ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ; ಚಾಮುಂಡಿದೇವಿ ದರ್ಶನ ಮಾಡಿ ಹಿಂಟ್ ಕೊಟ್ರು ನಿಖಿಲ್ ಕುಮಾರಸ್ವಾಮಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ; ಚಾಮುಂಡಿದೇವಿ ದರ್ಶನ ಮಾಡಿ ಹಿಂಟ್ ಕೊಟ್ರು ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣಕ್ಕೆ ಯಾರು ಅಭ್ಯರ್ಥಿ; ಚಾಮುಂಡಿದೇವಿ ದರ್ಶನ ಮಾಡಿ ಹಿಂಟ್ ಕೊಟ್ರು ನಿಖಿಲ್ ಕುಮಾರಸ್ವಾಮಿ

Published Sep 18, 2024 07:31 PM IST Umesh Kumar S
twitter
Published Sep 18, 2024 07:31 PM IST

ಮೈಸೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಯಾರು ಎಂಬ ಕುತೂಹಲವನ್ನು ಇನ್ನಷ್ಟು ಕೆರಳಿಸುವಂತೆ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಇಂದು (ಸೆಪ್ಟೆಂಬರ್ 18) ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆಯ ದರ್ಶನ ಪಡೆದರು. ಬಳಿಕ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ತಾವು ಚನ್ನಪಟ್ಟಣದಲ್ಲಿ ಕಣಕ್ಕಿಳಿಯುವುದು ನಿರ್ಧಾರವಾಗಿಲ್ಲ, ಆದರೆ ಎನ್‌ಡಿಎ ಅಭ್ಯರ್ಥಿಯೇ ಕಣಕ್ಕಿಳಿಯಲಿದ್ದಾರೆ ಎಂದಿದ್ದಾರೆ. ಇನ್ನು ಮುನಿರತ್ನ ವಿಚಾರದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ನಾವು ವರದಿಗಾಗಿ ಕಾಯೋಣ ಎಂದಿದ್ದಾರೆ.

More