Karnataka News Live December 15, 2024 : ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡಕ್ಕಾಗಿ ಓಟ ಘೋಷವಾಕ್ಯದೊಂದಿಗೆ ಡಿಸೆಂಬರ್ 17ರ ಬೆಳಿಗ್ಗೆ 7ಕ್ಕೆ ಮ್ಯಾರಥಾನ್ ಸ್ಪರ್ಧೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 15 Dec 202401:54 PM IST
- Kannada Sahitya Sammelana 2024: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2024 ಡಿಸೆಂಬರ್ 20, 21 ಮತ್ತು 22 ರಂದು ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದ್ದು, ಸಮ್ಮೇಳನದ ಅರಿವು ಮೂಡಿಸುವ ಸಲುವಾಗಿ ‘ಕನ್ನಡಕ್ಕಾಗಿ ಓಟ’ ಎಂಬ ಘೋಷವಾಕ್ಯದಡಿ ಡಿಸೆಂಬರ್ 17 ರಂದು ಬೆಳಿಗ್ಗೆ 7 ಗಂಟೆಗೆ ಮ್ಯಾರಥಾನ್ ಸ್ಪರ್ಧೆ ನಡೆಯಲಿದೆ.
Sun, 15 Dec 202401:37 PM IST
Namma Bengaluru Challenge: ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಬೆಂಗಳೂರು ಹಲವು ಸಮಸ್ಯೆಗಳನ್ನು ಎದುರಿಸುತ್ತದೆ. ಇದನ್ನು ಗುರುತಿಸಿ ಅನುಷ್ಠಾನ ಯೋಗ್ಯ ಪರಿಹಾರ ಒದಗಿಸಲು ನಮ್ಮ ಬೆಂಗಳೂರು ಚಾಲೆಂಜ್ ಸ್ಪರ್ಧೆ ಆಯೋಜನೆಯಾಗಿತ್ತು. ಇಂತಹ ಪರಿಹಾರ ಐಡಿಯಾ ಹಂಚಿಕೊಂಡ 5 ನವೋದ್ಯಮ ತಂಡಗಳಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ.
Sun, 15 Dec 202412:41 PM IST
Covid-19 FIR; ಕರ್ನಾಟಕದಲ್ಲಿ ಕೋವಿಡ್ 19 ಅಕ್ರಮಕ್ಕೆ ಸಂಬಂಧಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಂತೆ, ಮೊದಲ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣ ಏನು, ಇದರಲ್ಲಿ ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.
Sun, 15 Dec 202412:00 PM IST
Gruhalakshmi Scheme: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಕರ್ನಾಟಕದ ಬಹುತೇಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿದ್ದು, ಒಂದೊಂದೇ ಯಶೋಗಾಥೆ ಬಹಿರಂಗವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಬೋರ್ವೆಲ್ ಕೊರೆಯಿಸಿದ ಗಜೇಂದ್ರಗಡದ ಅತ್ತೆ ಸೊಸೆ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಪ್ರಶಂಸೆ ವ್ಯಕ್ತಪಡಿಸಿದರು.
Sun, 15 Dec 202411:28 AM IST
Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟದ ಕಾವು ಹೆಚ್ಚಳವಾಗುತ್ತಿದ್ದು, 2 ಎ ಮೀಸಲಾತಿ ಮತ್ತು ರಾಜಕೀಯ ಅಂಶಗಳು ಗಮನಸೆಳೆಯುತ್ತಿವೆ. ಈ ಹೋರಾಟಕ್ಕೆ ಸಂಬಂಧಿಸಿದ ಲೆಕ್ಕಾಚಾರ ಮತ್ತು ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.
Sun, 15 Dec 202411:17 AM IST
- ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ 450 ಪುಸ್ತಕ ಮಳಿಗೆ, 350 ವಾಣಿಜ್ಯ ಮಳಿಗೆ, 55 ಸರ್ಕಾರಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಊಟದ ವ್ಯವಸ್ಥೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
Sun, 15 Dec 202410:06 AM IST
Bengaluru Rajakaluves; ಬೆಂಗಳೂರಿನಲ್ಲಿ ಮಳೆ ಬಂದಾಗ ರಾಜಕಾಲುವೆ ಪ್ರದೇಶದಲ್ಲಿ ಜನವಸತಿಗೆ ನೀರು ನುಗ್ಗಿ ತೊಂದರೆ ಆಗುವುದನ್ನು ತಪ್ಪಿಸಲು ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರು ರಾಜಕಾಲುವೆ ದುರಸ್ತಿ ಮಾಡುತ್ತಂತೆ ಸರ್ಕಾರ. ಇದಕ್ಕಾಗಿ ವಿಶ್ವಬ್ಯಾಂಕ್ನಲ್ಲಿ 3000 ಕೋಟಿ ರೂ ಸಾಲ ಪಡೆಯಲು ಮಾತುಕತೆ ನಡೆದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
Sun, 15 Dec 202408:18 AM IST
Farmer Protest; ದೆಹಲಿಯಲ್ಲಿ ರೈತ ಪ್ರತಿಭಟನೆ ಶುರುವಾಗಿದ್ದು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ, ನಾಳೆ ಟ್ರ್ಯಾಕ್ಟರ್ ಜಾಥಾ, 18ಕ್ಕೆ ರೈಲ್ ರೋಕೊ ಪ್ರತಿಭಟನೆಗೆ ರೈತರು ಕರೆ ನೀಡಿದ್ದಾರೆ. ಗಮನ ಸೆಳೆದ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Sun, 15 Dec 202407:10 AM IST
Thippanna Alugur suicide Case; ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಬೆಂಗಳೂರು ಪೊಲೀಸ್ ಕಾನ್ಸ್ಟೆಬಲ್ ತಿಪ್ಪಣ್ಣ ಅಲಗೂರು ಆತ್ಮಹತ್ಯೆ ಗಮನಸೆಳೆದಿದೆ. ಇದು ಕೂಡ 498ಎ ಕೇಸ್ಗೆ ಸಂಬಂಧಿಸಿದ್ದಾ? ಇಲ್ಲಿದೆ ಈ ಪ್ರಕರಣದಲ್ಲಿ ಗಮನಸೆಳೆದ 10 ಅಂಶಗಳು.
Sun, 15 Dec 202406:33 AM IST
- ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು ಎಂಬ ಹಿರಿಮೆಗೆ ಪಾತ್ರರಾದ ಲೀಲಾವತಿ ಬೈಪಡಿತ್ತಾಯ ಅವರು ಶನಿವಾರ ಇಹಲೋಕ ತ್ಯಜಿಸಿದರು. ಗಂಡುಕಲೆಯ ಹಿರಿಯ ಕಲಾವಿದೆಯ ವ್ಯಕ್ತಿ ಪರಿಚಯ ಇಲ್ಲಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
Sun, 15 Dec 202403:54 AM IST
Atul Subhash Suicide Case: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ಬಿಗಿಯಾಗುತ್ತಿದ್ದು, ಈ ಪ್ರಕರಣದ ಮೂವರು ಆರೋಪಿಗಳ ಬಂಧನವಾಗಿದೆ. ಆರೋಪಿಗಳಾದ ಪತ್ನಿ, ಅತ್ತೆ ಗುರುಗ್ರಾಮದಲ್ಲಿ ಪೊಲೀಸ್ ಬಲೆಗೆ ಬಿದ್ದರೆ, ಬಾಮೈದನನ್ನು ಅಲಹಾಬಾದ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
Sun, 15 Dec 202401:53 AM IST
Karnataka Weather: ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದೆ. ಚಳಿ ಶನಿವಾರಕ್ಕಿಂತ ಹೆಚ್ಚಾಗಿದೆ. ಡಿಸೆಂಬರ್ 17 ರಿಂದ ಮತ್ತೆ ರಾಜ್ಯದ ಕೆಲವೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರ ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 14.0 ಡಿ.ಸೆ. ನಷ್ಟು ದಾಖಲಾಗಿದೆ.