ಕನ್ನಡ ಸುದ್ದಿ  /  Sports  /  Cricket News You May Have 600 Wickets But Not Scare Mohammed Siraj Recall Sledging With James Anderson In Ind Vs Eng Prs

Mohammed Siraj: ನೀನು 600 ವಿಕೆಟ್​​ ಪಡೆದರೆ ನನಗೇನು, ನಾನು ಹೆದರಲ್ಲ; ಆ್ಯಂಡರ್ಸನ್​ ವಿರುದ್ಧದ ಸ್ಲೆಡ್ಜಿಂಗ್​ ಘಟನೆ ನೆನೆದ ಸಿರಾಜ್

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ ಫೈನಲ್ (ICC World Test Championship 2023)​​​ ಸಲುವಾಗಿ ಈಗಾಗಲೇ ಲಂಡನ್​ಗೆ ತಲುಪಿರುವ ಮೊಹಮ್ಮದ್​​ ಸಿರಾಜ್​, 2021ರಲ್ಲಿ ಕೈಗೊಂಡಿದ್ದ ಇಂಗ್ಲೆಂಡ್​ ಪ್ರವಾಸದಲ್ಲಿ ವೇಗಿ ಜೇಮ್ಸ್​ ಆ್ಯಂಡರ್​ಸನ್ ​​ ಜೊತೆ ನಡೆಸಿದ್ದ ವಾಗ್ವಾದಕ್ಕೆ ಸಂಬಂಧಿಸಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜೇಮ್ಸ್​ ಆ್ಯಂಡರ್​​ಸನ್​ ವಿರುದ್ಧದ ಸ್ಲೆಡ್ಜಿಂಗ್​ ಘಟನೆ ನೆನೆದ ಮೊಹಮ್ಮದ್ ಸಿರಾಜ್
ಜೇಮ್ಸ್​ ಆ್ಯಂಡರ್​​ಸನ್​ ವಿರುದ್ಧದ ಸ್ಲೆಡ್ಜಿಂಗ್​ ಘಟನೆ ನೆನೆದ ಮೊಹಮ್ಮದ್ ಸಿರಾಜ್

ಮೂರು ವರ್ಷಗಳ ಹಿಂದೆ ಬಾರ್ಡರ್ ಗವಾಸ್ಕರ್ ಟ್ರೋಫಿ 2020-21ರ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾಗೆ ಪದಾರ್ಪಣೆ ಮಾಡಿದ್ದ ವೇಗಿ ಮೊಹಮ್ಮದ್​ ಸಿರಾಜ್ (Mohammed Siraj)​, ಪ್ರಸ್ತತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ (ICC World Test Championship)​​ ಪಂದ್ಯದಲ್ಲಿ ಪ್ರಮುಖ ಆಗಿದ್ದಾರೆ. ಜಸ್​ಪ್ರಿತ್​ ಬೂಮ್ರಾ (Mohammed Siraj) ಅವರ ಅಲಭ್ಯತೆಯಲ್ಲಿ ಸಿರಾಜ್​ ಮೇಲೆ ಭಾರತ ಹೆಚ್ಚು ಅವಲಂಬಿತವಾಗಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ ಫೈನಲ್​ ಸಲುವಾಗಿ ಈಗಾಗಲೇ ಇಂಗ್ಲೆಂಡ್​ನ ಲಂಡನ್​ಗೆ ತಲುಪಿರುವ ಸಿರಾಜ್​, 2021ರಲ್ಲಿ ಕೈಗೊಂಡಿದ್ದ ಇಂಗ್ಲೆಂಡ್​ ಪ್ರವಾಸದಲ್ಲಿ ವೇಗಿ ಜೇಮ್ಸ್​ ಆ್ಯಂಡರ್​ಸನ್​​ ಜೊತೆ ನಡೆಸಿದ್ದ ವಾಗ್ವಾದಕ್ಕೆ ಸಂಬಂಧಿಸಿ ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ವಿರಾಟ್​​ ಕೊಹ್ಲಿ ನಾಯಕತ್ವದಲ್ಲಿ (Virat Kohli Captancy) ಟೀಮ್​ ಇಂಡಿಯಾ ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್ ಪ್ರವಾಸಕ್ಕೆ (Ind vs Eng Test Series) ಕೈಗೊಂಡಿತ್ತು.

ಸಿರೀಸ್​ ಡಿಸೈಡರ್​​ ಪಂದ್ಯ ಮುಂದೂಡಿಕೆ

ಈ ಸರಣಿಯಲ್ಲಿ ಭಾರತ ಮೊದಲ ನಾಲ್ಕು ಪಂದ್ಯಗಳಲ್ಲಿ 2ರಲ್ಲಿ ಗೆದ್ದು, 1 ರಲ್ಲಿ ಸೋಲು ಕಂಡಿತ್ತು. ಮತ್ತೊಂದು ಪಂದ್ಯ ಡ್ರಾ ಸಾಧಿಸಿತ್ತು. ಆದರೆ ಕೊನೆಯ ಟೆಸ್ಟ್​ ಪಂದ್ಯಕ್ಕೆ ಕೊರೊನಾ ಕಾಟ ಎದುರಾಗಿತ್ತು. ಪರಿಣಾಮ ಸಿರೀಸ್​ ಡಿಸೈಡರ್​ ಈ ಟೆಸ್ಟ್​ ಪಂದ್ಯವನ್ನು 2022ರ ಪ್ರವಾಸಕ್ಕೆ ಮುಂದೂಡಲಾಗಿತ್ತು. ಆದರೆ ಅದಾಗಲೇ ಟೀಮ್​ ಇಂಡಿಯಾ ಕ್ಯಾಪ್ಟನ್​ ಪಟ್ಟದಿಂದ ಕೊಹ್ಲಿ ಹಿಂದೆ ಸರಿದಿದ್ದರು.

ಆಗ ಕೊನೆಯ ಪಂದ್ಯವನ್ನು ಗೆಲ್ಲುವ ಜವಾಬ್ದಾರಿ ರೋಹಿತ್​ ಶರ್ಮಾ ಹೆಗಲೇರಿತ್ತು. ಆದರೆ ಇಂಗ್ಲೆಂಡ್​ ಪ್ರವಾಸ ಕೈಗೊಂಡಿದ್ದಾಗ ನೂತನ ನಾಯಕ ರೋಹಿತ್​ಗೆ ಕೊರೊನಾ ವಕ್ಕರಿಸಿತು. ಪರಿಣಾಮ ವೇಗಿ ಜಸ್​ಪ್ರೀತ್​ ಬೂಮ್ರಾ ಅವರಿಗೆ ತಂಡದ ನಾಯಕತ್ವದ ಹೆಗಲೇರಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲಿಗೆ ಶರಣಾಯಿತು. ಸರಣಿಯು 2-2ರಲ್ಲಿ ಸಮಬಲ ಸಾಧಿಸಿತು.

ಭಾರತದ ಬೌಲರ್​​ಗಳೇ ತಿರುಗೇಟು

2021ರಲ್ಲಿ ನಡೆದ ಈ ಸರಣಿಯಲ್ಲಿ ಪ್ರಮುಖವಾಗಿ ಮೊಹಮ್ಮದ್​ ಸಿರಾಜ್​ ಮತ್ತು ಜಸ್​​ಪ್ರೀತ್ ಬೂಮ್ರಾ ಅವರನ್ನು ಇಂಗ್ಲೆಂಡ್​ ಟಾರ್ಗೆಟ್​ ಮಾಡಿತ್ತು. ಆದರೆ ಇಂಗ್ಲೆಂಡ್​​​ ಲೆಕ್ಕಾಚಾರ ಉಲ್ಟಾ ಆಯಿತು. ನಮ್ಮ ಬೌಲರ್​ಗಳೇ ಇಂಗ್ಲೆಂಡ್​​ ಅನುಭವಿ ಬೌಲರ್​​ಗಳಾದ ಜೇಮ್ಸ್​ ಆ್ಯಂಡರ್​​ಸನ್​ರನ್ನು ಟಾರ್ಗೆಟ್​ ಮಾಡಿದರು. ಮಾನಸಿಕ ಕಿರುಕುಳ ನೀಡುವ ಮೂಲಕ ಮೇಲುಗೈ ಸಾಧಿಸಿದರು.

ಲಾರ್ಡ್ಸ್​ನಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ಜಸ್​ಪ್ರಿತ್​ ಬೂಮ್ರಾ ಅವರು ಬೌನ್ಸರ್​ಗಳ ಮೂಲಕ ಜೇಮ್ಸ್​ ಆ್ಯಂಡರ್​ಸನ್​ಗೆ ಭಾರಿ ತೊಂದರೆ ಕೊಟ್ಟರು. ಹಾಗಾಗಿ ಬೂಮ್ರಾ ಬ್ಯಾಟಿಂಗ್​ಗೆ ಬಂದಾಗ ಇಂಗ್ಲೆಂಡ್​ ಬೌಲರ್​​ಗಳು ತಿರುಗೇಟು ನೀಡುವ ಲೆಕ್ಕಾಚಾರ ಹಾಕಿಕೊಂಡರು. ಇದು ಟೀಮ್​ ಇಂಡಿಯಾವನ್ನು ಕೆರಳಿಸಿತು. ಇದರ ಪರಿಣಾಮ ಭಾರತ ತಂಡಕ್ಕೆ ಐತಿಹಾಸಿಕ ಜಯ ಲಭಿಸಿತು. ಆದರೆ ಇಂಗ್ಲೆಂಡ್ 2ನೇ ಇನ್ನಿಂಗ್ಸ್​​ನಲ್ಲಿ ಕುಸಿತ ಕಂಡಿತು.

ಗಲಾಟೆ ಏನು ನಡೆದಿತ್ತು

ಅಂದು ನಡೆದ ವಾಗ್ವಾದದ ಕುರಿತು ಸಿರಾಜ್​ ಇದೀಗ ಪ್ರತಿಕ್ರಿಯಿಸಿದ್ದಾರೆ. ನಾನು ಮತ್ತು ಜಸ್​ಪ್ರಿತ್ ಬೂಮ್ರಾ ಬ್ಯಾಟಿಂಗ್​ ಮಾಡುತ್ತಿದ್ದಾಗ ಜೇಮ್ಸ್​ ಕೋಪ ತರಿಸಿತು. ಹಾಗಾಗಿ ನಾನು ತಕ್ಷಣವೇ ಬೈದು ಬಿಟ್ಟಿದ್ದೆ. ಬಳಿಕ ಆ್ಯಂಡರ್​ಸನ್​ ಬ್ಯಾಟಿಂಗ್​ಗೆ ಬಂದಾಗ ನೀನು 600 ವಿಕೆಟ್​​​​​​​​​ ಪಡೆದಿರಬಹುದು. ಆದರೆ ನಾನು ನಿಮ್ಮನ್ನು ಗೌರವಿಸದ ಕಾರಣ ಹೆದರುವುದಿಲ್ಲ ಎಂದಿದ್ದೆ ಎಂದು ಸಿರಾಜ್​ ಬಹಿರಂಗಪಡಿಸಿದ್ದಾರೆ.

ಈ ಮಾತುಗಳನ್ನು ಹೇಳಿದ ಬೆನ್ನಲ್ಲೇ ಆ್ಯಂಡರ್​ಸನ್​​ ಬೇಸರಕ್ಕೆ ಒಳಗಾದರು. ತಕ್ಷಣವೇ ಹೋಗಿ ವಿರಾಟ್​ ಕೊಹ್ಲಿಗೆ ಈ ವಿಷಯವನ್ನು ಹೇಳಿದರು. ಆಗ ವಿರಾಟ್​ ಭಾಯ್​​, ಯಾಕೆ ಸುಮ್ಮನೆ ಅವರೊಂದಿಗೆ ಗಲಾಟೆ ಮಾಡ್ಕೊಂತೀಯಾ? ಸುಮ್ಮನಿರು ಎಂದಿದ್ದರು. ಅಕ್ಷರ್ ಪಟೇಲ್ (Axar Patel)​, ರಿಷಭ್​ ಪಂತ್ (Rishabh Pant)​​ ಕೂಡ ನನ್ನೊಂದಿಗೆ ಸೇರಿ ಆ್ಯಂಡರ್​​ಸನ್​​​​ ಅವರನ್ನು ಟಾರ್ಗೆಟ್​ ಮಾಡಿದರು. ಒಟ್ಟಿನಲ್ಲಿ ಆ ಸೀರಿಸ್​ ಅನ್ನು ಸಖತ್ ಎಂಜಾಯ್​ ಮಾಡಿದೆವು ಎಂದು ಸಿರಾಜ್​ ಹೇಳಿದ್ದಾರೆ.