Karnataka News Live December 21, 2024 : ಕನ್ನಡ ಸಾಹಿತ್ಯ ಸಮ್ಮೇಳನ; ಮಂಡ್ಯದಲ್ಲಿ ಕನ್ನಡದ ಕಂಪು, ಎರಡನೇ ದಿನ ಏನೇನಾಯಿತು, ಗೋಷ್ಠಿಗಳಿಗೆ ಸಂಬಂಧಿಸಿದ 8 ಮುಖ್ಯ ಅಂಶಗಳು
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 21 Dec 202402:48 PM IST
Mandya Sahitya Sammelana: ಸಕ್ಕರೆ ನಾಡು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಇಂದು ಎರಡನೇ ದಿನದ ಕಾರ್ಯಕ್ರಮಗಳು ಬಹುತೇಕ ಪೂರ್ಣಗೊಂಡಿವೆ. ಗೋಷ್ಠಿಗಳು ಮತ್ತು ಸಿರಿಧಾನ್ಯ ನಡಿಗೆಗೆ ಸಂಬಂಧಿಸಿದ 8 ಮುಖ್ಯ ಅಂಶಗಳ ವಿವರ ಇಲ್ಲಿದೆ.
Sat, 21 Dec 202412:44 PM IST
Mandya Accident: ಬೆಂಗಳೂರಿನಿಂದ ಮೈಸೂರು ದಾರಿಯಾಗಿ ತಲಕಾಡು ಕಡೆಗೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳ ಕಾರು ಲಾರಿಗೆ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಳವಳ್ಳಿ ಸಮೀಪ ನಡೆದಿದೆ. ಮಂಡ್ಯ ಅಪಘಾತದ ವಿವರ ಇಲ್ಲಿದೆ.
Sat, 21 Dec 202412:20 PM IST
Karavali Utsava 2024: ದಕ್ಷಿಣ ಕನ್ನಡ ಜಿಲ್ಲಾಡಳಿತ ಆಯೋಜಿಸಿರುವ ಕರಾವಳಿ ಉತ್ಸವ 2024ರ ಪ್ರಮುಖ ಆಕರ್ಷಣೆ ಹೆಲಿಕಾಪ್ಟರ್ ಹಾರಾಟ. ಆದರೆ, ಎಟಿಸಿ ಕ್ಲಿಯರೆನ್ಸ್ ಸಮಸ್ಯೆ ಕಾರಣ ಹೆಲಿಕಾಪ್ಟರ್ ತಿರುಗಾಟಕ್ಕೆ ಆರಂಭದಲ್ಲೇ ತೊಡಕು ಎದುರಾಗಿದೆ. ಏನಿದು ಸಂಕಷ್ಟ ಇಲ್ಲಿದೆ ಆ ವಿವರ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
Sat, 21 Dec 202410:08 AM IST
ಕಳೆದ ಕೆಲವು ದಿನಗಳಿಂದ ಸಂಸತ್ ಹಾಗೂ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ನಡೆಯುತ್ತಿರುವ ಘಟನೆಗಳು ದೇಶಾದ್ಯಂತ ಚರ್ಚೆಯಾಗುತ್ತಿದೆ. ಅಧಿವೇಶನದಲ್ಲಿ ಜನರ ಕಷ್ಟಗಳ ಬಗ್ಗೆ ಚರ್ಚಿಸಬೇಕಾದ ಜನಪ್ರತಿನಿಧಿಗಳು ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಪತ್ರಕರ್ತ ರಾಜೀವ್ ಹೆಗಡೆ ಬೇಸರ ವ್ಯಕ್ತಪಡಿಸಿದ್ದಾರೆ.
Sat, 21 Dec 202409:57 AM IST
- ಎರಡು ಸಾವಿರ ವರ್ಷ ಇತಿಹಾಸವನ್ನುಳ್ಳ ಕನ್ನಡಕ್ಕೆ ತನ್ನನ್ನು ತಾನು ಇನ್ನೆರಡು ಸಾವಿರ ವರ್ಷ ಸಂಭಾಳಿಸಿಕೊಳ್ಳುವ ಶಕ್ತಿಯಿದೆ ಎನ್ನುವ ವಿಶೇಷ ಧೈರ್ಯವನ್ನು ಒಗ್ಗೂಡಿಸಿಕೊಂಡು ನಾನು ಈ ವಿಚಾರಗಳನ್ನು ನಿಮ್ಮ ಮುಂದಿಡುತ್ತೇನೆ.- ವಸುಧೇಂದ್ರ
Sat, 21 Dec 202409:55 AM IST
Nelamangala Accident: ತುಮಕೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ್ದು 6 ಜನ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.
Sat, 21 Dec 202409:37 AM IST
Bengaluru Tunnel Road: ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆಗೆ ಸಂಬಂಧಿಸಿ ನಿನ್ನೆ ಆಲ್ಟಿನೋಕ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಇದರಲ್ಲಿ 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತೆ ಅಂಶಗಳಿದ್ದು, ವರದಿಯ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Sat, 21 Dec 202405:57 AM IST
Bengaluru Tunnel Road: ಬೆಂಗಳೂರು ಅವಳಿ ಸುರಂಗ ಮಾರ್ಗ ಯೋಜನೆ ಈಗ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬೆಂಗಳೂರಿನಲ್ಲಿ ಸದ್ಯ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಬೇಕು. ಖಾಸಗಿ ವಾಹನ ಬಳಕೆ ಕಡಿಮೆಯಾದರೆ ಸಮಸ್ಯೆ ಬಹುಪಾಲು ಕಡಿಮೆಯಾದೀತು ಎಂಬ ಅಭಿಯಾನ ಶುರುವಾಗಿದೆ. ಇಲ್ಲಿದೆ ಪ್ರಸಕ್ತ ವಿದ್ಯಮಾನದ ವಿವರ.
Sat, 21 Dec 202404:45 AM IST
- ದೆಹಲಿ CEO ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ. ಕನ್ನಡ ಮಾತನಾಡಲು ಬರೋದಿಲ್ವಾ? ಹಾಗಾದರೆ ದೆಹಲಿಗೆ ಬನ್ನಿ ಎಂಬುದಾಗಿ ನೇಮಕಾತಿ ಪೋಸ್ಟ್ ಹಂಚಿಕೊಂಡಿದ್ದಾರೆ.
Sat, 21 Dec 202401:36 AM IST
- ಬೆಂಗಳೂರಿನಲ್ಲಿ ಚಳಿ ಕಡಿಮೆಯಾಗಿದ್ದು, ಡಿಸೆಂಬರ್ 21ರ ಶನಿವಾರ ಮೋಡ ಕವಿದ ವಾತಾವರಣ ಇದೆ. ನಗರದಲ್ಲಿ ಮುಂದಿನ 24 ಗಂಟೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಕರ್ನಾಟಕದ ಹವಾಮಾನ ವರದಿ ಹೀಗಿದೆ.
Sat, 21 Dec 202401:03 AM IST
ಸಿಟಿ ರವಿ ಬಂಧನ ವಿಚಾರ ಚರ್ಚೆಗೆ ಒಳಗಾಗಿದೆ. ಶಾಸಕ, ಸಂಸದರನ್ನು ನೇರ ಬಂಧಿಸಬಹುದಾ, ಅವರಿಗೆ ವಿಶೇಷಾಧಿಕಾರ ಇಲ್ವ ಎಂಬ ನೆಲೆಯಲ್ಲಿ ಚರ್ಚೆ ನಡೆಯುತ್ತಿರುವ ಕಾರಣ, ಮಾಜಿ ಸ್ಪೀಕರ್ಗಳು ಹಳೆ ಪ್ರಕರಣಗಳನ್ನು ನೆನಪಿಸಿಕೊಟ್ಟಿದ್ದಾರೆ. ಆ ವಿವರ ಇಲ್ಲಿದೆ. (ವರದಿ- ಎಚ್ ಮಾರುತಿ, ಬೆಂಗಳೂರು)
Sat, 21 Dec 202412:39 AM IST
Praveen Nettaru murder case: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಮತ್ತೋರ್ವ ಆರೋಪಿಯನ್ನು ಎನ್ಐಎ ಬಂಧಿಸಿದೆ. ವಿದೇಶದಿಂದ ವಾಪಸ್ ಬರುತ್ತಿದ್ದಾಗ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)