿಡುಗಡೆ ವೇಳೆ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಟಾಲಿವುಡ್ ನಟ ಅಲ್ಲು ಅರ್ಜುನ್ ಹೈದ್ರಾಬಾದ್ ಜೈಲಿನಿಂದ ಹೊರ ಬಂದರು. ಅವರು ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು.
Sat, 14 Dec 202404:53 AM IST
- UI ಮತ್ತು ಮ್ಯಾಕ್ಸ್ ಈ ಎರಡೂ ಸಿನಿಮಾಗಳು ಕೇವಲ ಐದು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಹೀಗಿರುವಾಗ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಇದು ಪರಿಣಾಮ ಬೀರುವುದಿಲ್ಲವೇ? ಎಂಬ ಪ್ರಶ್ನೆಗೆ ಉಪೇಂದ್ರ ಈ ರೀತಿಯಾಗಿ ಉತ್ತರಿಸಿದ್ದಾರೆ. ಮಾಹಿತಿಗಾಗಿ ಮುಂದೆ ಓದಿ.
Sat, 14 Dec 202403:18 AM IST
- ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಜೈಲು ಸೇರಿದ್ದಾಳೆ. ಅಮ್ಮನ ನೆನಪೇ ಬೇಡ ಎಂದು ವೈಷ್ಣವ್ ಹೇಳುತ್ತಿದ್ದಾನೆ. ಅಷ್ಟೇ ಅಲ್ಲ ಅವಳ ಎಲ್ಲ ಸಾಮಗ್ರಿಗಳನ್ನು ತಂದು ಸುಟ್ಟು ಹಾಕಿದ್ದಾನೆ. ಅವನಿಗೆ ಅದ್ಯಾವುದೂ ನೆಮ್ಮದಿ ನೀಡುತ್ತಿಲ್ಲ.
Sat, 14 Dec 202402:54 AM IST
Allu Arjun: ಸಂಧ್ಯಾ ಥಿಯೇಟರ್ನಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್ ಶನಿವಾರ ರಿಲೀಸ್ ಆಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ, ಆಂಧ್ರಪ್ರದೇಶ ರಾಜಕೀಯ ನಾಯಕರು ಪರ, ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ.
Sat, 14 Dec 202402:09 AM IST
- ನಟ ಅಲ್ಲು ಅರ್ಜುನ್ ಶನಿವಾರ ಮುಂಜಾನೆ ಹೈದರಾಬಾದ್ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ನಿನ್ನೆ ರಾತ್ರಿ ಅವರು ಜೈಲಿನಲ್ಲೇ ಕಳೆದಿದ್ದಾರೆ. ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ.
Sat, 14 Dec 202401:48 AM IST
- ಮೋಹನ್ ಲಾಲ್ ನಟಿಸಿ, ನಿರ್ದೇಶಿಸಿದ ಬರೋಜ್ ಸಿನಿಮಾ ಬಿಡುಗಡೆಯ ಸನಿಹ ಬಂದಿದೆ. ಈಗಾಗಲೇ ಚಿತ್ರದ ಸಣ್ಣ ಸಣ್ಣ ಝಲಕ್ಗಳ ಮೂಲಕವೇ ಸುದ್ದಿಯಾಗಿದ್ದ ಈ ಸಿನಿಮಾ, ಈಗ ಟ್ರೇಲರ್ ಹೊತ್ತು ಬಂದಿದೆ. ಇದೇ ಮಾಸಾಂತ್ಯಕ್ಕೆ ಗ್ರ್ಯಾಂಡ್ ಆಗಿ ಈ ಸಿನಿಮಾ ರಿಲೀಸ್ ಆಗಲಿದೆ.
Sat, 14 Dec 202401:31 AM IST
- ಬಿಗ್ ಬಾಸ್ ಮನೆಯಲ್ಲಿ ಪ್ರತಿ ವಾರಾಂತ್ಯಕ್ಕೆ ಒಬ್ಬರು ಕಳಪೆ ಪಡೆದುಕೊಂಡು ಜೈಲಿಗೆ ಹೋಗಲೇಬೇಕು. ಆದರೆ ಈ ಬಾರಿ ಇಬ್ಬರಿಗೆ ಕಳಪೆ ಪಟ್ಟ ಸಿಕ್ಕಿದೆ. ಹಾಗಾಗಿ ತ್ರಿವಿಕ್ರಂ ಮತ್ತು ಚೈತ್ರಾ ಕುಂದಾಪುರ ಒಟ್ಟಿಗೆ ಜೈಲಿಗೆ ಹೋಗಿದ್ದಾರೆ.