ಕನ್ನಡ ಸುದ್ದಿ  /  ಮನರಂಜನೆ  /  ‘ಎರಡು ಅಬಾರ್ಷನ್‌ ಆದ್ಮೇಲೆ ಸಾಯೋ ನಿರ್ಧಾರ ಮಾಡಿದ್ದೆ, ನನ್ನ ಹೆಣಾನೂ ಸಿಗಬಾರ್ದು ಅಂತ ಮಾತ್ರೆ ನುಂಗಿದ್ದೆ, ಆದ್ರೆ’; ಕಾಮಿಡಿ ಕಿಲಾಡಿ ನಯನಾ

‘ಎರಡು ಅಬಾರ್ಷನ್‌ ಆದ್ಮೇಲೆ ಸಾಯೋ ನಿರ್ಧಾರ ಮಾಡಿದ್ದೆ, ನನ್ನ ಹೆಣಾನೂ ಸಿಗಬಾರ್ದು ಅಂತ ಮಾತ್ರೆ ನುಂಗಿದ್ದೆ, ಆದ್ರೆ’; ಕಾಮಿಡಿ ಕಿಲಾಡಿ ನಯನಾ

ತಮ್ಮ ಹಾಸ್ಯದ ಮೂಲಕವೇ ನಾಡಿನ ಜನರ ಮನಗೆದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ, ಕೆಲ ತಿಂಗಳ ಹಿಂದಷ್ಟೇ ಸಾಯುವ ನಿರ್ಧಾರಕ್ಕೆ ಬಂದಿದ್ದರು. ತಮ್ಮ ಹೆಣವೂ ಯಾರಿಗೂ ಸಿಗಬಾರದೆಂದು ಅಂದುಕೊಂಡಿದ್ದರು. ಆದರೆ, ಆ ಒಂದು ಕ್ಷಣ ಅವರ ಇಡೀ ಬದುಕನ್ನೇ ಬದಲಿಸಿತು. ಏನದು? ಅವರೇ ಹೇಳಿದ್ದಾರೆ ಓದಿ.

‘ಎರಡು ಅಬಾರ್ಷನ್‌ ಆದ್ಮೇಲೆ ಸಾಯೋ ನಿರ್ಧಾರ ಮಾಡಿದ್ದೆ, ನನ್ನ ಹೆಣಾನೂ ಸಿಗಬಾರ್ದು ಅಂತ ಮಾತ್ರೆ ನುಂಗಿದ್ದೆ, ಆದ್ರೆ’; ಕಾಮಿಡಿ ಕಿಲಾಡಿ ನಯನಾ
‘ಎರಡು ಅಬಾರ್ಷನ್‌ ಆದ್ಮೇಲೆ ಸಾಯೋ ನಿರ್ಧಾರ ಮಾಡಿದ್ದೆ, ನನ್ನ ಹೆಣಾನೂ ಸಿಗಬಾರ್ದು ಅಂತ ಮಾತ್ರೆ ನುಂಗಿದ್ದೆ, ಆದ್ರೆ’; ಕಾಮಿಡಿ ಕಿಲಾಡಿ ನಯನಾ

Suvarna Superstar Nayana Sharath: ಕಾಮಿಡಿ ಕಿಲಾಡಿಗಳು ಶೋದ ಮೂಲಕ ನಾಡಿನ ತುಂಬ ಮನೆಮಾತಾದವರು ಹಾಸ್ಯನಟಿ ಕಾಮಿಡಿ ಕಿಲಾಡಿ ನಯನಾ. ತಮ್ಮ ಆನ್‌ಸ್ಪಾಟ್‌ ಕಾಮಿಡಿ ಪಂಚ್‌ನಿಂದಲೇ ಶೋದಲ್ಲಿ ಎಲ್ಲರನ್ನು ನಗಿಸಿ ಅಳಿಸಿದ್ದ ಇದೇ ನಟಿ, ಸಾಲು ಸಾಲು ಸಿನಿಮಾ ಅವಕಾಶಗಳನ್ನೂ ಪಡೆದುಕೊಂಡಿದ್ದರು. ಇತ್ತ ಕಿರುತೆರೆಯಲ್ಲೂ ಉಧೋ ಉಧೋ ಶ್ರೀ ರೇಣುಕಾ ಎಲ್ಲಮ್ಮ ಧಾರಾವಾಹಿಯಲ್ಲೂ ನಯನಾ ನಟಿಸಿದ್ದರು. ಆದರೆ, ಗರ್ಭಿಣಿಯಾದ ಹಿನ್ನೆಲೆಯಲ್ಲಿ ಅವರ ಪಾತ್ರವನ್ನು ಅಲ್ಲಿಗೆ ಮುಗಿಸಲಾಗಿತ್ತು. ಈಗ ಹೆರಿಗೆ ಬಳಿಕ ಮತ್ತೆ ಕಿರುತೆರೆಗೆ ಆಗಮಿಸಿದ್ದಾರೆ. ಸುವರ್ಣ ಸೂಪರ್‌ಸ್ಟಾರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಯನಾ ಜೀವನದಲ್ಲಾಗಿದ್ದೇನು?

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸುವರ್ಣ ಸೂಪರ್‌ ಸ್ಟಾರ್‌ ಶೋನಲ್ಲಿ ನಯನಾ ಅತಿಥಿಯಾಗಿ ಆಗಮಿಸಿದ್ದಾರೆ. ಈ ಶೋನಲ್ಲಿ ತಮ್ಮ ಜೀವನದ ಸೂಪರ್‌ಸ್ಟಾರ್‌ ಯಾರು ಎಂಬುದನ್ನೂ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ ನಯನಾ. ಅಷ್ಟಕ್ಕೂ ನಯನಾ ಜೀವನದಲ್ಲಿ ಘಟಿಸಿದ್ದೇನು? ಮದುವೆ ಬಳಿಕ ಅವರು ಎದುರಿಸಿದ ಸಮಸ್ಯೆಗಳೇನು? ಜೀವನವೇ ಬೇಸರವಾಗಿ ಸಾಯುವ ನಿರ್ಧಾರಕ್ಕೂ ಬಂದ ಹಿಂದಿನ ಅಸಲಿ ಕಥೆ ಏನು ಎಂಬ ಬಗ್ಗೆ ಅವರೇ ಹೇಳುಕೊಂಡಿದ್ದಾರೆ.

ಸಾಯುವ ನಿರ್ಧಾರಕ್ಕೆ ಬಂದಿದ್ದೆ!

“ನನ್ನ ಲೈಫಿನ ಸೂಪರ್‌ಸ್ಟಾರ್‌ ನನ್ನ ಮಗಳು. ನನ್ನ ಬದುಕೇ ಅವಳಾಗಿದ್ದಾಳೆ. ಅವಳು ನನ್ನ ಜೀವನಕ್ಕೆ ಬರಲಿಲ್ಲದಿದ್ದರೆ, ಇಷ್ಟೊತ್ತಿಗೆ ನಯನಾಳನ್ನು ಯಾರೂ ನೋಡುತ್ತಿರಲಿಲ್ಲ. ಎಲ್ಲರಿಗೂ ನಾನಾನು ನೆನಪಾಗಿ ಉಳಿದುಬಿಡ್ತಿದ್ದೆ. ನಾನು ಪ್ರಗ್ನೆಂಟ್‌ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುವುದಕ್ಕೂ ಎರಡು ದಿನಗಳ ಮೊದಲು, ಈ ಭೂಮಿಯ ಮೇಲೆ ನಾನು ಇರಬಾರದು ಎಂದು ನಿರ್ಧಾರ ಮಾಡಿದ್ದೆ. ಈ ಜೀವನವೇ ಬೇಡ ಎಂದುಕೊಂಡಿದ್ದೆ. ಏನಾಗ್ತಿದೆ ನಿನಗೆ ಎಂದು ಯಾರಾದರೂ ಕೇಳುವವರು ಬೇಕಿತ್ತು”

ಏನ್‌ ಲೈಫ್‌ ಗುರು ಇದು ಎಂದೆನಿಸಿತ್ತು..

"ನಾನು ಯಾರಿಗಾದರೂ ಹೇಳಿಕೊಂಡರೆ, ನಿನ್ನ ತಲೆ ತುಂಬ ಬರೀ ನೆಗೆಟಿವಿಟಿ ಇದೆಯಲ್ಲ ಎಂದುಕೊಳ್ಳುವವರು. ಯಾಕೆಂದರೆ, ಇದಕ್ಕೂ ಮುಂಚೆ ಎರಡು ಅಬಾರ್ಷನ್‌ ಆದಾಗ, ಛೇ.. ಏನ್‌ ಜೀವ್ನಾ ಗುರು ಇದು! ಎಂದು ಅನಿಸಿದ್ದುಂಟು. ಓಡಾಡೋಕೆ ಕಾರಿದೆ, ಬೈಕಿದೆ ಎಲ್ಲವೂ ಇದೆ. ಆದರೆ, ಇದ್ಯಾಕೆ ನನಗೆ ಹೀಗೆ ಆಗ್ತಿದೆ" ಎಂದು ನಯನಾ ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದಾರೆ. ನಯನಾ ತನ್ನ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಂತೆ, ಅಲ್ಲೇ ಇದ್ದ ನಿರೂಪಕಿ ಶಾಲಿನಿ ಸಹ ಅವರ ಕಷ್ಟಕ್ಕೆ ಕರಗಿದ್ದಾರೆ.

ಹೆಣ ಸಿಗಬಾರ್ದು ಹಂಗೆ ಹೋಗಿಬಿಡೋಣ ಅಂದ್ಕೊಂಡಿದ್ದೆ..

"ನಿಮಗೆ ಎರಡು ಸಲ ಅಬಾರ್ಷನ್‌ ಅನುಭವ ಆಗಿದೆ. ನನಗೆ ನಾಲ್ಕು ಸಲ ಈ ಅನುಭವ ಆಗಿದೆ ಎಂದು ಶಾಲಿನಿ ಸಹ ಭಾವುಕರಾಗುತ್ತಾರೆ. ಇತ್ತ ಮಾತು ಮುಂದುವರಿಸಿದ ನಯನಾ, "ಅನಿರೀಕ್ಷಿತವಾಗಿ ಅಬಾರ್ಷನ್‌ ಆಗೋಯ್ತು. ಯಾರಿಗೂ ನನ್ನ ಹೆಣ ಸಿಗಬಾರ್ದು ಹಂಗೆ ಹೋಗಿಬಿಡೋಣ ಎಂದು ನಿರ್ಧರಿಸಿದ್ದೆ. ಯಾಕೋ ಗೊತ್ತಿಲ್ಲ ನಾನು ಪ್ರಗ್ನೆಂಟ್‌ ಅಂತ ಗೊತ್ತಾದ ಮೇಲೆ, ಎರಡು ಸಲ ತಪ್ಪು ಮಾಡಿದ್ದೇನೆ. ಇದನ್ನೊಂದಾದ್ರೂ ಉಳಿಸಿಕೊಳ್ಳೋಣ ಅಂತ ಧೈರ್ಯ ತಗೊಂಡೆ"

ಮಗಳು ನನ್ನನ್ನು ಬದುಕಿಸಿದಳು..

"ಆದರೆ, ಹೆಂಗಿದ್ರೂ ಹೋಗ್ತಿದಿನಿ ಅಂತ ಅದಾಗಲೇ ಮಾತ್ರೆನೂ ನುಂಗಿಬಿಟ್ಟಿದ್ದೆ. ಅದೇನ್‌ ದೇವರ ದಯೆಯೋ ಏನೋ, ನನ್ನ ಮಗಳು ಬದುಕಿಬಿಟ್ಟಳು. ನಾನು ಆಸ್ಪತ್ರೆಗೆ ಹೋದಮೇಲೆ, ನೀವು ಕ್ಯಾರಿ ಆಗಿದಿರಾ ಎಂದರು. ಯಾರಿಗೋಸ್ಕರ ಅಲ್ಲದಿದ್ದರೂ, ಮಗಳಿಗೋಸ್ಕರ ಬದುಕಬೇಕು ಅಂತ ಫಿಕ್ಸ್‌ ಆದೆ. ಇಷ್ಟು ದಿನ ಸುತ್ತಮುತ್ತ ಜನರಿಗೋಸ್ಕರ ಬದುಕುತ್ತಿದ್ದೆ. ಇನ್ಮೇಲೆ ಮಗಳಿಗೋಸ್ಕರ ಬದುಕಬೇಕು ಅಂತ ನಾನು ಫಿಕ್ಸ್‌ ಆದೆ" ಎಂದು ಮಗಳ ಬಗ್ಗೆ ಹೇಳಿಕೊಂಡಿದ್ದಾರೆ ನಯನಾ.

IPL_Entry_Point